<p>ಬೆಂಗಳೂರು: ಮೈಸೂರು ರಸ್ತೆಯ ಸಿರಸಿ ವೃತ್ತದಿಂದ ಅಗರ ಕೆರೆವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಯೋಜನೆಯಲ್ಲದೆ, ಪರ್ಯಾಯ ಮಾರ್ಗಗಳ ಬಗ್ಗೆಯೂ ಸಲಹೆ ನೀಡಲು ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ಸರ್ಕಾರ ರಚಿಸಿದೆ.<br /> <br /> ಕೋರಮಂಗಲ ಮಾರ್ಗವಾಗಿ 12.16 ಕಿ.ಮೀ. ಉದ್ದದ ಸಿರಸಿ-ಅಗರ ಕಾರಿಡಾರ್ ನಿರ್ಮಾಣಕ್ಕೆ ಆ ಭಾಗದ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಕುರಿತು ಪುನರ್ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.<br /> <br /> ಈ ಹಿನ್ನೆಲೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಕೋರಮಂಗಲ ಭಾಗದ ನಿವಾಸಿಗಳು, ಬಿಡಿಎ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಸೋಮವಾರ ವಿಕಾಸ ಸೌಧದಲ್ಲಿ ಕರೆದು ಚರ್ಚೆ ನಡೆಸಿದರು.<br /> <br /> ಬಿಬಿಎಂಪಿ, ಬಿಡಿಎ, ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಲಭ್ಯ, ಸಾರಿಗೆ ಮತ್ತು ನಗರ ಯೋಜನಾ ಕೇಂದ್ರ (ಸಿಐಎಸ್ಟಿಯುಪಿ), ಬೆಂಗಳೂರು ಸಂಚಾರಿ ಪೊಲೀಸ್ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳು ಉಪ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.<br /> <br /> `ಲಾಲ್ಬಾಗ್ ರಸ್ತೆಯ ಪ್ರೊ.ಎಂ.ಎಚ್.ಮರಿಗೌಡ ವೃತ್ತದಿಂದ ಅಗರ ಕೆರೆವರೆಗಿನ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣದ ಮಾರ್ಗ ವಿವಾದಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಬಗ್ಗೆ ಸಾರ್ವಜನಿಕರು ನಕ್ಷೆ ಸಮೇತ ವಿವರಿಸಬಹುದು. ಈ ಕುರಿತ ವರದಿಯನ್ನು ಆಗಸ್ಟ್ 25ರೊಳಗೆ ನೀಡಬೇಕು~ ಎಂದು ಅವರು ಸಮಿತಿಗೆ ಸೂಚಿಸಿದರು.<br /> <br /> ಕೌಶಿಕ್ ಅಚ್ಚರಿ: ಸಿರಸಿ- ಅಗರ ರಸ್ತೆ ಕೋರಮಂಗಲ ಮೂಲಕ ಹಾದು ಹೋಗುವುದರ ಬದಲು, ಹೊಸೂರು ರಸ್ತೆಯಲ್ಲೇ ಹಾದು ಹೋದರೆ ಏನು ಸಮಸ್ಯೆ? ಹೊಸೂರು ರಸ್ತೆಯನ್ನೇ ಸ್ವಲ್ಪ ಅಗಲ ಮಾಡಿ ಅಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಮಾಡುವುದರಿಂದ ಅನಗತ್ಯ ವೆಚ್ಚ ತಗ್ಗಿಸಬಹುದು. ಯೋಜನೆ ರೂಪಿಸುವಾಗ ಈ ಬಗ್ಗೆ ಏಕೆ ಚಿಂತನೆ ಮಾಡಿಲ್ಲ? ಇದೇನು ಗುತ್ತಿಗೆದಾರರಿಗೆ ಅನುಕೂಲವಾಗಲಿ ಎಂದು ರೂಪಿಸಿದ ಯೋಜನೆಯೇ ಎಂದು ಕೌಶಿಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.</p>.<p><br /> ಅವರ ಈ ಮಾತು ಕೋರಮಂಗಲ ನಿವಾಸಿಗಳಲ್ಲಿ ಸಂತಸ ಹೆಚ್ಚಾಗಲು ಕಾರಣವಾಯಿತು. ಇದರಿಂದ ಪುಳಕಿತಗೊಂಡ ಅವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅವರ ಮಾತಿಗೆ ಪದೇ ಪದೇ ಚಪ್ಪಾಳೆ ತಟ್ಟಿದ್ದರಿಂದ ಸಿಟ್ಟಿಗೆದ್ದ ಕೌಶಿಕ್ ಅವರು `ಇದೇನು ನಾಟಕ ಅಲ್ಲ. ನೀವ್ಯಾಕೆ ಚಪ್ಪಾಳೆ ತಟ್ಟುತ್ತಿದ್ದೀರಿ. ನಾನು ನಿಮ್ಮನ್ನು ಮೆಚ್ಚಿಸಲು ಹೀಗೆ ಹೇಳುತ್ತಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.<br /> <br /> ಸಿಐಎಸ್ಟಿಯುಪಿ ಅಧ್ಯಕ್ಷ ಟಿ.ಜಿ.ಸೀತಾರಾಮ್ ಮಾತನಾಡಿ, `ಉದ್ದೇಶಿತ ಯೋಜನೆ ಕಾರ್ಯಸಾಧುವಲ್ಲ. ಇದರ ಬದಲಿಗೆ, ಜಂಕ್ಷನ್ಗಳ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಒಳಿತು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಮೈಸೂರು ರಸ್ತೆಯ ಸಿರಸಿ ವೃತ್ತದಿಂದ ಅಗರ ಕೆರೆವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಯೋಜನೆಯಲ್ಲದೆ, ಪರ್ಯಾಯ ಮಾರ್ಗಗಳ ಬಗ್ಗೆಯೂ ಸಲಹೆ ನೀಡಲು ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಯನ್ನು ಸರ್ಕಾರ ರಚಿಸಿದೆ.<br /> <br /> ಕೋರಮಂಗಲ ಮಾರ್ಗವಾಗಿ 12.16 ಕಿ.ಮೀ. ಉದ್ದದ ಸಿರಸಿ-ಅಗರ ಕಾರಿಡಾರ್ ನಿರ್ಮಾಣಕ್ಕೆ ಆ ಭಾಗದ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಕುರಿತು ಪುನರ್ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.<br /> <br /> ಈ ಹಿನ್ನೆಲೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಕೋರಮಂಗಲ ಭಾಗದ ನಿವಾಸಿಗಳು, ಬಿಡಿಎ, ಬಿಬಿಎಂಪಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಸೋಮವಾರ ವಿಕಾಸ ಸೌಧದಲ್ಲಿ ಕರೆದು ಚರ್ಚೆ ನಡೆಸಿದರು.<br /> <br /> ಬಿಬಿಎಂಪಿ, ಬಿಡಿಎ, ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಲಭ್ಯ, ಸಾರಿಗೆ ಮತ್ತು ನಗರ ಯೋಜನಾ ಕೇಂದ್ರ (ಸಿಐಎಸ್ಟಿಯುಪಿ), ಬೆಂಗಳೂರು ಸಂಚಾರಿ ಪೊಲೀಸ್ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳು ಉಪ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.<br /> <br /> `ಲಾಲ್ಬಾಗ್ ರಸ್ತೆಯ ಪ್ರೊ.ಎಂ.ಎಚ್.ಮರಿಗೌಡ ವೃತ್ತದಿಂದ ಅಗರ ಕೆರೆವರೆಗಿನ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣದ ಮಾರ್ಗ ವಿವಾದಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸುಗಮ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಬಗ್ಗೆ ಸಾರ್ವಜನಿಕರು ನಕ್ಷೆ ಸಮೇತ ವಿವರಿಸಬಹುದು. ಈ ಕುರಿತ ವರದಿಯನ್ನು ಆಗಸ್ಟ್ 25ರೊಳಗೆ ನೀಡಬೇಕು~ ಎಂದು ಅವರು ಸಮಿತಿಗೆ ಸೂಚಿಸಿದರು.<br /> <br /> ಕೌಶಿಕ್ ಅಚ್ಚರಿ: ಸಿರಸಿ- ಅಗರ ರಸ್ತೆ ಕೋರಮಂಗಲ ಮೂಲಕ ಹಾದು ಹೋಗುವುದರ ಬದಲು, ಹೊಸೂರು ರಸ್ತೆಯಲ್ಲೇ ಹಾದು ಹೋದರೆ ಏನು ಸಮಸ್ಯೆ? ಹೊಸೂರು ರಸ್ತೆಯನ್ನೇ ಸ್ವಲ್ಪ ಅಗಲ ಮಾಡಿ ಅಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ಮಾಡುವುದರಿಂದ ಅನಗತ್ಯ ವೆಚ್ಚ ತಗ್ಗಿಸಬಹುದು. ಯೋಜನೆ ರೂಪಿಸುವಾಗ ಈ ಬಗ್ಗೆ ಏಕೆ ಚಿಂತನೆ ಮಾಡಿಲ್ಲ? ಇದೇನು ಗುತ್ತಿಗೆದಾರರಿಗೆ ಅನುಕೂಲವಾಗಲಿ ಎಂದು ರೂಪಿಸಿದ ಯೋಜನೆಯೇ ಎಂದು ಕೌಶಿಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.</p>.<p><br /> ಅವರ ಈ ಮಾತು ಕೋರಮಂಗಲ ನಿವಾಸಿಗಳಲ್ಲಿ ಸಂತಸ ಹೆಚ್ಚಾಗಲು ಕಾರಣವಾಯಿತು. ಇದರಿಂದ ಪುಳಕಿತಗೊಂಡ ಅವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅವರ ಮಾತಿಗೆ ಪದೇ ಪದೇ ಚಪ್ಪಾಳೆ ತಟ್ಟಿದ್ದರಿಂದ ಸಿಟ್ಟಿಗೆದ್ದ ಕೌಶಿಕ್ ಅವರು `ಇದೇನು ನಾಟಕ ಅಲ್ಲ. ನೀವ್ಯಾಕೆ ಚಪ್ಪಾಳೆ ತಟ್ಟುತ್ತಿದ್ದೀರಿ. ನಾನು ನಿಮ್ಮನ್ನು ಮೆಚ್ಚಿಸಲು ಹೀಗೆ ಹೇಳುತ್ತಿಲ್ಲ~ ಎಂದು ತರಾಟೆಗೆ ತೆಗೆದುಕೊಂಡರು.<br /> <br /> ಸಿಐಎಸ್ಟಿಯುಪಿ ಅಧ್ಯಕ್ಷ ಟಿ.ಜಿ.ಸೀತಾರಾಮ್ ಮಾತನಾಡಿ, `ಉದ್ದೇಶಿತ ಯೋಜನೆ ಕಾರ್ಯಸಾಧುವಲ್ಲ. ಇದರ ಬದಲಿಗೆ, ಜಂಕ್ಷನ್ಗಳ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಒಳಿತು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>