<p><strong>ಮಂಡ್ಯ: </strong>ಜಿಲ್ಲೆಯ ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸುವರ್ಣಾಳ ಸಾವಿಗೆ ಕಾರಣದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು, ನಿಷ್ಪಕ್ಷಪಾತ ತನಿಖೆ ಆಗಲು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿವಿಧ ಜನಪರ ಸಂಘಟನೆಗಳು ಮಂಗಳವಾರ ಜಾಥಾ, ಪ್ರತಿಭಟನೆ ನಡೆಸಿದವು.<br /> <br /> ಪ್ರಗತಿಪರ ಸಂಘಟನೆಗಳು ಮತ್ತು ಜನವಾದಿ ಮಹಿಳಾ ಸಂಘಟನೆಯು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿಯನ್ನು ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿ ಬಲಪ್ರದರ್ಶನ ನಡೆಸಿದವು.<br /> <br /> ಸ್ಪಂದನಾ, ವಿಮೋಚನಾ ಮಹಿಳಾ ಸಂಘಟನೆಗಳ ಪ್ರತಿಭಟನೆ: ಸ್ಪಂದನಾ, ಮಹಿಳಾ ಮುನ್ನಡೆ, ವಿಮೋಚನಾ ಸಂಘಟನೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಹೆದ್ದಾರಿ ಮೂಲಕ ಪ್ರತಿಭಟನಾ ಜಾಥಾ ತೆರಳಿ ಸಿಬಿಐ ತನಿಕೆಗೆ ಆಗ್ರಹಪಡಿಸಿ ಜಿಲ್ಲಾಧಿಕಾಗಳ ಕಚೇರಿಗೆ ಮನವಿ ಸಲ್ಲಿಸಿದವು.<br /> <br /> ಸುವರ್ಣಾಳನ್ನು ಆಕೆಯ ಮನೆಯವರೇ ಸಾರ್ವಜನಿಕವಾಗಿ ನೇಣು ಹಾಕಿದ್ದಾರೆ. ಪ್ರಕರಣ ಆಗಲೇ ಪೊಲೀಸರ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲದೇ ಇರುವುದು ಖಂಡನೀಯ. ಈಗ ಪ್ರಕರಣ ಬೆಳಕಿಗೆ ಬಂದ ಮೇಲೂ ಪೊಲೀಸರು ಮೌನವಾಗಿ ಇರುವುದು ಶಂಖೆಗೆ ಆಸ್ಪದವಾಗಿದೆ ಎಂದು ಎಚ್ಚರಿಸಿದರು.<br /> <br /> ಕರ್ತವ್ಯ ಲೋಪ ತೋರಿದ ಪೊಲೀಸರ ಮೇಲೂ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ, ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಹೀಗೆ ಮಾಡಲಾಗುತ್ತಿದೆ, ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಅನುಮಾನವು ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.<br /> <br /> ವ್ಯವಸ್ಥೆಯ, ಸಾಂಪ್ರಾದಾಯಿಕ ಚೌಕಟ್ಟು ಮೀರುವ, ಸ್ವಾಭಿಮಾನಿ ಕೆಲಸಕ್ಕೆ ಮಹಿಳೆಯರು ಮುಂದಾದರೆ ಕಿರುಕುಳ, ಹತ್ಯೆ, ಆ್ಯಸಿಡ್ ದಾಳಿ ನಡೆಯಲಿದೆ. ಇದನು ತಪ್ಪಿಸಲು ಅಗತ್ಯಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆ ಎಂದು ಪ್ರತಿಪಾದಿಸಿದರು.<br /> <br /> ಪ್ರತಿಭಟನೆಯಲ್ಲಿ ಸುನಾಂದಾ ಜಯರಾಂ, ನಿರ್ಮಲಾ ಚಿಕ್ಕೇಗೌಡ, ಜನಶಕ್ತಿ ಸಂಘಟನೆಯ ಕೃಷ್ಣಪ್ರಕಾಶ್, ಲಕ್ಷ್ಮಣ, ಗೀತಾಂಜಲಿ, ಸೌಮ್ಯ, ವಿಕಸನ ಸಂಘಟನೆಯ ಮಂಜುಳಾ, ನಾಗರೇವಕ್ಕ ಮತ್ತಿತರರು ಇದ್ದರು.<br /> <br /> ಜನವಾದಿ ಮಹಿಳಾ ಸಂಘಟನೆ: ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಂಟಿಯಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯ ಮಂಚೂಣಿಯಲ್ಲಿ ದೇವಿ, ಮತ್ತಿತರರು ಇದ್ದರು. ಸುವರ್ಣಾಳ ಮರ್ಯಾದಾ ಹತ್ಯೆ ಪ್ರಕಣದಲ್ಲಿಕರ್ತವ್ಯ ಲೋಪ ತೋರಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು, ಈ ಘಟನೆಯ ಬಳಿಕ ನೊಂದಿರುವ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮನವಿ ನೀಡಲಾಯಿತು.<br /> <br /> ಅಂತರ್ಜಾತಿ ಮದುವೆಗೆ ಮುಂದಾದುದೇ ಯುವತಿಯ ಹತ್ಯೆಗೆ ಕಾರಣವಾಗಿದೆ. ಯುವತಿಯ ಹತ್ಯೆಯ ಜೊತೆಗೆ, ಪ್ರೀತಿಸಿದ ಯುವಕನ ಕುಟುಂಬದ ಮೇಲೂದೌರ್ಜನ್ಯ ನಡೆದಿರುವುದು ಖಂಡನೀಯ. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಜಿಲ್ಲೆಯ ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸುವರ್ಣಾಳ ಸಾವಿಗೆ ಕಾರಣದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು, ನಿಷ್ಪಕ್ಷಪಾತ ತನಿಖೆ ಆಗಲು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿವಿಧ ಜನಪರ ಸಂಘಟನೆಗಳು ಮಂಗಳವಾರ ಜಾಥಾ, ಪ್ರತಿಭಟನೆ ನಡೆಸಿದವು.<br /> <br /> ಪ್ರಗತಿಪರ ಸಂಘಟನೆಗಳು ಮತ್ತು ಜನವಾದಿ ಮಹಿಳಾ ಸಂಘಟನೆಯು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿಯನ್ನು ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿ ಬಲಪ್ರದರ್ಶನ ನಡೆಸಿದವು.<br /> <br /> ಸ್ಪಂದನಾ, ವಿಮೋಚನಾ ಮಹಿಳಾ ಸಂಘಟನೆಗಳ ಪ್ರತಿಭಟನೆ: ಸ್ಪಂದನಾ, ಮಹಿಳಾ ಮುನ್ನಡೆ, ವಿಮೋಚನಾ ಸಂಘಟನೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಹೆದ್ದಾರಿ ಮೂಲಕ ಪ್ರತಿಭಟನಾ ಜಾಥಾ ತೆರಳಿ ಸಿಬಿಐ ತನಿಕೆಗೆ ಆಗ್ರಹಪಡಿಸಿ ಜಿಲ್ಲಾಧಿಕಾಗಳ ಕಚೇರಿಗೆ ಮನವಿ ಸಲ್ಲಿಸಿದವು.<br /> <br /> ಸುವರ್ಣಾಳನ್ನು ಆಕೆಯ ಮನೆಯವರೇ ಸಾರ್ವಜನಿಕವಾಗಿ ನೇಣು ಹಾಕಿದ್ದಾರೆ. ಪ್ರಕರಣ ಆಗಲೇ ಪೊಲೀಸರ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲದೇ ಇರುವುದು ಖಂಡನೀಯ. ಈಗ ಪ್ರಕರಣ ಬೆಳಕಿಗೆ ಬಂದ ಮೇಲೂ ಪೊಲೀಸರು ಮೌನವಾಗಿ ಇರುವುದು ಶಂಖೆಗೆ ಆಸ್ಪದವಾಗಿದೆ ಎಂದು ಎಚ್ಚರಿಸಿದರು.<br /> <br /> ಕರ್ತವ್ಯ ಲೋಪ ತೋರಿದ ಪೊಲೀಸರ ಮೇಲೂ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ, ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಹೀಗೆ ಮಾಡಲಾಗುತ್ತಿದೆ, ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಅನುಮಾನವು ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.<br /> <br /> ವ್ಯವಸ್ಥೆಯ, ಸಾಂಪ್ರಾದಾಯಿಕ ಚೌಕಟ್ಟು ಮೀರುವ, ಸ್ವಾಭಿಮಾನಿ ಕೆಲಸಕ್ಕೆ ಮಹಿಳೆಯರು ಮುಂದಾದರೆ ಕಿರುಕುಳ, ಹತ್ಯೆ, ಆ್ಯಸಿಡ್ ದಾಳಿ ನಡೆಯಲಿದೆ. ಇದನು ತಪ್ಪಿಸಲು ಅಗತ್ಯಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆ ಎಂದು ಪ್ರತಿಪಾದಿಸಿದರು.<br /> <br /> ಪ್ರತಿಭಟನೆಯಲ್ಲಿ ಸುನಾಂದಾ ಜಯರಾಂ, ನಿರ್ಮಲಾ ಚಿಕ್ಕೇಗೌಡ, ಜನಶಕ್ತಿ ಸಂಘಟನೆಯ ಕೃಷ್ಣಪ್ರಕಾಶ್, ಲಕ್ಷ್ಮಣ, ಗೀತಾಂಜಲಿ, ಸೌಮ್ಯ, ವಿಕಸನ ಸಂಘಟನೆಯ ಮಂಜುಳಾ, ನಾಗರೇವಕ್ಕ ಮತ್ತಿತರರು ಇದ್ದರು.<br /> <br /> ಜನವಾದಿ ಮಹಿಳಾ ಸಂಘಟನೆ: ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಂಟಿಯಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯ ಮಂಚೂಣಿಯಲ್ಲಿ ದೇವಿ, ಮತ್ತಿತರರು ಇದ್ದರು. ಸುವರ್ಣಾಳ ಮರ್ಯಾದಾ ಹತ್ಯೆ ಪ್ರಕಣದಲ್ಲಿಕರ್ತವ್ಯ ಲೋಪ ತೋರಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು, ಈ ಘಟನೆಯ ಬಳಿಕ ನೊಂದಿರುವ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮನವಿ ನೀಡಲಾಯಿತು.<br /> <br /> ಅಂತರ್ಜಾತಿ ಮದುವೆಗೆ ಮುಂದಾದುದೇ ಯುವತಿಯ ಹತ್ಯೆಗೆ ಕಾರಣವಾಗಿದೆ. ಯುವತಿಯ ಹತ್ಯೆಯ ಜೊತೆಗೆ, ಪ್ರೀತಿಸಿದ ಯುವಕನ ಕುಟುಂಬದ ಮೇಲೂದೌರ್ಜನ್ಯ ನಡೆದಿರುವುದು ಖಂಡನೀಯ. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>