<p>ಬೆಂಗಳೂರು: `ಸ್ನೇಹಿತೆ ಸುಷ್ಮಿತಾಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದಳು. ಆದರೆ, ಮಾಗಡಿ ರಸ್ತೆಯ ಖಾಸಗಿ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದ ಸೌಲಭ್ಯವಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಆ ನಂತರ ಆಂಬುಲೆನ್ಸ್ನಲ್ಲಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮೃತಪಟ್ಟಳು~ ಎಂದು ಗಾಯಾಳು ಅನಿರುದ್ದ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ನಾವು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಬಲ ಭಾಗದಲ್ಲಿತ್ತು. ಮುಂದೆ ಚಲಿಸುತ್ತಿದ್ದ ಲಾರಿಯ ಚಾಲಕ ಏಕಾಏಕಿ ಕಾರಿನ ಕಡೆಗೆ ವಾಹನ ನುಗ್ಗಿಸಿದ. ಈ ವೇಳೆ ಅಖಿಲ್ ವಾಹನವನ್ನು ಎಡಕ್ಕೆ ತಿರುಗಿಸಿದಾಗ, ಅಡ್ಡಾದಿಡ್ಡಿ ಚಲಿಸಿದ ಕಾರು ಮಣ್ಣಿನ ದಿಬ್ಬಕ್ಕೆ ಗುದ್ದಿ ಉರುಳಿ ಬಿದ್ದಿತು~ ಎಂದು ಅವರು ಘಟನೆಯನ್ನು ವಿವರಿಸಿದರು.<br /> <br /> ಘಟನೆಯಲ್ಲಿ ಅನಿರುದ್ದ್ ಅವರ ಕೈ ಮತ್ತು ಕಿವಿಗೆ ಪೆಟ್ಟಾಗಿದೆ. ನಮ್ರತಾ ಅವರ ಮಂಡಿ ಮತ್ತು ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಅಖಿಲ್ ಅವರ ಮೊಣಕೈ, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ.<br /> <br /> `ಅಪಘಾತದಲ್ಲಿ ಗಾಯಗೊಂಡಿರುವ ಮಗ ಆಘಾತಗೊಂಡಿದ್ದಾನೆ. ಆತನಿಗೆ ಸುಷ್ಮಿತಾ ಸಾವನ್ನಪ್ಪಿರುವ ಸಂಗತಿ ಈವರೆಗೂ ಗೊತ್ತಿಲ್ಲ. ಲಾರಿ ಗುದ್ದಿದ್ದರಿಂದ ಕಾರು ಮಗುಚಿ ಬಿದ್ದಿತು ಎಂದಷ್ಟೇ ಆತ ಘಟನೆಯನ್ನು ವಿವರಿಸಿದ~ ಎಂದು ಅಖಿಲ್ ತಂದೆ ಅರುಣ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಸ್ನೇಹಿತೆ ಸುಷ್ಮಿತಾಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದಳು. ಆದರೆ, ಮಾಗಡಿ ರಸ್ತೆಯ ಖಾಸಗಿ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದ ಸೌಲಭ್ಯವಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಆ ನಂತರ ಆಂಬುಲೆನ್ಸ್ನಲ್ಲಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮೃತಪಟ್ಟಳು~ ಎಂದು ಗಾಯಾಳು ಅನಿರುದ್ದ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ನಾವು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಬಲ ಭಾಗದಲ್ಲಿತ್ತು. ಮುಂದೆ ಚಲಿಸುತ್ತಿದ್ದ ಲಾರಿಯ ಚಾಲಕ ಏಕಾಏಕಿ ಕಾರಿನ ಕಡೆಗೆ ವಾಹನ ನುಗ್ಗಿಸಿದ. ಈ ವೇಳೆ ಅಖಿಲ್ ವಾಹನವನ್ನು ಎಡಕ್ಕೆ ತಿರುಗಿಸಿದಾಗ, ಅಡ್ಡಾದಿಡ್ಡಿ ಚಲಿಸಿದ ಕಾರು ಮಣ್ಣಿನ ದಿಬ್ಬಕ್ಕೆ ಗುದ್ದಿ ಉರುಳಿ ಬಿದ್ದಿತು~ ಎಂದು ಅವರು ಘಟನೆಯನ್ನು ವಿವರಿಸಿದರು.<br /> <br /> ಘಟನೆಯಲ್ಲಿ ಅನಿರುದ್ದ್ ಅವರ ಕೈ ಮತ್ತು ಕಿವಿಗೆ ಪೆಟ್ಟಾಗಿದೆ. ನಮ್ರತಾ ಅವರ ಮಂಡಿ ಮತ್ತು ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಅಖಿಲ್ ಅವರ ಮೊಣಕೈ, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ.<br /> <br /> `ಅಪಘಾತದಲ್ಲಿ ಗಾಯಗೊಂಡಿರುವ ಮಗ ಆಘಾತಗೊಂಡಿದ್ದಾನೆ. ಆತನಿಗೆ ಸುಷ್ಮಿತಾ ಸಾವನ್ನಪ್ಪಿರುವ ಸಂಗತಿ ಈವರೆಗೂ ಗೊತ್ತಿಲ್ಲ. ಲಾರಿ ಗುದ್ದಿದ್ದರಿಂದ ಕಾರು ಮಗುಚಿ ಬಿದ್ದಿತು ಎಂದಷ್ಟೇ ಆತ ಘಟನೆಯನ್ನು ವಿವರಿಸಿದ~ ಎಂದು ಅಖಿಲ್ ತಂದೆ ಅರುಣ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>