<p><strong>ಬೆಂಗಳೂರು:</strong> ಸ್ಫೂರ್ತಿಧಾಮ ಹಾಗೂ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ನ 2012 ನೇ ಸಾಲಿನ `ಬೋಧಿವೃಕ್ಷ~ ಪ್ರಶಸ್ತಿಗೆ ಮಹಾರಾಷ್ಟ್ರದ ದಲಿತ ಚಿಂತಕ ವಸಂತಮೂನ್ ಅವರನ್ನು ಆಯ್ಕೆ ಮಾಡಲಾಗಿದೆ.<br /> <br /> `ಬೋಧಿವರ್ಧನ~ ಪ್ರಶಸ್ತಿಗಾಗಿ ಬೆಳಗಾವಿಯ ಡಾ.ಭೀಮರಾವ್ ಘಸ್ತಿ, ಮೈಸೂರಿನ ಡಾ.ಭಾಗ್ಯಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿದ್ದು, ಕೊಳ್ಳೇಗಾಲದ ಎಸ್.ಎಲ್.ರಾಬರ್ಟ್ ಪಾಲ್, ಮೈಸೂರಿನ ಆರ್.ರಂಗೇಗೌಡ ಮತ್ತು ಸಾಹುಕಯ್ಯ ಅವರ ಜೀವಮಾನದ ಸಾಧನೆಗಾಗಿ ಮರಣೋತ್ತರ `ಬೋಧಿವರ್ಧನ~ ಪ್ರಶಸ್ತಿಯ ಗೌರವ ಸಂದಿದೆ.<br /> <br /> `ಬೋಧಿವೃಕ್ಷ~ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಹಾಗೂ `ಬೋಧಿವರ್ಧನ~ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.<br /> <br /> ದಲಿತರ ಶಿಕ್ಷಣ ಹಾಗೂ ಸಾಮಾಜಿಕ ಹೋರಾಟಗಳ ಕೊಡುಗೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಹಿರಿಯ ಸಾಹಿತಿ ದೇವನೂರ ಮಹಾದೇವ, ಆರ್. ಎಸ್.ದೇಶಪಾಂಡೆ, ಎಸ್.ಮರಿಸ್ವಾಮಿ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಶನಿವಾರ ನಗರದ ಸ್ಫೂರ್ತಿಧಾಮದಲ್ಲಿ ನಡೆಯುವ `ಅಂಬೇಡ್ಕರ್ ಹಬ್ಬ~ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸ್ಫೂರ್ತಿಧಾಮ ಹಾಗೂ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ನ 2012 ನೇ ಸಾಲಿನ `ಬೋಧಿವೃಕ್ಷ~ ಪ್ರಶಸ್ತಿಗೆ ಮಹಾರಾಷ್ಟ್ರದ ದಲಿತ ಚಿಂತಕ ವಸಂತಮೂನ್ ಅವರನ್ನು ಆಯ್ಕೆ ಮಾಡಲಾಗಿದೆ.<br /> <br /> `ಬೋಧಿವರ್ಧನ~ ಪ್ರಶಸ್ತಿಗಾಗಿ ಬೆಳಗಾವಿಯ ಡಾ.ಭೀಮರಾವ್ ಘಸ್ತಿ, ಮೈಸೂರಿನ ಡಾ.ಭಾಗ್ಯಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿದ್ದು, ಕೊಳ್ಳೇಗಾಲದ ಎಸ್.ಎಲ್.ರಾಬರ್ಟ್ ಪಾಲ್, ಮೈಸೂರಿನ ಆರ್.ರಂಗೇಗೌಡ ಮತ್ತು ಸಾಹುಕಯ್ಯ ಅವರ ಜೀವಮಾನದ ಸಾಧನೆಗಾಗಿ ಮರಣೋತ್ತರ `ಬೋಧಿವರ್ಧನ~ ಪ್ರಶಸ್ತಿಯ ಗೌರವ ಸಂದಿದೆ.<br /> <br /> `ಬೋಧಿವೃಕ್ಷ~ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಹಾಗೂ `ಬೋಧಿವರ್ಧನ~ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.<br /> <br /> ದಲಿತರ ಶಿಕ್ಷಣ ಹಾಗೂ ಸಾಮಾಜಿಕ ಹೋರಾಟಗಳ ಕೊಡುಗೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಹಿರಿಯ ಸಾಹಿತಿ ದೇವನೂರ ಮಹಾದೇವ, ಆರ್. ಎಸ್.ದೇಶಪಾಂಡೆ, ಎಸ್.ಮರಿಸ್ವಾಮಿ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಶನಿವಾರ ನಗರದ ಸ್ಫೂರ್ತಿಧಾಮದಲ್ಲಿ ನಡೆಯುವ `ಅಂಬೇಡ್ಕರ್ ಹಬ್ಬ~ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>