<p><strong>ವಿಜಾಪುರ: </strong>ನಗರದ ಐತಿಹಾಸಿಕ ಸ್ಮಾರಕಗಳ ಅತಿಕ್ರಮಣ ತಡೆಯಬೇಕು ಎಂದು ಹುಬ್ಬಳ್ಳಿಯ ಆರ್ಯ ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಎಚ್.ಜಿ. ದಡ್ಡಿ, ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಪರಂಪರೆ ಕೂಟದ ಕಾರ್ಯದರ್ಶಿ ಪ್ರೊ.ರಾಜು ಬಿದರಿ, ಪ್ರೊ.ಸದಾಶಿವ ಪವಾರ ಇತರರು ಒತ್ತಾಯಿಸಿದ್ದಾರೆ.<br /> <br /> ಈ ಕುರಿತು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರಿಗೆ ಮನವಿ ಸಲ್ಲಿಸಿರುವ ಅವರು, ನಗರದಲ್ಲಿ ರಾಷ್ಟ್ರೀಯ ಐತಿಹಾಸಿಕ ಸ್ಥಳಗಳೆಂದು ಗುರುತಿಸಿರುವ ಸ್ಮಾರಕಗಳ ಪುನರ್ ಸಮೀಕ್ಷೆ ನಡೆಸಬೇಕು. ಅವುಗಳ ಸುತ್ತಲೂ ಗೋಡೆ ಕಟ್ಟಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದರು.<br /> <br /> ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಕೊಂಡು ಕುರಿತು ಚರ್ಚಿಸಿದರು. ಪರಂಪರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸದಸ್ಯರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.<br /> <br /> ಪರಂಪರೆ ಕೂಟದ ಸದಸ್ಯರಾದ ಡಾ.ಎಂ.ಬಿ. ಮೂಲಿಮನಿ , ಡಾ.ಪಿ.ಎಂ. ಬಿರಾದಾರ, ಎನ್.ಕೆ. ಜಾಹಗೀರದಾರ ಈ ಸಂದರ್ಭದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.<br /> <br /> <strong>ಸ್ನೇಹ ಸಮ್ಮೇಳನ<br /> </strong><br /> ವಿಜಾಪುರ ತಾಲ್ಲೂಕಿನ ಜಂಬಗಿ ಗ್ರಾಮದಲ್ಲಿ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಕಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತೀಚೆಗೆ ಜರುಗಿತು.<br /> <br /> ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಎ.ಜೆ. ಕುಲಕರ್ಣಿ, ರಮೆಶ ತುಂಗಾ, ಶಿಕ್ಷಣ ಸಂಸ್ಥೆಯ ಗುರುರಾಜ ಪತ್ತಾರ, ರವಿ ದೇಶಮುಖ, ಸಿದ್ಧಲಿಂಗ ದೇಶಮುಖ, ಧರ್ಮರಾಯ ಹತ್ತಳ್ಳಿ, ರೇವಣಸಿದ್ದಯ್ಯ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಶ್ರಿಶೈಲ ಹಚಡದ, ಗುರುಬಾಳಪ್ಪ ಹತ್ತಳ್ಳಿ, ಸಿದ್ದು ಗೇರಡೆ ಭಾಗವಹಿಸಿದ್ದರು.<br /> ಸಂತೋಷ ಪತ್ತಾರ ಸ್ವಾಗತಿಸಿದರು. ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಮಾನೆ ವಂದಿಸಿದರು.<br /> <br /> <strong>ಸಾಮೂಹಿಕ ವಿವಾಹ</strong><br /> <strong>ಬಾಗಲಕೋಟೆ: </strong> ಹುನಗುಂದ ತಾಲ್ಲೂಕಿನ ಗೊರಜನಾಳದ ಶ್ರೀ ವೆಂಕಟೇಶ್ವರ ಮತ್ತು ಮಾರುತೇಶ್ವರ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಹಾಗೂ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ಇದೇ 22 ಮತ್ತು 23ರಂದು ನಡೆಯಲಿದೆ.<br /> <br /> 22ರಂದು ಸಂಜೆ 6ಕ್ಕೆ ನಡೆಯುವ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ನಗರದ ಐತಿಹಾಸಿಕ ಸ್ಮಾರಕಗಳ ಅತಿಕ್ರಮಣ ತಡೆಯಬೇಕು ಎಂದು ಹುಬ್ಬಳ್ಳಿಯ ಆರ್ಯ ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಎಚ್.ಜಿ. ದಡ್ಡಿ, ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಪರಂಪರೆ ಕೂಟದ ಕಾರ್ಯದರ್ಶಿ ಪ್ರೊ.ರಾಜು ಬಿದರಿ, ಪ್ರೊ.ಸದಾಶಿವ ಪವಾರ ಇತರರು ಒತ್ತಾಯಿಸಿದ್ದಾರೆ.<br /> <br /> ಈ ಕುರಿತು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರಿಗೆ ಮನವಿ ಸಲ್ಲಿಸಿರುವ ಅವರು, ನಗರದಲ್ಲಿ ರಾಷ್ಟ್ರೀಯ ಐತಿಹಾಸಿಕ ಸ್ಥಳಗಳೆಂದು ಗುರುತಿಸಿರುವ ಸ್ಮಾರಕಗಳ ಪುನರ್ ಸಮೀಕ್ಷೆ ನಡೆಸಬೇಕು. ಅವುಗಳ ಸುತ್ತಲೂ ಗೋಡೆ ಕಟ್ಟಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದರು.<br /> <br /> ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಕೊಂಡು ಕುರಿತು ಚರ್ಚಿಸಿದರು. ಪರಂಪರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸದಸ್ಯರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.<br /> <br /> ಪರಂಪರೆ ಕೂಟದ ಸದಸ್ಯರಾದ ಡಾ.ಎಂ.ಬಿ. ಮೂಲಿಮನಿ , ಡಾ.ಪಿ.ಎಂ. ಬಿರಾದಾರ, ಎನ್.ಕೆ. ಜಾಹಗೀರದಾರ ಈ ಸಂದರ್ಭದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.<br /> <br /> <strong>ಸ್ನೇಹ ಸಮ್ಮೇಳನ<br /> </strong><br /> ವಿಜಾಪುರ ತಾಲ್ಲೂಕಿನ ಜಂಬಗಿ ಗ್ರಾಮದಲ್ಲಿ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಕಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತೀಚೆಗೆ ಜರುಗಿತು.<br /> <br /> ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಎ.ಜೆ. ಕುಲಕರ್ಣಿ, ರಮೆಶ ತುಂಗಾ, ಶಿಕ್ಷಣ ಸಂಸ್ಥೆಯ ಗುರುರಾಜ ಪತ್ತಾರ, ರವಿ ದೇಶಮುಖ, ಸಿದ್ಧಲಿಂಗ ದೇಶಮುಖ, ಧರ್ಮರಾಯ ಹತ್ತಳ್ಳಿ, ರೇವಣಸಿದ್ದಯ್ಯ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಶ್ರಿಶೈಲ ಹಚಡದ, ಗುರುಬಾಳಪ್ಪ ಹತ್ತಳ್ಳಿ, ಸಿದ್ದು ಗೇರಡೆ ಭಾಗವಹಿಸಿದ್ದರು.<br /> ಸಂತೋಷ ಪತ್ತಾರ ಸ್ವಾಗತಿಸಿದರು. ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಮಾನೆ ವಂದಿಸಿದರು.<br /> <br /> <strong>ಸಾಮೂಹಿಕ ವಿವಾಹ</strong><br /> <strong>ಬಾಗಲಕೋಟೆ: </strong> ಹುನಗುಂದ ತಾಲ್ಲೂಕಿನ ಗೊರಜನಾಳದ ಶ್ರೀ ವೆಂಕಟೇಶ್ವರ ಮತ್ತು ಮಾರುತೇಶ್ವರ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಹಾಗೂ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ಇದೇ 22 ಮತ್ತು 23ರಂದು ನಡೆಯಲಿದೆ.<br /> <br /> 22ರಂದು ಸಂಜೆ 6ಕ್ಕೆ ನಡೆಯುವ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>