<p><strong>ಇಳಕಲ್:</strong> ನಗರಸಭೆ ಬೇಜವಾಬ್ದಾರಿಯಿಂದಾಗಿ ಇಲ್ಲಿಯ ಶಿವಾಜಿನಗರ ಬಡಾ ವಣೆಯಲ್ಲಿ ಮಕ್ಕಳು ಸೇರಿದಂತೆ 10 ಜನರಿಗೆ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.<br /> <br /> 6 ವರ್ಷದ ಗೋವರ್ಧನ ರಾಳ ದಡ್ಡಿ, ಪವನ ಸಾಕ್ರೆ, 7 ವರ್ಷದ ಪೂಜಾ ಐಲಿ, 12 ವರ್ಷದ ಶಿವಕುಮಾರ ಪರಮೇಶ, ಸಾಗರ ದ್ಯಾವನಕೊಂಡಿ, 40 ವರ್ಷದ ಯಂಕಣ್ಣ ಗೋರ್ಕಲ್ ಸೇರಿದಂತೆ 10 ಜನರು ಜನರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.</p>.<p>ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಕೊರತೆಯ ಕಾರಣದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಜುಲೈ 15 ರಂದೇ ‘ಪ್ರಜಾವಾಣಿ’ <strong>‘ಅಸಮರ್ಪಕ ಚರಂಡಿ : ಸಾಂಕ್ರಾಮಿಕ ರೋಗ ಭೀತಿ </strong>!’ ಎಂದು ವರದಿ ಮಾಡಿ ನಗರಸಭೆಯನ್ನು ಎಚ್ಚರಿಸಿತ್ತು. ಶಿವಾಜಿನಗರದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ನಿರ್ಮಿಸಲಾದ ಚರಂಡಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿ ಯಲ್ಲಿ ಕೊಳಚೆ ಸಂಗ್ರಹಗೊಂಡಿದೆ.</p>.<p>ಇದು ಅನಾರೋಗ್ಯಕ್ಕೆ ಕಾರಣವಾಗಲಿದೆ. ಕೂಡಲೇ ಚರಂಡಿಯಲ್ಲಿ ಸಂಗ್ರಹ ಗೊಂಡಿರುವ ಕೊಳಚೆ ಹಾಗೂ ಮಳೆ ನೀರು ಹರಿದು ಹೋಗುವಂತೆ ಮಾಡ ಬೇಕು ಎಂದು ನಗರಸಭೆಯನ್ನು ಒತ್ತಾಯಿಸಿತ್ತು.<br /> <br /> 4ನೇ ವಾರ್ಡ್ನ ಶಿವಾಜಿನಗರದ ಗಟಾರ ನೋಡಿದರೇ ನಗರಸಭೆಯ ಬೇಜವಾಬ್ದಾರಿ ಹಾಗೂ ಕಾರ್ಯವೈಖರಿ ತಿಳಿಯುತ್ತದೆ. ಅಂದಾಜು 70 ಮೀಟರ್ ಉದ್ದದ ಇಲ್ಲಿಯ ಚರಂಡಿಗೆ ಸೇರುವ ಮಳೆ ನೀರು ಹಾಗೂ ಕೊಳಚೆ ಮುಂದೆ ಸಾಗುವುದೇ ಇಲ್ಲ!.<br /> <br /> ಏಕೆಂದರೇ ಚರಂಡಿ ಕೊನೆಯು ಯಾವ ಪ್ರಮುಖ ಚರಂಡಿ ಇಲ್ಲವೇ ನಾಲಾಕ್ಕೆ ಸಂಪರ್ಕಿಸುವುದಿಲ್ಲ. ಕೊಳಚೆ ಹಾಗೂ ಮಳೆ ನೀರನ್ನು ಮುಂದಕ್ಕೆ ಸಾಗಿಸಲು ನಿರ್ಮಿಸಿದ ಚರಂಡಿಗೆ ಜನರಿಗೆ ಶಾಪವಾಗಿ ಪರಿಣಮಿಸಿದೆ. ಈ ಪ್ರದೇಶದ ಅನೇಕರಲ್ಲಿ ಡೆಂಗಿ ಹಾಗೂ ಮಲೇರಿಯಾ ಕಾಣಿಸಿಕೊಂಡಿ ದ್ದರೂ ಈಗಲೂ ನಗರಸಭೆ ಎಚ್ಚೆತ್ತುಕೊಂಡಿಲ್ಲ.<br /> <br /> ಈ ಬಡಾವಣೆಯ ಬಹಳಷ್ಟು ಮಹಿ ಳೆಯರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಆ ಶೌಚಾಲಯದ ಗೋಡೆ ಬಿದ್ದಿದ್ದು, ಮರ್ಯಾದೆಯ ಕಾರಣಕ್ಕಾಗಿ ಬಹಿರ್ದೆಸೆಗೆ ಹೋಗಲು ಕತ್ತಲಾಗುವವರೆಗೂ ಕಾಯಬೇಕು.</p>.<p>ಈ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸಮೀಪಕ್ಕೆ ಹೋಗಲಾ ದಷ್ಟು ಗಲೀಜಾಗಿದೆ. ಬಚ್ಚಲ ನೀರು, ಬಟ್ಟೆ, ಪಾತ್ರೆ ತೊಳೆದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಸೊಳ್ಳೆಗಳು ಅಧಿಕವಾಗಿವೆ. ಇಲ್ಲಿ ಕನಿಷ್ಟ ಸೌಲಭ್ಯಗಳೂ ಇಲ್ಲ.<br /> <br /> ನಗರದಲ್ಲಿ ಎಡಿಬಿ ಯೋಜನೆಯ ಒಳಚರಂಡಿ ಕಾಮಗಾರಿ 4 ವರ್ಷಗಳ ಹಿಂದೆಯೇ ಮೊದಲಿಗೆ ಆರಂಭವಾಗಿದ್ದು ಶಿವಾಜಿನಗರದಲ್ಲಿ. ಇವತ್ತಿಗೂ ಅದು ಪೂರ್ಣಗೊಂಡಿಲ್ಲ.<br /> <br /> ನೇಕಾರ ಕುಟುಂಬಗಳೇ ಹೆಚ್ಚಾಗಿರುವ ಈ ಬಡಾವಣೆಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಗರಸಭೆ ಮುಂದಾಗಬೇಕು.<br /> <br /> ***<br /> ಡೆಂಗಿ ಜ್ವರಕ್ಕೆ ಇಲ್ಲಿಯ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲು ಹಣ ಇಲ್ಲ. ಹಾಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ಬಂದಿದ್ದಾರೆ.<br /> <em><strong>–ಈರಣ್ಣ ಭಂಡಾರಿ, ಬಡಾವಣೆ ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಳಕಲ್:</strong> ನಗರಸಭೆ ಬೇಜವಾಬ್ದಾರಿಯಿಂದಾಗಿ ಇಲ್ಲಿಯ ಶಿವಾಜಿನಗರ ಬಡಾ ವಣೆಯಲ್ಲಿ ಮಕ್ಕಳು ಸೇರಿದಂತೆ 10 ಜನರಿಗೆ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.<br /> <br /> 6 ವರ್ಷದ ಗೋವರ್ಧನ ರಾಳ ದಡ್ಡಿ, ಪವನ ಸಾಕ್ರೆ, 7 ವರ್ಷದ ಪೂಜಾ ಐಲಿ, 12 ವರ್ಷದ ಶಿವಕುಮಾರ ಪರಮೇಶ, ಸಾಗರ ದ್ಯಾವನಕೊಂಡಿ, 40 ವರ್ಷದ ಯಂಕಣ್ಣ ಗೋರ್ಕಲ್ ಸೇರಿದಂತೆ 10 ಜನರು ಜನರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.</p>.<p>ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಕೊರತೆಯ ಕಾರಣದಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಜುಲೈ 15 ರಂದೇ ‘ಪ್ರಜಾವಾಣಿ’ <strong>‘ಅಸಮರ್ಪಕ ಚರಂಡಿ : ಸಾಂಕ್ರಾಮಿಕ ರೋಗ ಭೀತಿ </strong>!’ ಎಂದು ವರದಿ ಮಾಡಿ ನಗರಸಭೆಯನ್ನು ಎಚ್ಚರಿಸಿತ್ತು. ಶಿವಾಜಿನಗರದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ನಿರ್ಮಿಸಲಾದ ಚರಂಡಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿ ಯಲ್ಲಿ ಕೊಳಚೆ ಸಂಗ್ರಹಗೊಂಡಿದೆ.</p>.<p>ಇದು ಅನಾರೋಗ್ಯಕ್ಕೆ ಕಾರಣವಾಗಲಿದೆ. ಕೂಡಲೇ ಚರಂಡಿಯಲ್ಲಿ ಸಂಗ್ರಹ ಗೊಂಡಿರುವ ಕೊಳಚೆ ಹಾಗೂ ಮಳೆ ನೀರು ಹರಿದು ಹೋಗುವಂತೆ ಮಾಡ ಬೇಕು ಎಂದು ನಗರಸಭೆಯನ್ನು ಒತ್ತಾಯಿಸಿತ್ತು.<br /> <br /> 4ನೇ ವಾರ್ಡ್ನ ಶಿವಾಜಿನಗರದ ಗಟಾರ ನೋಡಿದರೇ ನಗರಸಭೆಯ ಬೇಜವಾಬ್ದಾರಿ ಹಾಗೂ ಕಾರ್ಯವೈಖರಿ ತಿಳಿಯುತ್ತದೆ. ಅಂದಾಜು 70 ಮೀಟರ್ ಉದ್ದದ ಇಲ್ಲಿಯ ಚರಂಡಿಗೆ ಸೇರುವ ಮಳೆ ನೀರು ಹಾಗೂ ಕೊಳಚೆ ಮುಂದೆ ಸಾಗುವುದೇ ಇಲ್ಲ!.<br /> <br /> ಏಕೆಂದರೇ ಚರಂಡಿ ಕೊನೆಯು ಯಾವ ಪ್ರಮುಖ ಚರಂಡಿ ಇಲ್ಲವೇ ನಾಲಾಕ್ಕೆ ಸಂಪರ್ಕಿಸುವುದಿಲ್ಲ. ಕೊಳಚೆ ಹಾಗೂ ಮಳೆ ನೀರನ್ನು ಮುಂದಕ್ಕೆ ಸಾಗಿಸಲು ನಿರ್ಮಿಸಿದ ಚರಂಡಿಗೆ ಜನರಿಗೆ ಶಾಪವಾಗಿ ಪರಿಣಮಿಸಿದೆ. ಈ ಪ್ರದೇಶದ ಅನೇಕರಲ್ಲಿ ಡೆಂಗಿ ಹಾಗೂ ಮಲೇರಿಯಾ ಕಾಣಿಸಿಕೊಂಡಿ ದ್ದರೂ ಈಗಲೂ ನಗರಸಭೆ ಎಚ್ಚೆತ್ತುಕೊಂಡಿಲ್ಲ.<br /> <br /> ಈ ಬಡಾವಣೆಯ ಬಹಳಷ್ಟು ಮಹಿ ಳೆಯರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಆ ಶೌಚಾಲಯದ ಗೋಡೆ ಬಿದ್ದಿದ್ದು, ಮರ್ಯಾದೆಯ ಕಾರಣಕ್ಕಾಗಿ ಬಹಿರ್ದೆಸೆಗೆ ಹೋಗಲು ಕತ್ತಲಾಗುವವರೆಗೂ ಕಾಯಬೇಕು.</p>.<p>ಈ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸಮೀಪಕ್ಕೆ ಹೋಗಲಾ ದಷ್ಟು ಗಲೀಜಾಗಿದೆ. ಬಚ್ಚಲ ನೀರು, ಬಟ್ಟೆ, ಪಾತ್ರೆ ತೊಳೆದ ನೀರು ರಸ್ತೆಯ ಮೇಲೆ ಹರಿಯುತ್ತದೆ. ಸೊಳ್ಳೆಗಳು ಅಧಿಕವಾಗಿವೆ. ಇಲ್ಲಿ ಕನಿಷ್ಟ ಸೌಲಭ್ಯಗಳೂ ಇಲ್ಲ.<br /> <br /> ನಗರದಲ್ಲಿ ಎಡಿಬಿ ಯೋಜನೆಯ ಒಳಚರಂಡಿ ಕಾಮಗಾರಿ 4 ವರ್ಷಗಳ ಹಿಂದೆಯೇ ಮೊದಲಿಗೆ ಆರಂಭವಾಗಿದ್ದು ಶಿವಾಜಿನಗರದಲ್ಲಿ. ಇವತ್ತಿಗೂ ಅದು ಪೂರ್ಣಗೊಂಡಿಲ್ಲ.<br /> <br /> ನೇಕಾರ ಕುಟುಂಬಗಳೇ ಹೆಚ್ಚಾಗಿರುವ ಈ ಬಡಾವಣೆಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಗರಸಭೆ ಮುಂದಾಗಬೇಕು.<br /> <br /> ***<br /> ಡೆಂಗಿ ಜ್ವರಕ್ಕೆ ಇಲ್ಲಿಯ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲು ಹಣ ಇಲ್ಲ. ಹಾಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ಬಂದಿದ್ದಾರೆ.<br /> <em><strong>–ಈರಣ್ಣ ಭಂಡಾರಿ, ಬಡಾವಣೆ ನಿವಾಸಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>