<p>ಅದು 2003-04ರ ಆಜುಬಾಜು. ಅಮೆರಿಕದ ಮೆಂಫಿಸ್ನಲ್ಲಿ ಉದ್ಯೋಗದಲ್ಲಿದ್ದ ದಂಪತಿ ಬಿಡುವಿನ ವೇಳೆಯಲ್ಲಿ ಬೇರೆ ಬೇರೆ ನಗರಗಳಲ್ಲಿ ಸಂಗೀತ ಕಛೇರಿ ನೀಡುವ ಹವ್ಯಾಸ ಬೆಳೆಸಿಕೊಂಡರು. ಅಲ್ಲಿಯೇ `ಘಮ ಘಮ' ಎಂಬ ಹಾಡುಗಳ ಸೀಡಿ ಹೊರತಂದರು. 2007ರಲ್ಲಿ ಬೆಂಗಳೂರಿಗೆ ಬಂದರು. ಪತಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಪತ್ನಿ ಉಪನ್ಯಾಸಕಿಯಾದರು. ಆದರೆ ಪತಿಗೆ ಕಲೆಯ ಗೀಳು ಹಾಗೆಯೇ ಇತ್ತು. ಕಂಪೆನಿಯಲ್ಲಿದ್ದ 40ರಿಂದ 50 ಮಂದಿ ಕಲಾವಿದರನ್ನು ಸೇರಿಸಿಕೊಂಡು `ಎಕ್ಸ್ಪ್ರೆಷನ್' ಎಂಬ ಬ್ಯಾಂಡ್ ಕಟ್ಟಿದರು. ಹಲವೆಡೆ ಕಾರ್ಯಕ್ರಮಗಳನ್ನೂ ನೀಡಿದರು. ಅನಿವಾರ್ಯ ಕಾರಣಗಳಿಂದ ಆತ ಕಂಪೆನಿ ಬಿಡಬೇಕಾಯಿತು. ಆದರೆ ಬ್ಯಾಂಡ್ ಮೋಹ ಕರಗಲಿಲ್ಲ.<br /> <br /> <strong>ಸಂಗೀತ ಪ್ರಧಾನ `ಸ್ವರಾಮೃತ'</strong><br /> ಹಳೆಯ ನೆನಪನ್ನು ಬದಿಗಿಟ್ಟು, ಮತ್ತೆ ಏಳು ಮಂದಿ ಸಹೋದ್ಯೋಗಿ ಸ್ನೇಹಿತರನ್ನು ಸೇರಿಸಿಕೊಂಡು ಅದೇ ದಂಪತಿ `ಸ್ವರಾಮೃತ' ಎಂಬ ಬ್ಯಾಂಡ್ ಕಟ್ಟಿದರು. ಉಡುಪಿಯ ವಿಶ್ವೇಶ್ ಭಟ್ ಹಾಗೂ ಅಶ್ವಿನಿ ಎಂಬುವವರೇ ಈ ಸ್ವರಮೋಹಿಗಳು.<br /> <br /> ಬಹುತೇಕ ಕಾರ್ಪೊರೇಟ್ ಮಂದಿಯ ಬ್ಯಾಂಡ್ಗಳಲ್ಲಿ ರಾಕ್ ಸಂಗೀತವೇ ಹೆಚ್ಚಾಗಿರುತ್ತದೆ. ಭಾರತೀಯ ಸಂಗೀತ ಕಡಿಮೆ. ಆದರೆ ಈ ತಂಡ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತವನ್ನು ಬ್ಯಾಂಡ್ ಮೂಲಕ ಜನರಿಗೆ ಕೇಳಿಸುತ್ತಿದೆ.<br /> <br /> ಸಾಫ್ಟ್ವೇರ್ ಎಂಜಿನಿಯರ್ ವಿಶ್ವೇಶ್ ಭಟ್ ಬಿಡುವಿಲ್ಲದ ಕೆಲಸದ ನಡುವೆಯೂ ಸಂಜೆ ಎರಡು ಗಂಟೆ ಸಂಗೀತಾಭ್ಯಾಸಕ್ಕೆ ಮೀಸಲಿಡುತ್ತಾರೆ. ಬೇರೆಯವರು ಸಂಯೋಜಿಸಿದ ಗೀತೆಗಳನ್ನು ನೆಚ್ಚಿಕೊಳ್ಳದ ಇವರು, ತಾವೇ ಸ್ವರ ಸಂಯೋಜನೆ ಮಾಡುತ್ತಾರೆ. ಫ್ಯೂಷನ್ ಇವರಿಗೆ ಅಷ್ಟು ಇಷ್ಟವಿಲ್ಲ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಇಟ್ಟುಕೊಂಡೇ `ಕ್ರಿಯೇಟಿವ್ ಬ್ಯಾಂಡ್' ರೂಪಿಸಿದ್ದಾರೆ. ವಾರಾಂತ್ಯದ ದಿನಗಳನ್ನು ಬ್ಯಾಂಡ್ಗೆಂದೇ ಮೀಸಲಿಟ್ಟಿರುವ ವಿಶ್ವೇಶ್ ಖುದ್ದು ರೆಕಾರ್ಡ್ ಕೂಡ ಮಾಡುತ್ತಾರೆ. ಸಂಗೀತವೇ ಜೀವನ ಎನ್ನುವ ವಿಶ್ವೇಶ್ ಅವರು ವೀಣಾ ವಾದಕಿ ಅಶ್ವಿನಿ ಅವರನ್ನು ವಿವಾಹವಾಗಿದ್ದೂ ಸ್ವರಮೋಹದಿಂದಲೇ. `ಇಂದು ಪ್ರತಿಯೊಬ್ಬರಿಗೂ ಸಂಗೀತ ಮುಖ್ಯ. ಕೆಲವರಿಗೆ ಅದು ಮನರಂಜನೆ. ಮತ್ತೆ ಕೆಲವರಿಗೆ ವೃತ್ತಿಯಾಗಿರಬಹುದು. ನನಗೆ ಮಾತ್ರ ಅದು ಜೀವನದ ಒಂದು ಭಾಗ, ಉಸಿರು' ಎಂದು ಸಂಗೀತದ ಬಗೆಗಿನ ಪ್ರೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.<br /> <br /> `ಸ್ವರಾಮೃತ'ದಲ್ಲಿ ವಿಶ್ವೇಶ್ ಭಟ್ ಪ್ರಮುಖ ಗಾಯಕ. ತಂಡದಲ್ಲಿ ವೀಣೆ (ಶ್ರುತಿ ಕುಮಾರ್, ಅಶ್ವಿನಿ ಭಟ್, ಮಂಜೀರಾ), ಕೊಳಲು (ಸಂಜೀತ್ ಕುಮಾರ್), ಕೀಬೋರ್ಡ್ (ಸುಶ್ರುತ್), ತಬಲಾ (ಕೃಷ್ಣಾನಂದ ಪ್ರಭು), ಮೃದಂಗ (ಫಣೀಂದ್ರ ಭಾಸ್ಕರ), ಡ್ರಮ್ಸ (ಶ್ರವಣ್) ಬಳಕೆಯಾಗುತ್ತಿದೆ.<br /> <br /> ಈ ಬ್ಯಾಂಡ್ನಲ್ಲಿ ಸಾಹಿತ್ಯದ ಬಳಕೆ ಕಡಿಮೆ. ವಾದ್ಯ ಸಂಗೀತ, ಸ್ವರಗಳ ಬಳಕೆ ಹೆಚ್ಚು. ಕನ್ನಡ ಹಾಗೂ ಸಂಸ್ಕೃತ ಹಾಡುಗಳನ್ನು ಹಾಡುವ, ಹೆಚ್ಚಿನ ಭಾಗ ಸ್ವರಗಳನ್ನು ಬಳಸಿಕೊಳ್ಳುವ ಈ ಬ್ಯಾಂಡ್ನಲ್ಲಿ ವೀಣೆಯಲ್ಲಿ ಪಾಶ್ಚಾತ್ಯ ಸಂಗೀತ ಪ್ರಯೋಗ ಮಾಡಲಾಗುತ್ತದೆ. `ಜೇಮ್ಸ ಬಾಂಡ್' ಸಿನಿಮಾದ ಥೀಮ್ ಮ್ಯೂಸಿಕ್ಅನ್ನು ಉತ್ತಮಪಡಿಸಿ ಪ್ರಸ್ತುತಪಡಿಸುವುದು ತಂಡದ ಹೆಗ್ಗಳಿಕೆ.<br /> <br /> ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುವುದರಿಂದ ಹೆಚ್ಚಾಗಿ ಸ್ವರಗಳಿಗೆ ಪ್ರಾಮುಖ್ಯ ನೀಡುತ್ತೇವೆ. ಸ್ವರಗಳಿಗೆ ಕೊನೆ ಎಂಬುದೇ ಇಲ್ಲ. ಹಾಗಾಗಿ ಭಾರತೀಯ ಸಂಗೀತವನ್ನೇ ಮೂಲವಾಗಿಟ್ಟುಕೊಂಡು ಬ್ಯಾಂಡ್ ನಡೆಸುತ್ತಿದ್ದೇವೆ.<br /> <br /> `ಎಕ್ಸ್ಪ್ರೆಷನ್' ತಂಡದಲ್ಲಿ ಕೆಲವರು ಬಿಟ್ಟು ಹೋದರು. ಆದರೂ ಬ್ಯಾಂಡ್ ನಡೆಸುವುದು ಕಷ್ಟವಾಗಲಿಲ್ಲ. ಇದೀಗ ತಂಡದಲ್ಲಿ ಎಂಟು ಮಂದಿ ಸದಸ್ಯರಿದ್ದೇವೆ. ಎಲ್ಲರೂ ಟೆಕ್ಕಿಗಳು. ಸಂಪೂರ್ಣವಾಗಿ ಬ್ಯಾಂಡ್ನಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಂಡದ ಬಗ್ಗೆ ಹೇಳಿಕೊಳ್ಳುತ್ತಾರೆ ವಿಶ್ವೇಶ್.<br /> <br /> ಮೈಸೂರಿನ ಅರಮನೆ ಎದುರು ಎಲ್ಲಾ ಲೈಟ್ಗಳನ್ನು ಆಫ್ ಮಾಡಿ ಆಯೋಜಿಸಿದ್ದ `ಅರ್ಥ್ ಅವರ್' ಕಾರ್ಯಕ್ರಮ ಇಂದಿಗೂ ನೆನಪಿನಲ್ಲಿ ಉಳಿದ ಪ್ರದರ್ಶನವಂತೆ. ಬಾಲ್ಯದಲ್ಲಿಯೇ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿರುವ ವಿಶ್ವೇಶ್ ಭಟ್ ಅವರಿಗೆ ಬ್ಯಾಂಡ್ ಕಟ್ಟಿಕೊಂಡು ಸಾಗುವುದು ಕಷ್ಟವೇನಲ್ಲವಂತೆ. ಆತ್ಮವಿಶ್ವಾಸ ಒಂದಿದ್ದರೆ ಸಾಕು ಎಂಬುದು ಅವರ ಮಂತ್ರ.<br /> <br /> <strong>`ಜರ್ನಿ' ಆಲ್ಬಂ ವಿಶೇಷ </strong><br /> ನಾದದ ಬೆನ್ನೇರಿರುವ ವಿಶ್ವೇಶ್ ಭಟ್ ಅವರು ಆರ್ಕಿಟೆಕ್ಟ್ ವೃತ್ತಿಯ ನಡುವೆಯೂ ಒಂದು ಆಲ್ಬಂ ತಯಾರಿಸಿದ್ದಾರೆ. ಆಲ್ಬಂ ಹೆಸರು `ಜರ್ನಿ'. ಇದರಲ್ಲಿ ಒಂಬತ್ತು ಹಾಡುಗಳಿವೆ. ಒಂದು ಹಾಡಿಗೂ ಮತ್ತೊಂದು ಹಾಡಿಗೂ ಕತೆಯ ಕೊಂಡಿ ಇದೆಯಂತೆ. ಮೊದಲ ಟ್ರ್ಯಾಕ್ `ಅವನು', ಎರಡನೆಯದು `ಅವಳು', ಅದಾದ ನಂತರದ್ದು `ನಾವು'. ಹೀಗೆ ಒಬ್ಬನ ಪಯಣವನ್ನು ಸ್ವರಗಳಲ್ಲಿ ಹಿಡಿದಿಟ್ಟಿದ್ದಾರೆ. ಮುಲ್ತಾನಿ, ನಟಭೈರವಿ, ಚಾರು ಕೌನ್ಸ್, ಪೂರಿಯಾ ಹಾಗೂ ಧನಶ್ರೀ ರಾಗಗಳ ಸಮ್ಮಿಶ್ರದಲ್ಲಿ ಆಲ್ಬಂ ಸಂಯೋಜಿಸಲಾಗಿದೆ. `ವಂದೇ ಮಾತರಂ'ನಿಂದ ಅಂತ್ಯವಾಗಲಿದೆ. ಈ ಆಲ್ಬಂ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. <strong>ಬ್ಯಾಂಡ್ ಮಾಹಿತಿಗೆ: 99001 50642</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅದು 2003-04ರ ಆಜುಬಾಜು. ಅಮೆರಿಕದ ಮೆಂಫಿಸ್ನಲ್ಲಿ ಉದ್ಯೋಗದಲ್ಲಿದ್ದ ದಂಪತಿ ಬಿಡುವಿನ ವೇಳೆಯಲ್ಲಿ ಬೇರೆ ಬೇರೆ ನಗರಗಳಲ್ಲಿ ಸಂಗೀತ ಕಛೇರಿ ನೀಡುವ ಹವ್ಯಾಸ ಬೆಳೆಸಿಕೊಂಡರು. ಅಲ್ಲಿಯೇ `ಘಮ ಘಮ' ಎಂಬ ಹಾಡುಗಳ ಸೀಡಿ ಹೊರತಂದರು. 2007ರಲ್ಲಿ ಬೆಂಗಳೂರಿಗೆ ಬಂದರು. ಪತಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ, ಪತ್ನಿ ಉಪನ್ಯಾಸಕಿಯಾದರು. ಆದರೆ ಪತಿಗೆ ಕಲೆಯ ಗೀಳು ಹಾಗೆಯೇ ಇತ್ತು. ಕಂಪೆನಿಯಲ್ಲಿದ್ದ 40ರಿಂದ 50 ಮಂದಿ ಕಲಾವಿದರನ್ನು ಸೇರಿಸಿಕೊಂಡು `ಎಕ್ಸ್ಪ್ರೆಷನ್' ಎಂಬ ಬ್ಯಾಂಡ್ ಕಟ್ಟಿದರು. ಹಲವೆಡೆ ಕಾರ್ಯಕ್ರಮಗಳನ್ನೂ ನೀಡಿದರು. ಅನಿವಾರ್ಯ ಕಾರಣಗಳಿಂದ ಆತ ಕಂಪೆನಿ ಬಿಡಬೇಕಾಯಿತು. ಆದರೆ ಬ್ಯಾಂಡ್ ಮೋಹ ಕರಗಲಿಲ್ಲ.<br /> <br /> <strong>ಸಂಗೀತ ಪ್ರಧಾನ `ಸ್ವರಾಮೃತ'</strong><br /> ಹಳೆಯ ನೆನಪನ್ನು ಬದಿಗಿಟ್ಟು, ಮತ್ತೆ ಏಳು ಮಂದಿ ಸಹೋದ್ಯೋಗಿ ಸ್ನೇಹಿತರನ್ನು ಸೇರಿಸಿಕೊಂಡು ಅದೇ ದಂಪತಿ `ಸ್ವರಾಮೃತ' ಎಂಬ ಬ್ಯಾಂಡ್ ಕಟ್ಟಿದರು. ಉಡುಪಿಯ ವಿಶ್ವೇಶ್ ಭಟ್ ಹಾಗೂ ಅಶ್ವಿನಿ ಎಂಬುವವರೇ ಈ ಸ್ವರಮೋಹಿಗಳು.<br /> <br /> ಬಹುತೇಕ ಕಾರ್ಪೊರೇಟ್ ಮಂದಿಯ ಬ್ಯಾಂಡ್ಗಳಲ್ಲಿ ರಾಕ್ ಸಂಗೀತವೇ ಹೆಚ್ಚಾಗಿರುತ್ತದೆ. ಭಾರತೀಯ ಸಂಗೀತ ಕಡಿಮೆ. ಆದರೆ ಈ ತಂಡ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತವನ್ನು ಬ್ಯಾಂಡ್ ಮೂಲಕ ಜನರಿಗೆ ಕೇಳಿಸುತ್ತಿದೆ.<br /> <br /> ಸಾಫ್ಟ್ವೇರ್ ಎಂಜಿನಿಯರ್ ವಿಶ್ವೇಶ್ ಭಟ್ ಬಿಡುವಿಲ್ಲದ ಕೆಲಸದ ನಡುವೆಯೂ ಸಂಜೆ ಎರಡು ಗಂಟೆ ಸಂಗೀತಾಭ್ಯಾಸಕ್ಕೆ ಮೀಸಲಿಡುತ್ತಾರೆ. ಬೇರೆಯವರು ಸಂಯೋಜಿಸಿದ ಗೀತೆಗಳನ್ನು ನೆಚ್ಚಿಕೊಳ್ಳದ ಇವರು, ತಾವೇ ಸ್ವರ ಸಂಯೋಜನೆ ಮಾಡುತ್ತಾರೆ. ಫ್ಯೂಷನ್ ಇವರಿಗೆ ಅಷ್ಟು ಇಷ್ಟವಿಲ್ಲ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಇಟ್ಟುಕೊಂಡೇ `ಕ್ರಿಯೇಟಿವ್ ಬ್ಯಾಂಡ್' ರೂಪಿಸಿದ್ದಾರೆ. ವಾರಾಂತ್ಯದ ದಿನಗಳನ್ನು ಬ್ಯಾಂಡ್ಗೆಂದೇ ಮೀಸಲಿಟ್ಟಿರುವ ವಿಶ್ವೇಶ್ ಖುದ್ದು ರೆಕಾರ್ಡ್ ಕೂಡ ಮಾಡುತ್ತಾರೆ. ಸಂಗೀತವೇ ಜೀವನ ಎನ್ನುವ ವಿಶ್ವೇಶ್ ಅವರು ವೀಣಾ ವಾದಕಿ ಅಶ್ವಿನಿ ಅವರನ್ನು ವಿವಾಹವಾಗಿದ್ದೂ ಸ್ವರಮೋಹದಿಂದಲೇ. `ಇಂದು ಪ್ರತಿಯೊಬ್ಬರಿಗೂ ಸಂಗೀತ ಮುಖ್ಯ. ಕೆಲವರಿಗೆ ಅದು ಮನರಂಜನೆ. ಮತ್ತೆ ಕೆಲವರಿಗೆ ವೃತ್ತಿಯಾಗಿರಬಹುದು. ನನಗೆ ಮಾತ್ರ ಅದು ಜೀವನದ ಒಂದು ಭಾಗ, ಉಸಿರು' ಎಂದು ಸಂಗೀತದ ಬಗೆಗಿನ ಪ್ರೀತಿಯನ್ನು ಅವರು ವ್ಯಕ್ತಪಡಿಸುತ್ತಾರೆ.<br /> <br /> `ಸ್ವರಾಮೃತ'ದಲ್ಲಿ ವಿಶ್ವೇಶ್ ಭಟ್ ಪ್ರಮುಖ ಗಾಯಕ. ತಂಡದಲ್ಲಿ ವೀಣೆ (ಶ್ರುತಿ ಕುಮಾರ್, ಅಶ್ವಿನಿ ಭಟ್, ಮಂಜೀರಾ), ಕೊಳಲು (ಸಂಜೀತ್ ಕುಮಾರ್), ಕೀಬೋರ್ಡ್ (ಸುಶ್ರುತ್), ತಬಲಾ (ಕೃಷ್ಣಾನಂದ ಪ್ರಭು), ಮೃದಂಗ (ಫಣೀಂದ್ರ ಭಾಸ್ಕರ), ಡ್ರಮ್ಸ (ಶ್ರವಣ್) ಬಳಕೆಯಾಗುತ್ತಿದೆ.<br /> <br /> ಈ ಬ್ಯಾಂಡ್ನಲ್ಲಿ ಸಾಹಿತ್ಯದ ಬಳಕೆ ಕಡಿಮೆ. ವಾದ್ಯ ಸಂಗೀತ, ಸ್ವರಗಳ ಬಳಕೆ ಹೆಚ್ಚು. ಕನ್ನಡ ಹಾಗೂ ಸಂಸ್ಕೃತ ಹಾಡುಗಳನ್ನು ಹಾಡುವ, ಹೆಚ್ಚಿನ ಭಾಗ ಸ್ವರಗಳನ್ನು ಬಳಸಿಕೊಳ್ಳುವ ಈ ಬ್ಯಾಂಡ್ನಲ್ಲಿ ವೀಣೆಯಲ್ಲಿ ಪಾಶ್ಚಾತ್ಯ ಸಂಗೀತ ಪ್ರಯೋಗ ಮಾಡಲಾಗುತ್ತದೆ. `ಜೇಮ್ಸ ಬಾಂಡ್' ಸಿನಿಮಾದ ಥೀಮ್ ಮ್ಯೂಸಿಕ್ಅನ್ನು ಉತ್ತಮಪಡಿಸಿ ಪ್ರಸ್ತುತಪಡಿಸುವುದು ತಂಡದ ಹೆಗ್ಗಳಿಕೆ.<br /> <br /> ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುವುದರಿಂದ ಹೆಚ್ಚಾಗಿ ಸ್ವರಗಳಿಗೆ ಪ್ರಾಮುಖ್ಯ ನೀಡುತ್ತೇವೆ. ಸ್ವರಗಳಿಗೆ ಕೊನೆ ಎಂಬುದೇ ಇಲ್ಲ. ಹಾಗಾಗಿ ಭಾರತೀಯ ಸಂಗೀತವನ್ನೇ ಮೂಲವಾಗಿಟ್ಟುಕೊಂಡು ಬ್ಯಾಂಡ್ ನಡೆಸುತ್ತಿದ್ದೇವೆ.<br /> <br /> `ಎಕ್ಸ್ಪ್ರೆಷನ್' ತಂಡದಲ್ಲಿ ಕೆಲವರು ಬಿಟ್ಟು ಹೋದರು. ಆದರೂ ಬ್ಯಾಂಡ್ ನಡೆಸುವುದು ಕಷ್ಟವಾಗಲಿಲ್ಲ. ಇದೀಗ ತಂಡದಲ್ಲಿ ಎಂಟು ಮಂದಿ ಸದಸ್ಯರಿದ್ದೇವೆ. ಎಲ್ಲರೂ ಟೆಕ್ಕಿಗಳು. ಸಂಪೂರ್ಣವಾಗಿ ಬ್ಯಾಂಡ್ನಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ತಂಡದ ಬಗ್ಗೆ ಹೇಳಿಕೊಳ್ಳುತ್ತಾರೆ ವಿಶ್ವೇಶ್.<br /> <br /> ಮೈಸೂರಿನ ಅರಮನೆ ಎದುರು ಎಲ್ಲಾ ಲೈಟ್ಗಳನ್ನು ಆಫ್ ಮಾಡಿ ಆಯೋಜಿಸಿದ್ದ `ಅರ್ಥ್ ಅವರ್' ಕಾರ್ಯಕ್ರಮ ಇಂದಿಗೂ ನೆನಪಿನಲ್ಲಿ ಉಳಿದ ಪ್ರದರ್ಶನವಂತೆ. ಬಾಲ್ಯದಲ್ಲಿಯೇ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿರುವ ವಿಶ್ವೇಶ್ ಭಟ್ ಅವರಿಗೆ ಬ್ಯಾಂಡ್ ಕಟ್ಟಿಕೊಂಡು ಸಾಗುವುದು ಕಷ್ಟವೇನಲ್ಲವಂತೆ. ಆತ್ಮವಿಶ್ವಾಸ ಒಂದಿದ್ದರೆ ಸಾಕು ಎಂಬುದು ಅವರ ಮಂತ್ರ.<br /> <br /> <strong>`ಜರ್ನಿ' ಆಲ್ಬಂ ವಿಶೇಷ </strong><br /> ನಾದದ ಬೆನ್ನೇರಿರುವ ವಿಶ್ವೇಶ್ ಭಟ್ ಅವರು ಆರ್ಕಿಟೆಕ್ಟ್ ವೃತ್ತಿಯ ನಡುವೆಯೂ ಒಂದು ಆಲ್ಬಂ ತಯಾರಿಸಿದ್ದಾರೆ. ಆಲ್ಬಂ ಹೆಸರು `ಜರ್ನಿ'. ಇದರಲ್ಲಿ ಒಂಬತ್ತು ಹಾಡುಗಳಿವೆ. ಒಂದು ಹಾಡಿಗೂ ಮತ್ತೊಂದು ಹಾಡಿಗೂ ಕತೆಯ ಕೊಂಡಿ ಇದೆಯಂತೆ. ಮೊದಲ ಟ್ರ್ಯಾಕ್ `ಅವನು', ಎರಡನೆಯದು `ಅವಳು', ಅದಾದ ನಂತರದ್ದು `ನಾವು'. ಹೀಗೆ ಒಬ್ಬನ ಪಯಣವನ್ನು ಸ್ವರಗಳಲ್ಲಿ ಹಿಡಿದಿಟ್ಟಿದ್ದಾರೆ. ಮುಲ್ತಾನಿ, ನಟಭೈರವಿ, ಚಾರು ಕೌನ್ಸ್, ಪೂರಿಯಾ ಹಾಗೂ ಧನಶ್ರೀ ರಾಗಗಳ ಸಮ್ಮಿಶ್ರದಲ್ಲಿ ಆಲ್ಬಂ ಸಂಯೋಜಿಸಲಾಗಿದೆ. `ವಂದೇ ಮಾತರಂ'ನಿಂದ ಅಂತ್ಯವಾಗಲಿದೆ. ಈ ಆಲ್ಬಂ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. <strong>ಬ್ಯಾಂಡ್ ಮಾಹಿತಿಗೆ: 99001 50642</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>