<p><strong>ವಿಜಾಪುರ:</strong> ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಆಡಳಿತದವರು ತಮ್ಮನ್ನು ಅವಮಾನಿಸಿದರು ಎಂದು ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟಿಸಿದ ಘಟನೆ ಇಲ್ಲಿ ನಡೆಯಿತು.`ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವುದು ಸಂಪ್ರದಾಯ. ಜಿಲ್ಲಾ ಆಡಳಿತದ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಮ್ಮನ್ನು ಪೊಲೀಸ್ ಬಲ ಪ್ರಯೋಗಿಸಿ ಆಸನದಿಂದ ಎಬ್ಬಿಸಲಾಯಿತು~ ಎಂದ ಅವರು ದೂರಿದರು.<br /> <br /> ಮಹಾದೇವಿ ಶಿಂಧೆ, ಭೀಮವ್ವ ಮನಗೂಳಿ, ಸಿದ್ದಮ್ಮ ರೆಬಿನಾಳ, ಭೀಮಾಬಾಯಿ ಮನಗೂಳಿ, ಕಾಳಮ್ಮ ಭೀ. ಪತ್ತಾರ, ಮಲ್ಲವ್ವ ಮುರನಾಳ ಮತ್ತಿತರರು ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದ ವೇದಿಕೆ ಎಡಬದಿಯ ಆಸನದಲ್ಲಿ ಆಸೀನಗಾರಿದ್ದರು. <br /> <br /> `ಇದು ನಿಮ್ಮ ಜಾಗೆ ಅಲ್ಲ. ಇಲ್ಲಿ ಕೇವಲ ಸನ್ಮಾನಿತರು ಮಾತ್ರ ಕುಳಿತು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸನ್ಮಾನಿತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ನೀವು ಈ ಆಸನ ಬಿಟ್ಟು ಏಳಲೇಬೇಕು ಎಂದು ಪೊಲೀಸರು ಒತ್ತಾಯಿಸಿದರು. ನಾವು ಸ್ವಾತಂತ್ರ್ಯ ಯೋಧರು ಎಂದು ಗುರುತಿನ ಚೀಟಿ ತೋರಿಸಿದರೂ ಕೇಳದೆ ಅಲ್ಲಿಂದ ಎಬ್ಬಿಸಿಯೇ ಬಿಟ್ಟರು~ ಎಂದು ಅವರೆಲ್ಲ ಆಪಾದಿಸಿದರು.<br /> <br /> ಸಾಧಕ ಕ್ರೀಡಾಪಟುಗಳು, ಸಮಾಜ ಸೇವಕರನ್ನು ಮಾತ್ರ ಜಿಲ್ಲಾ ಆಡಳಿತ ದಿಂದ ಸನ್ಮಾನಿಸಲಾಯಿತು. ಆದರೆ, ಈ ಹಿರಿಯ ಜೀವಗಳಿಗೆ ಪ್ರತಿ ವರ್ಷದಂತೆ ಸನ್ಮಾನದ ಭಾಗ್ಯ ಕೂಡಿ ಬರಲಿಲ್ಲ. ಕುಪಿತಗೊಂಡ ಈ ಸ್ವಾತಂತ್ರ್ಯ ಹೋರಾಟಗಾರರು ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು.<br /> <br /> ವಿಷಯ ತಿಳಿದು ಅಲ್ಲಿಗೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, `ಅಚಾತುರ್ಯದಿಂದ ಈ ಘಟನೆ ನಡೆದಿದೆ. ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ~ ಎಂದು ಕೈಮುಗಿದು ಬೇಡಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:</strong> ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಆಡಳಿತದವರು ತಮ್ಮನ್ನು ಅವಮಾನಿಸಿದರು ಎಂದು ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟಿಸಿದ ಘಟನೆ ಇಲ್ಲಿ ನಡೆಯಿತು.`ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವುದು ಸಂಪ್ರದಾಯ. ಜಿಲ್ಲಾ ಆಡಳಿತದ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಮ್ಮನ್ನು ಪೊಲೀಸ್ ಬಲ ಪ್ರಯೋಗಿಸಿ ಆಸನದಿಂದ ಎಬ್ಬಿಸಲಾಯಿತು~ ಎಂದ ಅವರು ದೂರಿದರು.<br /> <br /> ಮಹಾದೇವಿ ಶಿಂಧೆ, ಭೀಮವ್ವ ಮನಗೂಳಿ, ಸಿದ್ದಮ್ಮ ರೆಬಿನಾಳ, ಭೀಮಾಬಾಯಿ ಮನಗೂಳಿ, ಕಾಳಮ್ಮ ಭೀ. ಪತ್ತಾರ, ಮಲ್ಲವ್ವ ಮುರನಾಳ ಮತ್ತಿತರರು ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದ ವೇದಿಕೆ ಎಡಬದಿಯ ಆಸನದಲ್ಲಿ ಆಸೀನಗಾರಿದ್ದರು. <br /> <br /> `ಇದು ನಿಮ್ಮ ಜಾಗೆ ಅಲ್ಲ. ಇಲ್ಲಿ ಕೇವಲ ಸನ್ಮಾನಿತರು ಮಾತ್ರ ಕುಳಿತು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸನ್ಮಾನಿತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ನೀವು ಈ ಆಸನ ಬಿಟ್ಟು ಏಳಲೇಬೇಕು ಎಂದು ಪೊಲೀಸರು ಒತ್ತಾಯಿಸಿದರು. ನಾವು ಸ್ವಾತಂತ್ರ್ಯ ಯೋಧರು ಎಂದು ಗುರುತಿನ ಚೀಟಿ ತೋರಿಸಿದರೂ ಕೇಳದೆ ಅಲ್ಲಿಂದ ಎಬ್ಬಿಸಿಯೇ ಬಿಟ್ಟರು~ ಎಂದು ಅವರೆಲ್ಲ ಆಪಾದಿಸಿದರು.<br /> <br /> ಸಾಧಕ ಕ್ರೀಡಾಪಟುಗಳು, ಸಮಾಜ ಸೇವಕರನ್ನು ಮಾತ್ರ ಜಿಲ್ಲಾ ಆಡಳಿತ ದಿಂದ ಸನ್ಮಾನಿಸಲಾಯಿತು. ಆದರೆ, ಈ ಹಿರಿಯ ಜೀವಗಳಿಗೆ ಪ್ರತಿ ವರ್ಷದಂತೆ ಸನ್ಮಾನದ ಭಾಗ್ಯ ಕೂಡಿ ಬರಲಿಲ್ಲ. ಕುಪಿತಗೊಂಡ ಈ ಸ್ವಾತಂತ್ರ್ಯ ಹೋರಾಟಗಾರರು ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು.<br /> <br /> ವಿಷಯ ತಿಳಿದು ಅಲ್ಲಿಗೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, `ಅಚಾತುರ್ಯದಿಂದ ಈ ಘಟನೆ ನಡೆದಿದೆ. ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ~ ಎಂದು ಕೈಮುಗಿದು ಬೇಡಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>