<p><strong>ನವದೆಹಲಿ (ಪಿಟಿಐ): </strong>`ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ಅಗತ್ಯವಾದ ನೆರವು ವಿಶ್ವ ಸಮುದಾಯದಿಂದಲೇ ಸಿಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಾರದು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಸೋಮವಾರ ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಗಮನ ಸೆಳೆದಿದೆ. <br /> `ಜಿ-20~ ಮತ್ತು ರಯೊ+ 20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ತಾಯ್ನಾಡಿಗೆ ಹಿಂದಿರುಗುವ ವೇಳೆ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.<br /> <br /> `ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಜಾಗತಿಕ ಪರಿಹಾರ ದೊರೆಯುವುದಿಲ್ಲ ಎಂಬುದು ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದ ನಂತರ ನನಗೆ ಮನವರಿಕೆಯಾಗಿದೆ~ ಎಂದೂ ಅವರು ಹೇಳಿದರು.<br /> <br /> ಇದೇ ವೇಳೆ ಯೂರೊ ವಲಯದ ಆರ್ಥಿಕ ಬಿಕ್ಕಟ್ಟು ನಿವಾರಿಸುವ ಸಲುವಾಗಿ ಸ್ಥಾಪಿಸಿರುವ ಐಎಂಎಫ್ ನಿಧಿಗೆ, 1000 ಕೋಟಿ ಡಾಲರ್ (ಅಂದಾಜು 56,000 ಕೋಟಿ ರೂಪಾಯಿ) ಅನುದಾನ ನೀಡಿರುವ ಭಾರತ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.<br /> <br /> ಅಗತ್ಯಬಿದ್ದರೆ ಮಾತ್ರ ಈ ನಿಧಿ ಬಳಕೆಯಾಗಲಿದೆ. ಅಲ್ಲದೇ ಈ ಮೊತ್ತ ರಾಷ್ಟ್ರದ ವಿದೇಶಿ ವಿನಿಮಯ ಮೀಸಲಾಗಿ ಪರಿಗಣನೆಯಾಗಲಿದೆ ಎಂದು ಮನಮೋಹನ್ ತಿಳಿಸಿದರು.ಕಪ್ಪು ಹಣವು ದೊಡ್ಡ ಪಿಡುಗು ಎಂಬುದು ನಿಜ. ಆದರೆ, ಅದರ ನಿವಾರಣೆಗೆ ಯಾವುದೇ ಮಂತ್ರದಂಡ ಇಲ್ಲ. ಅದರ ನಿವಾರಣೆ ಒಂದು ನಿಧಾನ ಪ್ರಕ್ರಿಯೆಯಾಗಲಿದೆ ಎಂದರು.<br /> <br /> ದೇಶದ ವಿತ್ತೀಯ ಕೊರತೆಯನ್ನು ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಬೆಳವಣಿಗೆಗೆ ಪೂರಕವಾದ ಸನ್ನಿವೇಶ ಸೃಷ್ಟಿಸುವುದು ಅಗತ್ಯವಾಗಿದೆ. ಸರ್ಕಾರ ಈ ಕೆಲಸ ಮಾಡಬೇಕೆಂಬುದೇ ದೇಶಬಾಂಧವರ ಅಪೇಕ್ಷೆಯಾಗಿದೆ ಎಂದರು.<br /> <br /> ಅಕ್ರಮ ಲೇವಾದೇವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಪಾರದರ್ಶಕತೆ ಹಾಗೂ ಜಾಗತಿಕ ಮಟ್ಟದಲ್ಲಿ ಸಮಗ್ರ ಮಾಹಿತಿ ವಿನಿಮಯ ರೂಢಿಗೆ ಬರಬೇಕೆಂದು `ಜಿ 20~ ಸಭೆಯಲ್ಲಿ ಪ್ರಧಾನಿ ಮನಮೋಹನ್ ಹಾಗೂ ಇನ್ನಿತರ ನಾಯಕರು ಅಭಿಪ್ರಾಯಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>`ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟುಗಳನ್ನು ನಿವಾರಿಸಿಕೊಳ್ಳಲು ಅಗತ್ಯವಾದ ನೆರವು ವಿಶ್ವ ಸಮುದಾಯದಿಂದಲೇ ಸಿಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಾರದು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.<br /> <br /> ದೇಶದ ಒಟ್ಟಾರೆ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಸೋಮವಾರ ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಗಮನ ಸೆಳೆದಿದೆ. <br /> `ಜಿ-20~ ಮತ್ತು ರಯೊ+ 20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ತಾಯ್ನಾಡಿಗೆ ಹಿಂದಿರುಗುವ ವೇಳೆ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.<br /> <br /> `ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಜಾಗತಿಕ ಪರಿಹಾರ ದೊರೆಯುವುದಿಲ್ಲ ಎಂಬುದು ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ಗಮನಿಸಿದ ನಂತರ ನನಗೆ ಮನವರಿಕೆಯಾಗಿದೆ~ ಎಂದೂ ಅವರು ಹೇಳಿದರು.<br /> <br /> ಇದೇ ವೇಳೆ ಯೂರೊ ವಲಯದ ಆರ್ಥಿಕ ಬಿಕ್ಕಟ್ಟು ನಿವಾರಿಸುವ ಸಲುವಾಗಿ ಸ್ಥಾಪಿಸಿರುವ ಐಎಂಎಫ್ ನಿಧಿಗೆ, 1000 ಕೋಟಿ ಡಾಲರ್ (ಅಂದಾಜು 56,000 ಕೋಟಿ ರೂಪಾಯಿ) ಅನುದಾನ ನೀಡಿರುವ ಭಾರತ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.<br /> <br /> ಅಗತ್ಯಬಿದ್ದರೆ ಮಾತ್ರ ಈ ನಿಧಿ ಬಳಕೆಯಾಗಲಿದೆ. ಅಲ್ಲದೇ ಈ ಮೊತ್ತ ರಾಷ್ಟ್ರದ ವಿದೇಶಿ ವಿನಿಮಯ ಮೀಸಲಾಗಿ ಪರಿಗಣನೆಯಾಗಲಿದೆ ಎಂದು ಮನಮೋಹನ್ ತಿಳಿಸಿದರು.ಕಪ್ಪು ಹಣವು ದೊಡ್ಡ ಪಿಡುಗು ಎಂಬುದು ನಿಜ. ಆದರೆ, ಅದರ ನಿವಾರಣೆಗೆ ಯಾವುದೇ ಮಂತ್ರದಂಡ ಇಲ್ಲ. ಅದರ ನಿವಾರಣೆ ಒಂದು ನಿಧಾನ ಪ್ರಕ್ರಿಯೆಯಾಗಲಿದೆ ಎಂದರು.<br /> <br /> ದೇಶದ ವಿತ್ತೀಯ ಕೊರತೆಯನ್ನು ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹವಾಗಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಬೆಳವಣಿಗೆಗೆ ಪೂರಕವಾದ ಸನ್ನಿವೇಶ ಸೃಷ್ಟಿಸುವುದು ಅಗತ್ಯವಾಗಿದೆ. ಸರ್ಕಾರ ಈ ಕೆಲಸ ಮಾಡಬೇಕೆಂಬುದೇ ದೇಶಬಾಂಧವರ ಅಪೇಕ್ಷೆಯಾಗಿದೆ ಎಂದರು.<br /> <br /> ಅಕ್ರಮ ಲೇವಾದೇವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಪಾರದರ್ಶಕತೆ ಹಾಗೂ ಜಾಗತಿಕ ಮಟ್ಟದಲ್ಲಿ ಸಮಗ್ರ ಮಾಹಿತಿ ವಿನಿಮಯ ರೂಢಿಗೆ ಬರಬೇಕೆಂದು `ಜಿ 20~ ಸಭೆಯಲ್ಲಿ ಪ್ರಧಾನಿ ಮನಮೋಹನ್ ಹಾಗೂ ಇನ್ನಿತರ ನಾಯಕರು ಅಭಿಪ್ರಾಯಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>