<p><strong>ಮುಂಬೈ(ಪಿಟಿಐ): </strong>`ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರ ಅವಲಂಬಿಸಿಯೇ ಇರುತ್ತದೆ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಡಿ.ಸುಬ್ಬರಾವ್ ಬುಧವಾರ ಹೇಳಿದ್ದಾರೆ. <br /> ಮೂರು ವರ್ಷಗಳ ನಂತರ ಮೊದಲ ಬಾರಿಗೆ `ಆರ್ಬಿಐ~ ರೆಪೊ ದರವನ್ನು ಮಂಗಳವಾರ ಹೊರಡಿಸಿದ ವಾರ್ಷಿಕ ಸಾಲ ನೀತಿಯಲ್ಲಿ ಶೇ. 0.50ರಷ್ಟು ತಗ್ಗಿಸಿತ್ತು.<br /> <br /> ಮಾರ್ಚ್ನಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ. 6.89ಕ್ಕೆ ತಗ್ಗಿದೆ. ಇದು `ಆರ್ಬಿಐ~ ಅಂದಾಜು ಮಾಡಿದ್ದ ಹಿತಕರ ಮಟ್ಟವಾದ ಶೇ. 7ಕ್ಕಿಂತಲೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ತಗ್ಗಿಸಲಾಗಿದೆ. ಆದರೆ, ಭವಿಷ್ಯದ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರದ ಏರಿಳಿತ ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ. <br /> <br /> 2011-12ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ) ಮೂರು ವರ್ಷಗಳ ಹಿಂದಿನ(ಶೇ. 6.9) ಮಟ್ಟಕ್ಕೆ ಕುಸಿದಿತ್ತು. `ಆರ್ಬಿಐ~ ಅನುಸರಿಸಿದ ಬಿಗಿ ವಿತ್ತೀಯ ಧೋರಣೆಯಿಂದ ದೇಶದ ಕೈಗಾರಿಕೆ ಪ್ರಗತಿಗೆ ಹಿನ್ನಡೆ ಉಂಟಾಗಿದೆ ಎಂದು ತಜ್ಞರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಾರ್ಷಿಕ ಸಾಲ ನೀತಿ ಸಂದರ್ಭದಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಿರುವುದನ್ನು ಉದ್ಯಮ ವಲಯ ಸ್ವಾಗತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ(ಪಿಟಿಐ): </strong>`ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರ ಅವಲಂಬಿಸಿಯೇ ಇರುತ್ತದೆ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಡಿ.ಸುಬ್ಬರಾವ್ ಬುಧವಾರ ಹೇಳಿದ್ದಾರೆ. <br /> ಮೂರು ವರ್ಷಗಳ ನಂತರ ಮೊದಲ ಬಾರಿಗೆ `ಆರ್ಬಿಐ~ ರೆಪೊ ದರವನ್ನು ಮಂಗಳವಾರ ಹೊರಡಿಸಿದ ವಾರ್ಷಿಕ ಸಾಲ ನೀತಿಯಲ್ಲಿ ಶೇ. 0.50ರಷ್ಟು ತಗ್ಗಿಸಿತ್ತು.<br /> <br /> ಮಾರ್ಚ್ನಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ. 6.89ಕ್ಕೆ ತಗ್ಗಿದೆ. ಇದು `ಆರ್ಬಿಐ~ ಅಂದಾಜು ಮಾಡಿದ್ದ ಹಿತಕರ ಮಟ್ಟವಾದ ಶೇ. 7ಕ್ಕಿಂತಲೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ತಗ್ಗಿಸಲಾಗಿದೆ. ಆದರೆ, ಭವಿಷ್ಯದ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರದ ಏರಿಳಿತ ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ. <br /> <br /> 2011-12ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ) ಮೂರು ವರ್ಷಗಳ ಹಿಂದಿನ(ಶೇ. 6.9) ಮಟ್ಟಕ್ಕೆ ಕುಸಿದಿತ್ತು. `ಆರ್ಬಿಐ~ ಅನುಸರಿಸಿದ ಬಿಗಿ ವಿತ್ತೀಯ ಧೋರಣೆಯಿಂದ ದೇಶದ ಕೈಗಾರಿಕೆ ಪ್ರಗತಿಗೆ ಹಿನ್ನಡೆ ಉಂಟಾಗಿದೆ ಎಂದು ತಜ್ಞರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಾರ್ಷಿಕ ಸಾಲ ನೀತಿ ಸಂದರ್ಭದಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಿರುವುದನ್ನು ಉದ್ಯಮ ವಲಯ ಸ್ವಾಗತಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>