<p>ಕೋಲಾರ: ಹದಿಹರೆಯ ಹಲ ಆಸೆ ಆಕಾಂಕ್ಷೆಗಳನ್ನು ಮೂಡಿಸುವ ಕಾಲಘಟ್ಟ. ಈ ಘಟ್ಟದಲ್ಲಿ ಯುವತಿಯರು ಎಚ್ಚರಿಕೆಯಿಂದ ಇರಬೇಕು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಡಿ.ಎಂ.ರತ್ನಮ್ಮ ಕಿವಿಮಾತು ಹೇಳಿದರು.<br /> <br /> ನಗರದ ಮಹಿಳಾ ಜಾಗೃತಿ ವೇದಿಕೆಯು ಮೈರಾಡ ಸಂಸ್ಥೆ ಸಹಯೋಗದಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಬಲ ಯೋಜನೆಯಡಿ ತಾಲ್ಲೂಕಿನ ಛತ್ರಕೋಡಿಹಳ್ಳಿಯ ಸಖಿ, ಸಹೇಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ಹೆಣ್ಣು ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಆಗುವ ದೈಹಿಕ-–ಮಾನಸಿಕ ಬದಲಾವಣೆಗಳ ಬಗ್ಗೆ ಅರಿವನ್ನು ಹೊಂದಿ ಜಾಗೃತರಾಗಬೇಕು. ಅದರೊಂದಿಗೆ ಸಾಮಾಜಿಕ ಅರಿವು, ಆರ್ಥಿಕ ಸ್ವಾವಲಂಬನೆ ಕಡೆಗೂ ಗಮನ ಹರಿಸಬೇಕು ಎಂದರು.<br /> <br /> ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ, ವೃತ್ತಿ ಕೌಶಲಗಳು, ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅತ್ಯಾಚಾರ, ಮಹಿಳೆ ಮಕ್ಕಳ ಸಾಗಣೆ, ಮಾರಾಟದ ಬಗ್ಗೆಯೂ ಕಿಶೋರಿಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು.<br /> ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ 15 ರಿಂದ 20 ಮಂದಿ ಕಿಶೋರಿಯರ ಸಮೂಹ ರೂಪಿಸಲಾಗಿದೆ.<br /> <br /> ಆ ಸಮೂಹಗಳಲ್ಲಿ ಶಾಲೆ ಬಿಟ್ಟ ಒಬ್ಬರನ್ನು ಸಖಿ, ಇಬ್ಬರು ಸಹೇಲಿಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.<br /> ವೇದಿಕೆಯ ಮಮತಾರೆಡ್ಡಿ ಕಾರ್ಯಾಗಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮೈರಾಡ ಸಂಸ್ಥೆಯ ಶೋಭಾ, ಚಂದ್ರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಹದಿಹರೆಯ ಹಲ ಆಸೆ ಆಕಾಂಕ್ಷೆಗಳನ್ನು ಮೂಡಿಸುವ ಕಾಲಘಟ್ಟ. ಈ ಘಟ್ಟದಲ್ಲಿ ಯುವತಿಯರು ಎಚ್ಚರಿಕೆಯಿಂದ ಇರಬೇಕು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಡಿ.ಎಂ.ರತ್ನಮ್ಮ ಕಿವಿಮಾತು ಹೇಳಿದರು.<br /> <br /> ನಗರದ ಮಹಿಳಾ ಜಾಗೃತಿ ವೇದಿಕೆಯು ಮೈರಾಡ ಸಂಸ್ಥೆ ಸಹಯೋಗದಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಬಲ ಯೋಜನೆಯಡಿ ತಾಲ್ಲೂಕಿನ ಛತ್ರಕೋಡಿಹಳ್ಳಿಯ ಸಖಿ, ಸಹೇಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> ಹೆಣ್ಣು ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಆಗುವ ದೈಹಿಕ-–ಮಾನಸಿಕ ಬದಲಾವಣೆಗಳ ಬಗ್ಗೆ ಅರಿವನ್ನು ಹೊಂದಿ ಜಾಗೃತರಾಗಬೇಕು. ಅದರೊಂದಿಗೆ ಸಾಮಾಜಿಕ ಅರಿವು, ಆರ್ಥಿಕ ಸ್ವಾವಲಂಬನೆ ಕಡೆಗೂ ಗಮನ ಹರಿಸಬೇಕು ಎಂದರು.<br /> <br /> ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ, ವೃತ್ತಿ ಕೌಶಲಗಳು, ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅತ್ಯಾಚಾರ, ಮಹಿಳೆ ಮಕ್ಕಳ ಸಾಗಣೆ, ಮಾರಾಟದ ಬಗ್ಗೆಯೂ ಕಿಶೋರಿಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು.<br /> ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ 15 ರಿಂದ 20 ಮಂದಿ ಕಿಶೋರಿಯರ ಸಮೂಹ ರೂಪಿಸಲಾಗಿದೆ.<br /> <br /> ಆ ಸಮೂಹಗಳಲ್ಲಿ ಶಾಲೆ ಬಿಟ್ಟ ಒಬ್ಬರನ್ನು ಸಖಿ, ಇಬ್ಬರು ಸಹೇಲಿಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.<br /> ವೇದಿಕೆಯ ಮಮತಾರೆಡ್ಡಿ ಕಾರ್ಯಾಗಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮೈರಾಡ ಸಂಸ್ಥೆಯ ಶೋಭಾ, ಚಂದ್ರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>