<p>ಸಾಮಾನ್ಯವಾಗಿ ಹಬ್ಬ ಅಂದರೆ ಸಾಕು. ಸಾಲು ಸಾಲು ಬಾಳೆ ದಿಂಡು, ಕಬ್ಬು, ಮಾವಿನ ತೋರಣ, ಬಣ್ಣಬಣ್ಣದ ಹೂ. ಇವಿಷ್ಟೂ ಎಲ್ಲಾ ಕಡೆ ಇದ್ದೇ ಇರುತ್ತವೆ. ಆದರೆ ಬೆಂಗಳೂರನಲ್ಲಿ ಮಾತ್ರ ಕುಂಬಳಕಾಯಿ ಭರಾಟೆಯೂ ಬಹಳ.<br /> <br /> ಹಬ್ಬದ ಮೊದಲ ದಿನ ಕಣ್ಣಿಗೆ ತಂಪು ಅನಿಸುವಂತ ಈ ಹಸಿರು ಸಿರಿ ಮಾರುಕಟ್ಟೆಯ ರಸ್ತೆಯೊಳಗ ಮದುವೆ ದಿಬ್ಬಣಕ್ಕೆ ಶೃಂಗಾರ ಮಾಡಿಕೊಂಡ ಹುಡುಗಿಯರಂತೆ ಸಾಲು ಸಾಲು ನಿಂತಿರುತ್ತವೆ. ಹಬ್ಬದ ದಿನವೂ ಅಷ್ಟೆ! ಹಬ್ಬದ ಮರುದಿನ ನೋಡಿದ್ರ ಸಾಕು, ಹಸಿರು ಸಿರಿ ಎಲ್ಲೆಂದರಲ್ಲಿ ಕಾಲು ಮುರಿದುಕೊಂಡು, ಮುಖ ಸೆಟೆಸಿಗೊಂಡು ಬಿದ್ದಿರುತ್ತವೆ.<br /> <br /> ಹಬ್ಬಕ್ಕೆ ಮಂಗಳಕರವಾದ ಎಲ್ಲ ತಳಿರು ತೋರಣಗಳು ಕಸದ ಸಾಲಿಗೆ ಸೇರುತ್ತವೆ. ಚೌತಿಯಿಂದಲೇ ಕಸ ಸಂಗ್ರಹಿಸುವ ಕೆಲಸ ಶುರು ಆಗುತ್ತದೆ. ಆಗೆಲ್ಲ ಜಲ ಮಾಲಿನ್ಯ; ಈಗ ಹಸಿರು ಮಾಲಿನ್ಯ. ನಂತರದ ದೀಪಾವಳಿಗೆ ವಾಯು ಹಾಗೂ ಶಬ್ದ ಮಾಲಿನ್ಯ.<br /> <br /> ನಾವ್ಯಾಕೆ ಹಬ್ಬವನ್ನು ಇಷ್ಟು ಕಲುಷಿತಗೊಳಿಸುತ್ತೇವೆ? ಹಿಂಕೆ ಎಲ್ಲಕ್ಕೂ ಪ್ರಾಣಿ ಬಲಿ ಕೊಡುತ್ತಿದ್ದರು. ನಂತರ ಅಹಿಂಸೆಯನ್ನು ಪ್ರತಿಪಾದಿಸಲು, ಜೀವಬಲಿಯ ಬದಲಿಗೆ ಈ ಕೂಷ್ಮಾಂಡ ಸ್ಫೋಟವನ್ನು ಆರಂಭಿಸಿದರು. ಅದರ್ಲ್ಲಲೂ ರಕ್ತ ತರ್ಪಣದ ನೋಟ ಸಿಗಲಿ ಎಂದು ಕುಂಕುಮವನ್ನೂ ಅರ್ಪಿಸುತ್ತಿದ್ದರು.<br /> <br /> ಆದರೆ ಈಗ ಈ ಕುಂಬಳ ಸಿಡಿತದ ನಂತರ ಈ ತ್ಯಾಜ್ಯ ನಿರ್ವಹಣೆ ಹೇಗೆ ಎಂಬುದೇ ಪ್ರಶ್ನೆಯಾಗಿದೆ. ಒಮ್ಮೆ ನೆಲಕ್ಕೆ ಸಿಡಿದು, ಬೀಜ ಚೆದುರಿ, ಕುಂಕುಮ ಭೂ ಸ್ಪರ್ಶಿಸಿದರೆ ಆ ವರೆಗಿನ ಕುಂಬಳದ ಮಹತ್ವವೂ ನೆಲಕ್ಕೆ ಬಿದ್ದಂತೆಯೇ. ಮುಂದೆ ಅದರ ಜವಾಬ್ದಾರಿ ಯಾರಿಗೆ? ಸಮರದ ನಂತರ ಹಾಳು ಬಿದ್ದಿರುವ ಹಾಳೂರಿನಂತೆ ಕಾಣುವ ಈ ಕಸಕ್ಕೆ ವಾರಸುದಾರರು ಯಾರು?<br /> <br /> ಪುಣ್ಯಕ್ಕೆ ಎಲ್ಲರೂ ಪಾಲುದಾರರು. ಆದರೆ ಊರನ್ನೇ ಗಬ್ಬೆಬ್ಬಿಸುವ ಈ ಕಸಕ್ಕೆ ಯಾರೂ ಹೊಣೆಗಾರರಲ್ಲ. ತಮ್ಮ ಮನೆಯ ಕಸ, ಬೀದಿಗೆಸೆದರೆ ಸಾಕು, ಅವರ ಜವಾಬ್ದಾರಿ ಮುಗಿದಂತೆ.<br /> <br /> ಬೀದಿ ಬದಿಯ ಕಸ ಬಿಬಿಎಂಪಿ ಕಸದ ಬುಟ್ಟಿಗೆ ಬಂದರೆ ಕಸ ಗುಡಿಸುವವರ ಜವಾಬ್ದಾರಿಯೂ ಮುಗಿಯಿತು. ಆದರೆ ನಂತರ, ಪ್ರತಿ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗುವ ಈ ತ್ಯಾಜ್ಯವನ್ನು ಸಾಗಿಸುವುದ ಹೇಗೆ? ಸುರಿಯುವುದಾದರೂ ಎಲ್ಲಿ?<br /> ಇಂಥ ಪ್ರಶ್ನೆಗಳು ಎದುರಾದ ತಕ್ಷಣ `ಇದ್ಯಾವುದೋ ಸಿನಿಕ ಮನಸಿನ ಪ್ರಶ್ನೆಗಳು. <br /> ಹಬ್ಬವನ್ನು ಆಸ್ವಾದಿಸಲಾಗದ ನಾಸ್ತಿಕರ ಪ್ರಶ್ನೆಗಳು.<br /> <br /> ಪರಿಸರ ಪ್ರೇಮದ ಹೆಸರಿನಲ್ಲಿ ಸಂಪ್ರದಾಯವನ್ನೇ ಅಲ್ಲಗಳೆಯುವವರು~ ಎಂದು ಮೇಲ್ನೋಟಕ್ಕೆ ಎನಿಸಬಹುದು. ಇದೆಲ್ಲಕ್ಕೂ ಮಿಗಿಲಾಗಿ ಆಚರಣೆಯ ಹೆಸರಿನಲ್ಲಿ ನಿಜಕ್ಕೂ ಪರಿಸರವನ್ನು ಬಲಿ ಕೊಡುವುದು ಅದೆಷ್ಟು ಸರಿ? <br /> <br /> ಬಾಗಿಲಿಗೆ ತೋರಣ ಇರಲಿ. ಒಮ್ಮೆ ಕಟ್ಟಿದರೆ ಮತ್ತೊಂದು ಹಬ್ಬದವರೆಗೂ ಇರುತ್ತದೆ. ವೀಳ್ಯದೆಲೆಗಳನ್ನು ತಿಂದು ಮುಗಿಸಬಹುದು. ಆದರೆ ಈ ಬಾಳೆ ದಿಂಡು ಹಾಗೂ ಕುಂಬಳ ಕಾಯಿಗಳನ್ನು ಮಾಡುವುದೇನು? <br /> <br /> ಗಣೇಶ ಚೌತಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡರು. ಪ್ರಕೃತಿಗೆ ಸಮೀಪವೆನಿಸುವ ಬಣ್ಣವಿಲ್ಲದ, ಅಪ್ಪಟ ಮಣ್ಣಿನ ಗಣಪನನ್ನು ಕೊಂಡು ತಂದರು. ಕೆಲವರು ಸಾಂಕೇತಿಕವಾಗಿ ಮನೆಯಲ್ಲಿಯೇ ವಿಸರ್ಜನೆ ಮಾಡಿದರು. <br /> <br /> ದೀಪಗಳ ಸಾಲಿನ ಹಬ್ಬ ದೀಪಾವಳಿಗೆಂದೇ ಕಡಿಮೆ ಹೊಗೆಯ ಪಟಾಕಿಗಳ ಉತ್ಪಾದನೆಯಾಗುತ್ತಿದೆ. ಶಬ್ದವಿಲ್ಲದ ಪಟಾಕಿಗಳ ಬಳಕೆಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಬಿರುಸು ಬಾಣಗಳ ಬಿರುಸುತನ ಕಡಿಮೆಯಾಗುವಂತೆ ಸಾಕಷ್ಟು ಪ್ರಚಾರ ಸಿಗುತ್ತಿದೆ. <br /> <br /> ಆದರೆ ಕೇವಲ ಅಲಂಕಾರ ಹಾಗೂ ಶುಭ ಸಂಕೇತ ಎಂಬ ಕಾರಣಕ್ಕೆ ಬಾಳೆ ತೋಟದಿಂದ ದಿಂಡುಗಳನ್ನು ಕಡಿದು ತರುವುದು, ರಸ್ತೆ ಬದಿಯ ಮರಗಳನ್ನು ಬೋಳು ಮಾಡುವುದು ಎಷ್ಟು ಸರಿ?<br /> <br /> ಸಮೃದ್ಧಿಯ ಸಂಕೇತವಾಗಿರುವ ಹಸಿರು ಸಿರಿ ಬೆಳೆಸುವುದರಿಂದ ಹಬ್ಬವಾಗುತ್ತದೆಯೇ ಹೊರತು, ಕತ್ತರಿಸಿ, ಸ್ಫೋಟಿಸಿ, ಕಸದ ರಾಶಿ ಹೆಚ್ಚಿಸುವುದರಿಂದಲ್ಲ. <br /> ಭಕ್ತಿ ಪ್ರಿಯ ಶಿವ ಮೆಚ್ಚುವುದು ಮನದೊಳಗಣ ಪರಿಶುದ್ಧ ಭಕ್ತಿಯನ್ನೇ ಹೊರತು ಈ ಆಡಂಬರವನ್ನಲ್ಲ ಕೂಷ್ಮಾಂಡ ಸ್ಫೋಟವನ್ನಲ್ಲ. ಪುಣ್ಯಗಳಿಕೆಯ ಅಭಿಲಾಷೆಗೆ ಹಲವು ದಾರಿಗಳಿವೆ. ದೀನಬಂಧು ನಾರಾಯಣನನ್ನು ಒಲಿಸಲು ಸಾಕಷ್ಟು ಅವಕಾಶಗಳಿವೆ. <br /> <br /> ಅಪಾರ್ಟ್ಮೆಂಟ್ಗಳಲ್ಲಿದ್ದರೆ, ಮನೆಗೊಂದು ಕುಂಬಳದ ಬದಲು, ಕಟ್ಟಡಕ್ಕೊಂದು ಕುಂಬಳವನ್ನು ತಂದು ಎಲ್ಲ ಒಟ್ಟಾಗಿ ಪೂಜಿಸಬಹುದು. ಮಳಿಗೆಗಳಿಗೂ ಇದೇ ನಿಯಮವನ್ನು ಅನ್ವಯಿಸಬಹುದು. ಆಗ ತಾನಾಗಿಯೇ ಎಲ್ಲರೂ ಒಂದು. ಒಂದೇ ದೇವರತ್ತ ನಮ್ಮ ಒಲವು. ಒಂದೇ ಬಗೆಯ ಆರಾಧನೆ ಎಂಬ ಒಮ್ಮತಕ್ಕೆ ಬರಬಹುದು.<br /> <br /> ಹಬ್ಬದಾಚರಣೆಗಳ ಹಿನ್ನೆಲೆ ಸಂಪ್ರದಾಯಗಳೇನೇ ಇದ್ದರೂ ಉದ್ದೇಶವಂತೂ ಒಂದೇನೆ. ಅದು ಎಲ್ಲರನ್ನೂ ಒಗ್ಗೂಡಿಸುವ ಸಂಪ್ರದಾಯ. ಜಾತ್ರೆ ಇರಲಿ, ದೇವಸ್ಥಾನವಿರಲಿ... ಈ ನೆಪದಿಂದಲಾದರೂ ಒಗ್ಗೂಡಿದರೆ, ಭೂದೇವಿಯ ಮೇಲಿನ ಸಿರಿದೇವಿಯನ್ನು ಉಳಿಸಿದ ಪುಣ್ಯ ಎಲ್ಲರಿಗೂ ಲಭಿಸುತ್ತದೆ.<br /> <br /> ನಮ್ಮ ಮುಂದಿನ ಪೀಳಿಗೆಗಾಗಿ ಹಸಿರು ಭರಿತ ಭೂಮಿಯನ್ನು ನೀಡುವುದಕ್ಕಿಂತ ದೊಡ್ಡ ಕೊಡುಗೆಯಾಗಲೀ, ದೈವಾರಾಧನೆಯಾಗಲೀ ಯಾವುದೂ ಇಲ್ಲ.<br /> ಆದರೆ ಇದಕ್ಕೆ ಎಲ್ಲರೂ ಯೋಚಿಸಬೇಕು. ಯೋಜಿಸಬೇಕು. ಕಾರ್ಯಗತಗೊಳಿಸಬೇಕು. ಅದು ನಮ್ಮಿಂದಾದೀತೆ? ಆಗದ ಕೆಲಸವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯವಾಗಿ ಹಬ್ಬ ಅಂದರೆ ಸಾಕು. ಸಾಲು ಸಾಲು ಬಾಳೆ ದಿಂಡು, ಕಬ್ಬು, ಮಾವಿನ ತೋರಣ, ಬಣ್ಣಬಣ್ಣದ ಹೂ. ಇವಿಷ್ಟೂ ಎಲ್ಲಾ ಕಡೆ ಇದ್ದೇ ಇರುತ್ತವೆ. ಆದರೆ ಬೆಂಗಳೂರನಲ್ಲಿ ಮಾತ್ರ ಕುಂಬಳಕಾಯಿ ಭರಾಟೆಯೂ ಬಹಳ.<br /> <br /> ಹಬ್ಬದ ಮೊದಲ ದಿನ ಕಣ್ಣಿಗೆ ತಂಪು ಅನಿಸುವಂತ ಈ ಹಸಿರು ಸಿರಿ ಮಾರುಕಟ್ಟೆಯ ರಸ್ತೆಯೊಳಗ ಮದುವೆ ದಿಬ್ಬಣಕ್ಕೆ ಶೃಂಗಾರ ಮಾಡಿಕೊಂಡ ಹುಡುಗಿಯರಂತೆ ಸಾಲು ಸಾಲು ನಿಂತಿರುತ್ತವೆ. ಹಬ್ಬದ ದಿನವೂ ಅಷ್ಟೆ! ಹಬ್ಬದ ಮರುದಿನ ನೋಡಿದ್ರ ಸಾಕು, ಹಸಿರು ಸಿರಿ ಎಲ್ಲೆಂದರಲ್ಲಿ ಕಾಲು ಮುರಿದುಕೊಂಡು, ಮುಖ ಸೆಟೆಸಿಗೊಂಡು ಬಿದ್ದಿರುತ್ತವೆ.<br /> <br /> ಹಬ್ಬಕ್ಕೆ ಮಂಗಳಕರವಾದ ಎಲ್ಲ ತಳಿರು ತೋರಣಗಳು ಕಸದ ಸಾಲಿಗೆ ಸೇರುತ್ತವೆ. ಚೌತಿಯಿಂದಲೇ ಕಸ ಸಂಗ್ರಹಿಸುವ ಕೆಲಸ ಶುರು ಆಗುತ್ತದೆ. ಆಗೆಲ್ಲ ಜಲ ಮಾಲಿನ್ಯ; ಈಗ ಹಸಿರು ಮಾಲಿನ್ಯ. ನಂತರದ ದೀಪಾವಳಿಗೆ ವಾಯು ಹಾಗೂ ಶಬ್ದ ಮಾಲಿನ್ಯ.<br /> <br /> ನಾವ್ಯಾಕೆ ಹಬ್ಬವನ್ನು ಇಷ್ಟು ಕಲುಷಿತಗೊಳಿಸುತ್ತೇವೆ? ಹಿಂಕೆ ಎಲ್ಲಕ್ಕೂ ಪ್ರಾಣಿ ಬಲಿ ಕೊಡುತ್ತಿದ್ದರು. ನಂತರ ಅಹಿಂಸೆಯನ್ನು ಪ್ರತಿಪಾದಿಸಲು, ಜೀವಬಲಿಯ ಬದಲಿಗೆ ಈ ಕೂಷ್ಮಾಂಡ ಸ್ಫೋಟವನ್ನು ಆರಂಭಿಸಿದರು. ಅದರ್ಲ್ಲಲೂ ರಕ್ತ ತರ್ಪಣದ ನೋಟ ಸಿಗಲಿ ಎಂದು ಕುಂಕುಮವನ್ನೂ ಅರ್ಪಿಸುತ್ತಿದ್ದರು.<br /> <br /> ಆದರೆ ಈಗ ಈ ಕುಂಬಳ ಸಿಡಿತದ ನಂತರ ಈ ತ್ಯಾಜ್ಯ ನಿರ್ವಹಣೆ ಹೇಗೆ ಎಂಬುದೇ ಪ್ರಶ್ನೆಯಾಗಿದೆ. ಒಮ್ಮೆ ನೆಲಕ್ಕೆ ಸಿಡಿದು, ಬೀಜ ಚೆದುರಿ, ಕುಂಕುಮ ಭೂ ಸ್ಪರ್ಶಿಸಿದರೆ ಆ ವರೆಗಿನ ಕುಂಬಳದ ಮಹತ್ವವೂ ನೆಲಕ್ಕೆ ಬಿದ್ದಂತೆಯೇ. ಮುಂದೆ ಅದರ ಜವಾಬ್ದಾರಿ ಯಾರಿಗೆ? ಸಮರದ ನಂತರ ಹಾಳು ಬಿದ್ದಿರುವ ಹಾಳೂರಿನಂತೆ ಕಾಣುವ ಈ ಕಸಕ್ಕೆ ವಾರಸುದಾರರು ಯಾರು?<br /> <br /> ಪುಣ್ಯಕ್ಕೆ ಎಲ್ಲರೂ ಪಾಲುದಾರರು. ಆದರೆ ಊರನ್ನೇ ಗಬ್ಬೆಬ್ಬಿಸುವ ಈ ಕಸಕ್ಕೆ ಯಾರೂ ಹೊಣೆಗಾರರಲ್ಲ. ತಮ್ಮ ಮನೆಯ ಕಸ, ಬೀದಿಗೆಸೆದರೆ ಸಾಕು, ಅವರ ಜವಾಬ್ದಾರಿ ಮುಗಿದಂತೆ.<br /> <br /> ಬೀದಿ ಬದಿಯ ಕಸ ಬಿಬಿಎಂಪಿ ಕಸದ ಬುಟ್ಟಿಗೆ ಬಂದರೆ ಕಸ ಗುಡಿಸುವವರ ಜವಾಬ್ದಾರಿಯೂ ಮುಗಿಯಿತು. ಆದರೆ ನಂತರ, ಪ್ರತಿ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗುವ ಈ ತ್ಯಾಜ್ಯವನ್ನು ಸಾಗಿಸುವುದ ಹೇಗೆ? ಸುರಿಯುವುದಾದರೂ ಎಲ್ಲಿ?<br /> ಇಂಥ ಪ್ರಶ್ನೆಗಳು ಎದುರಾದ ತಕ್ಷಣ `ಇದ್ಯಾವುದೋ ಸಿನಿಕ ಮನಸಿನ ಪ್ರಶ್ನೆಗಳು. <br /> ಹಬ್ಬವನ್ನು ಆಸ್ವಾದಿಸಲಾಗದ ನಾಸ್ತಿಕರ ಪ್ರಶ್ನೆಗಳು.<br /> <br /> ಪರಿಸರ ಪ್ರೇಮದ ಹೆಸರಿನಲ್ಲಿ ಸಂಪ್ರದಾಯವನ್ನೇ ಅಲ್ಲಗಳೆಯುವವರು~ ಎಂದು ಮೇಲ್ನೋಟಕ್ಕೆ ಎನಿಸಬಹುದು. ಇದೆಲ್ಲಕ್ಕೂ ಮಿಗಿಲಾಗಿ ಆಚರಣೆಯ ಹೆಸರಿನಲ್ಲಿ ನಿಜಕ್ಕೂ ಪರಿಸರವನ್ನು ಬಲಿ ಕೊಡುವುದು ಅದೆಷ್ಟು ಸರಿ? <br /> <br /> ಬಾಗಿಲಿಗೆ ತೋರಣ ಇರಲಿ. ಒಮ್ಮೆ ಕಟ್ಟಿದರೆ ಮತ್ತೊಂದು ಹಬ್ಬದವರೆಗೂ ಇರುತ್ತದೆ. ವೀಳ್ಯದೆಲೆಗಳನ್ನು ತಿಂದು ಮುಗಿಸಬಹುದು. ಆದರೆ ಈ ಬಾಳೆ ದಿಂಡು ಹಾಗೂ ಕುಂಬಳ ಕಾಯಿಗಳನ್ನು ಮಾಡುವುದೇನು? <br /> <br /> ಗಣೇಶ ಚೌತಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡರು. ಪ್ರಕೃತಿಗೆ ಸಮೀಪವೆನಿಸುವ ಬಣ್ಣವಿಲ್ಲದ, ಅಪ್ಪಟ ಮಣ್ಣಿನ ಗಣಪನನ್ನು ಕೊಂಡು ತಂದರು. ಕೆಲವರು ಸಾಂಕೇತಿಕವಾಗಿ ಮನೆಯಲ್ಲಿಯೇ ವಿಸರ್ಜನೆ ಮಾಡಿದರು. <br /> <br /> ದೀಪಗಳ ಸಾಲಿನ ಹಬ್ಬ ದೀಪಾವಳಿಗೆಂದೇ ಕಡಿಮೆ ಹೊಗೆಯ ಪಟಾಕಿಗಳ ಉತ್ಪಾದನೆಯಾಗುತ್ತಿದೆ. ಶಬ್ದವಿಲ್ಲದ ಪಟಾಕಿಗಳ ಬಳಕೆಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಬಿರುಸು ಬಾಣಗಳ ಬಿರುಸುತನ ಕಡಿಮೆಯಾಗುವಂತೆ ಸಾಕಷ್ಟು ಪ್ರಚಾರ ಸಿಗುತ್ತಿದೆ. <br /> <br /> ಆದರೆ ಕೇವಲ ಅಲಂಕಾರ ಹಾಗೂ ಶುಭ ಸಂಕೇತ ಎಂಬ ಕಾರಣಕ್ಕೆ ಬಾಳೆ ತೋಟದಿಂದ ದಿಂಡುಗಳನ್ನು ಕಡಿದು ತರುವುದು, ರಸ್ತೆ ಬದಿಯ ಮರಗಳನ್ನು ಬೋಳು ಮಾಡುವುದು ಎಷ್ಟು ಸರಿ?<br /> <br /> ಸಮೃದ್ಧಿಯ ಸಂಕೇತವಾಗಿರುವ ಹಸಿರು ಸಿರಿ ಬೆಳೆಸುವುದರಿಂದ ಹಬ್ಬವಾಗುತ್ತದೆಯೇ ಹೊರತು, ಕತ್ತರಿಸಿ, ಸ್ಫೋಟಿಸಿ, ಕಸದ ರಾಶಿ ಹೆಚ್ಚಿಸುವುದರಿಂದಲ್ಲ. <br /> ಭಕ್ತಿ ಪ್ರಿಯ ಶಿವ ಮೆಚ್ಚುವುದು ಮನದೊಳಗಣ ಪರಿಶುದ್ಧ ಭಕ್ತಿಯನ್ನೇ ಹೊರತು ಈ ಆಡಂಬರವನ್ನಲ್ಲ ಕೂಷ್ಮಾಂಡ ಸ್ಫೋಟವನ್ನಲ್ಲ. ಪುಣ್ಯಗಳಿಕೆಯ ಅಭಿಲಾಷೆಗೆ ಹಲವು ದಾರಿಗಳಿವೆ. ದೀನಬಂಧು ನಾರಾಯಣನನ್ನು ಒಲಿಸಲು ಸಾಕಷ್ಟು ಅವಕಾಶಗಳಿವೆ. <br /> <br /> ಅಪಾರ್ಟ್ಮೆಂಟ್ಗಳಲ್ಲಿದ್ದರೆ, ಮನೆಗೊಂದು ಕುಂಬಳದ ಬದಲು, ಕಟ್ಟಡಕ್ಕೊಂದು ಕುಂಬಳವನ್ನು ತಂದು ಎಲ್ಲ ಒಟ್ಟಾಗಿ ಪೂಜಿಸಬಹುದು. ಮಳಿಗೆಗಳಿಗೂ ಇದೇ ನಿಯಮವನ್ನು ಅನ್ವಯಿಸಬಹುದು. ಆಗ ತಾನಾಗಿಯೇ ಎಲ್ಲರೂ ಒಂದು. ಒಂದೇ ದೇವರತ್ತ ನಮ್ಮ ಒಲವು. ಒಂದೇ ಬಗೆಯ ಆರಾಧನೆ ಎಂಬ ಒಮ್ಮತಕ್ಕೆ ಬರಬಹುದು.<br /> <br /> ಹಬ್ಬದಾಚರಣೆಗಳ ಹಿನ್ನೆಲೆ ಸಂಪ್ರದಾಯಗಳೇನೇ ಇದ್ದರೂ ಉದ್ದೇಶವಂತೂ ಒಂದೇನೆ. ಅದು ಎಲ್ಲರನ್ನೂ ಒಗ್ಗೂಡಿಸುವ ಸಂಪ್ರದಾಯ. ಜಾತ್ರೆ ಇರಲಿ, ದೇವಸ್ಥಾನವಿರಲಿ... ಈ ನೆಪದಿಂದಲಾದರೂ ಒಗ್ಗೂಡಿದರೆ, ಭೂದೇವಿಯ ಮೇಲಿನ ಸಿರಿದೇವಿಯನ್ನು ಉಳಿಸಿದ ಪುಣ್ಯ ಎಲ್ಲರಿಗೂ ಲಭಿಸುತ್ತದೆ.<br /> <br /> ನಮ್ಮ ಮುಂದಿನ ಪೀಳಿಗೆಗಾಗಿ ಹಸಿರು ಭರಿತ ಭೂಮಿಯನ್ನು ನೀಡುವುದಕ್ಕಿಂತ ದೊಡ್ಡ ಕೊಡುಗೆಯಾಗಲೀ, ದೈವಾರಾಧನೆಯಾಗಲೀ ಯಾವುದೂ ಇಲ್ಲ.<br /> ಆದರೆ ಇದಕ್ಕೆ ಎಲ್ಲರೂ ಯೋಚಿಸಬೇಕು. ಯೋಜಿಸಬೇಕು. ಕಾರ್ಯಗತಗೊಳಿಸಬೇಕು. ಅದು ನಮ್ಮಿಂದಾದೀತೆ? ಆಗದ ಕೆಲಸವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>