<p><strong>ಶ್ರೀರಂಗಪಟ್ಟಣ:</strong> ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ಓದಿದಾತ ಈಗ ಗುರುತಿಸುವಂತಹ ಸ್ಪರ್ಧಾತಜ್ಞನಾಗಿ ಬೆಳೆದಿರುವ ಪರಿ ಅಚ್ಚರಿ ಮೂಡಿಸುತ್ತದೆ.<br /> <br /> ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸುಧಾಕರ್ ಎಂಬವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಾಮಕಾರಿ ತರಬೇತಿ ನೀಡುವುದರಲ್ಲಿ ಸಿದ್ಧ ಹಸ್ತರಾಗಿ ಬೆಳೆದಿದ್ದಾರೆ. ಮೈಸೂರಿನ ಬಸುದೇವ ಸೋಮಾನಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಇವರು ಪ್ರಸಿದ್ಧ `ದಿಕ್ಸೂಚಿ~ ಮಾಸ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್, ಶಿಕ್ಷಕ, ಎಫ್ಡಿಎ, ಎಸ್ಡಿಎ, ಪಿಡಿಓ ಇತರ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ `ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಸಿದ್ಧತೆ~ ಸೇರಿದಂತೆ 70ಕ್ಕೂ ಹೆಚ್ಚು ಲೇಖನಗಳು `ಇಂಗ್ಲಿಷ್ ಜರನಲ್~, `ಪ್ರಜಾವಾಣಿ~ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ಭಾರತೀಯ ಸಂವಿಧಾನ~ ವಿಷಯದಲ್ಲಿ ಆಳ ಅಧ್ಯಯನ ನಡೆಸಿರುವ ಇವರು ಮಂಡ್ಯದ ನಿರಂಜನ ಅಕಾಡೆಮಿ ಏರ್ಪಡಿಸಿದ್ದ `ಸ್ಪರ್ಧಾ ಸಂವಿಧಾನ ಕಾರ್ಯಾಗಾರ~ದಲ್ಲಿ ನಿರಂತರ 12 ಗಂಟೆಗಳ ಕಾಲ ತರಬೇತಿ ನೀಡಿದ್ದಾರೆ. 3 ಬಾರಿ 12 ಗಂಟೆಗಳ ಕಾಲ ತರಬೇತಿ ನೀಡಿ ದಾಖಲೆ ನಿರ್ಮಿಸಿದ್ದಾರೆ.<br /> <br /> ಕೃತಿಗಳು: ಸುಧಾಕರ್ ಹೊಸಳ್ಳಿ ಇದುವರೆಗೆ 10 ಕೃತಿಗಳನ್ನು ರಚಿಸಿದ್ದಾರೆ. ಇವರ `ಭಾರತ ಸಂವಿಧಾನ~ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಪಠ್ಯವಾಗಿ ಆಯ್ಕೆಗೊಂಡಿರುವುದು ವಿಶೇಷ. ಇವರ ಮತ್ತೊಂದು ಕೃತಿ `ಭಾರತೀಯ ಸರ್ಕಾರ ಮತ್ತು ರಾಜಕೀಯ~ ಕೃತಿ ಜನ ಮನ್ನಣೆ ಗಳಿಸಿದೆ. ಇವರ `ಅಣ್ಣಾ ಹಜಾರೆ ಮತ್ತು ಜನ ಲೋಕಪಾಲ್~ ಕೃತಿ ಸಂಕೀರ್ತನ ಪತ್ರಿಕೆಯಲ್ಲಿ ಸರಣಿಯಂತೆ ಪ್ರಕಟವಾಗುತ್ತಿದೆ. ಮೈಸೂರಿನ ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಎಎಸ್ ಪ್ರಾಥಮಿಕ ಪರೀಕ್ಷೆಗೂ ಮುನ್ನ~, `ಪ್ರೌಢಶಾಲಾ ಶಿಕ್ಷಕ ಹುದ್ದೆಯ ಪರೀಕ್ಷಾ ಮಾರ್ಗದರ್ಶಿ~~, `ಹಳ್ಳಿಗುಡಿ ಭೂ ಕರ್ಮಕಾಂಡ~, `ಆಂಗ್ಲ ಮಾಧ್ಯಮದ ವಿರೋಧಕ್ಕೆ ವಿಮರ್ಶೆ ಅಗತ್ಯ~, ಬೌದ್ಧಿಕ ಭಯೋತ್ಪಾದನೆಯ ಔಚಿತ್ಯ~ ಇತರ ಲೇಖನಗಳು ಚರ್ಚೆಗೆ ಗ್ರಾಸವಾಗಿವೆ. ಸ್ಪರ್ಧಾ ತಜ್ಞ ಸುಧಾಕರ್ ಹೊಸಳ್ಳಿ ಅವರಿಂದ ಸಲಹೆ, ಮಾರ್ಗದರ್ಶನ ಪಡೆಯಲು ಬಯಸುವವರು ಮೊ:97424 08046 ಸಂಪರ್ಕಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ಹಳ್ಳಿಯಲ್ಲಿ ಹುಟ್ಟಿ, ಬೆಳೆದು, ಓದಿದಾತ ಈಗ ಗುರುತಿಸುವಂತಹ ಸ್ಪರ್ಧಾತಜ್ಞನಾಗಿ ಬೆಳೆದಿರುವ ಪರಿ ಅಚ್ಚರಿ ಮೂಡಿಸುತ್ತದೆ.<br /> <br /> ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾಮದ ಸುಧಾಕರ್ ಎಂಬವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಾಮಕಾರಿ ತರಬೇತಿ ನೀಡುವುದರಲ್ಲಿ ಸಿದ್ಧ ಹಸ್ತರಾಗಿ ಬೆಳೆದಿದ್ದಾರೆ. ಮೈಸೂರಿನ ಬಸುದೇವ ಸೋಮಾನಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಇವರು ಪ್ರಸಿದ್ಧ `ದಿಕ್ಸೂಚಿ~ ಮಾಸ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್, ಶಿಕ್ಷಕ, ಎಫ್ಡಿಎ, ಎಸ್ಡಿಎ, ಪಿಡಿಓ ಇತರ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ `ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಸಿದ್ಧತೆ~ ಸೇರಿದಂತೆ 70ಕ್ಕೂ ಹೆಚ್ಚು ಲೇಖನಗಳು `ಇಂಗ್ಲಿಷ್ ಜರನಲ್~, `ಪ್ರಜಾವಾಣಿ~ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. `ಭಾರತೀಯ ಸಂವಿಧಾನ~ ವಿಷಯದಲ್ಲಿ ಆಳ ಅಧ್ಯಯನ ನಡೆಸಿರುವ ಇವರು ಮಂಡ್ಯದ ನಿರಂಜನ ಅಕಾಡೆಮಿ ಏರ್ಪಡಿಸಿದ್ದ `ಸ್ಪರ್ಧಾ ಸಂವಿಧಾನ ಕಾರ್ಯಾಗಾರ~ದಲ್ಲಿ ನಿರಂತರ 12 ಗಂಟೆಗಳ ಕಾಲ ತರಬೇತಿ ನೀಡಿದ್ದಾರೆ. 3 ಬಾರಿ 12 ಗಂಟೆಗಳ ಕಾಲ ತರಬೇತಿ ನೀಡಿ ದಾಖಲೆ ನಿರ್ಮಿಸಿದ್ದಾರೆ.<br /> <br /> ಕೃತಿಗಳು: ಸುಧಾಕರ್ ಹೊಸಳ್ಳಿ ಇದುವರೆಗೆ 10 ಕೃತಿಗಳನ್ನು ರಚಿಸಿದ್ದಾರೆ. ಇವರ `ಭಾರತ ಸಂವಿಧಾನ~ ಕೃತಿ ಮೈಸೂರು ವಿಶ್ವವಿದ್ಯಾನಿಲಯದ ಪಠ್ಯವಾಗಿ ಆಯ್ಕೆಗೊಂಡಿರುವುದು ವಿಶೇಷ. ಇವರ ಮತ್ತೊಂದು ಕೃತಿ `ಭಾರತೀಯ ಸರ್ಕಾರ ಮತ್ತು ರಾಜಕೀಯ~ ಕೃತಿ ಜನ ಮನ್ನಣೆ ಗಳಿಸಿದೆ. ಇವರ `ಅಣ್ಣಾ ಹಜಾರೆ ಮತ್ತು ಜನ ಲೋಕಪಾಲ್~ ಕೃತಿ ಸಂಕೀರ್ತನ ಪತ್ರಿಕೆಯಲ್ಲಿ ಸರಣಿಯಂತೆ ಪ್ರಕಟವಾಗುತ್ತಿದೆ. ಮೈಸೂರಿನ ಸ್ಥಳೀಯ ದೃಶ್ಯ ಮಾಧ್ಯಮದಲ್ಲಿ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಎಎಸ್ ಪ್ರಾಥಮಿಕ ಪರೀಕ್ಷೆಗೂ ಮುನ್ನ~, `ಪ್ರೌಢಶಾಲಾ ಶಿಕ್ಷಕ ಹುದ್ದೆಯ ಪರೀಕ್ಷಾ ಮಾರ್ಗದರ್ಶಿ~~, `ಹಳ್ಳಿಗುಡಿ ಭೂ ಕರ್ಮಕಾಂಡ~, `ಆಂಗ್ಲ ಮಾಧ್ಯಮದ ವಿರೋಧಕ್ಕೆ ವಿಮರ್ಶೆ ಅಗತ್ಯ~, ಬೌದ್ಧಿಕ ಭಯೋತ್ಪಾದನೆಯ ಔಚಿತ್ಯ~ ಇತರ ಲೇಖನಗಳು ಚರ್ಚೆಗೆ ಗ್ರಾಸವಾಗಿವೆ. ಸ್ಪರ್ಧಾ ತಜ್ಞ ಸುಧಾಕರ್ ಹೊಸಳ್ಳಿ ಅವರಿಂದ ಸಲಹೆ, ಮಾರ್ಗದರ್ಶನ ಪಡೆಯಲು ಬಯಸುವವರು ಮೊ:97424 08046 ಸಂಪರ್ಕಿಸಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>