<p>ಹಗರಿಬೊಮ್ಮನಹಳ್ಳಿ: ಮುಂದಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಾರರಿಗೆ ವಾರಕ್ಕೊಮ್ಮೆ ವಾತಾವರಣದ ನಿಖರ ಮಾಹಿತಿ ನೀಡುವ ವ್ಯವಸ್ಥೆ ಸಾಧ್ಯವಾಗಬಹುದು ಎಂಬ ಸುಳಿವನ್ನು ಧಾರವಾಡ ಕೃಷಿ ವಿ.ವಿ. ಪ್ರಾಧ್ಯಾಪಕ ಡಾ.ವಿ.ಬಿ. ನರಗುಂದ ನೀಡಿದರು.<br /> <br /> ತಾಲ್ಲೂಕಿನ ಶಿವಾನಂದನಗರ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರಾದ ಹರಿರಾಜು ಅವರ ತೋಟದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ “ದಾಳಿಂಬೆ ಬೆಳೆಯ ದುಂಡಾಣು ಅಂಗಮಾರಿ ರೋಗದ ಹತೋಟಿ ಕ್ರಮಗಳ ಬಗ್ಗೆ ರೈತರೊಂದಿಗೆ ವಿಚಾರ ವಿನಿಮಯ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> ಅನಿರೀಕ್ಷಿತವಾಗಿ ವಾತಾವರಣ ಬದಲಿಯಾಗುವುದರಿಂದ ತಾಲ್ಲೂಕಿನ ದಾಳಿಂಬೆ ಕೃಷಿಕರು ಅತಂತ್ರಗೊಂಡಿದ್ದಾರೆ ಎಂಬ ರೈತರ ಆತಂಕಗಳಿಗೆ ಅವರು ಉತ್ತರಿಸಿದರು. ‘ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾತಾವರಣ ಅಧ್ಯಯನ ಕೇಂದ್ರಗಳು ವಾತಾವರಣ ಬದಲಾವಣೆ ಕುರಿತು ನಿರಂತರ ಸಂಶೋಧನೆ ನಡೆಸುತ್ತಿವೆ’ ಎಂದು ತಿಳಿಸಿದರು. <br /> <br /> ಶಿರಸಿ ವಿಸ್ತರಣಾ ಘಟಕದ ವಿಸ್ತರಣಾ ಮುಖಂಡ ಡಾ.ಎಂ.ಆರ್. ರವಿಕುಮಾರ್ ಅವರು ದಾಳಿಂಬೆ ಬೆಳೆಗೆ ತಗಲುವ ರೋಗಗಳು ಹಾಗೂ ನಿರ್ವಹಣೆಯ ಕ್ರಮಗಳನ್ನು ವಿವರಿಸಿದರು.<br /> <br /> ‘ಮೋಡದ ವಾತಾವರಣ, ತೇವಾಂಶ ಮತ್ತು ಮಳೆ ದಾಳಿಂಬೆ ಬೆಳೆಯ ನಾನಾ ರೋಗಗಳಿಗೆ ಕಾರಣವಾಗಿದೆ. ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವ ಮೂಲಕ ದಾಳಿಂಬೆ ಹಣ್ಣು ಸೀಳುವ ಸಮಸ್ಯೆಗೆ ಪರಿಹಾರ ಪಡೆಯಬಹುದು’ ಎಂದರು.<br /> <br /> ‘ದಾಳಿಂಬೆ ಗಿಡಗಳು ಪ್ರಾಥಮಿಕ ಹಂತದಲ್ಲಿದ್ದಾಗ ಮಾತ್ರ ಮಿಶ್ರ ಬೇಸಾಯವಾಗಿ ಬೀನ್ಸ್, ಮೂಲಂಗಿ ಮತ್ತು ಚೆಂಡು ಹೂಗಳನ್ನು ಬೆಳೆಸಿ ಸಾರಜನಕದ ಕೊರತೆ ನೀಗಿಸಬಹುದು ಎಂದು ಸೂಚಿಸಿದರು. <br /> <br /> ‘ಎಕರೆಗೆ 80 ಲಕ್ಷ ಲಾಭ’<br /> ‘ಹಿರಿಯೂರು, ಬಾಗಲಕೋಟೆ ಬಳಿಯ ಕಲಾದಗಿ ಮತ್ತು ರಾಜ್ಯದ ಇತರೆಡೆ ದಾಳಿಂಬೆ ಕೃಷಿ ಕೈಗೊಂಡು ಪ್ರತಿ ಎಕರೆ 80ಲಕ್ಷ ಲಾಭ ಸಂಪಾದಿಸಿರುವ ಉದಾಹರಣೆಗಳಿವೆ. ಹರಿಯುವ ನೀರಿನ ಬದಲಾಗಿ ಹನಿ ನೀರಾವರಿ ಪದ್ಧತಿಯಲ್ಲಿ ದಾಳಿಂಬೆ ಕೃಷಿ ಚಟುವಟಿಕೆ ನಡೆಸುವುದು ಸೂಕ್ತ’ ಎಂದು ಡಾ.ಎಂ.ಆರ್. ರವಿಕುಮಾರ್ ಅಭಿಪ್ರಾಯಪಟ್ಟರು.<br /> <br /> ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಎತ್ತಿನಮನಿ ಸೇರಿದಂತೆ ಪ್ರಗತಿಪರ ರೈತರಾದ ಬನ್ನಿಗೋಳು ವೆಂಕಣ್ಣ, ಟಿ.ಮಂಜುನಾಥ್, ಬಾಣದ ಬಸಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ಮುಂದಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಾರರಿಗೆ ವಾರಕ್ಕೊಮ್ಮೆ ವಾತಾವರಣದ ನಿಖರ ಮಾಹಿತಿ ನೀಡುವ ವ್ಯವಸ್ಥೆ ಸಾಧ್ಯವಾಗಬಹುದು ಎಂಬ ಸುಳಿವನ್ನು ಧಾರವಾಡ ಕೃಷಿ ವಿ.ವಿ. ಪ್ರಾಧ್ಯಾಪಕ ಡಾ.ವಿ.ಬಿ. ನರಗುಂದ ನೀಡಿದರು.<br /> <br /> ತಾಲ್ಲೂಕಿನ ಶಿವಾನಂದನಗರ ಗ್ರಾಮದಲ್ಲಿ ದಾಳಿಂಬೆ ಬೆಳೆಗಾರರಾದ ಹರಿರಾಜು ಅವರ ತೋಟದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ “ದಾಳಿಂಬೆ ಬೆಳೆಯ ದುಂಡಾಣು ಅಂಗಮಾರಿ ರೋಗದ ಹತೋಟಿ ಕ್ರಮಗಳ ಬಗ್ಗೆ ರೈತರೊಂದಿಗೆ ವಿಚಾರ ವಿನಿಮಯ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> ಅನಿರೀಕ್ಷಿತವಾಗಿ ವಾತಾವರಣ ಬದಲಿಯಾಗುವುದರಿಂದ ತಾಲ್ಲೂಕಿನ ದಾಳಿಂಬೆ ಕೃಷಿಕರು ಅತಂತ್ರಗೊಂಡಿದ್ದಾರೆ ಎಂಬ ರೈತರ ಆತಂಕಗಳಿಗೆ ಅವರು ಉತ್ತರಿಸಿದರು. ‘ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾತಾವರಣ ಅಧ್ಯಯನ ಕೇಂದ್ರಗಳು ವಾತಾವರಣ ಬದಲಾವಣೆ ಕುರಿತು ನಿರಂತರ ಸಂಶೋಧನೆ ನಡೆಸುತ್ತಿವೆ’ ಎಂದು ತಿಳಿಸಿದರು. <br /> <br /> ಶಿರಸಿ ವಿಸ್ತರಣಾ ಘಟಕದ ವಿಸ್ತರಣಾ ಮುಖಂಡ ಡಾ.ಎಂ.ಆರ್. ರವಿಕುಮಾರ್ ಅವರು ದಾಳಿಂಬೆ ಬೆಳೆಗೆ ತಗಲುವ ರೋಗಗಳು ಹಾಗೂ ನಿರ್ವಹಣೆಯ ಕ್ರಮಗಳನ್ನು ವಿವರಿಸಿದರು.<br /> <br /> ‘ಮೋಡದ ವಾತಾವರಣ, ತೇವಾಂಶ ಮತ್ತು ಮಳೆ ದಾಳಿಂಬೆ ಬೆಳೆಯ ನಾನಾ ರೋಗಗಳಿಗೆ ಕಾರಣವಾಗಿದೆ. ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವ ಮೂಲಕ ದಾಳಿಂಬೆ ಹಣ್ಣು ಸೀಳುವ ಸಮಸ್ಯೆಗೆ ಪರಿಹಾರ ಪಡೆಯಬಹುದು’ ಎಂದರು.<br /> <br /> ‘ದಾಳಿಂಬೆ ಗಿಡಗಳು ಪ್ರಾಥಮಿಕ ಹಂತದಲ್ಲಿದ್ದಾಗ ಮಾತ್ರ ಮಿಶ್ರ ಬೇಸಾಯವಾಗಿ ಬೀನ್ಸ್, ಮೂಲಂಗಿ ಮತ್ತು ಚೆಂಡು ಹೂಗಳನ್ನು ಬೆಳೆಸಿ ಸಾರಜನಕದ ಕೊರತೆ ನೀಗಿಸಬಹುದು ಎಂದು ಸೂಚಿಸಿದರು. <br /> <br /> ‘ಎಕರೆಗೆ 80 ಲಕ್ಷ ಲಾಭ’<br /> ‘ಹಿರಿಯೂರು, ಬಾಗಲಕೋಟೆ ಬಳಿಯ ಕಲಾದಗಿ ಮತ್ತು ರಾಜ್ಯದ ಇತರೆಡೆ ದಾಳಿಂಬೆ ಕೃಷಿ ಕೈಗೊಂಡು ಪ್ರತಿ ಎಕರೆ 80ಲಕ್ಷ ಲಾಭ ಸಂಪಾದಿಸಿರುವ ಉದಾಹರಣೆಗಳಿವೆ. ಹರಿಯುವ ನೀರಿನ ಬದಲಾಗಿ ಹನಿ ನೀರಾವರಿ ಪದ್ಧತಿಯಲ್ಲಿ ದಾಳಿಂಬೆ ಕೃಷಿ ಚಟುವಟಿಕೆ ನಡೆಸುವುದು ಸೂಕ್ತ’ ಎಂದು ಡಾ.ಎಂ.ಆರ್. ರವಿಕುಮಾರ್ ಅಭಿಪ್ರಾಯಪಟ್ಟರು.<br /> <br /> ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಎತ್ತಿನಮನಿ ಸೇರಿದಂತೆ ಪ್ರಗತಿಪರ ರೈತರಾದ ಬನ್ನಿಗೋಳು ವೆಂಕಣ್ಣ, ಟಿ.ಮಂಜುನಾಥ್, ಬಾಣದ ಬಸಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>