<p><strong>ಬೆಂಗಳೂರು</strong>: ಕೇಂದ್ರ ಪಠ್ಯಕ್ರಮ ಬೋಧಿಸುವ ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಕೂಡ ಕರ್ನಾಟಕ ಶಿಕ್ಷಣ ಕಾಯ್ದೆಗೆ ಒಳಪಡುತ್ತವೆ ಎಂಬ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹಲವಾರು ಶಾಲೆಗಳು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿವೆ.<br /> <br /> 1998ರ ಕರ್ನಾಟಕ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ಈ ಶಾಲೆಗಳನ್ನು ಹೊರಕ್ಕಿಟ್ಟು 1(3) (3-ಎ) ಕಲಮಿಗೆ ಸರ್ಕಾರ ತಿದ್ದುಪಡಿ ಮಾಡಲಾಗಿತ್ತು. ಆದರೆ ಈ ತಿದ್ದುಪಡಿಯನ್ನು ಏಕಸದಸ್ಯಪೀಠ ರದ್ದು ಮಾಡಿತ್ತು. <br /> <br /> ಶಾಲೆಗಳು ಎರ್ರಾಬಿರ್ರಿ ಶುಲ್ಕ ವಸೂಲು ಮಾಡುವುದಕ್ಕೂ ಕೋರ್ಟ್ ಕಡಿವಾಣ ಹಾಕಿತ್ತು. ಇದರ ಜೊತೆಗೆ ರಾಜ್ಯ ಪಠ್ಯಕ್ರಮದಂತೆ ಈ ಶಾಲೆಗಳೂ ಪಠ್ಯಕ್ರಮ ಬೋಧಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಇವೆಲ್ಲವುಗಳ ರದ್ದತಿಗೆ ಈ ಶಾಲೆಗಳು ಈಗ ಮೇಲ್ಮನವಿ ಮೂಲಕ ಕೋರಿವೆ.<br /> <br /> ಎಲ್ಲ ಕಾಯ್ದೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ತಿದ್ದುಪಡಿ ಮಾಡಲಾಗುತ್ತದೆ. ಇಂತಹ ತಿದ್ದುಪಡಿಗಳನ್ನು ರದ್ದು ಮಾಡುವ ಪೂರ್ವದಲ್ಲಿ ಅದರ ವಾದವನ್ನೂ ಆಲಿಸಬೇಕು. <br /> <br /> ಆದರೆ ಈ ಪ್ರಕರಣದಲ್ಲಿ ಏಕಸದಸ್ಯಪೀಠವು ವಾದ ಆಲಿಸದೇ ಏಕಾಏಕಿ ತೀರ್ಪು ನೀಡಿದೆ ಎನ್ನುವುದು ಈ ಶಾಲೆಗಳ ಆರೋಪ. <br /> <br /> ಅಂತೆಯೇ, ವಿದ್ಯುತ್, ನೀರು, ಭೂಮಿ ಇತ್ಯಾದಿಗಳ ಸವಲತ್ತುಗಳನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯ ಕ್ರಮ ಬೋಧಿಸುವುದು ಈ ಶಾಲೆಗಳ ಕರ್ತವ್ಯ ಎನ್ನುವ ಏಕಸದಸ್ಯಪೀಠದ ಅಭಿಪ್ರಾಯವನ್ನು ತಳ್ಳಿಹಾಕಿರುವ ಶಾಲೆಗಳು, ತಾವು ರಾಜ್ಯ ಸರ್ಕಾರದಿಂದ ಯಾವುದೇ ಸವಲತ್ತು ಪಡೆಯುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ತಿಳಿಸಿವೆ.<br /> <br /> ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆಆದೇಶಿಸಿದೆ. <br /> <br /> ಕೇಂದ್ರ ಸರ್ಕಾರದ ವಾದವನ್ನು ಏಕಸದಸ್ಯಪೀಠ ಆಲಿಸಿಲ್ಲ ಎಂದು ಆರೋಪಿಸಿರುವ ಈ ಶಾಲೆಗಳು, ಮೇಲ್ಮನವಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಿಲ್ಲ ಎನ್ನುವುದು ಕುತೂಹಲದ ಅಂಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೇಂದ್ರ ಪಠ್ಯಕ್ರಮ ಬೋಧಿಸುವ ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಕೂಡ ಕರ್ನಾಟಕ ಶಿಕ್ಷಣ ಕಾಯ್ದೆಗೆ ಒಳಪಡುತ್ತವೆ ಎಂಬ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹಲವಾರು ಶಾಲೆಗಳು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿವೆ.<br /> <br /> 1998ರ ಕರ್ನಾಟಕ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ಈ ಶಾಲೆಗಳನ್ನು ಹೊರಕ್ಕಿಟ್ಟು 1(3) (3-ಎ) ಕಲಮಿಗೆ ಸರ್ಕಾರ ತಿದ್ದುಪಡಿ ಮಾಡಲಾಗಿತ್ತು. ಆದರೆ ಈ ತಿದ್ದುಪಡಿಯನ್ನು ಏಕಸದಸ್ಯಪೀಠ ರದ್ದು ಮಾಡಿತ್ತು. <br /> <br /> ಶಾಲೆಗಳು ಎರ್ರಾಬಿರ್ರಿ ಶುಲ್ಕ ವಸೂಲು ಮಾಡುವುದಕ್ಕೂ ಕೋರ್ಟ್ ಕಡಿವಾಣ ಹಾಕಿತ್ತು. ಇದರ ಜೊತೆಗೆ ರಾಜ್ಯ ಪಠ್ಯಕ್ರಮದಂತೆ ಈ ಶಾಲೆಗಳೂ ಪಠ್ಯಕ್ರಮ ಬೋಧಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಇವೆಲ್ಲವುಗಳ ರದ್ದತಿಗೆ ಈ ಶಾಲೆಗಳು ಈಗ ಮೇಲ್ಮನವಿ ಮೂಲಕ ಕೋರಿವೆ.<br /> <br /> ಎಲ್ಲ ಕಾಯ್ದೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ತಿದ್ದುಪಡಿ ಮಾಡಲಾಗುತ್ತದೆ. ಇಂತಹ ತಿದ್ದುಪಡಿಗಳನ್ನು ರದ್ದು ಮಾಡುವ ಪೂರ್ವದಲ್ಲಿ ಅದರ ವಾದವನ್ನೂ ಆಲಿಸಬೇಕು. <br /> <br /> ಆದರೆ ಈ ಪ್ರಕರಣದಲ್ಲಿ ಏಕಸದಸ್ಯಪೀಠವು ವಾದ ಆಲಿಸದೇ ಏಕಾಏಕಿ ತೀರ್ಪು ನೀಡಿದೆ ಎನ್ನುವುದು ಈ ಶಾಲೆಗಳ ಆರೋಪ. <br /> <br /> ಅಂತೆಯೇ, ವಿದ್ಯುತ್, ನೀರು, ಭೂಮಿ ಇತ್ಯಾದಿಗಳ ಸವಲತ್ತುಗಳನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯ ಕ್ರಮ ಬೋಧಿಸುವುದು ಈ ಶಾಲೆಗಳ ಕರ್ತವ್ಯ ಎನ್ನುವ ಏಕಸದಸ್ಯಪೀಠದ ಅಭಿಪ್ರಾಯವನ್ನು ತಳ್ಳಿಹಾಕಿರುವ ಶಾಲೆಗಳು, ತಾವು ರಾಜ್ಯ ಸರ್ಕಾರದಿಂದ ಯಾವುದೇ ಸವಲತ್ತು ಪಡೆಯುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ತಿಳಿಸಿವೆ.<br /> <br /> ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆಆದೇಶಿಸಿದೆ. <br /> <br /> ಕೇಂದ್ರ ಸರ್ಕಾರದ ವಾದವನ್ನು ಏಕಸದಸ್ಯಪೀಠ ಆಲಿಸಿಲ್ಲ ಎಂದು ಆರೋಪಿಸಿರುವ ಈ ಶಾಲೆಗಳು, ಮೇಲ್ಮನವಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಿಲ್ಲ ಎನ್ನುವುದು ಕುತೂಹಲದ ಅಂಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>