<p>ಗುಲ್ಬರ್ಗ ಜಿಲ್ಲೆ ಹೊನಗುಂಟಾದಲ್ಲಿರುವ ಚಂದ್ರಲಾ ಪರಮೇಶ್ವರಿದೇವಿಗೆ (ಹಿಂಗುಲಾಂಬಿಕೆ) ವಿಶೇಷ ಶಕ್ತಿ ಇದೆ ಎಂಬುದು ಭಕ್ತಾದಿಗಳ ಅಚಲ ನಂಬಿಕೆ. ಚಾಲುಕ್ಯ ಶೈಲಿಯ ಶಿಖರ (ಗೋಪುರ, ಕಳಸ) ದೇವಸ್ಥಾನದ ವಾಸ್ತು ಹೊಂದಿದ ಇದು ಮೂಲತಃ ಸುಮಾರು 1,200 ವರ್ಷಗಳಷ್ಟು ಪುರಾತನ ಕ್ಷೇತ್ರ ಎಂದು ಹೇಳಲಾಗುತ್ತದೆ.<br /> <br /> ಬಾದಾಮಿ ಚಾಲುಕ್ಯ ಅರಸರ ಇಷ್ಟ ದೇವತೆಯಾಗಿ, ಅವರಿಗೆ ಸದಾ ಶಕ್ತಿ ನೀಡುತ್ತಿದ್ದಳೆಂಬುದು ಚಂದ್ರಲಾ ಪರಮೇಶ್ವರಿ ಸುಪ್ರಭಾತದಲ್ಲಿ ಬರುವ `ಭುವನ ಚಕ್ರದಿ ಮೆರೆದ ಚಾಳುಕ್ಯ ಚಕ್ರಿಗಳ ಭುಜಬಲದ ಘನಶಕ್ತಿ ನೀನಾಗಿ ಕುಣಿದೆ~ ಎಂಬ ಸಾಲುಗಳಿಂದ ತಿಳಿದುಬರುತ್ತದೆ. <br /> <br /> <strong>ಅಡ್ಡ ಗೋಡೆ:</strong> ಈ ದೇವಾಲಯದ ಕಟ್ಟಡವೇ ವಿಶಿಷ್ಟ ಹಾಗೂ ಅಪರೂಪ. `ರಂಗಮಂದಿರ~ (ಪ್ರಾಂಗಣ) ಪ್ರವೇಶಿಸದ ಹೊರತು ದೇವಿಯ ದರ್ಶನ ಮಾಡುವಂತಿಲ್ಲ. <br /> <br /> ಯಾರೇ ಆಗಲಿ ದೇವಿಯನ್ನು ನೇರವಾಗಿ ನೋಡುವಂತಿಲ್ಲ. ಪ್ರವೇಶದ್ವಾರದಲ್ಲಿ ಇರುವ ಅಡ್ಡ ಗೋಡೆಯೇ ಇದಕ್ಕೆ ಕಾರಣ. ಈ ಗೋಡೆಗೆ ಒಂದು ಚಿಕ್ಕ ಕಿಂಡಿ ಇದೆ. ಇದರ ಮೂಲಕ ದೇವಿಯ ಮುಖದರ್ಶನ ಪಡೆದು ಎಡಕ್ಕೆ ತಿರುಗಿ ಹೋದರೆ `ರಂಗಮಂದಿರ~ ಸಿಗುತ್ತದೆ. ಅಲ್ಲಿಂದ ಮಾತ್ರ ನೇರವಾಗಿ ಗರ್ಭಗುಡಿಯಲ್ಲಿರುವ ದೇವಿ ದರ್ಶನ ಪಡೆಯಬಹುದಾಗಿದೆ. <br /> <br /> ಸೂರ್ಯೋದಯ ವೇಳೆ ನೇರ ಮತ್ತು ಸೂರ್ಯಾಸ್ತಮಾನದ ವೇಳೆ ಹೊಂಗಿರಣ ದೇವಸ್ಥಾನದ ಮುಂದಿರುವ ಧ್ವಜಸ್ತಂಭದ ಮೇಲೆ ಬಿದ್ದು ಗೋಡೆ ಕಿಂಡಿ ಮುಖಾಂತರ ಅಮ್ಮನ ಮುಖಕ್ಕೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷತೆ.<br /> <br /> ಇದು ಕಾಗಿಣಾ, ಭೀಮಾ ನದಿಗಳ ಸಂಗಮ. ಕಾಗಿನಾ ನದಿ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹಾಗೂ ಭೀಮಾ ಪಶ್ಚಿಮದಿಂದ ಪೂರ್ವಾಭಿಮುಖ ಹರಿದು ಇಲ್ಲಿ ಸಂಗಮಗೊಂಡಿರುವುದು ಸೃಷ್ಟಿಯ ಸೋಜಿಗವೇ ಸರಿ ಎನ್ನುತ್ತಾರೆ ಇಲ್ಲಿಯ ಅರ್ಚಕ ಅಶೋಕ ಜೋಶಿ.<br /> <br /> ಹಿಂಗುಲಾಂಬಿಕೆಗೆ ಚಂದ್ರಲಾ ಪರಮೇಶ್ವರಿ ಎನ್ನುವ ಇನ್ನೊಂದು ಹೆಸರೂ ಇದೆ. ಸ್ಥಳ ಮಹಾತ್ಮೆಯ ಪ್ರಕಾರ ಈಕೆ ಈಗಿನ ಆಫ್ಘಾನಿಸ್ತಾನದ ದೇವಿ. ನಾರಾಯಣ ಮುನಿಯ ಪತ್ನಿಯನ್ನು ಅಪಹರಿಸಿದ ಕಾಮಾಂಧ ದೊರೆ ಸೇತುರಾಜನನ್ನು ಶಿಕ್ಷಿಸಲು ಈಕೆ ಮುನಿಯ ಕೋರಿಕೆಯಂತೆ ಇಲ್ಲಿ ಬಂದು ನೆಲೆಸಿದವಳು. <br /> <strong> <br /> ಪೂಜಾ ವಿಶೇಷ</strong><br /> ಸನ್ನತಿಯಲ್ಲಿರುವ ಹಿಂಗಲಾಂಬಿಕೆಯ (ಚಂದ್ರಲಾ ಪರಮೇಶ್ವರಿ) ಪಾದುಕೆ ಪೂಜೆ ಮಾಡಿದ ಭಕ್ತರು ಬಂದ ನಂತರವಷ್ಟೇ ನಿತ್ಯವೂ ಹೊನಗುಂಟಾದಲ್ಲಿ ಮಧ್ಯಾಹ್ನದ ಪೂಜೆ ನಡೆಯುತ್ತದೆ. ಸನ್ನತಿಗೆ ಬಂದವರು ಹೊನಗುಂಟಾಗೂ ಬಂದು ದರ್ಶನ ಪಡೆಯದ ಹೊರತು ಯಾತ್ರೆ ಪೂರ್ಣಗೊಳ್ಳದು ಎಂದು ಹೇಳಲಾಗುತ್ತದೆ. <br /> <strong><br /> ಉತ್ಸವ, ಪೂಜೆ: </strong> ಚೈತ್ರಮಾಸದಲ್ಲಿ ವದ್ಯ ಪಂಚಮಿ (ದೇವಿಪಂಚಮಿ) ಯಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ. ರಾತ್ರಿ 10ರಿಂದ ಬೆಳಗಿನ 5ರ ವರೆಗೆ ದೇವಸ್ಥಾನದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ, ಆಶ್ವೀಜದಲ್ಲಿ ನವರಾತ್ರಿ ಉತ್ಸವಕ್ಕೆ ದೇಶ-ವಿದೇಶಗಳಿಂದ ಭಕ್ತರುಗಳು ಬರುತ್ತಾರೆ.<br /> <br /> <strong>ಮಾರ್ಗ: ಗುಲ್ಬರ್ಗದಿಂದ 27 ಕಿ.ಮೀ. ದೂರದಲ್ಲಿದೆ ಶಹಾಬಾದ್. ಅಲ್ಲಿಂದ 8 ಕಿ.ಮೀ. ಮುಂದೆ ಹೋದರೆ ಹೊನಗುಂಟಾ ಸಿಗುತ್ತದೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಲ್ಬರ್ಗ ಜಿಲ್ಲೆ ಹೊನಗುಂಟಾದಲ್ಲಿರುವ ಚಂದ್ರಲಾ ಪರಮೇಶ್ವರಿದೇವಿಗೆ (ಹಿಂಗುಲಾಂಬಿಕೆ) ವಿಶೇಷ ಶಕ್ತಿ ಇದೆ ಎಂಬುದು ಭಕ್ತಾದಿಗಳ ಅಚಲ ನಂಬಿಕೆ. ಚಾಲುಕ್ಯ ಶೈಲಿಯ ಶಿಖರ (ಗೋಪುರ, ಕಳಸ) ದೇವಸ್ಥಾನದ ವಾಸ್ತು ಹೊಂದಿದ ಇದು ಮೂಲತಃ ಸುಮಾರು 1,200 ವರ್ಷಗಳಷ್ಟು ಪುರಾತನ ಕ್ಷೇತ್ರ ಎಂದು ಹೇಳಲಾಗುತ್ತದೆ.<br /> <br /> ಬಾದಾಮಿ ಚಾಲುಕ್ಯ ಅರಸರ ಇಷ್ಟ ದೇವತೆಯಾಗಿ, ಅವರಿಗೆ ಸದಾ ಶಕ್ತಿ ನೀಡುತ್ತಿದ್ದಳೆಂಬುದು ಚಂದ್ರಲಾ ಪರಮೇಶ್ವರಿ ಸುಪ್ರಭಾತದಲ್ಲಿ ಬರುವ `ಭುವನ ಚಕ್ರದಿ ಮೆರೆದ ಚಾಳುಕ್ಯ ಚಕ್ರಿಗಳ ಭುಜಬಲದ ಘನಶಕ್ತಿ ನೀನಾಗಿ ಕುಣಿದೆ~ ಎಂಬ ಸಾಲುಗಳಿಂದ ತಿಳಿದುಬರುತ್ತದೆ. <br /> <br /> <strong>ಅಡ್ಡ ಗೋಡೆ:</strong> ಈ ದೇವಾಲಯದ ಕಟ್ಟಡವೇ ವಿಶಿಷ್ಟ ಹಾಗೂ ಅಪರೂಪ. `ರಂಗಮಂದಿರ~ (ಪ್ರಾಂಗಣ) ಪ್ರವೇಶಿಸದ ಹೊರತು ದೇವಿಯ ದರ್ಶನ ಮಾಡುವಂತಿಲ್ಲ. <br /> <br /> ಯಾರೇ ಆಗಲಿ ದೇವಿಯನ್ನು ನೇರವಾಗಿ ನೋಡುವಂತಿಲ್ಲ. ಪ್ರವೇಶದ್ವಾರದಲ್ಲಿ ಇರುವ ಅಡ್ಡ ಗೋಡೆಯೇ ಇದಕ್ಕೆ ಕಾರಣ. ಈ ಗೋಡೆಗೆ ಒಂದು ಚಿಕ್ಕ ಕಿಂಡಿ ಇದೆ. ಇದರ ಮೂಲಕ ದೇವಿಯ ಮುಖದರ್ಶನ ಪಡೆದು ಎಡಕ್ಕೆ ತಿರುಗಿ ಹೋದರೆ `ರಂಗಮಂದಿರ~ ಸಿಗುತ್ತದೆ. ಅಲ್ಲಿಂದ ಮಾತ್ರ ನೇರವಾಗಿ ಗರ್ಭಗುಡಿಯಲ್ಲಿರುವ ದೇವಿ ದರ್ಶನ ಪಡೆಯಬಹುದಾಗಿದೆ. <br /> <br /> ಸೂರ್ಯೋದಯ ವೇಳೆ ನೇರ ಮತ್ತು ಸೂರ್ಯಾಸ್ತಮಾನದ ವೇಳೆ ಹೊಂಗಿರಣ ದೇವಸ್ಥಾನದ ಮುಂದಿರುವ ಧ್ವಜಸ್ತಂಭದ ಮೇಲೆ ಬಿದ್ದು ಗೋಡೆ ಕಿಂಡಿ ಮುಖಾಂತರ ಅಮ್ಮನ ಮುಖಕ್ಕೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷತೆ.<br /> <br /> ಇದು ಕಾಗಿಣಾ, ಭೀಮಾ ನದಿಗಳ ಸಂಗಮ. ಕಾಗಿನಾ ನದಿ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹಾಗೂ ಭೀಮಾ ಪಶ್ಚಿಮದಿಂದ ಪೂರ್ವಾಭಿಮುಖ ಹರಿದು ಇಲ್ಲಿ ಸಂಗಮಗೊಂಡಿರುವುದು ಸೃಷ್ಟಿಯ ಸೋಜಿಗವೇ ಸರಿ ಎನ್ನುತ್ತಾರೆ ಇಲ್ಲಿಯ ಅರ್ಚಕ ಅಶೋಕ ಜೋಶಿ.<br /> <br /> ಹಿಂಗುಲಾಂಬಿಕೆಗೆ ಚಂದ್ರಲಾ ಪರಮೇಶ್ವರಿ ಎನ್ನುವ ಇನ್ನೊಂದು ಹೆಸರೂ ಇದೆ. ಸ್ಥಳ ಮಹಾತ್ಮೆಯ ಪ್ರಕಾರ ಈಕೆ ಈಗಿನ ಆಫ್ಘಾನಿಸ್ತಾನದ ದೇವಿ. ನಾರಾಯಣ ಮುನಿಯ ಪತ್ನಿಯನ್ನು ಅಪಹರಿಸಿದ ಕಾಮಾಂಧ ದೊರೆ ಸೇತುರಾಜನನ್ನು ಶಿಕ್ಷಿಸಲು ಈಕೆ ಮುನಿಯ ಕೋರಿಕೆಯಂತೆ ಇಲ್ಲಿ ಬಂದು ನೆಲೆಸಿದವಳು. <br /> <strong> <br /> ಪೂಜಾ ವಿಶೇಷ</strong><br /> ಸನ್ನತಿಯಲ್ಲಿರುವ ಹಿಂಗಲಾಂಬಿಕೆಯ (ಚಂದ್ರಲಾ ಪರಮೇಶ್ವರಿ) ಪಾದುಕೆ ಪೂಜೆ ಮಾಡಿದ ಭಕ್ತರು ಬಂದ ನಂತರವಷ್ಟೇ ನಿತ್ಯವೂ ಹೊನಗುಂಟಾದಲ್ಲಿ ಮಧ್ಯಾಹ್ನದ ಪೂಜೆ ನಡೆಯುತ್ತದೆ. ಸನ್ನತಿಗೆ ಬಂದವರು ಹೊನಗುಂಟಾಗೂ ಬಂದು ದರ್ಶನ ಪಡೆಯದ ಹೊರತು ಯಾತ್ರೆ ಪೂರ್ಣಗೊಳ್ಳದು ಎಂದು ಹೇಳಲಾಗುತ್ತದೆ. <br /> <strong><br /> ಉತ್ಸವ, ಪೂಜೆ: </strong> ಚೈತ್ರಮಾಸದಲ್ಲಿ ವದ್ಯ ಪಂಚಮಿ (ದೇವಿಪಂಚಮಿ) ಯಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ. ರಾತ್ರಿ 10ರಿಂದ ಬೆಳಗಿನ 5ರ ವರೆಗೆ ದೇವಸ್ಥಾನದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ, ಆಶ್ವೀಜದಲ್ಲಿ ನವರಾತ್ರಿ ಉತ್ಸವಕ್ಕೆ ದೇಶ-ವಿದೇಶಗಳಿಂದ ಭಕ್ತರುಗಳು ಬರುತ್ತಾರೆ.<br /> <br /> <strong>ಮಾರ್ಗ: ಗುಲ್ಬರ್ಗದಿಂದ 27 ಕಿ.ಮೀ. ದೂರದಲ್ಲಿದೆ ಶಹಾಬಾದ್. ಅಲ್ಲಿಂದ 8 ಕಿ.ಮೀ. ಮುಂದೆ ಹೋದರೆ ಹೊನಗುಂಟಾ ಸಿಗುತ್ತದೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>