<p><strong>ಬೆಂಗಳೂರು: </strong>`ನವ್ಯ, ಬಂಡಾಯ, ದಲಿತ ಸೇರಿದಂತೆ ಎಲ್ಲ ಕಾಲಘಟ್ಟಗಳಿಗೂ ಪ್ರತಿಕ್ರಿಯಿಸುತ್ತಲೇ ಬಂದಿರುವ ಎಚ್.ಎಸ್.ವೆಂಕಟೇಶ್ಮೂರ್ತಿ ಅವರ ಸಾಹಿತ್ಯ ಹೊಸ ಬಗೆಯ ಭರವಸೆಯನ್ನು ಮೂಡಿಸುತ್ತದೆ' ಎಂದು ಕತೆಗಾರ ವಿವೇಕ ಶಾನಭಾಗ ತಿಳಿಸಿದರು.<br /> <br /> ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನವು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ `ಶಂಖದೊಳಗಿನ ಮೌನ' ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಮಕ್ಕಳ ಕವಿತೆ, ನಾಟಕ, ಕಾವ್ಯ, ಲೇಖನ ಸೇರಿದಂತೆ ಎಲ್ಲ ಪ್ರಕಾರಗಳನ್ನು ಒಳಗೊಂಡು ವೆಂಕಟೇಶಮೂರ್ತಿ ಅವರ ಸಾಹಿತ್ಯ ಬಹುದೊಡ್ಡ ವಿಸ್ತಾರ ಪಡೆದಿದೆ. ಅಡಿಗರ ಕಾವ್ಯದಂತೆ ಇವರ ಕವಿತೆಗಳಲ್ಲಿರುವ ರೂಪಕಗಳು, ಪ್ರತಿಮೆಗಳು ಓದುಗರನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ' ಎಂದು ಹೇಳಿದರು.<br /> <br /> `ಕಾವ್ಯದೊಳಗೆ ಕಥನವನ್ನು ಹೇಳುವ ಬಗೆಯೇ ಒಂದು ಸೋಜಿಗ. ಸಣ್ಣ ಸಣ್ಣ ಘಟನೆಗಳನ್ನು ವಿವರವಾಗಿ ಬಣ್ಣಿಸುತ್ತಲೇ ಓದುಗರ ಹೃದಯವನ್ನು ಆರ್ದ್ರಗೊಳಿಸುವ ಕೌಶಲ ಅವರಿಗೆ ಲಭಿಸಿದ್ದು, ಇದು ಕನ್ನಡ ಸಾಹಿತ್ಯಕ್ಕೆ ದಕ್ಕಿರುವ ಹೊಸ ಕಾವ್ಯಪರಂಪರೆ' ಎಂದು ಬಣ್ಣಿಸಿದರು.<br /> <br /> `ತನಗಿರುವ ಸಾಮರ್ಥ್ಯ ಹಾಗೂ ಕಂಡುಕೊಳ್ಳಬಹುದಾದ ಸಹೃದಯ ಓದುಗರ ಬಗ್ಗೆ ಕವಿಯಾದವರಿಗೆ ಅರಿವು ಇರಬೇಕು. ವೆಂಕಟೇಶಮೂರ್ತಿ ಅವರ ಕವಿತೆಗಳಲ್ಲಿ ಈ ಅರಿವು ಎದ್ದುಕಾಣುತ್ತದೆ' ಎಂದರು.<br /> <br /> ಲೇಖಕ ಕೆ.ಸತ್ಯನಾರಾಯಣ, `ನಲ್ವತ್ತೈದು ವರ್ಷಗಳ ಕಾಲ ಸತತವಾಗಿ ಕಾವ್ಯ ಕೃಷಿಯಲ್ಲಿ ತೊಡಗಿರುವ ಅವರ ಸಾಧನೆ ಇತರರಿಗೆ ಸ್ಫೂರ್ತಿ. ಬಹುತೇಕ ಕವಿತೆಗಳು ಪ್ರಾರ್ಥನೆ ಹಾಗೂ ಹಾರೈಕೆಯೊಂದಿಗೆ ಕೊನೆಗೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯೊಂದು ಕಾವ್ಯದ ಹೆಗಲೇರುವ ಬಗೆಯನ್ನು ತಿಳಿಸುತ್ತದೆ' ಎಂದರು.<br /> <br /> ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ತಾಯಿ ಎಚ್.ಎಸ್.ನಾಗರತ್ನಮ್ಮ ಅವರು ಹಾಡಿರುವ `ಮನೆ ಹಾಡುಗಳು' ಸಿ.ಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪಾಸನಾ ಮೋಹನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ನವ್ಯ, ಬಂಡಾಯ, ದಲಿತ ಸೇರಿದಂತೆ ಎಲ್ಲ ಕಾಲಘಟ್ಟಗಳಿಗೂ ಪ್ರತಿಕ್ರಿಯಿಸುತ್ತಲೇ ಬಂದಿರುವ ಎಚ್.ಎಸ್.ವೆಂಕಟೇಶ್ಮೂರ್ತಿ ಅವರ ಸಾಹಿತ್ಯ ಹೊಸ ಬಗೆಯ ಭರವಸೆಯನ್ನು ಮೂಡಿಸುತ್ತದೆ' ಎಂದು ಕತೆಗಾರ ವಿವೇಕ ಶಾನಭಾಗ ತಿಳಿಸಿದರು.<br /> <br /> ಸಾತ್ವಿಕ ಸಾಂಸ್ಕೃತಿಕ ಪ್ರತಿಷ್ಠಾನವು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಆಯೋಜಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ `ಶಂಖದೊಳಗಿನ ಮೌನ' ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ಮಕ್ಕಳ ಕವಿತೆ, ನಾಟಕ, ಕಾವ್ಯ, ಲೇಖನ ಸೇರಿದಂತೆ ಎಲ್ಲ ಪ್ರಕಾರಗಳನ್ನು ಒಳಗೊಂಡು ವೆಂಕಟೇಶಮೂರ್ತಿ ಅವರ ಸಾಹಿತ್ಯ ಬಹುದೊಡ್ಡ ವಿಸ್ತಾರ ಪಡೆದಿದೆ. ಅಡಿಗರ ಕಾವ್ಯದಂತೆ ಇವರ ಕವಿತೆಗಳಲ್ಲಿರುವ ರೂಪಕಗಳು, ಪ್ರತಿಮೆಗಳು ಓದುಗರನ್ನು ಮತ್ತಷ್ಟು ಹತ್ತಿರಗೊಳಿಸುತ್ತದೆ' ಎಂದು ಹೇಳಿದರು.<br /> <br /> `ಕಾವ್ಯದೊಳಗೆ ಕಥನವನ್ನು ಹೇಳುವ ಬಗೆಯೇ ಒಂದು ಸೋಜಿಗ. ಸಣ್ಣ ಸಣ್ಣ ಘಟನೆಗಳನ್ನು ವಿವರವಾಗಿ ಬಣ್ಣಿಸುತ್ತಲೇ ಓದುಗರ ಹೃದಯವನ್ನು ಆರ್ದ್ರಗೊಳಿಸುವ ಕೌಶಲ ಅವರಿಗೆ ಲಭಿಸಿದ್ದು, ಇದು ಕನ್ನಡ ಸಾಹಿತ್ಯಕ್ಕೆ ದಕ್ಕಿರುವ ಹೊಸ ಕಾವ್ಯಪರಂಪರೆ' ಎಂದು ಬಣ್ಣಿಸಿದರು.<br /> <br /> `ತನಗಿರುವ ಸಾಮರ್ಥ್ಯ ಹಾಗೂ ಕಂಡುಕೊಳ್ಳಬಹುದಾದ ಸಹೃದಯ ಓದುಗರ ಬಗ್ಗೆ ಕವಿಯಾದವರಿಗೆ ಅರಿವು ಇರಬೇಕು. ವೆಂಕಟೇಶಮೂರ್ತಿ ಅವರ ಕವಿತೆಗಳಲ್ಲಿ ಈ ಅರಿವು ಎದ್ದುಕಾಣುತ್ತದೆ' ಎಂದರು.<br /> <br /> ಲೇಖಕ ಕೆ.ಸತ್ಯನಾರಾಯಣ, `ನಲ್ವತ್ತೈದು ವರ್ಷಗಳ ಕಾಲ ಸತತವಾಗಿ ಕಾವ್ಯ ಕೃಷಿಯಲ್ಲಿ ತೊಡಗಿರುವ ಅವರ ಸಾಧನೆ ಇತರರಿಗೆ ಸ್ಫೂರ್ತಿ. ಬಹುತೇಕ ಕವಿತೆಗಳು ಪ್ರಾರ್ಥನೆ ಹಾಗೂ ಹಾರೈಕೆಯೊಂದಿಗೆ ಕೊನೆಗೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿಯೊಂದು ಕಾವ್ಯದ ಹೆಗಲೇರುವ ಬಗೆಯನ್ನು ತಿಳಿಸುತ್ತದೆ' ಎಂದರು.<br /> <br /> ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ತಾಯಿ ಎಚ್.ಎಸ್.ನಾಗರತ್ನಮ್ಮ ಅವರು ಹಾಡಿರುವ `ಮನೆ ಹಾಡುಗಳು' ಸಿ.ಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಪಾಸನಾ ಮೋಹನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>