<p><strong>ಬೆಂಗಳೂರು: </strong>`ಅಲೋಪತಿ ವೈದ್ಯಕೀಯ ಚಿಕಿತ್ಸೆಯು ಇಂದು ವಾಣಿಜ್ಯೀಕರಣಗೊಂಡು ಸಾಮಾನ್ಯ ಜನರಿಗೆ ದುಬಾರಿಯಾಗಿದೆ. ಹೀಗಾಗಿ ಹೋಮಿಯೋಪತಿ ಪದ್ಧತಿಯು ಎಲ್ಲರಿಗೂ ಕೈಗೆಟುಕುವ ಉತ್ತಮ ವೈದ್ಯ ಪದ್ಧತಿಯಾಗಿದೆ~ ಎಂದು ಹೋಮಿಯೋಪತಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಶನಿವಾರ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.`ಹೋಮಿಯೋಪತಿ ಪದ್ಧತಿ ಇಲ್ಲದೇ 2020ರ ವೇಳೆಗೆ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ. ಕ್ಯಾನ್ಸರ್, ಬಂಜೆತನ ನಿವಾರಣೆ ಒಳಗೊಂಡಂತೆ ನಾನಾ ಕಾಯಿಲೆಗೆ ಕಡಿಮೆ ಬೆಲೆಯಲ್ಲಿ ಹೋಮಿಯೋಪತಿ ವಿಧಾನದ ಮೂಲಕ ಚಿಕಿತ್ಸೆಯನ್ನು ನೀಡಬಹುದು~ ಎಂದರು.<br /> <br /> `ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಆಸ್ಪತ್ರೆಯ ಕಟ್ಟಡ ನಿರ್ಮಿಸಿ, ದುಬಾರಿ ಬೆಲೆಯ ಸಾಧನಗಳನ್ನು ಅಳವಡಿಸಿದ ಮಾತ್ರಕ್ಕೆ ಅಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತದೆ ಎಂದು ಭಾವಿಸುವಂತಿಲ್ಲ~ ಎಂದರು.<br /> <br /> `ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳು ನನ್ನ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದು, ಅವುಗಳಲ್ಲಿ `ದೂರ ಸರಿದರು~ ನನ್ನ ಅಚ್ಚು ಮೆಚ್ಚಿನ ಕಾದಂಬರಿಯಾಗಿದೆ. ಇಂಗ್ಲಿಷ್ನ ಹಲವು ಕೃತಿಗಳು ನನ್ನ ಬದುಕಿಗೆ ತಿರುವು ನೀಡಿವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಅಲೋಪತಿ ವೈದ್ಯಕೀಯ ಚಿಕಿತ್ಸೆಯು ಇಂದು ವಾಣಿಜ್ಯೀಕರಣಗೊಂಡು ಸಾಮಾನ್ಯ ಜನರಿಗೆ ದುಬಾರಿಯಾಗಿದೆ. ಹೀಗಾಗಿ ಹೋಮಿಯೋಪತಿ ಪದ್ಧತಿಯು ಎಲ್ಲರಿಗೂ ಕೈಗೆಟುಕುವ ಉತ್ತಮ ವೈದ್ಯ ಪದ್ಧತಿಯಾಗಿದೆ~ ಎಂದು ಹೋಮಿಯೋಪತಿ ವೈದ್ಯ ಡಾ.ಬಿ.ಟಿ.ರುದ್ರೇಶ್ ಹೇಳಿದರು.<br /> <br /> ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಶನಿವಾರ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.`ಹೋಮಿಯೋಪತಿ ಪದ್ಧತಿ ಇಲ್ಲದೇ 2020ರ ವೇಳೆಗೆ ಎಲ್ಲರಿಗೂ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ. ಕ್ಯಾನ್ಸರ್, ಬಂಜೆತನ ನಿವಾರಣೆ ಒಳಗೊಂಡಂತೆ ನಾನಾ ಕಾಯಿಲೆಗೆ ಕಡಿಮೆ ಬೆಲೆಯಲ್ಲಿ ಹೋಮಿಯೋಪತಿ ವಿಧಾನದ ಮೂಲಕ ಚಿಕಿತ್ಸೆಯನ್ನು ನೀಡಬಹುದು~ ಎಂದರು.<br /> <br /> `ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಆಸ್ಪತ್ರೆಯ ಕಟ್ಟಡ ನಿರ್ಮಿಸಿ, ದುಬಾರಿ ಬೆಲೆಯ ಸಾಧನಗಳನ್ನು ಅಳವಡಿಸಿದ ಮಾತ್ರಕ್ಕೆ ಅಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತದೆ ಎಂದು ಭಾವಿಸುವಂತಿಲ್ಲ~ ಎಂದರು.<br /> <br /> `ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳು ನನ್ನ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದು, ಅವುಗಳಲ್ಲಿ `ದೂರ ಸರಿದರು~ ನನ್ನ ಅಚ್ಚು ಮೆಚ್ಚಿನ ಕಾದಂಬರಿಯಾಗಿದೆ. ಇಂಗ್ಲಿಷ್ನ ಹಲವು ಕೃತಿಗಳು ನನ್ನ ಬದುಕಿಗೆ ತಿರುವು ನೀಡಿವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>