<p><strong>ಬಾಗಲಕೋಟೆ: </strong>‘ಇಂಗಳೆಮಾರ್ಗ’ ಕನ್ನಡ ಚಲನಚಿತ್ರ ಶೀಘ್ರದಲ್ಲೇ ರಾಜ್ಯದ 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ, ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಬಾಗಲಕೋಟೆಯ ಘನಶ್ಯಾಮ ಭಾಂಡಗೆ ತಿಳಿಸಿದರು.<br /> <br /> ನವನಗರದಲ್ಲಿ ಸೋಮವಾರ ನಡೆದ ‘ಇಂಗಳೆಮಾರ್ಗ’ ಚಿತ್ರದ ನಾಯಕಿಯರಾದ ರೂಪಿಕಾ ಮತ್ತು ಶಿವಾನಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಡಾ. ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧಾರಿತ ‘ಇಂಗಳೆಮಾರ್ಗ’ವನ್ನು ವೈಷ್ಣೋದೇವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಬೆಳಗಾವಿ, ಹುಕ್ಕೇರಿ, ಚಿಚಖಂಡಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.<br /> <br /> ವಿಶಾಲ್ರಾಜ್ ನಿರ್ದೇಶನ, ಸತೀಶ್ ಕುಲಕರ್ಣಿ ಅವರ ಸಾಹಿತ್ಯ ಮತ್ತು ವಿ. ಮನೋಹರ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸುಚೇಂದ್ರ ಪ್ರಸಾದ್, ನಾಯಕಿಯಾಗಿ ಶಿವಾನಿ ಮತ್ತು ಮುಖ್ಯ ಪಾತ್ರದಲ್ಲಿ ರೂಪಿಕಾ, ಶಂಕರ್ ಅಶ್ವಥ್, ರಮೇಶ್ ಪಂಡಿತ್ ಮತ್ತಿತರರು ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.<br /> <br /> ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ‘ಇಂಗಳೆಮಾರ್ಗ’ ಚಿತ್ರ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದರು.<br /> <br /> ಬೆಳಗಾವಿ ಮತ್ತು ಮಹಾರಾಷ್ಟ್ರ ಭಾಗದಲ್ಲಿ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಮೂಢನಂಬಿಕೆ ವಿರುದ್ಧ ಹಾಗೂ ದಲಿತ ಪರವಾದ ಹೋರಾಟ ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸಮಕಾಲೀನ ಹೋರಾಟಗಾರ ದೇವರಾಯ ಕುರಿತಾದ ‘ಇಂಗಳೆಮಾರ್ಗ’ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಲಾತ್ಮಕ ಚಿತ್ರವಾಗಿದೆ ಎಂದರು.<br /> <br /> <strong>‘ಹೆಮ್ಮೆಯ ಸಂಗತಿ’: </strong>ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರೂಪಿಕಾ ಮಾತನಾಡಿ, ‘ನಿರ್ಮಾಪಕ ಘನಶ್ಯಾಮ ಭಾಂಡಗೆ ಅಂಗವಿಕಲರಾಗಿದ್ದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ವಿವಿಧ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಚಿತ್ರ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.<br /> <br /> ‘ಈಗಾಗಲೇ 12 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದು, ಇಂಗಳೆಮಾರ್ಗದಲ್ಲಿನ ನನ್ನ ವಿಭಿನ್ನ ಪಾತ್ರ ಹೆಚ್ಚು ಖುಷಿ ನೀಡಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಈ ಚಿತ್ರದಲ್ಲಿ ಇದೆ. ಇಂತಹ ಕಲಾತ್ಮಕ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ’ ಎಂದರು.<br /> <br /> <strong>‘ಎಲ್ಲರೂ ನೋಡಿ’:</strong> ಚಿತ್ರದ ನಾಯಕಿ ಶಿವಾನಿ ಮಾತನಾಡಿ, ‘ಕಲಾತ್ಮಕ ಚಿತ್ರದಲ್ಲಿ ನಟಿಸುವುದು ನಿನಗೆ ಒಪ್ಪುವುದಿಲ್ಲ, ಸಾಧ್ಯವೂ ಇಲ್ಲ ಎಂದು ಕೆಲವರು ನನಗೆ ಛೇಡಿಸಿದ್ದರು. ಆದರೆ, ‘ಇಂಗಳೆಮಾರ್ಗ’ದಲ್ಲಿ ಕಸ್ತೂರಿಬಾಯಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿರುವ ಸಮಾಧಾನವಿದೆ’ ಎಂದು ಹೇಳಿದರು.<br /> <br /> ‘ಈ ಚಿತ್ರವನ್ನು ಉತ್ತರ ಕರ್ನಾಟಕದ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ’ ಎಂದರು.<br /> <br /> <strong>ನಟಿಯರಿಗೆ ಸನ್ಮಾನ</strong><br /> ನಟಿಯರಾದ ರೂಪಿಕಾ ಮತ್ತು ಶಿವಾನಿ ಅವರನ್ನು ನಿರ್ಮಾಪಕ ಘನಶ್ಯಾಮ ಭಾಂಡಗೆ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.<br /> ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಭಾಂಡಗೆ, ಆನಂದ ಭಾಂಡಗೆ, ಪೂಜಾ, ಮೀನಾಕ್ಷಿ ಬೋಸ್ಲೆ, ಶಶಿಪ್ರಭಾ ಮತ್ತು ಕರುಣಾ ಸಾಗರ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>‘ಇಂಗಳೆಮಾರ್ಗ’ ಕನ್ನಡ ಚಲನಚಿತ್ರ ಶೀಘ್ರದಲ್ಲೇ ರಾಜ್ಯದ 20ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ, ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಬಾಗಲಕೋಟೆಯ ಘನಶ್ಯಾಮ ಭಾಂಡಗೆ ತಿಳಿಸಿದರು.<br /> <br /> ನವನಗರದಲ್ಲಿ ಸೋಮವಾರ ನಡೆದ ‘ಇಂಗಳೆಮಾರ್ಗ’ ಚಿತ್ರದ ನಾಯಕಿಯರಾದ ರೂಪಿಕಾ ಮತ್ತು ಶಿವಾನಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಡಾ. ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ಆಧಾರಿತ ‘ಇಂಗಳೆಮಾರ್ಗ’ವನ್ನು ವೈಷ್ಣೋದೇವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಬೆಳಗಾವಿ, ಹುಕ್ಕೇರಿ, ಚಿಚಖಂಡಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.<br /> <br /> ವಿಶಾಲ್ರಾಜ್ ನಿರ್ದೇಶನ, ಸತೀಶ್ ಕುಲಕರ್ಣಿ ಅವರ ಸಾಹಿತ್ಯ ಮತ್ತು ವಿ. ಮನೋಹರ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸುಚೇಂದ್ರ ಪ್ರಸಾದ್, ನಾಯಕಿಯಾಗಿ ಶಿವಾನಿ ಮತ್ತು ಮುಖ್ಯ ಪಾತ್ರದಲ್ಲಿ ರೂಪಿಕಾ, ಶಂಕರ್ ಅಶ್ವಥ್, ರಮೇಶ್ ಪಂಡಿತ್ ಮತ್ತಿತರರು ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.<br /> <br /> ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ‘ಇಂಗಳೆಮಾರ್ಗ’ ಚಿತ್ರ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದರು.<br /> <br /> ಬೆಳಗಾವಿ ಮತ್ತು ಮಹಾರಾಷ್ಟ್ರ ಭಾಗದಲ್ಲಿ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಮೂಢನಂಬಿಕೆ ವಿರುದ್ಧ ಹಾಗೂ ದಲಿತ ಪರವಾದ ಹೋರಾಟ ರೂಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸಮಕಾಲೀನ ಹೋರಾಟಗಾರ ದೇವರಾಯ ಕುರಿತಾದ ‘ಇಂಗಳೆಮಾರ್ಗ’ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಲಾತ್ಮಕ ಚಿತ್ರವಾಗಿದೆ ಎಂದರು.<br /> <br /> <strong>‘ಹೆಮ್ಮೆಯ ಸಂಗತಿ’: </strong>ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರೂಪಿಕಾ ಮಾತನಾಡಿ, ‘ನಿರ್ಮಾಪಕ ಘನಶ್ಯಾಮ ಭಾಂಡಗೆ ಅಂಗವಿಕಲರಾಗಿದ್ದರೂ ಅದನ್ನೇ ಸವಾಲಾಗಿ ಸ್ವೀಕರಿಸಿ ವಿವಿಧ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಚಿತ್ರ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.<br /> <br /> ‘ಈಗಾಗಲೇ 12 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದು, ಇಂಗಳೆಮಾರ್ಗದಲ್ಲಿನ ನನ್ನ ವಿಭಿನ್ನ ಪಾತ್ರ ಹೆಚ್ಚು ಖುಷಿ ನೀಡಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಈ ಚಿತ್ರದಲ್ಲಿ ಇದೆ. ಇಂತಹ ಕಲಾತ್ಮಕ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ’ ಎಂದರು.<br /> <br /> <strong>‘ಎಲ್ಲರೂ ನೋಡಿ’:</strong> ಚಿತ್ರದ ನಾಯಕಿ ಶಿವಾನಿ ಮಾತನಾಡಿ, ‘ಕಲಾತ್ಮಕ ಚಿತ್ರದಲ್ಲಿ ನಟಿಸುವುದು ನಿನಗೆ ಒಪ್ಪುವುದಿಲ್ಲ, ಸಾಧ್ಯವೂ ಇಲ್ಲ ಎಂದು ಕೆಲವರು ನನಗೆ ಛೇಡಿಸಿದ್ದರು. ಆದರೆ, ‘ಇಂಗಳೆಮಾರ್ಗ’ದಲ್ಲಿ ಕಸ್ತೂರಿಬಾಯಿ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿರುವ ಸಮಾಧಾನವಿದೆ’ ಎಂದು ಹೇಳಿದರು.<br /> <br /> ‘ಈ ಚಿತ್ರವನ್ನು ಉತ್ತರ ಕರ್ನಾಟಕದ ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ’ ಎಂದರು.<br /> <br /> <strong>ನಟಿಯರಿಗೆ ಸನ್ಮಾನ</strong><br /> ನಟಿಯರಾದ ರೂಪಿಕಾ ಮತ್ತು ಶಿವಾನಿ ಅವರನ್ನು ನಿರ್ಮಾಪಕ ಘನಶ್ಯಾಮ ಭಾಂಡಗೆ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.<br /> ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಭಾಂಡಗೆ, ಆನಂದ ಭಾಂಡಗೆ, ಪೂಜಾ, ಮೀನಾಕ್ಷಿ ಬೋಸ್ಲೆ, ಶಶಿಪ್ರಭಾ ಮತ್ತು ಕರುಣಾ ಸಾಗರ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>