ಬೆಂಗಳೂರು: 2013–14 ಮತ್ತು 2014–15ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿ ಪ್ರದಾನ ನವೆಂಬರ್ನಲ್ಲಿ ನಡೆಯಲಿದೆ.
2013–-14ನೇ ಸಾಲಿನ ಗೌರವ ಪ್ರಶಸ್ತಿಗೆ ಧಾರವಾಡದ ತಬಲಾ ವಾದಕ ರಘುನಾಥ ನಾಕೋಡ ಮತ್ತು ಚಿಕ್ಕಮಗಳೂರಿನ ಗಮಕ ಕಲಾವಿದೆ ಸಿ.ವಿ.ಶ್ರೀಮತಿ ಆಯ್ಕೆಯಾಗಿದ್ದಾರೆ.
2014–15ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಂಗಳೂರಿನ ವೀಣಾವಾದಕ ಡಿ.ಬಾಲಕೃಷ್ಣ ಮತ್ತು ನೃತ್ಯ ಕಲಾವಿದೆ ಪ್ರೊ. ವಿಜಯಾ ಮಾರ್ತಾಂಡ ಆಯ್ಕೆಯಾಗಿದ್ದಾರೆ.
2013-14ರ ಪ್ರಶಸ್ತಿ- ಕರ್ನಾಟಕ ಸಂಗೀತ: ಆರ್.ಎಸ್.ರಮಾಕಾಂತ–ಗಾಯನ (ಬೆಂಗಳೂರು), ಅನಂತ ಅವಧಾನಿ–ಗಾಯನ (ಶಿವಮೊಗ್ಗ), ಕೊಳ್ಳೇಗಾಲ ಎಸ್.ಗೋಪಾಲಕೃಷ್ಣ–ಪಿಟೀಲು (ಕೋಲಾರ), ತಿರುಮಲೆ ಶ್ರೀನಿವಾಸ–ಸಂಗೀತ ಸಂಯೋಜನೆ (ಬೆಂಗಳೂರು).
ಹಿಂದೂಸ್ತಾನಿ ಸಂಗೀತ: ಮಹಾಬಲೇಶ್ವರ ಭಾಗವತ–ಗಾಯನ (ಉಡುಪಿ), ವಿ.ಜಿ.ಮಹಾಪುರುಷ–ಸಿತಾರ್ (ಬಾಗಲಕೋಟೆ), ಕಾಳಪ್ಪ ನಾಗಲಿಂಗಪ್ಪ ಪತ್ತಾರ–ತಬಲಾ (ಯಾದಗಿರಿ).
ನೃತ್ಯ: ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಕಿರಣ್–ಭರತನಾಟ್ಯ (ಬೆಂಗಳೂರು), ಕೆ.ಬೃಂದ– ನಟುವಾಂಗ (ಮೈಸೂರು),
ಸುಗಮ ಸಂಗೀತ: ವಿಠಾಬಾಯಿ ದತ್ತಾತ್ರೇಯ ಕಾನವಿಂದೆ (ಬೆಳಗಾವಿ), ನಾಗಲಾಂಬಿಕಾ ಚಂದ್ರಶೇಖರ್ (ರಾಯಚೂರು), ರಮೇಶ್ಚಂದ್ರ (ಕಾಸರಗೋಡು), ಲತಾ ಜಹಾಗೀರದಾರ (ವಿಜಾಪುರ).
ಕಥಾ ಕೀರ್ತನ: ವೇದಮೂರ್ತಿ ಮಲ್ಲಯ್ಯಶಾಸ್ತ್ರಿ ಐನಾಪುರ್ (ಬೀದರ್).
ಗಮಕ:ಸಿ.ಪಿ.ವಿದ್ಯಾಶಂಕರ್(ಮಂಡ್ಯ), ಡಾ. ವಿಜಯಮಾಲಾ ರಂಗನಾಥ್ (ಮೈಸೂರು)
2014–15ರ ಪ್ರಶಸ್ತಿ– ಕರ್ನಾಟಕ ಸಂಗೀತ: ಡಿ.ವಿ.ನಾಗರಾಜ್–ಗಾಯನ (ಬೆಂಗಳೂರು), ಎಸ್.ರಾಜಲಕ್ಷ್ಮಿ–ಗಾಯನ (ಮೈಸೂರು) ಎಂ.ಎನ್.ಪಿ.ರತ್ನಂ–ಸ್ಯಾಕ್ಸೋಫೋನ್ (ಮಂಡ್ಯ).
ಹಿಂದೂಸ್ತಾನಿ ಸಂಗೀತ: ವಿ.ಎಂ.ನಾಗರಾಜ್–ಗಾಯನ (ಬೆಂಗಳೂರು), ರಾಜಗುರು ಗುರುಸ್ವಾಮಿ ಕಲ್ಕೇರಿ– ಗಾಯನ (ಗದಗ), ಎ.ಎಸ್. ವಠಾರ– ತಬಲಾ (ಬೀದರ್), ಡಾ.ಅಶೋಕ ಹುಗ್ಗಣ್ಣವರ್–ಗಾಯನ (ಉತ್ತರಕನ್ನಡ)
ನೃತ್ಯ: ಊರ್ಮಿಳಾ ಬಸುದೇವ ಪಾತ್ರಾ –ಭರತನಾಟ್ಯ (ಹುಬ್ಬಳ್ಳಿ), ರೂಪಾ ರಾಜೇಶ್–ಕೂಚಿಪುಡಿ(ಚಿಕ್ಕಬಳ್ಳಾಪುರ).
ಸುಗಮಸಂಗೀತ: ಮಂಜುಳಾ ಗುರುರಾಜ್ (ಬೆಂಗಳೂರು), ಕೆ.ಕರಿಯಪ್ಪ ಮಾಸ್ಟರ್(ರಾಯಚೂರು), ಬಿ.ಎಸ್.ವೇಣುಗೋಪಾಲರಾಜು–ತಬಲಾ (ಬೆಂಗಳೂರು).
ಕಥಾಕೀರ್ತನ: ವಿ.ಅಶ್ವತ್ಥನಾರಾಯಣ ದಾಸ (ಬೆಂಗಳೂರು)
ಗಮಕ: ಗಣೇಶ ಉಡುಪ (ಉಡುಪಿ), ಡಾ.ಎನ್.ಕೆ. ರಾಮಶೇಷನ್ (ಮೈಸೂರು)
ಹೊರದೇಶದ ಕಲಾವಿದರು: ರಂಗಶ್ರೀ–ನೃತ್ಯ (ಕುವೈತ್).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.