<p><strong>ಮೀರ್ಪುರ (ಪಿಟಿಐ):</strong> ‘ಭಾರತ ಹಾಗೂ ಪಾಕಿಸ್ತಾನ ನಡುವೆ ಹೆಚ್ಚು ಹೆಚ್ಚು ಕ್ರಿಕೆಟ್ ನಡೆಯಬೇಕು. ಕ್ರಿಕೆಟ್ ನಿಂದಾಗಿ ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗ ಲಿದೆ’ ಎಂದು ಪಾಕಿಸ್ತಾನ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ‘ಭಾರತದಲ್ಲಿ ಕ್ರಿಕೆಟ್ ಆಡುತ್ತಾ ನಾನು ತುಂಬಾ ಖುಷಿ ಪಟ್ಟಿದ್ದೇನೆ. ಬೇರೆ ಯಾವುದೇ ದೇಶದಲ್ಲಿ ನನಗೆ ಇಷ್ಟೊಂದು ಖುಷಿ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ನೆರೆಹೊರೆಯವರು. ನಮ್ಮ ನಡುವಿನ ಬಾಂಧವ್ಯ ಚೆನ್ನಾಗಿರಬೇಕು. ಆ ಸಂಬಂಧ ಕ್ರಿಕೆಟ್ನಿಂದ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಅವರು ನುಡಿದಿದ್ದಾರೆ.<br /> <br /> ‘ಪ್ರತಿ ಹಂತದಲ್ಲೂ ಭಾರತವನ್ನು ಪಾಕ್ ಕ್ರಿಕೆಟ್ ಪರಿವಾರ ಬೆಂಬಲಿಸಿದೆ. ಬೆದರಿಕೆ ಇದ್ದರೂ ನಾವು ಭಾರತಕ್ಕೆ ಹೋಗಿ ಕ್ರಿಕೆಟ್ ಆಡಿದ್ದೇವೆ. ಕ್ರೀಡೆಯಿಂದ ಗೆಳೆತನ ಮತ್ತಷ್ಟು ಉತ್ತಮಗೊಳ್ಳುತ್ತದೆ’ ಎಂದಿದ್ದಾರೆ.<br /> <br /> ಐಪಿಎಲ್ನಲ್ಲಿ ಪಾಕ್ ಆಟಗಾರರು ಆಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಏಕೆ ಕೇಳುತ್ತೀರಿ, ಭಾರತ ಸರ್ಕಾರದ ಬಳಿ ಈ ಪ್ರಶ್ನೆ ಕೇಳಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀರ್ಪುರ (ಪಿಟಿಐ):</strong> ‘ಭಾರತ ಹಾಗೂ ಪಾಕಿಸ್ತಾನ ನಡುವೆ ಹೆಚ್ಚು ಹೆಚ್ಚು ಕ್ರಿಕೆಟ್ ನಡೆಯಬೇಕು. ಕ್ರಿಕೆಟ್ ನಿಂದಾಗಿ ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗ ಲಿದೆ’ ಎಂದು ಪಾಕಿಸ್ತಾನ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ‘ಭಾರತದಲ್ಲಿ ಕ್ರಿಕೆಟ್ ಆಡುತ್ತಾ ನಾನು ತುಂಬಾ ಖುಷಿ ಪಟ್ಟಿದ್ದೇನೆ. ಬೇರೆ ಯಾವುದೇ ದೇಶದಲ್ಲಿ ನನಗೆ ಇಷ್ಟೊಂದು ಖುಷಿ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ನೆರೆಹೊರೆಯವರು. ನಮ್ಮ ನಡುವಿನ ಬಾಂಧವ್ಯ ಚೆನ್ನಾಗಿರಬೇಕು. ಆ ಸಂಬಂಧ ಕ್ರಿಕೆಟ್ನಿಂದ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಅವರು ನುಡಿದಿದ್ದಾರೆ.<br /> <br /> ‘ಪ್ರತಿ ಹಂತದಲ್ಲೂ ಭಾರತವನ್ನು ಪಾಕ್ ಕ್ರಿಕೆಟ್ ಪರಿವಾರ ಬೆಂಬಲಿಸಿದೆ. ಬೆದರಿಕೆ ಇದ್ದರೂ ನಾವು ಭಾರತಕ್ಕೆ ಹೋಗಿ ಕ್ರಿಕೆಟ್ ಆಡಿದ್ದೇವೆ. ಕ್ರೀಡೆಯಿಂದ ಗೆಳೆತನ ಮತ್ತಷ್ಟು ಉತ್ತಮಗೊಳ್ಳುತ್ತದೆ’ ಎಂದಿದ್ದಾರೆ.<br /> <br /> ಐಪಿಎಲ್ನಲ್ಲಿ ಪಾಕ್ ಆಟಗಾರರು ಆಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಏಕೆ ಕೇಳುತ್ತೀರಿ, ಭಾರತ ಸರ್ಕಾರದ ಬಳಿ ಈ ಪ್ರಶ್ನೆ ಕೇಳಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>