<p>ಚಿಕ್ಕಬಳ್ಳಾಪುರ: ಮಕ್ಕಳ ಶಿಕ್ಷಣ ಹಕ್ಕು ಶೋಷಣೆಯ ವಿರುದ್ಧ ಆಯುಧವಾಗಬೇಕು ಎಂದು ತಾಲ್ಲೂಕಿನ ಕ್ಷೇತ್ರ<br /> ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವೆಂಕಟೇಶ್ ತಿಳಿಸಿದರು.<br /> <br /> ತಾಲ್ಲೂಕಿನಲ್ಲಿ ನಡೆಯುವ ಸಮುದಾಯ ಜಾಗೃತಿ ಶಿಬಿರವನ್ನು ಈಚೆಗೆ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಈಗ ಆರ್ಟಿಇ ಕಾಯ್ದೆಯ ರೂಪದಲ್ಲಿ ಜಾರಿಗೆ ಬಂದಿರುವ ಈ ಮಕ್ಕಳ ಹಕ್ಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದರು.<br /> <br /> ಪ್ರಜ್ಞಾ ಟ್ರಸ್ಟ್ನ ಯೋಜನಾ ನಿರ್ದೇಶಕ ಎನ್. ನಾಗರಾಜ್ ಮಾತನಾಡಿ ಕಲಾತಂಡವು ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲವ್ಯಕ್ತಿ ಮಂಜುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಜರಿದ್ದರು. ತಂಡದಲ್ಲಿ ಸಂಯೋಜಕಿ- ರೂಪಾ, ಕಲಾವಿದರಾದ ಎಚ್.ಸಿ. ನರಸಿಂಹಮೂರ್ತಿ, ಕೆ. ನರಸಿಂಹಮೂರ್ತಿ, ಕಿರಣ್, ಜಯಲಕ್ಷ್ಮಿ, ನಾರಾಯಣಸ್ವಾಮಿ, ಗಾಯತ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಬಳ್ಳಾಪುರ: ಮಕ್ಕಳ ಶಿಕ್ಷಣ ಹಕ್ಕು ಶೋಷಣೆಯ ವಿರುದ್ಧ ಆಯುಧವಾಗಬೇಕು ಎಂದು ತಾಲ್ಲೂಕಿನ ಕ್ಷೇತ್ರ<br /> ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವೆಂಕಟೇಶ್ ತಿಳಿಸಿದರು.<br /> <br /> ತಾಲ್ಲೂಕಿನಲ್ಲಿ ನಡೆಯುವ ಸಮುದಾಯ ಜಾಗೃತಿ ಶಿಬಿರವನ್ನು ಈಚೆಗೆ ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಈಗ ಆರ್ಟಿಇ ಕಾಯ್ದೆಯ ರೂಪದಲ್ಲಿ ಜಾರಿಗೆ ಬಂದಿರುವ ಈ ಮಕ್ಕಳ ಹಕ್ಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತದೆ ಎಂದರು.<br /> <br /> ಪ್ರಜ್ಞಾ ಟ್ರಸ್ಟ್ನ ಯೋಜನಾ ನಿರ್ದೇಶಕ ಎನ್. ನಾಗರಾಜ್ ಮಾತನಾಡಿ ಕಲಾತಂಡವು ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಹೇಳಿದರು.<br /> <br /> ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲವ್ಯಕ್ತಿ ಮಂಜುನಾಥರೆಡ್ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಜರಿದ್ದರು. ತಂಡದಲ್ಲಿ ಸಂಯೋಜಕಿ- ರೂಪಾ, ಕಲಾವಿದರಾದ ಎಚ್.ಸಿ. ನರಸಿಂಹಮೂರ್ತಿ, ಕೆ. ನರಸಿಂಹಮೂರ್ತಿ, ಕಿರಣ್, ಜಯಲಕ್ಷ್ಮಿ, ನಾರಾಯಣಸ್ವಾಮಿ, ಗಾಯತ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>