<p>ಕಲಾವಿದರಿಗೆ ಹಾಗೂ ಛಾಯಾಗ್ರಾಹಕರಿಗೆ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ನೆಚ್ಚಿನ ತಾಣ. ವಿಜಯನಗರ ಅರಸರು ಆಳಿದ ಈ ಸ್ಥಳವನ್ನು ಇಂದು ‘ಹಾಳು ಹಂಪಿ’ ಎಂದು ಕರೆಯುತ್ತಾರೆ. ಆದರೆ, ವಿಜಯನಗರ ಕಾಲದ ಶ್ರೀಮಂತ ವಾಸ್ತುಶಿಲ್ಪ ಕಲೆಯನ್ನು ಛಾಯಾಗ್ರಾಹಕರು ತೆರೆದಿಡುವ ಬಗೆ ಮಾತ್ರ ಅನನ್ಯ. <br /> <br /> ಒಬ್ಬೊಬ್ಬ ಛಾಯಾಗ್ರಾಹಕನಿಗೂ ಭಿನ್ನವಾಗಿ ಕಾಣುವ ಇಲ್ಲಿನ ಕಲ್ಲಿನ ಸ್ಮಾರಕಗಳು ಒಂದೊಂದು ಕಲಾಕೃತಿಯಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗುತ್ತವೆ. ನಗರದ ಯುವ ಛಾಯಾಗ್ರಾಹಕ ಶಂಕರ್ ಟಿ.ವಿ. ಹಂಪಿಯ ಸ್ಮಾರಕಗಳ ಚಿತ್ರವನ್ನು ವಿಭಿನ್ನವಾಗಿ ಸೆರೆಹಿಡಿದಿದ್ದಾರೆ. ಜೊತೆಗೆ ಕಿರುಚಿತ್ರವನ್ನು ಮಾಡುತ್ತಿದ್ದಾರೆ.<br /> <br /> ಛಾಯಾಗ್ರಹಣದಲ್ಲಿ ಲ್ಯಾಂಡ್ಸ್ಕೇಪ್, ಪೋರ್ಟೇಟ್ (ಭಾವಚಿತ್ರ), ಫ್ಯಾಷನ್, ಸಿನಿಮಾಟೊಗ್ರಫಿ, ಫೋಟೊ ಜರ್ನಲಿಸಂ, ಫುಡ್, ವಾಸ್ತುಶಿಲ್ಪ (ಆರ್ಕಿಟಕ್ಚರಲ್), ಪ್ರೊಡಕ್ಟ್... ಹೀಗೆ ಹಲವು ವಿಭಾಗಗಳಿವೆ. ಆರ್ಕಿಟೆಕ್ಚರಲ್ ಛಾಯಾಗ್ರಹಣದಲ್ಲಿ ನೈಪುಣ್ಯ ಸಾಧಿಸಿರುವ ಶಂಕರ್ ಎಚ್ಡಿಆರ್ (ಹೈ ಡೈನಮಿಕ್ ರೇಂಜ್) ಫೋಟೊಗ್ರಫಿ ಮಾಡುತ್ತಾರೆ.<br /> <br /> ‘ಸಾಮಾನ್ಯವಾಗಿ ಒಂದು ದೇವಾಲಯದ ಹೊರಾಂಗಣ ಚಿತ್ರ ತೆಗೆದರೆ ಕೆಲವೊಮ್ಮೆ ಆಕಾಶ ಬಿಳಿಯಾಗಿ ಕಾಣುತ್ತದೆ. ಆದರೆ ಎಚ್ಡಿಆರ್ನಲ್ಲಿ ಪ್ರತಿ ಆಬ್ಜೆಕ್ಟ್ ವಿಭಿನ್ನ ಎಕ್ಸ್ಪೋಷರ್ನಲ್ಲಿ ಶೂಟ್ ಮಾಡಲಾಗುತ್ತದೆ. ಅಂತಿಮವಾಗಿ ಅವುಗಳೆಲ್ಲವನ್ನೂ ಕೂಡಿಸಿ ಅಂತಿಮ ಫೋಟೊವನ್ನು ಸಿದ್ಧಪಡಿಸುತ್ತೇವೆ. ಆಗ ಎಚ್ಡಿಆರ್ ಫೋಟೊಗ್ರಫಿಯಾಗುತ್ತದೆ’ ಎನ್ನುತ್ತಾರೆ ಶಂಕರ್.<br /> <br /> ಶಂಕರ್ ಅವರು 20 ಬಾರಿ ಹಂಪಿಗೆ ಹೋಗಿ ಛಾಯಾಗ್ರಹಣ ಮಾಡಿದ್ದಾರೆ. ಕಳೆದ ತಿಂಗಳು ಆಗ್ರಾಗೆ ಹೋಗಿ ತಾಜ್ಮಹಲ್ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಸೂರ್ಯ ಮುಳುಗುವ ವೇಳೆ ತಾಜ್ಮಹಲ್ ಎದುರಿಗೆ ಮೇಕೆಗಳೊಂದಿಗೆ ಮನೆಗೆ ಹಿಂತಿರುಗುತ್ತಿರುವ ಮಹಿಳೆಯ ಚಿತ್ರ ಕಲಾತ್ಮಕವಾಗಿದೆ.<br /> <br /> ಇನ್ನು ಹಂಪಿಯ ಲೋಟಸ್ ಟೆಂಪಲ್, ವಿಠ್ಠಲ ದೇವಸ್ಥಾನ, ಹಜರಾಮ ದೇವಸ್ಥಾನ, ಕಲ್ಲಿನ ರಥ, ಆನೆ ಸಾಲು ಮಂಟಪ, ಕಮಲ ಮಹಲ್, ತಮಿಳು ನಾಡಿನ ಮಹಾಬಲೀಪುರಂ ದೇವಾಲಯ... ಹೀಗೆ ಒಂದೊಂದು ದೇವಾಲಯ, ಸ್ಮಾರಕಗಳು ಛಾಯಾಚಿತ್ರಗಳ ಮೂಲಕ ಕಲಾಕೃತಿಗಳಾಗಿವೆ.<br /> <br /> ‘ಆರ್ಕಿಟಕ್ಚರಲ್ ಫೋಟೊಗ್ರಫಿ ಕಲಿಕೆಗೆ ತಾಳ್ಮೆ ಬೇಕು, ಒಂದು ಸ್ಥಳದ ಫೋಟೊಗ್ರಫಿ ಮಾಡುವಾಗ ಮೊದಲು ಅದರ ಇತಿಹಾಸ, ತಿಳಿದುಕೊಳ್ಳಬೇಕು, ಈಗಾಗಲೇ ತೆಗೆದ ಚಿತ್ರಕ್ಕಿಂತ ಭಿನ್ನವಾಗಿ ತೆಗೆಯಬೇಕು ಹಾಗೂ ಯೋಚಿಸಬೇಕು’ ಎನ್ನುತ್ತಾರೆ ಅವರು.<br /> <br /> ಶಂಕರ್ ಛಾಯಾಗ್ರಹಣವನ್ನಷ್ಟೇ ಮಾಡದೇ ಚಿತ್ರಗಳನ್ನೂ ರಚಿಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಪೇಂಟಿಂಗ್ ಮಾಡುತ್ತಿರುವ ಇವರು ಮೈಸೂರಿನ ಲಲಿತಕಲಾ ಮಹಾಸಂಸ್ಥಾನದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಮಾಡಿದ್ದಾರೆ. ಪ್ಯಾಲೆಟ್ ನೈಫ್ ಮತ್ತು ಜಲವರ್ಣ ಚಿತ್ರ ರಚಿಸುವುದು ಇವರ ವಿಶೇಷ.<br /> <br /> ‘ಕ್ಯಾಮೆರಾವನ್ನು ಬ್ರಶ್ ಆಗಿ, ಲೈಟ್ ಅನ್ನು ಪೇಂಟ್ ಆಗಿ ಬಳಸಿಕೊಂಡು ಬರೆಯುವ ಚಿತ್ರವೇ ಫೋಟೊ. ಒಂದೊಂದು ಫೋಟೊಗಳು ಕಲಾಕೃತಿಗಳಿಗೆ ಸಮನಾಗಿರುತ್ತವೆ. ಕೆಲವೊಮ್ಮೆ ನಾನು ತೆಗೆದ ಛಾಯಾಚಿತ್ರಗಳು ಪೇಂಟಿಂಗ್ಗೆ ಸ್ಫೂರ್ತಿಯಾಗಿವೆ’ ಎಂದು ಛಾಯಾಗ್ರಹಣ ಮಹತ್ವ ವಿವರಿಸುತ್ತಾರೆ ಶಂಕರ್.<br /> <br /> <strong>ಹಂಪಿ ಕಿರುಚಿತ್ರ<br /> ಹಂ</strong>ಪಿ ಹಾಳಾಗದೇ ಉಳಿದಿದ್ದರೆ ಈಗ ಹೇಗಿರುತ್ತಿತ್ತು ಎಂಬ ವಿಷಯವನ್ನು ಇಟ್ಟುಕೊಂಡು ಕಿರುಚಿತ್ರವನ್ನು ಮಾಡುತ್ತಿದ್ದಾರೆ ಶಂಕರ್. ಈಗಾಗಲೇ ಚಿತ್ರೀಕರಣ ಕೆಲಸ ಆರಂಭಿಸಿರುವ ಇವರು, ಕಥೆ, ನಿರ್ದೇಶನ ಹಾಗೂ ಸಿನಿಮಾಟೊಗ್ರಫಿಯನ್ನೂ ಮಾಡಿದ್ದಾರೆ.<br /> <br /> ಹೆಬ್ಬಾಳದಲ್ಲಿರುವ ದೃಷ್ಟಿ ಫೋಟೊಗ್ರಫಿ ಶಾಲೆಯಲ್ಲಿ ಶಂಕರ್ ಆರು ತಿಂಗಳ ಕೋರ್ಸ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಗೌತಮ್ ಬಸಕ್ ಇವರ ಗುರು. ಗೌತಮ್ ಅವರು 35 ವರ್ಷಗಳಿಂದ ಫೋಟೊಗ್ರಫಿ ಪಾಠ ಮಾಡುತ್ತಿದ್ದಾರೆ.<br /> <br /> ಎಂ.ಜಿ.ರಸ್ತೆಯಲ್ಲಿ ಶಂಕರ್ ‘ಮೈಂಡ್ಬ್ಲ್ಯೂ’ ಎಂಬ ಕಂಪೆನಿಯನ್ನು ಆರಂಭಿಸಿ, ಪ್ರೊಡಕ್ಟ್ ಹಾಗೂ ಆರ್ಕಿಟಕ್ಚರಲ್ ಫೋಟೊಗ್ರಫಿಯನ್ನು ಮಾಡುತ್ತಿದ್ದಾರೆ.<br /> <em><strong>ಮಾಹಿತಿಗೆ: </strong> 97427 77766</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಾವಿದರಿಗೆ ಹಾಗೂ ಛಾಯಾಗ್ರಾಹಕರಿಗೆ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ನೆಚ್ಚಿನ ತಾಣ. ವಿಜಯನಗರ ಅರಸರು ಆಳಿದ ಈ ಸ್ಥಳವನ್ನು ಇಂದು ‘ಹಾಳು ಹಂಪಿ’ ಎಂದು ಕರೆಯುತ್ತಾರೆ. ಆದರೆ, ವಿಜಯನಗರ ಕಾಲದ ಶ್ರೀಮಂತ ವಾಸ್ತುಶಿಲ್ಪ ಕಲೆಯನ್ನು ಛಾಯಾಗ್ರಾಹಕರು ತೆರೆದಿಡುವ ಬಗೆ ಮಾತ್ರ ಅನನ್ಯ. <br /> <br /> ಒಬ್ಬೊಬ್ಬ ಛಾಯಾಗ್ರಾಹಕನಿಗೂ ಭಿನ್ನವಾಗಿ ಕಾಣುವ ಇಲ್ಲಿನ ಕಲ್ಲಿನ ಸ್ಮಾರಕಗಳು ಒಂದೊಂದು ಕಲಾಕೃತಿಯಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗುತ್ತವೆ. ನಗರದ ಯುವ ಛಾಯಾಗ್ರಾಹಕ ಶಂಕರ್ ಟಿ.ವಿ. ಹಂಪಿಯ ಸ್ಮಾರಕಗಳ ಚಿತ್ರವನ್ನು ವಿಭಿನ್ನವಾಗಿ ಸೆರೆಹಿಡಿದಿದ್ದಾರೆ. ಜೊತೆಗೆ ಕಿರುಚಿತ್ರವನ್ನು ಮಾಡುತ್ತಿದ್ದಾರೆ.<br /> <br /> ಛಾಯಾಗ್ರಹಣದಲ್ಲಿ ಲ್ಯಾಂಡ್ಸ್ಕೇಪ್, ಪೋರ್ಟೇಟ್ (ಭಾವಚಿತ್ರ), ಫ್ಯಾಷನ್, ಸಿನಿಮಾಟೊಗ್ರಫಿ, ಫೋಟೊ ಜರ್ನಲಿಸಂ, ಫುಡ್, ವಾಸ್ತುಶಿಲ್ಪ (ಆರ್ಕಿಟಕ್ಚರಲ್), ಪ್ರೊಡಕ್ಟ್... ಹೀಗೆ ಹಲವು ವಿಭಾಗಗಳಿವೆ. ಆರ್ಕಿಟೆಕ್ಚರಲ್ ಛಾಯಾಗ್ರಹಣದಲ್ಲಿ ನೈಪುಣ್ಯ ಸಾಧಿಸಿರುವ ಶಂಕರ್ ಎಚ್ಡಿಆರ್ (ಹೈ ಡೈನಮಿಕ್ ರೇಂಜ್) ಫೋಟೊಗ್ರಫಿ ಮಾಡುತ್ತಾರೆ.<br /> <br /> ‘ಸಾಮಾನ್ಯವಾಗಿ ಒಂದು ದೇವಾಲಯದ ಹೊರಾಂಗಣ ಚಿತ್ರ ತೆಗೆದರೆ ಕೆಲವೊಮ್ಮೆ ಆಕಾಶ ಬಿಳಿಯಾಗಿ ಕಾಣುತ್ತದೆ. ಆದರೆ ಎಚ್ಡಿಆರ್ನಲ್ಲಿ ಪ್ರತಿ ಆಬ್ಜೆಕ್ಟ್ ವಿಭಿನ್ನ ಎಕ್ಸ್ಪೋಷರ್ನಲ್ಲಿ ಶೂಟ್ ಮಾಡಲಾಗುತ್ತದೆ. ಅಂತಿಮವಾಗಿ ಅವುಗಳೆಲ್ಲವನ್ನೂ ಕೂಡಿಸಿ ಅಂತಿಮ ಫೋಟೊವನ್ನು ಸಿದ್ಧಪಡಿಸುತ್ತೇವೆ. ಆಗ ಎಚ್ಡಿಆರ್ ಫೋಟೊಗ್ರಫಿಯಾಗುತ್ತದೆ’ ಎನ್ನುತ್ತಾರೆ ಶಂಕರ್.<br /> <br /> ಶಂಕರ್ ಅವರು 20 ಬಾರಿ ಹಂಪಿಗೆ ಹೋಗಿ ಛಾಯಾಗ್ರಹಣ ಮಾಡಿದ್ದಾರೆ. ಕಳೆದ ತಿಂಗಳು ಆಗ್ರಾಗೆ ಹೋಗಿ ತಾಜ್ಮಹಲ್ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಸೂರ್ಯ ಮುಳುಗುವ ವೇಳೆ ತಾಜ್ಮಹಲ್ ಎದುರಿಗೆ ಮೇಕೆಗಳೊಂದಿಗೆ ಮನೆಗೆ ಹಿಂತಿರುಗುತ್ತಿರುವ ಮಹಿಳೆಯ ಚಿತ್ರ ಕಲಾತ್ಮಕವಾಗಿದೆ.<br /> <br /> ಇನ್ನು ಹಂಪಿಯ ಲೋಟಸ್ ಟೆಂಪಲ್, ವಿಠ್ಠಲ ದೇವಸ್ಥಾನ, ಹಜರಾಮ ದೇವಸ್ಥಾನ, ಕಲ್ಲಿನ ರಥ, ಆನೆ ಸಾಲು ಮಂಟಪ, ಕಮಲ ಮಹಲ್, ತಮಿಳು ನಾಡಿನ ಮಹಾಬಲೀಪುರಂ ದೇವಾಲಯ... ಹೀಗೆ ಒಂದೊಂದು ದೇವಾಲಯ, ಸ್ಮಾರಕಗಳು ಛಾಯಾಚಿತ್ರಗಳ ಮೂಲಕ ಕಲಾಕೃತಿಗಳಾಗಿವೆ.<br /> <br /> ‘ಆರ್ಕಿಟಕ್ಚರಲ್ ಫೋಟೊಗ್ರಫಿ ಕಲಿಕೆಗೆ ತಾಳ್ಮೆ ಬೇಕು, ಒಂದು ಸ್ಥಳದ ಫೋಟೊಗ್ರಫಿ ಮಾಡುವಾಗ ಮೊದಲು ಅದರ ಇತಿಹಾಸ, ತಿಳಿದುಕೊಳ್ಳಬೇಕು, ಈಗಾಗಲೇ ತೆಗೆದ ಚಿತ್ರಕ್ಕಿಂತ ಭಿನ್ನವಾಗಿ ತೆಗೆಯಬೇಕು ಹಾಗೂ ಯೋಚಿಸಬೇಕು’ ಎನ್ನುತ್ತಾರೆ ಅವರು.<br /> <br /> ಶಂಕರ್ ಛಾಯಾಗ್ರಹಣವನ್ನಷ್ಟೇ ಮಾಡದೇ ಚಿತ್ರಗಳನ್ನೂ ರಚಿಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಪೇಂಟಿಂಗ್ ಮಾಡುತ್ತಿರುವ ಇವರು ಮೈಸೂರಿನ ಲಲಿತಕಲಾ ಮಹಾಸಂಸ್ಥಾನದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಮಾಡಿದ್ದಾರೆ. ಪ್ಯಾಲೆಟ್ ನೈಫ್ ಮತ್ತು ಜಲವರ್ಣ ಚಿತ್ರ ರಚಿಸುವುದು ಇವರ ವಿಶೇಷ.<br /> <br /> ‘ಕ್ಯಾಮೆರಾವನ್ನು ಬ್ರಶ್ ಆಗಿ, ಲೈಟ್ ಅನ್ನು ಪೇಂಟ್ ಆಗಿ ಬಳಸಿಕೊಂಡು ಬರೆಯುವ ಚಿತ್ರವೇ ಫೋಟೊ. ಒಂದೊಂದು ಫೋಟೊಗಳು ಕಲಾಕೃತಿಗಳಿಗೆ ಸಮನಾಗಿರುತ್ತವೆ. ಕೆಲವೊಮ್ಮೆ ನಾನು ತೆಗೆದ ಛಾಯಾಚಿತ್ರಗಳು ಪೇಂಟಿಂಗ್ಗೆ ಸ್ಫೂರ್ತಿಯಾಗಿವೆ’ ಎಂದು ಛಾಯಾಗ್ರಹಣ ಮಹತ್ವ ವಿವರಿಸುತ್ತಾರೆ ಶಂಕರ್.<br /> <br /> <strong>ಹಂಪಿ ಕಿರುಚಿತ್ರ<br /> ಹಂ</strong>ಪಿ ಹಾಳಾಗದೇ ಉಳಿದಿದ್ದರೆ ಈಗ ಹೇಗಿರುತ್ತಿತ್ತು ಎಂಬ ವಿಷಯವನ್ನು ಇಟ್ಟುಕೊಂಡು ಕಿರುಚಿತ್ರವನ್ನು ಮಾಡುತ್ತಿದ್ದಾರೆ ಶಂಕರ್. ಈಗಾಗಲೇ ಚಿತ್ರೀಕರಣ ಕೆಲಸ ಆರಂಭಿಸಿರುವ ಇವರು, ಕಥೆ, ನಿರ್ದೇಶನ ಹಾಗೂ ಸಿನಿಮಾಟೊಗ್ರಫಿಯನ್ನೂ ಮಾಡಿದ್ದಾರೆ.<br /> <br /> ಹೆಬ್ಬಾಳದಲ್ಲಿರುವ ದೃಷ್ಟಿ ಫೋಟೊಗ್ರಫಿ ಶಾಲೆಯಲ್ಲಿ ಶಂಕರ್ ಆರು ತಿಂಗಳ ಕೋರ್ಸ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಗೌತಮ್ ಬಸಕ್ ಇವರ ಗುರು. ಗೌತಮ್ ಅವರು 35 ವರ್ಷಗಳಿಂದ ಫೋಟೊಗ್ರಫಿ ಪಾಠ ಮಾಡುತ್ತಿದ್ದಾರೆ.<br /> <br /> ಎಂ.ಜಿ.ರಸ್ತೆಯಲ್ಲಿ ಶಂಕರ್ ‘ಮೈಂಡ್ಬ್ಲ್ಯೂ’ ಎಂಬ ಕಂಪೆನಿಯನ್ನು ಆರಂಭಿಸಿ, ಪ್ರೊಡಕ್ಟ್ ಹಾಗೂ ಆರ್ಕಿಟಕ್ಚರಲ್ ಫೋಟೊಗ್ರಫಿಯನ್ನು ಮಾಡುತ್ತಿದ್ದಾರೆ.<br /> <em><strong>ಮಾಹಿತಿಗೆ: </strong> 97427 77766</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>