<p><strong>ನವದೆಹಲಿ (ಪಿಟಿಐ): </strong>ಸೌದಿ ಅರೇಬಿಯಾದಲ್ಲಿ ನೌಕರಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ 10 ಸಾವಿರಕ್ಕೂ ಅಧಿಕ ಭಾರತೀಯರನ್ನು ಶೀಘ್ರದಲ್ಲೇ ತವರಿಗೆ ಕರೆತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.<br /> <br /> ಭಾರತೀಯರನ್ನು ಕರೆತರುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳಲು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರನ್ನು ಸೌದಿಗೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.<br /> <br /> ಸೌದಿಯಲ್ಲಿ ನೌಕರಿ ಕಳೆದುಕೊಂಡ ಭಾರತೀಯರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರಣ ಸುಷ್ಮಾ ವಿವರಣೆ ನೀಡಿದ್ದಾರೆ.<br /> <br /> ‘ಭಾರತೀಯರಿಗೆ ಆಹಾರ ಒದಗಿಸಲು ಸೌದಿಯ ಭಾರತೀಯ ರಾಯಭಾರ ಕಚೇರಿಯು ಐದು ಕೇಂದ್ರಗಳನ್ನು ತೆರೆದಿದೆ. ಅಲ್ಲಿನ ಪರಿಸ್ಥಿತಿಯನ್ನು ಪ್ರತಿ ಗಂಟೆಗೊಮ್ಮೆ ಸ್ವತಃ ಅವಲೋಕಿ ಸುತ್ತಿದ್ದೇನೆ’ ಎಂದು ಸುಷ್ಮಾ ತಿಳಿಸಿದ್ದಾರೆ.<br /> <br /> ‘ಸೌದಿಯಲ್ಲಿ ಭಾರತದ ಯಾರೂ ಹಸಿವಿನಿಂದ ನರಳುತ್ತಿಲ್ಲ. ಸಂಸತ್ತಿನ ಮೂಲಕ ಈ ಭರವಸೆಯನ್ನು ದೇಶಕ್ಕೆ ನೀಡುತ್ತಿದ್ದೇನೆ. ನೌಕರಿ ಕಳೆದುಕೊಂಡ ಎಲ್ಲರನ್ನೂ ದೇಶಕ್ಕೆ ಕರೆತರಲಾಗುವುದು’ ಎಂದಿದ್ದಾರೆ.<br /> <br /> ಈ ನೌಕರರನ್ನು ವಾಪಸ್ ಕರೆತರುವ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಮತ್ತು ಕಾರ್ಮಿಕ ಸಚಿವಾಲಯದ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.<br /> <br /> ‘ಸೌದಿ ಕಾನೂನಿನಂತೆ ವಾಪಸಾತಿ ವೀಸಾ ನೀಡಬೇಕಾದರೆ ಮಾಲೀಕರ ನಿರಾಕ್ಷೇಪಣಾ ಪತ್ರ ಅಗತ್ಯ. ಭಾರತೀಯರು ಕೆಲಸ ಮಾಡುತ್ತಿದ್ದ ಕೆಲ ಕಂಪೆನಿಗಳು ಬಾಗಿಲು ಮುಚ್ಚಿದ್ದು, ಅವುಗಳ ಮಾಲೀಕರು ದೇಶ ಬಿಟ್ಟು ತೆರಳಿದ್ದಾರೆ. ಆದ್ದರಿಂದ ಭಾರತೀಯ ನೌಕರರು ವೀಸಾ ಲಭಿಸದೆ ತೊಂದರೆಯಲ್ಲಿದ್ದಾರೆ’ ಎಂದು ವಿವರಿಸಿದ್ದಾರೆ.<br /> <br /> ಭಾರತೀಯ ನೌಕರರಿಗೆ ವಾಪಸಾತಿ ವೀಸಾ ನೀಡುವಂತೆ ಮತ್ತು ಬಾಕಿಯಿ ರುವ ವೇತನ ನೀಡಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಸೌದಿ ಅರೇಬಿಯಾ ಸರ್ಕಾ ರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.<br /> <br /> ಸುಷ್ಮಾ ಅವರು ಲೋಕಸಭೆಯಲ್ಲಿ ಸ್ಪಷ್ಟೀಕರಣ ನೀಡಿದ ಬಳಿಕವೂ ವಿರೋಧ ಪಕ್ಷಗಳ ಕೆಲವು ಸದಸ್ಯರು ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟರು. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ‘ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಸುಷ್ಮಾ ತಮ್ಮಿಂದಾದ ಎಲ್ಲ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಲೇಬೇಕು. ಬೇರೆ ಯಾರೂ ಈ ರೀತಿ ಕೆಲಸ ಮಾಡುತ್ತಿರಲಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸೌದಿ ಅರೇಬಿಯಾದಲ್ಲಿ ನೌಕರಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ 10 ಸಾವಿರಕ್ಕೂ ಅಧಿಕ ಭಾರತೀಯರನ್ನು ಶೀಘ್ರದಲ್ಲೇ ತವರಿಗೆ ಕರೆತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.<br /> <br /> ಭಾರತೀಯರನ್ನು ಕರೆತರುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ನೋಡಿ ಕೊಳ್ಳಲು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರನ್ನು ಸೌದಿಗೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.<br /> <br /> ಸೌದಿಯಲ್ಲಿ ನೌಕರಿ ಕಳೆದುಕೊಂಡ ಭಾರತೀಯರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರಣ ಸುಷ್ಮಾ ವಿವರಣೆ ನೀಡಿದ್ದಾರೆ.<br /> <br /> ‘ಭಾರತೀಯರಿಗೆ ಆಹಾರ ಒದಗಿಸಲು ಸೌದಿಯ ಭಾರತೀಯ ರಾಯಭಾರ ಕಚೇರಿಯು ಐದು ಕೇಂದ್ರಗಳನ್ನು ತೆರೆದಿದೆ. ಅಲ್ಲಿನ ಪರಿಸ್ಥಿತಿಯನ್ನು ಪ್ರತಿ ಗಂಟೆಗೊಮ್ಮೆ ಸ್ವತಃ ಅವಲೋಕಿ ಸುತ್ತಿದ್ದೇನೆ’ ಎಂದು ಸುಷ್ಮಾ ತಿಳಿಸಿದ್ದಾರೆ.<br /> <br /> ‘ಸೌದಿಯಲ್ಲಿ ಭಾರತದ ಯಾರೂ ಹಸಿವಿನಿಂದ ನರಳುತ್ತಿಲ್ಲ. ಸಂಸತ್ತಿನ ಮೂಲಕ ಈ ಭರವಸೆಯನ್ನು ದೇಶಕ್ಕೆ ನೀಡುತ್ತಿದ್ದೇನೆ. ನೌಕರಿ ಕಳೆದುಕೊಂಡ ಎಲ್ಲರನ್ನೂ ದೇಶಕ್ಕೆ ಕರೆತರಲಾಗುವುದು’ ಎಂದಿದ್ದಾರೆ.<br /> <br /> ಈ ನೌಕರರನ್ನು ವಾಪಸ್ ಕರೆತರುವ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಮತ್ತು ಕಾರ್ಮಿಕ ಸಚಿವಾಲಯದ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.<br /> <br /> ‘ಸೌದಿ ಕಾನೂನಿನಂತೆ ವಾಪಸಾತಿ ವೀಸಾ ನೀಡಬೇಕಾದರೆ ಮಾಲೀಕರ ನಿರಾಕ್ಷೇಪಣಾ ಪತ್ರ ಅಗತ್ಯ. ಭಾರತೀಯರು ಕೆಲಸ ಮಾಡುತ್ತಿದ್ದ ಕೆಲ ಕಂಪೆನಿಗಳು ಬಾಗಿಲು ಮುಚ್ಚಿದ್ದು, ಅವುಗಳ ಮಾಲೀಕರು ದೇಶ ಬಿಟ್ಟು ತೆರಳಿದ್ದಾರೆ. ಆದ್ದರಿಂದ ಭಾರತೀಯ ನೌಕರರು ವೀಸಾ ಲಭಿಸದೆ ತೊಂದರೆಯಲ್ಲಿದ್ದಾರೆ’ ಎಂದು ವಿವರಿಸಿದ್ದಾರೆ.<br /> <br /> ಭಾರತೀಯ ನೌಕರರಿಗೆ ವಾಪಸಾತಿ ವೀಸಾ ನೀಡುವಂತೆ ಮತ್ತು ಬಾಕಿಯಿ ರುವ ವೇತನ ನೀಡಲು ಸೂಕ್ತ ಕ್ರಮ ಕೈ ಗೊಳ್ಳುವಂತೆ ಸೌದಿ ಅರೇಬಿಯಾ ಸರ್ಕಾ ರಕ್ಕೆ ಮನವಿ ಮಾಡಿದ್ದೇವೆ ಎಂದಿದ್ದಾರೆ.<br /> <br /> ಸುಷ್ಮಾ ಅವರು ಲೋಕಸಭೆಯಲ್ಲಿ ಸ್ಪಷ್ಟೀಕರಣ ನೀಡಿದ ಬಳಿಕವೂ ವಿರೋಧ ಪಕ್ಷಗಳ ಕೆಲವು ಸದಸ್ಯರು ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟರು. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ‘ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಸುಷ್ಮಾ ತಮ್ಮಿಂದಾದ ಎಲ್ಲ ಕೆಲಸ ಮಾಡಿದ್ದಾರೆ. ಅದನ್ನು ಮೆಚ್ಚಲೇಬೇಕು. ಬೇರೆ ಯಾರೂ ಈ ರೀತಿ ಕೆಲಸ ಮಾಡುತ್ತಿರಲಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>