<p><strong>ಬೆಂಗಳೂರು: ‘</strong>ಜನಪ್ರತಿನಿಧಿಗಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಸಾಹಿತಿಗಳ ಕೆಲಸವಾಗಬೇಕು. ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆಯಾಗಬೇಕು’ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.<br /> <br /> ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಯಾವುದೇ ಒಂದು ಪಕ್ಷವನ್ನು ಪ್ರತಿನಿಧಿಸಿ, ಅವರ ಪರ ಪ್ರಚಾರ ಮಾಡುವುದು ಸಾಹಿತಿಗಳ ಕೆಲಸವಲ್ಲ. ಸಾಹಿತ್ಯದ ಕೆಲಸ ಯಾವುದೇ ಚುನಾವಣೆಯನ್ನು ಅವಲಂಬಿಸಿಲ್ಲ. ಯಾವ ಪಕ್ಷವು ಆಡಳಿತಕ್ಕೆ ಬಂದರೂ ನಮಗೆ ಮುಖ್ಯವಲ್ಲ. ದೇಶದ ಸಮಗ್ರತೆ, ಘನತೆಯನ್ನು ಕಾಯಬೇಕು ಎನ್ನುವುದೇ ಅಪೇಕ್ಷೆಯಾಗಿದೆ’ ಎಂದು ಹೇಳಿದರು.<br /> <br /> ‘ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಮಾತೃಸಂಸ್ಥೆಯಾಗಿದೆ. ಕೇವಲ 100– 200 ಸದಸ್ಯರಿಂದ ಆರಂಭವಾಗಿದ್ದ ಸಂಸ್ಥೆ ಇಂದು 2 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದರು.<br /> <br /> ‘ಸಾಹಿತ್ಯ ಪರಿಷತ್ತಿನ 100 ರ ವರ್ಷಾಚರಣೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭಾಷಣ, ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಬಾರದು. ಇದೊಂದು ಸಾರ್ವಜನಿಕ ಹಬ್ಬವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸಮಾಜ ಶಿಕ್ಷಣ ಸಂಸ್ಥೆಯಾಗಬೇಕು’ ಎಂದು ಹೇಳಿದರು.<br /> <br /> ‘ಸರ್ಕಾರ ಸಂಸ್ಥೆಗೆ ನೀಡುವುದು ದಾನವಲ್ಲ, ನಾವು ಪಡೆಯುವುದು ಭಿಕ್ಷೆಯಲ್ಲ. ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿಗೆ ನೆರವು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ’ ಎಂದರು.<br /> <br /> ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ‘ಸಂಸ್ಥೆಯ ಒಂದೊಂದು ಕಣವು ಸಾಹಿತಿಗಳ ತ್ಯಾಗದ ಮತ್ತು ನಿರಂತರ ಶ್ರಮದ ಪ್ರತೀಕ. ಹಿಂದೆ ಸಾಹಿತ್ಯ ಪರಿಷತ್ತು ಸಾಹಿತಿಗಳ ಕಾಶಿಯಾಗಿತ್ತು. ಇದು ಕೇವಲ ಸಂಸ್ಥೆಯಲ್ಲ. ಸಾಹಿತಿಗಳ ಜೀವಂತ ಸಂಗಮವಾಗಿತ್ತು’ ಎಂದು ನೆನೆದರು.<br /> <br /> <strong>ಸುತ್ತೋಲೆ ಹೊರಡಿಸಿ</strong><br /> ಸಾಹಿತ್ಯ ಪರಿಷತ್ತಿನ 100ರ ವರ್ಷಾ ಚರಣೆಯನ್ನು ಪ್ರಾಥಮಿಕ ಶಾಲೆಗಳಿಂದ ಸ್ನಾತಕೋತ್ತರ ಕಾಲೇಜು ಗಳವರೆಗೂ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು.</p>.<p><strong>– ಗೊ.ರು.ಚನ್ನಬಸಪ್ಪ, ಅಧ್ಯಕ್ಷ, ಕರ್ನಾಟಕ ಶರಣ ಸಾಹಿತ್ಯ ಪರಿಷತ್.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಜನಪ್ರತಿನಿಧಿಗಳು ದಾರಿ ತಪ್ಪದಂತೆ ನೋಡಿಕೊಳ್ಳುವುದು ಸಾಹಿತಿಗಳ ಕೆಲಸವಾಗಬೇಕು. ಸಭ್ಯ ಸಮಾಜದ ನಿರ್ಮಾಣ ಸಾಹಿತಿಗಳ ಆದ್ಯತೆಯಾಗಬೇಕು’ ಎಂದು ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.<br /> <br /> ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಷತ್ತು–100’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.<br /> <br /> ‘ಯಾವುದೇ ಒಂದು ಪಕ್ಷವನ್ನು ಪ್ರತಿನಿಧಿಸಿ, ಅವರ ಪರ ಪ್ರಚಾರ ಮಾಡುವುದು ಸಾಹಿತಿಗಳ ಕೆಲಸವಲ್ಲ. ಸಾಹಿತ್ಯದ ಕೆಲಸ ಯಾವುದೇ ಚುನಾವಣೆಯನ್ನು ಅವಲಂಬಿಸಿಲ್ಲ. ಯಾವ ಪಕ್ಷವು ಆಡಳಿತಕ್ಕೆ ಬಂದರೂ ನಮಗೆ ಮುಖ್ಯವಲ್ಲ. ದೇಶದ ಸಮಗ್ರತೆ, ಘನತೆಯನ್ನು ಕಾಯಬೇಕು ಎನ್ನುವುದೇ ಅಪೇಕ್ಷೆಯಾಗಿದೆ’ ಎಂದು ಹೇಳಿದರು.<br /> <br /> ‘ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಮಾತೃಸಂಸ್ಥೆಯಾಗಿದೆ. ಕೇವಲ 100– 200 ಸದಸ್ಯರಿಂದ ಆರಂಭವಾಗಿದ್ದ ಸಂಸ್ಥೆ ಇಂದು 2 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದರು.<br /> <br /> ‘ಸಾಹಿತ್ಯ ಪರಿಷತ್ತಿನ 100 ರ ವರ್ಷಾಚರಣೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಭಾಷಣ, ವಿಚಾರ ಸಂಕಿರಣಕ್ಕೆ ಮಾತ್ರ ಸೀಮಿತವಾಗಬಾರದು. ಇದೊಂದು ಸಾರ್ವಜನಿಕ ಹಬ್ಬವಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸಮಾಜ ಶಿಕ್ಷಣ ಸಂಸ್ಥೆಯಾಗಬೇಕು’ ಎಂದು ಹೇಳಿದರು.<br /> <br /> ‘ಸರ್ಕಾರ ಸಂಸ್ಥೆಗೆ ನೀಡುವುದು ದಾನವಲ್ಲ, ನಾವು ಪಡೆಯುವುದು ಭಿಕ್ಷೆಯಲ್ಲ. ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿಗೆ ನೆರವು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ’ ಎಂದರು.<br /> <br /> ವಿಮರ್ಶಕ ಪ್ರೊ.ಜಿ.ಅಶ್ವತ್ಥನಾರಾಯಣ, ‘ಸಂಸ್ಥೆಯ ಒಂದೊಂದು ಕಣವು ಸಾಹಿತಿಗಳ ತ್ಯಾಗದ ಮತ್ತು ನಿರಂತರ ಶ್ರಮದ ಪ್ರತೀಕ. ಹಿಂದೆ ಸಾಹಿತ್ಯ ಪರಿಷತ್ತು ಸಾಹಿತಿಗಳ ಕಾಶಿಯಾಗಿತ್ತು. ಇದು ಕೇವಲ ಸಂಸ್ಥೆಯಲ್ಲ. ಸಾಹಿತಿಗಳ ಜೀವಂತ ಸಂಗಮವಾಗಿತ್ತು’ ಎಂದು ನೆನೆದರು.<br /> <br /> <strong>ಸುತ್ತೋಲೆ ಹೊರಡಿಸಿ</strong><br /> ಸಾಹಿತ್ಯ ಪರಿಷತ್ತಿನ 100ರ ವರ್ಷಾ ಚರಣೆಯನ್ನು ಪ್ರಾಥಮಿಕ ಶಾಲೆಗಳಿಂದ ಸ್ನಾತಕೋತ್ತರ ಕಾಲೇಜು ಗಳವರೆಗೂ ಆಚರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು.</p>.<p><strong>– ಗೊ.ರು.ಚನ್ನಬಸಪ್ಪ, ಅಧ್ಯಕ್ಷ, ಕರ್ನಾಟಕ ಶರಣ ಸಾಹಿತ್ಯ ಪರಿಷತ್.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>