<p><strong>ಬೆಂಗಳೂರು:</strong> ‘ಗುರು ಮತ್ತು ಶಿಷ್ಯರ ನಡುವೆ ಇರಬೇಕಾದ ಸ್ನೇಹ ಸಂಬಂಧದ ಪರಂಪರೆ ಕರಗುತ್ತಿದೆ’ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.<br /> <br /> ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಪ್ರೊ.ಬಿ.ಆರ್.ರಾಮಚಂದ್ರೇಗೌಡ ಟ್ರಸ್ಟ್ ಸಹಯೋಗದೊಂದಿಗೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ‘ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಕರಿದ್ದರೆ ಮಾತ್ರ ಶಿಷ್ಯರ ಭವಿಷ್ಯ ಉದ್ಧಾರವಾಗಲು ಸಾಧ್ಯ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ’ ಎಂದು ಹೇಳಿದರು.<br /> ‘ಸರ್ಕಾರಿ ಕಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೊ.ರಾಮಚಂದ್ರಗೌಡ ಅವರು ನನಗೆ ಶಿಕ್ಷಕರಾಗದಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪಿಸಿಕೊಂಡರು.<br /> <br /> ‘ಗುರಿ, ಆಸಕ್ತಿ ಹಾಗೂ ಅಧ್ಯಯನದ ಜತೆಯಲ್ಲಿ ಗುರುವಿನ ಆರ್ಶೀವಾದವು ಮುಖ್ಯವಾಗುತ್ತದೆ. ಹೊಸ ಪೀಳಿಗೆಯಲ್ಲಿ ಗುರುವಿನೆಡೆಗೆ ಇರಬೇಕಾದ ಭಕ್ತಿ ಭಾವ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ‘ಕನ್ನಡ ಹಾಗೂ ಬದುಕು ಕಟ್ಟುವ ಕಾಯಕವನ್ನು ರಾಮಚಂದ್ರೇಗೌಡರಿಂದ ಕಲಿತೆ. ಅವರು ಹೃದಯಶ್ರೀಮಂತಿಕೆಯಿಂದಲೇ ನೂರಾರು ಶಿಷ್ಯಪಡೆಯನ್ನು ಅವರು ಆಕರ್ಷಿಸಿದ್ದರು’ ಎಂದು ನೆನಪಿಸಿಕೊಂಡರು.<br /> <br /> ರಾಮಕೃಷ್ಣ –ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಗುರು ಮತ್ತು ಶಿಷ್ಯರ ನಡುವೆ ಇರಬೇಕಾದ ಸ್ನೇಹ ಸಂಬಂಧದ ಪರಂಪರೆ ಕರಗುತ್ತಿದೆ’ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.<br /> <br /> ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಪ್ರೊ.ಬಿ.ಆರ್.ರಾಮಚಂದ್ರೇಗೌಡ ಟ್ರಸ್ಟ್ ಸಹಯೋಗದೊಂದಿಗೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.<br /> <br /> ‘ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಕರಿದ್ದರೆ ಮಾತ್ರ ಶಿಷ್ಯರ ಭವಿಷ್ಯ ಉದ್ಧಾರವಾಗಲು ಸಾಧ್ಯ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ’ ಎಂದು ಹೇಳಿದರು.<br /> ‘ಸರ್ಕಾರಿ ಕಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೊ.ರಾಮಚಂದ್ರಗೌಡ ಅವರು ನನಗೆ ಶಿಕ್ಷಕರಾಗದಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪಿಸಿಕೊಂಡರು.<br /> <br /> ‘ಗುರಿ, ಆಸಕ್ತಿ ಹಾಗೂ ಅಧ್ಯಯನದ ಜತೆಯಲ್ಲಿ ಗುರುವಿನ ಆರ್ಶೀವಾದವು ಮುಖ್ಯವಾಗುತ್ತದೆ. ಹೊಸ ಪೀಳಿಗೆಯಲ್ಲಿ ಗುರುವಿನೆಡೆಗೆ ಇರಬೇಕಾದ ಭಕ್ತಿ ಭಾವ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ‘ಕನ್ನಡ ಹಾಗೂ ಬದುಕು ಕಟ್ಟುವ ಕಾಯಕವನ್ನು ರಾಮಚಂದ್ರೇಗೌಡರಿಂದ ಕಲಿತೆ. ಅವರು ಹೃದಯಶ್ರೀಮಂತಿಕೆಯಿಂದಲೇ ನೂರಾರು ಶಿಷ್ಯಪಡೆಯನ್ನು ಅವರು ಆಕರ್ಷಿಸಿದ್ದರು’ ಎಂದು ನೆನಪಿಸಿಕೊಂಡರು.<br /> <br /> ರಾಮಕೃಷ್ಣ –ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>