<p><strong>ದಾವಣಗೆರೆ</strong>: ಲೋಕಸಭಾ ಚುನಾವಣೆಯ ‘ಸ್ವೀಪ್’ ಚಟುವಟಿಕೆಗೆ ಭಾರತ ನಿರ್ಮಾಣ ಸೇವಕರನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ಮಾಹಿತಿ ನೀಡಿದರು.<br /> <br /> ತಾಲ್ಲೂಕಿನ ದೊಡ್ಡಬಾತಿಯ ತಪೋವನದಲ್ಲಿ ಬುಧವಾರ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.<br /> ಸ್ಥಳೀಯ ಸಂಯೋಜಕರ ಸಹಕಾರ ಪಡೆದು, ಮತದಾನ ಜಾಗೃತಿ ಕಾರ್ಯದಲ್ಲಿ ನಿಮ್ಮ ಅಮೂಲ್ಯ ಸೇವೆ ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಮತದಾನ ಎರಡು ದಿನ ಇರುವ ಹಾಗೆ ಮತದಾರರು ಆಮಿಷಕ್ಕೆ ಒಳಗಾಗುವುದು ಹೆಚ್ಚಾಗಿದೆ. ಜಾತಿ, ಮತ, ಪಂಥದ ಮೇಲೆ ಮತದಾನ ನಡೆಯುತ್ತಿದೆ. ಇದು ತಪ್ಪಬೇಕು ಎಂದು ಮನವಿ ಮಾಡಿದರು.<br /> <br /> ‘ಚುನಾವಣೆಯ ವೇಳೆ ಹಳ್ಳಿಗಳು ಕುಡುಕರ ತಾಣಗಳಾಗುತ್ತವೆ. ನಮ್ಮದು ಅತಿಯಾದ ಪ್ರಜಾಪ್ರಭುತ್ವ ಆಗಿದೆ. ಅದಕ್ಕೆ ಅರಿವಿನ ಕೊರತೆ ಕಾರಣ. ಮತದಾರರಿಗೆ ನೀವು ಜಾಗೃತಿ ಮೂಡಿಸಿ ಸಮುದಾಯ ಏಳಿಗೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.<br /> <br /> ಯುವಜನರು ಸದೃಢ ಭಾರತ ನಿರ್ಮಾಣ ಕಾರ್ಯದಲ್ಲಿ ಸಕ್ರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಾರತ ನಿರ್ಮಾಣ ಸೇವಕರು ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಭಾರತದಲ್ಲಿ ಶೇ 40ರಷ್ಟು ಯುವಕರೇ ಇದ್ದಾರೆ. ಈ ದೇಶದ ದೊಡ್ಡಆಸ್ತಿ ಎಂದರೆ ಯುವ ಜನರು. ಅವರೇ ಅಮೂಲ್ಯ ಸಂಪತ್ತು. ಯುವಕರ– ಯುವತಿಯ ಸೇವೆ ಬಳಸಿಕೊಂಡು ಅಭಿವೃದ್ಧಿಯತ್ತ ದೇಶ ಮುನ್ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.<br /> <br /> ಅಭಿವೃದ್ಧಿ ಹಾಗೂ ರಚನಾತ್ಮಕ ಕಾರ್ಯಗಳು ಸಮಗ್ರವಾಗಿ ನಡೆಯುತ್ತಿಲ್ಲ. ಅದಕ್ಕೆ ಅಡ್ಡಗಾಲು ಹಾಕುವವರೇ ಹೆಚ್ಚಾಗಿದ್ದಾರೆ. ಅಡ್ಡಗಾಲು ಹಾಕುವವರ ದಮನ ಮಾಡುವ ಕೆಲಸಗಳು ಆಗಬೇಕು. ಈ ದೇಶದಲ್ಲಿ ಶೇ 65ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿಯೇ ವಾಸ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮವರ್ಗದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಅವುಗಳ ಸಮರ್ಪಕ ಅನುಷ್ಠಾನ ಕಷ್ಟವಾಗುತ್ತಿದೆ; ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ, ಸಾಹಿತಿ ಪ್ರೊ.ಬಿ.ವಿ.ವೀರಭದ್ರಪ್ಪ, ವಿಲ್ಫ್ರೆಡ್ ಡಿಸೋಜ, ಜಿಲ್ಲಾ ಪಂಚಾಯ್ತಿ ಯೋಜಾನಾಧಿಕಾರಿ ವಿಶ್ವನಾಥ್ ಮುದ್ದಜಿ ಹಾಜರಿದ್ದರು.<br /> <br /> <strong>ಜಿಲ್ಲಾಧಿಕಾರಿಗೇ ಮಾಹಿತಿ ಇರಲಿಲ್ಲವಂತೆ!<br /> ದಾವಣಗೆರೆ: </strong>ದೊಡ್ಡಬಾತಿಯ ತಪೋವನದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದ ಮಾಹಿತಿ ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ಗೆ ಇರಲಿಲ್ಲವಂತೆ..! ಹಾಗಂತ ಅವರೇ ಅದನ್ನು ಒಪ್ಪಿಕೊಂಡರು.</p>.<p>ಇದೊಂದು ಎಂಜಿನಿಯರ್ಗಳ ಕಾರ್ಯಕ್ರಮ ಎಂದುಕೊಂಡು ಬಂದೆ. ಆಧುನಿಕ ಶಿಲ್ಪಿಗಳು ಎನಿಸಿಕೊಂಡ ಅವರು ಇತ್ತೀಚೆಗೆ ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಬಹುಬೇಗ ಬೀಳುವ ಹಂತಕ್ಕೆ ತಲುಪುತ್ತಿವೆ. ಅವರಿಗೆ ಸ್ವಲ್ಪ ಬುದ್ಧಿ ಹೇಳೋಣ ಎಂದುಕೊಂಡು ಬಂದೆ. ಆದರೆ, ಕಾರ್ಯಕ್ರಮವೇ ಬೇರೆ ಆಗಿದೆಯಲ್ಲ? ಎಂದು ಅಚ್ಚರಿ ಮೂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಲೋಕಸಭಾ ಚುನಾವಣೆಯ ‘ಸ್ವೀಪ್’ ಚಟುವಟಿಕೆಗೆ ಭಾರತ ನಿರ್ಮಾಣ ಸೇವಕರನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ಮಾಹಿತಿ ನೀಡಿದರು.<br /> <br /> ತಾಲ್ಲೂಕಿನ ದೊಡ್ಡಬಾತಿಯ ತಪೋವನದಲ್ಲಿ ಬುಧವಾರ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.<br /> ಸ್ಥಳೀಯ ಸಂಯೋಜಕರ ಸಹಕಾರ ಪಡೆದು, ಮತದಾನ ಜಾಗೃತಿ ಕಾರ್ಯದಲ್ಲಿ ನಿಮ್ಮ ಅಮೂಲ್ಯ ಸೇವೆ ಬಳಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಮತದಾನ ಎರಡು ದಿನ ಇರುವ ಹಾಗೆ ಮತದಾರರು ಆಮಿಷಕ್ಕೆ ಒಳಗಾಗುವುದು ಹೆಚ್ಚಾಗಿದೆ. ಜಾತಿ, ಮತ, ಪಂಥದ ಮೇಲೆ ಮತದಾನ ನಡೆಯುತ್ತಿದೆ. ಇದು ತಪ್ಪಬೇಕು ಎಂದು ಮನವಿ ಮಾಡಿದರು.<br /> <br /> ‘ಚುನಾವಣೆಯ ವೇಳೆ ಹಳ್ಳಿಗಳು ಕುಡುಕರ ತಾಣಗಳಾಗುತ್ತವೆ. ನಮ್ಮದು ಅತಿಯಾದ ಪ್ರಜಾಪ್ರಭುತ್ವ ಆಗಿದೆ. ಅದಕ್ಕೆ ಅರಿವಿನ ಕೊರತೆ ಕಾರಣ. ಮತದಾರರಿಗೆ ನೀವು ಜಾಗೃತಿ ಮೂಡಿಸಿ ಸಮುದಾಯ ಏಳಿಗೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.<br /> <br /> ಯುವಜನರು ಸದೃಢ ಭಾರತ ನಿರ್ಮಾಣ ಕಾರ್ಯದಲ್ಲಿ ಸಕ್ರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಾರತ ನಿರ್ಮಾಣ ಸೇವಕರು ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಭಾರತದಲ್ಲಿ ಶೇ 40ರಷ್ಟು ಯುವಕರೇ ಇದ್ದಾರೆ. ಈ ದೇಶದ ದೊಡ್ಡಆಸ್ತಿ ಎಂದರೆ ಯುವ ಜನರು. ಅವರೇ ಅಮೂಲ್ಯ ಸಂಪತ್ತು. ಯುವಕರ– ಯುವತಿಯ ಸೇವೆ ಬಳಸಿಕೊಂಡು ಅಭಿವೃದ್ಧಿಯತ್ತ ದೇಶ ಮುನ್ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.<br /> <br /> ಅಭಿವೃದ್ಧಿ ಹಾಗೂ ರಚನಾತ್ಮಕ ಕಾರ್ಯಗಳು ಸಮಗ್ರವಾಗಿ ನಡೆಯುತ್ತಿಲ್ಲ. ಅದಕ್ಕೆ ಅಡ್ಡಗಾಲು ಹಾಕುವವರೇ ಹೆಚ್ಚಾಗಿದ್ದಾರೆ. ಅಡ್ಡಗಾಲು ಹಾಕುವವರ ದಮನ ಮಾಡುವ ಕೆಲಸಗಳು ಆಗಬೇಕು. ಈ ದೇಶದಲ್ಲಿ ಶೇ 65ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿಯೇ ವಾಸ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮವರ್ಗದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಅವುಗಳ ಸಮರ್ಪಕ ಅನುಷ್ಠಾನ ಕಷ್ಟವಾಗುತ್ತಿದೆ; ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ, ಸಾಹಿತಿ ಪ್ರೊ.ಬಿ.ವಿ.ವೀರಭದ್ರಪ್ಪ, ವಿಲ್ಫ್ರೆಡ್ ಡಿಸೋಜ, ಜಿಲ್ಲಾ ಪಂಚಾಯ್ತಿ ಯೋಜಾನಾಧಿಕಾರಿ ವಿಶ್ವನಾಥ್ ಮುದ್ದಜಿ ಹಾಜರಿದ್ದರು.<br /> <br /> <strong>ಜಿಲ್ಲಾಧಿಕಾರಿಗೇ ಮಾಹಿತಿ ಇರಲಿಲ್ಲವಂತೆ!<br /> ದಾವಣಗೆರೆ: </strong>ದೊಡ್ಡಬಾತಿಯ ತಪೋವನದಲ್ಲಿ ನಡೆದ ಭಾರತ ನಿರ್ಮಾಣ ಸೇವಕರ ರಾಜ್ಯಮಟ್ಟದ ಚಿಂತನಾ ಕಾರ್ಯಾಗಾರದ ಮಾಹಿತಿ ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ಗೆ ಇರಲಿಲ್ಲವಂತೆ..! ಹಾಗಂತ ಅವರೇ ಅದನ್ನು ಒಪ್ಪಿಕೊಂಡರು.</p>.<p>ಇದೊಂದು ಎಂಜಿನಿಯರ್ಗಳ ಕಾರ್ಯಕ್ರಮ ಎಂದುಕೊಂಡು ಬಂದೆ. ಆಧುನಿಕ ಶಿಲ್ಪಿಗಳು ಎನಿಸಿಕೊಂಡ ಅವರು ಇತ್ತೀಚೆಗೆ ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಬಹುಬೇಗ ಬೀಳುವ ಹಂತಕ್ಕೆ ತಲುಪುತ್ತಿವೆ. ಅವರಿಗೆ ಸ್ವಲ್ಪ ಬುದ್ಧಿ ಹೇಳೋಣ ಎಂದುಕೊಂಡು ಬಂದೆ. ಆದರೆ, ಕಾರ್ಯಕ್ರಮವೇ ಬೇರೆ ಆಗಿದೆಯಲ್ಲ? ಎಂದು ಅಚ್ಚರಿ ಮೂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>