<p><strong>ಬೆಂಗಳೂರು:</strong> ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯ ಕರ್ತ ಅಣ್ಣಾ ಹಜಾರೆ ಅವರಿಗೆ ಸಮರ್ಪಿ ಸುವ ಉದ್ದೇಶದಿಂದ ಕಲಾವಿದರ ಬಳಗವೊಂದು ಇದೀಗ 11 ಅಡಿ ಎತ್ತರದ ವಿಶೇಷ ಪೆನ್ ರೂಪಿಸಿದ್ದಾರೆ.<br /> <br /> 8 ಅಂಗುಲ ದಪ್ಪ ಹಾಗೂ 12 ಕೆ.ಜಿ. ತೂಕವಿರುವ ಈ ಬೃಹತ್ ಲೇಖನಿಯನ್ನು ಜನಲೋಕಪಾಲ ಮಸೂದೆ ಅನು ಮೋದನೆಗೆ ಸಹಿ ಹಾಕಲು ಬಳಸಬೇಕು ಎಂಬುದು ಕಲಾವಿದರ ಬಯಕೆ. ಉಪಯೋಗ ಮಾಡಿದಂತಹ 1300 ಪೆನ್ನುಗಳು, ತ್ಯಾಜ್ಯ, ಪಿವಿಸಿ ಪೈಪ್, ವಿದ್ಯುತ್ ತಂತಿ, ಪ್ಲಾಸ್ಟಿಕ್, ಹರಿದ ವಾಹನದ ಸೀಟ್ ಕವರ್ ಬಳಸಿ ಈ ವಿಶೇಷ ಪೆನ್ ನಿರ್ಮಿಸಲಾಗಿದೆ.<br /> <br /> ನಗರದ ನಾಗವಾರ ವರ್ತುಲ ರಸ್ತೆಯ ಲುಂಬಿನಿ ಗಾರ್ಡನ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಡುವ ಣವಿರುವ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ನಲ್ಲಿ ಈ ವಿಶಿಷ್ಟ ಪೆನ್ ಆಕರ್ಷಣೀಯ. `ಆರ್ಟ್ ಮ್ಯಾನ್ಫೋ-2011~ ಮೇಳ ದಲ್ಲಿ ಅತಿದೊಡ್ಡ ಪೆನ್ ಗಮನ ಸೆಳೆಯಲಿದೆ. <br /> <br /> ಸೆ. 18ರವರೆಗೆ ಮೇಳ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಈ ಕಲಾ ಮೇಳದಲ್ಲಿ ವಿಸ್ಮಯಕಾರಿ ಕಲಾಕೃತಿಗಳು ನಾಗರಿಕ ರನ್ನು ಚಕಿತ ಗೊಳಿಸುತ್ತಿದ್ದು, ಅತಿ ದೊಡ್ಡ ಲೇಖನಿ ವಿಶೇಷ ಗಮನಸೆಳೆಯುತ್ತಿದೆ. <br /> <br /> ತ್ಯಾಜ್ಯ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಕಲಾವಿದರು ಆಧುನಿಕ ವಾಸ್ತು ಶಿಲ್ಪ ಕಲೆಗೆ ಹೊಸ ಆಯಾಮ ನೀಡಿದ್ದಾರೆ. ಜನಲೋಕಪಾಲ್ ಮಸೂದೆ ಅನು ಮೋದನೆಗೆ ಸಹಿ ಹಾಕುವ ಉದ್ದೇಶ ದಿಂದ ಅಣ್ಣಾ ಹಜಾರೆ ಹಾಗೂ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಈ ಲೇಖನಿ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದ ಎಂ.ರಾಮು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯ ಕರ್ತ ಅಣ್ಣಾ ಹಜಾರೆ ಅವರಿಗೆ ಸಮರ್ಪಿ ಸುವ ಉದ್ದೇಶದಿಂದ ಕಲಾವಿದರ ಬಳಗವೊಂದು ಇದೀಗ 11 ಅಡಿ ಎತ್ತರದ ವಿಶೇಷ ಪೆನ್ ರೂಪಿಸಿದ್ದಾರೆ.<br /> <br /> 8 ಅಂಗುಲ ದಪ್ಪ ಹಾಗೂ 12 ಕೆ.ಜಿ. ತೂಕವಿರುವ ಈ ಬೃಹತ್ ಲೇಖನಿಯನ್ನು ಜನಲೋಕಪಾಲ ಮಸೂದೆ ಅನು ಮೋದನೆಗೆ ಸಹಿ ಹಾಕಲು ಬಳಸಬೇಕು ಎಂಬುದು ಕಲಾವಿದರ ಬಯಕೆ. ಉಪಯೋಗ ಮಾಡಿದಂತಹ 1300 ಪೆನ್ನುಗಳು, ತ್ಯಾಜ್ಯ, ಪಿವಿಸಿ ಪೈಪ್, ವಿದ್ಯುತ್ ತಂತಿ, ಪ್ಲಾಸ್ಟಿಕ್, ಹರಿದ ವಾಹನದ ಸೀಟ್ ಕವರ್ ಬಳಸಿ ಈ ವಿಶೇಷ ಪೆನ್ ನಿರ್ಮಿಸಲಾಗಿದೆ.<br /> <br /> ನಗರದ ನಾಗವಾರ ವರ್ತುಲ ರಸ್ತೆಯ ಲುಂಬಿನಿ ಗಾರ್ಡನ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಡುವ ಣವಿರುವ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್ನಲ್ಲಿ ಈ ವಿಶಿಷ್ಟ ಪೆನ್ ಆಕರ್ಷಣೀಯ. `ಆರ್ಟ್ ಮ್ಯಾನ್ಫೋ-2011~ ಮೇಳ ದಲ್ಲಿ ಅತಿದೊಡ್ಡ ಪೆನ್ ಗಮನ ಸೆಳೆಯಲಿದೆ. <br /> <br /> ಸೆ. 18ರವರೆಗೆ ಮೇಳ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಈ ಕಲಾ ಮೇಳದಲ್ಲಿ ವಿಸ್ಮಯಕಾರಿ ಕಲಾಕೃತಿಗಳು ನಾಗರಿಕ ರನ್ನು ಚಕಿತ ಗೊಳಿಸುತ್ತಿದ್ದು, ಅತಿ ದೊಡ್ಡ ಲೇಖನಿ ವಿಶೇಷ ಗಮನಸೆಳೆಯುತ್ತಿದೆ. <br /> <br /> ತ್ಯಾಜ್ಯ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಕಲಾವಿದರು ಆಧುನಿಕ ವಾಸ್ತು ಶಿಲ್ಪ ಕಲೆಗೆ ಹೊಸ ಆಯಾಮ ನೀಡಿದ್ದಾರೆ. ಜನಲೋಕಪಾಲ್ ಮಸೂದೆ ಅನು ಮೋದನೆಗೆ ಸಹಿ ಹಾಕುವ ಉದ್ದೇಶ ದಿಂದ ಅಣ್ಣಾ ಹಜಾರೆ ಹಾಗೂ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಈ ಲೇಖನಿ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದ ಎಂ.ರಾಮು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>