<p><strong>ಮಂಡ್ಯ: </strong>ಕೆಆರ್ಎಸ್ (ಕೃಷ್ಣರಾಜಸಾಗರ) ಅಣೆಕಟ್ಟೆಯ ನೀರಿನ ಮಟ್ಟವು 62.92 ಅಡಿಗೆ ಕುಸಿದಿದ್ದು, ಇದು ದಶಕದಲ್ಲಿಯೇ ಅತೀ ಕಡಿಮೆ ಮಟ್ಟವಾಗಿದೆ. ನೀರಿನ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣತೊಡಗಿವೆ.<br /> <br /> 2003ರಲ್ಲಿ 66.51, 2007ರಲ್ಲಿ 68.90 ಅಡಿಗೆ ಇಳಿದಿದ್ದು ಬಿಟ್ಟರೆ, ಉಳಿದ ಅವಧಿಯಲ್ಲಿ 70 ಅಡಿಗಿಂತ ಕೆಳಗೆ ಇಳಿದಿರಲಿಲ್ಲ. 2013ರ ಜೂನ್ 12ಕ್ಕೆ 63 ಅಡಿಗಿಂತಲೂ ಕಡಿಮೆ ದಾಖಲಾಗಿದೆ. ಮುಂಗಾರು ಮಳೆ ಆರಂಭವಾದರೂ ನೀರಿನ ಒಳ ಒಳಹರಿವಿನ ಪ್ರಮಾಣ ಹೆಚ್ಚದಿರುವುದು ಆತಂಕಕ್ಕೆ ಕಾರಣವಾಗಿದೆ.<br /> <br /> ಅಣೆಕಟ್ಟೆಯ ನೀರಿನಮಟ್ಟ 62.92 ಅಡಿ ದಾಖಲಾಗಿದ್ದು, ಒಳಹರಿವು 277 ಕ್ಯೂಸೆಕ್ ಇದ್ದು, ಹೊರಹರಿವು 764 ಕ್ಯೂಸೆಕ್ ಇದೆ. ಕಳೆದ ವರ್ಷ ನೀರಿನ ಮಟ್ಟವು 72.28 ಅಡಿ ಇತ್ತು. ಒಳಹರಿವು 211 ಕ್ಯೂಸೆಕ್ ಇದ್ದರೆ, ಹೊರಹರಿವು 204 ಕ್ಯೂಸೆಕ್ ಇತ್ತು.<br /> <br /> ಅಣೆಕಟ್ಟೆಯಲ್ಲಿ ಈಗ ಬಳಸಲು ಸಾಧ್ಯವಾಗುವ ನೀರಿನ ಪ್ರಮಾಣವು ಕೇವಲ 0.07 ಟಿಎಂಸಿ ಅಡಿ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ನಗರಗಳಿಗೆ ಒಂದು ವಾರ ಕಾಲ ಮಾತ್ರ ಕುಡಿಯುವ ನೀರನ್ನು ಪೂರೈಸಬಹುದಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಕೆಆರ್ಎಸ್ ಅಣೆಕಟ್ಟೆಯ ಒಡಲು ತುಂಬಬೇಕಾದರೆ ಕೇರಳ ರಾಜ್ಯದ ವೈನಾಡು ಹಾಗೂ ರಾಜ್ಯದ ಕೊಡಗಿನಲ್ಲಿ ಮಳೆಯಾಗಬೇಕು. ಅಲ್ಲಿಯೂ ಮುಂಗಾರು ದುರ್ಬಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ.<br /> <br /> ಜೂನ್ ಅಂತ್ಯಕ್ಕೆ ಜಿಲ್ಲೆಯ ರೈತರುಭತ್ತದ ಒಟ್ಟಲು ಮಾಡಬೇಕಿತ್ತು. ಜುಲೈ ಮೂರನೇ ವಾರದಿಂದ ಭದ ನಾಟಿ ಆಗಬೇಕು. ಕಬ್ಬಿನ ನಾಟಿಯೂ ಈ ತಿಂಗಳಲ್ಲಿಯೇ ಆರಂಭವಾಗಬೇಕು. ಈ ಚಟುವಟಿಕೆಗಳು ಆರಂಭವಾಗಿಲ್ಲ. ಅಣೆಕಟ್ಟೆಯ ನೀರಿನ ಮಟ್ಟವು ಜಿಲ್ಲೆಯ ರೈತ ಸಮೂಹವನ್ನು ಆತಂಕಕ್ಕೆ ದೂಡಿದೆ.<br /> <br /> ಅಂಕಿ-ಸಂಖ್ಯೆಯಲ್ಲಿ ಮಳೆ ಉತ್ತಮ: ಅಂಕಿ-ಸಂಖ್ಯೆಗಳ ಪ್ರಕಾರ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿದೆ. ಆದರೆ, ಅದು ಎಲ್ಲೆಡೆಯೂ ಸಮನಾಗಿ ಹಂಚಿಕೆಯಾಗಿಲ್ಲ. ಪರಿಣಾಮ ಬಿತ್ತನೆ ಚಟುವಟಿಕೆಯೂ ಚುರುಕು ಪಡೆದುಕೊಂಡಿಲ್ಲ.<br /> ವಾಡಿಕೆ ಪ್ರಕಾರ ಜೂನ್ 10ರವರೆಗೆ 198 ಮಿ.ಮೀ. ಮಳೆಯಾಗಬೇಕಿತ್ತು. 215 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 173.8 ಮಿ.ಮೀ. ಮಳೆಯಾಗಿತ್ತು.<br /> <br /> ಪೂಜೆ, ಹೋಮ: ಮಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಮೌಖಿಕ ಸೂಚನೆಯ ಮೇರೆ ಮೂರು ದಿನಗಳ ಹಿಂದೆ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಪೂಜೆ, ಕೆಲವೆಡೆ ಹೋಮ ಮಾಡಲಾಗಿದೆ.<br /> <br /> ಎರಡು ವರ್ಷಗಳಿಂದ ಜಿಲ್ಲೆಯ ಏಳೂ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಇವೆ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ತೀವ್ರವಾಗಿದ್ದು, 38 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.<br /> <br /> `ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆಹಾಕಲಾಗಲಿಲ್ಲ. ಕಬ್ಬು ಬೆಳೆಯಲಾಗುವುದಿಲ್ಲ. ಸಾಲ, ಕಂದಾಯ ವಸೂಲಾತಿಯನ್ನು ಈ ವರ್ಷ ಮಾಡಬಾರದು. ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಉದ್ಯೋಗ ಅವಕಾಶ ಸೃಷ್ಟಿಸಬೇಕು' ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಣಸಾಲೆ ನರಸರಾಜು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಕೆಆರ್ಎಸ್ (ಕೃಷ್ಣರಾಜಸಾಗರ) ಅಣೆಕಟ್ಟೆಯ ನೀರಿನ ಮಟ್ಟವು 62.92 ಅಡಿಗೆ ಕುಸಿದಿದ್ದು, ಇದು ದಶಕದಲ್ಲಿಯೇ ಅತೀ ಕಡಿಮೆ ಮಟ್ಟವಾಗಿದೆ. ನೀರಿನ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣತೊಡಗಿವೆ.<br /> <br /> 2003ರಲ್ಲಿ 66.51, 2007ರಲ್ಲಿ 68.90 ಅಡಿಗೆ ಇಳಿದಿದ್ದು ಬಿಟ್ಟರೆ, ಉಳಿದ ಅವಧಿಯಲ್ಲಿ 70 ಅಡಿಗಿಂತ ಕೆಳಗೆ ಇಳಿದಿರಲಿಲ್ಲ. 2013ರ ಜೂನ್ 12ಕ್ಕೆ 63 ಅಡಿಗಿಂತಲೂ ಕಡಿಮೆ ದಾಖಲಾಗಿದೆ. ಮುಂಗಾರು ಮಳೆ ಆರಂಭವಾದರೂ ನೀರಿನ ಒಳ ಒಳಹರಿವಿನ ಪ್ರಮಾಣ ಹೆಚ್ಚದಿರುವುದು ಆತಂಕಕ್ಕೆ ಕಾರಣವಾಗಿದೆ.<br /> <br /> ಅಣೆಕಟ್ಟೆಯ ನೀರಿನಮಟ್ಟ 62.92 ಅಡಿ ದಾಖಲಾಗಿದ್ದು, ಒಳಹರಿವು 277 ಕ್ಯೂಸೆಕ್ ಇದ್ದು, ಹೊರಹರಿವು 764 ಕ್ಯೂಸೆಕ್ ಇದೆ. ಕಳೆದ ವರ್ಷ ನೀರಿನ ಮಟ್ಟವು 72.28 ಅಡಿ ಇತ್ತು. ಒಳಹರಿವು 211 ಕ್ಯೂಸೆಕ್ ಇದ್ದರೆ, ಹೊರಹರಿವು 204 ಕ್ಯೂಸೆಕ್ ಇತ್ತು.<br /> <br /> ಅಣೆಕಟ್ಟೆಯಲ್ಲಿ ಈಗ ಬಳಸಲು ಸಾಧ್ಯವಾಗುವ ನೀರಿನ ಪ್ರಮಾಣವು ಕೇವಲ 0.07 ಟಿಎಂಸಿ ಅಡಿ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ನಗರಗಳಿಗೆ ಒಂದು ವಾರ ಕಾಲ ಮಾತ್ರ ಕುಡಿಯುವ ನೀರನ್ನು ಪೂರೈಸಬಹುದಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಕೆಆರ್ಎಸ್ ಅಣೆಕಟ್ಟೆಯ ಒಡಲು ತುಂಬಬೇಕಾದರೆ ಕೇರಳ ರಾಜ್ಯದ ವೈನಾಡು ಹಾಗೂ ರಾಜ್ಯದ ಕೊಡಗಿನಲ್ಲಿ ಮಳೆಯಾಗಬೇಕು. ಅಲ್ಲಿಯೂ ಮುಂಗಾರು ದುರ್ಬಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ.<br /> <br /> ಜೂನ್ ಅಂತ್ಯಕ್ಕೆ ಜಿಲ್ಲೆಯ ರೈತರುಭತ್ತದ ಒಟ್ಟಲು ಮಾಡಬೇಕಿತ್ತು. ಜುಲೈ ಮೂರನೇ ವಾರದಿಂದ ಭದ ನಾಟಿ ಆಗಬೇಕು. ಕಬ್ಬಿನ ನಾಟಿಯೂ ಈ ತಿಂಗಳಲ್ಲಿಯೇ ಆರಂಭವಾಗಬೇಕು. ಈ ಚಟುವಟಿಕೆಗಳು ಆರಂಭವಾಗಿಲ್ಲ. ಅಣೆಕಟ್ಟೆಯ ನೀರಿನ ಮಟ್ಟವು ಜಿಲ್ಲೆಯ ರೈತ ಸಮೂಹವನ್ನು ಆತಂಕಕ್ಕೆ ದೂಡಿದೆ.<br /> <br /> ಅಂಕಿ-ಸಂಖ್ಯೆಯಲ್ಲಿ ಮಳೆ ಉತ್ತಮ: ಅಂಕಿ-ಸಂಖ್ಯೆಗಳ ಪ್ರಕಾರ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿದೆ. ಆದರೆ, ಅದು ಎಲ್ಲೆಡೆಯೂ ಸಮನಾಗಿ ಹಂಚಿಕೆಯಾಗಿಲ್ಲ. ಪರಿಣಾಮ ಬಿತ್ತನೆ ಚಟುವಟಿಕೆಯೂ ಚುರುಕು ಪಡೆದುಕೊಂಡಿಲ್ಲ.<br /> ವಾಡಿಕೆ ಪ್ರಕಾರ ಜೂನ್ 10ರವರೆಗೆ 198 ಮಿ.ಮೀ. ಮಳೆಯಾಗಬೇಕಿತ್ತು. 215 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 173.8 ಮಿ.ಮೀ. ಮಳೆಯಾಗಿತ್ತು.<br /> <br /> ಪೂಜೆ, ಹೋಮ: ಮಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಮೌಖಿಕ ಸೂಚನೆಯ ಮೇರೆ ಮೂರು ದಿನಗಳ ಹಿಂದೆ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಪೂಜೆ, ಕೆಲವೆಡೆ ಹೋಮ ಮಾಡಲಾಗಿದೆ.<br /> <br /> ಎರಡು ವರ್ಷಗಳಿಂದ ಜಿಲ್ಲೆಯ ಏಳೂ ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಇವೆ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ತೀವ್ರವಾಗಿದ್ದು, 38 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.<br /> <br /> `ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆಹಾಕಲಾಗಲಿಲ್ಲ. ಕಬ್ಬು ಬೆಳೆಯಲಾಗುವುದಿಲ್ಲ. ಸಾಲ, ಕಂದಾಯ ವಸೂಲಾತಿಯನ್ನು ಈ ವರ್ಷ ಮಾಡಬಾರದು. ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಉದ್ಯೋಗ ಅವಕಾಶ ಸೃಷ್ಟಿಸಬೇಕು' ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಣಸಾಲೆ ನರಸರಾಜು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>