<p>ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಎಂದರೆ ಖುಷಿ. ಅಷ್ಟೇಕೆ? ಅದೊಂದು ಜೀವನಾನುಭವದ ಸುಮಧುರ ಕ್ಷಣ. ಶಾಲಾ ಶಿಕ್ಷಕ - ಶಿಕ್ಷಕಿಯರು ತಮ್ಮ ಶಾಲಾ ಬಾಲಕ - ಬಾಲಕಿಯರಿಗೆ ಐತಿಹಾಸಿಕ - ಧಾರ್ಮಿಕ - ಪ್ರಕೃತಿ ರಮಣೀಯ ತಾಣಗಳ ಪರಿಚಯ ಮಾಡಿಸುತ್ತಾರೆ. <br /> <br /> ಜತೆಗೆ ಆಯಾ ಊರಿನ ಜನಜೀವನ - ಸಂಸ್ಕೃತಿ - ಪರಂಪರೆ ಕುರಿತು ಅರಿವು ಮೂಡಿಸುತ್ತಾರೆ. ಕೃಷಿ - ಪರಿಸರ ಜ್ಞಾನವೂ ಎಳೆಯರಿಗೆ ಹೆಚ್ಚು ಪರಿಣಾಮ ಬೀರಬಲ್ಲುದು. ಸರ್ಕಾರವು ಶಾಲೆಗಳ ವಿದ್ಯಾರ್ಥಿ ವೃಂದದ ಪ್ರವಾಸಕ್ಕೆ ಪ್ರೋತ್ಸಾಹ ನೀಡುವುದಂತೂ ಔಚಿತ್ಯಪೂರ್ಣ ಯೋಜನೆಗಳಲ್ಲೊಂದಾಗಿದೆ.<br /> <br /> ಶೈಕ್ಷಣಿಕ ಪ್ರವಾಸದ ವೇಳೆ ಟಿಪ್ಪಣಿ ಬರೆದಿಡುತ್ತಾರೆ. ಪ್ರವಾಸದ ಬಳಿಕ ಪ್ರವಾಸದ ಅನುಭವವನ್ನು ಪ್ರಬಂಧ ರೂಪದಲ್ಲಿ ಬರೆಯುವಂತೆ ಶಾಲಾ ಅಧ್ಯಾಪಕರು ಹೇಳುತ್ತಾರೆ. ಆದರೆ ಪರಿಪೂರ್ಣ ಪ್ರವಾಸ ಎನ್ನುವಂತಾಗಿಲ್ಲ. ಯಾಕೆಂದರೆ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ಅಥವಾ ಮಂದಿರಗಳ `ವೀಕ್ಷಣೆ~ ಮಾತ್ರ ಸಾಧ್ಯವಾಗುತ್ತದೆಯೇ ಹೊರತು ಇತಿಹಾಸ ಅಥವಾ ವಾಸ್ತು ಶಿಲ್ಪ - ಕಲೆ - ಮಹತ್ವದ ಅಂಶಗಳು ತಿಳಿಯುತ್ತಿಲ್ಲ. <br /> <br /> ಸರ್ಕಾರಿ ಅಥವಾ ಖಾಸಗಿ ಬಸ್ಸು ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ, ವಾಪಸು ಹಿಂತಿರುಗಿ ಬರುವ `ನಿಗದಿತ ವೇಳಾಪಟ್ಟಿ~ ಅನುಸರಿಸುವ ತರಾತುರಿಯಲ್ಲಿ ಸ್ಮಾರಕಗಳ/ ಮಂದಿರಗಳ/ ತಾಣಗಳ ಹೆಸರು ಕೂಡಾ ಮಕ್ಕಳಿಗೆ ಮರೆತಿರುತ್ತದೆ!<br /> <br /> ಇತ್ತೀಚೆಗೆ, ಡಿಸೆಂಬರ್ ಉತ್ತರಾರ್ಧದಲ್ಲಿ ಎರಡು ವಾರಗಳ ಅವಧಿಯಲ್ಲಿ ಉಡುಪಿ - ಕಾರ್ಕಳ - ಮೂಡುಬಿದಿರೆ - ವೇಣೂರು - ಧರ್ಮಸ್ಥಳ - ಸುಬ್ರಹ್ಮಣ್ಯ ಹಾಗೂ ಮಂಗಳೂರು ಕಡಲಕಿನಾರೆ, ಸುರತ್ಕಲ್ ಕಡಲಕಿನಾರೆ, ಮಲ್ಪೆ - ಮಂಗಳೂರು ಬಂದರು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು. <br /> <br /> ಕೆಲವು ಶಾಲಾ ಅಧ್ಯಾಪಕರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಆಯಾ ಸ್ಥಳದ ಕುರಿತು ಮಾಹಿತಿ ನೀಡುತ್ತಿದ್ದರಷ್ಟೆ!! ಉಳಿದಂತೆ ಬಸ್ಸಿನಿಂದ ಇಳಿಯುವುದು, ಓಡೋಡಿ ಹೋಗಿ ಒಂದು ಸುತ್ತು ಪ್ರದಕ್ಷಿಣೆ ಬಂದು ಮತ್ತೆ ಬಸ್ಸಿಗೆ ಹತ್ತುವುದನ್ನಷ್ಟೇ ಮಾಡುತ್ತಿದ್ದರು.<br /> <br /> ಸಾವಿರ ಕಂಬದ ಬಸದಿಯ ವಾಸ್ತು - ಶಿಲ್ಪಕಲಾ ವೈಭವ ಅಥವಾ ಧರ್ಮಸ್ಥಳ - ವೇಣೂರು - ಕಾರ್ಕಳದ ಗೊಮ್ಮಟ ಏಕಶಿಲಾವಿಗ್ರಹದ ಚರಿತ್ರೆ ಹೇಳುವವರಿಲ್ಲ!! ಸಮುದ್ರ ಕಿನಾರೆ, ಬಂದರು, ಪಶ್ಚಿಮಘಟ್ಟದ ಸಸ್ಯ ಸಂಪತ್ತು ಮತ್ತು ಹೊಲಗದ್ದೆ ತೋಟಗಳಲ್ಲಿ ಬೆಳೆದ ಅಡಿಕೆ - ತೆಂಗು - ಭತ್ತ - ಕಬ್ಬು - ರಬ್ಬರ್ ಮತ್ತಿತರ ಫಲ - ಪುಷ್ಪ ನೀಡುವ ಗಿಡಮರಗಳ ಪರಿಚಯವನ್ನು ತಿಳಿಸುವವರಿಲ್ಲ. <br /> <br /> ಇದು ಶೈಕ್ಷಣಿಕ ಪ್ರವಾಸ ಎಂದಾದೀತೆ? ಸರ್ಕಾರದ ಪ್ರವಾಸೋದ್ಯಮ ಇಲಾಖೆ, ವಾರ್ತಾ - ಪ್ರಚಾರ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರವಾಸೀ ತಾಣಗಳಲ್ಲಿ ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕಿದೆ. <br /> <br /> ಶಾಲಾ ಮಕ್ಕಳಿಗೆ ಪ್ರವಾಸದ ಅನುಭವವು ಜೀವನದುದ್ದಕ್ಕೂ ಮರೆಯುವಂತಾಗಬಾರದು. ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಿಸರ ಕಾಳಜಿ ಅರಿವು ಮೂಡಿಸಲು ಸರ್ಕಾರವು ಸ್ವಲ್ಪ ಹಣವಿನಿಯೋಗಿಸಿ ಉತ್ತಮ ಮಾರ್ಗದರ್ಶಿ ಪ್ರವಾಸೀ ಕೈಪಿಡಿ, ಕರಪತ್ರ ಮುದ್ರಿಸಿ, ವಿತರಿಸಲು ಯೋಜನೆ ರೂಪಿಸಬೇಕಾಗಿದೆಯಲ್ಲವೇ?<br /> <br /> ಕೇರಳ ರಾಜ್ಯದ ರೈಲ್ವೆ, ಬಸ್ಸು ನಿಲ್ದಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹೇರಳ ಕೈಪಿಡಿ, ಕರಪತ್ರ, ನಕಾಶೆ ವಿತರಿಸಲಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಇಂತಹ ವ್ಯವಸ್ಥೆ ರೂಪಿಸಲು ಅಸಾಧ್ಯವೇ? ಪ್ರಚಾರ ಸಾಹಿತ್ಯವನ್ನು ಕನ್ನಡ - ಹಿಂದಿ - ಭಾಷೆಗಳಲ್ಲಿ ಮುದ್ರಿಸಬೇಕು. ಪ್ರವಾಸಿಗರ ವಯೋಮಾನ, ಆಸಕ್ತಿ ತಕ್ಕಂತೆ ಉಚಿತವಾಗಿ ಹಂಚಬೇಕು. <br /> <br /> ಈಗಂತೂ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ದೃಶ್ಯ ಮಾಧ್ಯಮದ ಸಿ.ಡಿ.ಯನ್ನೂ ವಿತರಿಸಬಹುದು. ಶಾಲೆಗೊಂದರಂತೆ ಇಂತಹ ಸಿ.ಡಿ. ಕೊಡಬಹುದು. ಅರಣ್ಯ ಇಲಾಖೆ, ವನ್ಯಜೀವಿ ಘಟಕ ಕೂಡಾ ಆಯಾ ಜಿಲ್ಲೆಗಳ ವನ್ಯಸಂಪತ್ತಿನ ಕುರಿತು ಕರಪತ್ರ ಮುದ್ರಿಸಿ ಪ್ರವಾಸಿಗರಿಗೆ ವಿತರಿಸಬೇಕು.<br /> <br /> ಇನ್ನು ಖಾಸಗಿ ದೇವಾಲಯಗಳು - ಪುಣ್ಯಕ್ಷೇತ್ರಗಳ ಆಡಳಿತ ಮಂಡಳಿಯವರೂ ಆ ಕ್ಷೇತ್ರದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಮುದ್ರಿಸಿ ವಿತರಿಸಬೇಕು. ಕನ್ನಡನಾಡಿನ ನೆಲ - ಜಲ - ಸಂಸ್ಕೃತಿಯ ಭವ್ಯ ಪರಂಪರೆಯನ್ನು ನಾಡಿನ ಮಕ್ಕಳಿಗೆ ಮೊತ್ತಮೊದಲು ತೋರ್ಪಡಿಸಬೇಕು. <br /> <br /> ವರ್ಣಮಯ ಸಚಿತ್ರ ಕೈಪಿಡಿಯನ್ನು ಪ್ರತಿಯೊಬ್ಬ ಬಾಲಕ - ಬಾಲಕಿ ಅಥವಾ ಪ್ರವಾಸಿಗ/ ಯಾತ್ರಾರ್ಥಿ ಸಂಗ್ರಹಿಸಿಡುವ ಮೂಲಕ ಪ್ರವಾಸ/ ಯಾತ್ರೆ/ ದರ್ಶನದ ನೆನಪು ಸದಾ ಉಳಿದೀತು. ಪರಿಚಯ ಕೈಪಿಡಿ ಅನಿವಾರ್ಯವಲ್ಲವೇ?<br /> <br /> ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಬರುವ ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಕಾಲೇಜು ವಿದ್ಯಾರ್ಥಿ ಸಮುದಾಯದವರು ಕೇವಲ ಐದು ನಿಮಿಷಗಳಲ್ಲಿ `ವೀಕ್ಷಣೆ~ ಮಾಡಿ ತೋರಿಸುತ್ತಾರೆ! ಈ ಉದಾಹರಣೆ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ! ಬಹುತೇಕ ಎಲ್ಲ ಧಾರ್ಮಿಕ ಪುಣ್ಯಕ್ಷೇತ್ರ, ಇತಿಹಾಸ ಪ್ರಸಿದ್ಧ ಸ್ಮಾರಕ, ರಾಷ್ಟ್ರೀಯ ಉದ್ಯಾನವನ ಮುಂತಾದ ಪ್ರವಾಸಿ ತಾಣಗಳಲ್ಲಿ ಕಂಡುಬರುತ್ತಿರುವ ದೃಶ್ಯ. <br /> <br /> ಕೊನೆಯಪಕ್ಷ ಸರ್ಕಾರವು ಆಯಾ ಜಿಲ್ಲೆಗಳ ಪ್ರವಾಸೀ ತಾಣಗಳ ಕುರಿತು ಮಾಹಿತಿ ಕೈಪಿಡಿಯನ್ನು ಮುದ್ರಿಸಿ ಪ್ರಕಟಿಸುವ `ಸತ್ಕಾರ್ಯ~ ಮಾಡಿದರೆ, ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡವರಿಗೆ ಸಹಕಾರಿಯಾಗಬ್ಲ್ಲಲದು.<br /> <br /> ಈ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಭವನ, ಶೌಚಾಲಯದ ವ್ಯವಸ್ಥೆಯೂ ಕಡ್ಡಾಯವಾಗಿ ಆಗಬೇಕು. ಕಸ ಕಡ್ಡಿ, ತ್ಯಾಜ್ಯಗಳನ್ನು ಎಸೆಯಲು ತೊಟ್ಟಿಗಳನ್ನೂ ಇರಿಸಿರಬೇಕು. ಸ್ಥಳೀಯ ನಗರಸಭೆ/ ಮಹಾನಗರಪಾಲಿಕೆ/ ಗ್ರಾಮ ಪಂಚಾಯತಿ ಈ ಬಗ್ಗೆ ನಿಗಾವಹಿಸಬೇಕು.<br /> <br /> ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಾಂತ್ಯದವರೆಗೆ ಮೂರು ತಿಂಗಳಾವಧಿಯಲ್ಲಿ ಶೈಕ್ಷಣಿಕ ಪ್ರವಾಸದ ಭರಾಟೆ ಇರುತ್ತದೆ. ಆಗ ತುರ್ತು ವೈದ್ಯಕೀಯ ಸೌಲಭ್ಯ, ಪೊಲೀಸರು ಗಸ್ತು, ವಾಹನ ಸಂಚಾರ ಸುಗಮವಾಗಿರಲು ಸರ್ಕಾರವು ತುರ್ತುಕ್ರಮ ಕೈಗೊಳ್ಳಬೇಕೆನಿಸುತ್ತಿದೆ.<br /> <br /> `ಶೈಕ್ಷಣಿಕ ಪ್ರವಾಸ~ ನಿಜವಾದ ಅರ್ಥದಲ್ಲಿ ಜ್ಞಾನಾರ್ಜನೆಯ ಅಂಗವಾಗಬೇಕಿದೆ. ಎಳೆಯ ಮಕ್ಕಳಿಗೆ ಕೇವಲ ಮನೋರಂಜನೆ ಪ್ರವಾಸವಾಗದೆ, ಇತಿಹಾಸ - ಸಂಸ್ಕೃತಿಯ ದರ್ಶನವಾಗಲಿ. ಶೈಕ್ಷಣಿಕ ಪ್ರವಾಸ ಅರ್ಥಪೂರ್ಣವಾಗಿರಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಎಂದರೆ ಖುಷಿ. ಅಷ್ಟೇಕೆ? ಅದೊಂದು ಜೀವನಾನುಭವದ ಸುಮಧುರ ಕ್ಷಣ. ಶಾಲಾ ಶಿಕ್ಷಕ - ಶಿಕ್ಷಕಿಯರು ತಮ್ಮ ಶಾಲಾ ಬಾಲಕ - ಬಾಲಕಿಯರಿಗೆ ಐತಿಹಾಸಿಕ - ಧಾರ್ಮಿಕ - ಪ್ರಕೃತಿ ರಮಣೀಯ ತಾಣಗಳ ಪರಿಚಯ ಮಾಡಿಸುತ್ತಾರೆ. <br /> <br /> ಜತೆಗೆ ಆಯಾ ಊರಿನ ಜನಜೀವನ - ಸಂಸ್ಕೃತಿ - ಪರಂಪರೆ ಕುರಿತು ಅರಿವು ಮೂಡಿಸುತ್ತಾರೆ. ಕೃಷಿ - ಪರಿಸರ ಜ್ಞಾನವೂ ಎಳೆಯರಿಗೆ ಹೆಚ್ಚು ಪರಿಣಾಮ ಬೀರಬಲ್ಲುದು. ಸರ್ಕಾರವು ಶಾಲೆಗಳ ವಿದ್ಯಾರ್ಥಿ ವೃಂದದ ಪ್ರವಾಸಕ್ಕೆ ಪ್ರೋತ್ಸಾಹ ನೀಡುವುದಂತೂ ಔಚಿತ್ಯಪೂರ್ಣ ಯೋಜನೆಗಳಲ್ಲೊಂದಾಗಿದೆ.<br /> <br /> ಶೈಕ್ಷಣಿಕ ಪ್ರವಾಸದ ವೇಳೆ ಟಿಪ್ಪಣಿ ಬರೆದಿಡುತ್ತಾರೆ. ಪ್ರವಾಸದ ಬಳಿಕ ಪ್ರವಾಸದ ಅನುಭವವನ್ನು ಪ್ರಬಂಧ ರೂಪದಲ್ಲಿ ಬರೆಯುವಂತೆ ಶಾಲಾ ಅಧ್ಯಾಪಕರು ಹೇಳುತ್ತಾರೆ. ಆದರೆ ಪರಿಪೂರ್ಣ ಪ್ರವಾಸ ಎನ್ನುವಂತಾಗಿಲ್ಲ. ಯಾಕೆಂದರೆ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಮಾರಕಗಳ ಅಥವಾ ಮಂದಿರಗಳ `ವೀಕ್ಷಣೆ~ ಮಾತ್ರ ಸಾಧ್ಯವಾಗುತ್ತದೆಯೇ ಹೊರತು ಇತಿಹಾಸ ಅಥವಾ ವಾಸ್ತು ಶಿಲ್ಪ - ಕಲೆ - ಮಹತ್ವದ ಅಂಶಗಳು ತಿಳಿಯುತ್ತಿಲ್ಲ. <br /> <br /> ಸರ್ಕಾರಿ ಅಥವಾ ಖಾಸಗಿ ಬಸ್ಸು ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ, ವಾಪಸು ಹಿಂತಿರುಗಿ ಬರುವ `ನಿಗದಿತ ವೇಳಾಪಟ್ಟಿ~ ಅನುಸರಿಸುವ ತರಾತುರಿಯಲ್ಲಿ ಸ್ಮಾರಕಗಳ/ ಮಂದಿರಗಳ/ ತಾಣಗಳ ಹೆಸರು ಕೂಡಾ ಮಕ್ಕಳಿಗೆ ಮರೆತಿರುತ್ತದೆ!<br /> <br /> ಇತ್ತೀಚೆಗೆ, ಡಿಸೆಂಬರ್ ಉತ್ತರಾರ್ಧದಲ್ಲಿ ಎರಡು ವಾರಗಳ ಅವಧಿಯಲ್ಲಿ ಉಡುಪಿ - ಕಾರ್ಕಳ - ಮೂಡುಬಿದಿರೆ - ವೇಣೂರು - ಧರ್ಮಸ್ಥಳ - ಸುಬ್ರಹ್ಮಣ್ಯ ಹಾಗೂ ಮಂಗಳೂರು ಕಡಲಕಿನಾರೆ, ಸುರತ್ಕಲ್ ಕಡಲಕಿನಾರೆ, ಮಲ್ಪೆ - ಮಂಗಳೂರು ಬಂದರು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಶಾಲಾ ವಿದ್ಯಾರ್ಥಿಗಳು ಆಗಮಿಸಿದ್ದರು. <br /> <br /> ಕೆಲವು ಶಾಲಾ ಅಧ್ಯಾಪಕರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಆಯಾ ಸ್ಥಳದ ಕುರಿತು ಮಾಹಿತಿ ನೀಡುತ್ತಿದ್ದರಷ್ಟೆ!! ಉಳಿದಂತೆ ಬಸ್ಸಿನಿಂದ ಇಳಿಯುವುದು, ಓಡೋಡಿ ಹೋಗಿ ಒಂದು ಸುತ್ತು ಪ್ರದಕ್ಷಿಣೆ ಬಂದು ಮತ್ತೆ ಬಸ್ಸಿಗೆ ಹತ್ತುವುದನ್ನಷ್ಟೇ ಮಾಡುತ್ತಿದ್ದರು.<br /> <br /> ಸಾವಿರ ಕಂಬದ ಬಸದಿಯ ವಾಸ್ತು - ಶಿಲ್ಪಕಲಾ ವೈಭವ ಅಥವಾ ಧರ್ಮಸ್ಥಳ - ವೇಣೂರು - ಕಾರ್ಕಳದ ಗೊಮ್ಮಟ ಏಕಶಿಲಾವಿಗ್ರಹದ ಚರಿತ್ರೆ ಹೇಳುವವರಿಲ್ಲ!! ಸಮುದ್ರ ಕಿನಾರೆ, ಬಂದರು, ಪಶ್ಚಿಮಘಟ್ಟದ ಸಸ್ಯ ಸಂಪತ್ತು ಮತ್ತು ಹೊಲಗದ್ದೆ ತೋಟಗಳಲ್ಲಿ ಬೆಳೆದ ಅಡಿಕೆ - ತೆಂಗು - ಭತ್ತ - ಕಬ್ಬು - ರಬ್ಬರ್ ಮತ್ತಿತರ ಫಲ - ಪುಷ್ಪ ನೀಡುವ ಗಿಡಮರಗಳ ಪರಿಚಯವನ್ನು ತಿಳಿಸುವವರಿಲ್ಲ. <br /> <br /> ಇದು ಶೈಕ್ಷಣಿಕ ಪ್ರವಾಸ ಎಂದಾದೀತೆ? ಸರ್ಕಾರದ ಪ್ರವಾಸೋದ್ಯಮ ಇಲಾಖೆ, ವಾರ್ತಾ - ಪ್ರಚಾರ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರವಾಸೀ ತಾಣಗಳಲ್ಲಿ ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕಿದೆ. <br /> <br /> ಶಾಲಾ ಮಕ್ಕಳಿಗೆ ಪ್ರವಾಸದ ಅನುಭವವು ಜೀವನದುದ್ದಕ್ಕೂ ಮರೆಯುವಂತಾಗಬಾರದು. ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಪರಿಸರ ಕಾಳಜಿ ಅರಿವು ಮೂಡಿಸಲು ಸರ್ಕಾರವು ಸ್ವಲ್ಪ ಹಣವಿನಿಯೋಗಿಸಿ ಉತ್ತಮ ಮಾರ್ಗದರ್ಶಿ ಪ್ರವಾಸೀ ಕೈಪಿಡಿ, ಕರಪತ್ರ ಮುದ್ರಿಸಿ, ವಿತರಿಸಲು ಯೋಜನೆ ರೂಪಿಸಬೇಕಾಗಿದೆಯಲ್ಲವೇ?<br /> <br /> ಕೇರಳ ರಾಜ್ಯದ ರೈಲ್ವೆ, ಬಸ್ಸು ನಿಲ್ದಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹೇರಳ ಕೈಪಿಡಿ, ಕರಪತ್ರ, ನಕಾಶೆ ವಿತರಿಸಲಾಗುತ್ತಿದೆ. ಕರ್ನಾಟಕ ಸರ್ಕಾರಕ್ಕೆ ಇಂತಹ ವ್ಯವಸ್ಥೆ ರೂಪಿಸಲು ಅಸಾಧ್ಯವೇ? ಪ್ರಚಾರ ಸಾಹಿತ್ಯವನ್ನು ಕನ್ನಡ - ಹಿಂದಿ - ಭಾಷೆಗಳಲ್ಲಿ ಮುದ್ರಿಸಬೇಕು. ಪ್ರವಾಸಿಗರ ವಯೋಮಾನ, ಆಸಕ್ತಿ ತಕ್ಕಂತೆ ಉಚಿತವಾಗಿ ಹಂಚಬೇಕು. <br /> <br /> ಈಗಂತೂ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ದೃಶ್ಯ ಮಾಧ್ಯಮದ ಸಿ.ಡಿ.ಯನ್ನೂ ವಿತರಿಸಬಹುದು. ಶಾಲೆಗೊಂದರಂತೆ ಇಂತಹ ಸಿ.ಡಿ. ಕೊಡಬಹುದು. ಅರಣ್ಯ ಇಲಾಖೆ, ವನ್ಯಜೀವಿ ಘಟಕ ಕೂಡಾ ಆಯಾ ಜಿಲ್ಲೆಗಳ ವನ್ಯಸಂಪತ್ತಿನ ಕುರಿತು ಕರಪತ್ರ ಮುದ್ರಿಸಿ ಪ್ರವಾಸಿಗರಿಗೆ ವಿತರಿಸಬೇಕು.<br /> <br /> ಇನ್ನು ಖಾಸಗಿ ದೇವಾಲಯಗಳು - ಪುಣ್ಯಕ್ಷೇತ್ರಗಳ ಆಡಳಿತ ಮಂಡಳಿಯವರೂ ಆ ಕ್ಷೇತ್ರದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಮುದ್ರಿಸಿ ವಿತರಿಸಬೇಕು. ಕನ್ನಡನಾಡಿನ ನೆಲ - ಜಲ - ಸಂಸ್ಕೃತಿಯ ಭವ್ಯ ಪರಂಪರೆಯನ್ನು ನಾಡಿನ ಮಕ್ಕಳಿಗೆ ಮೊತ್ತಮೊದಲು ತೋರ್ಪಡಿಸಬೇಕು. <br /> <br /> ವರ್ಣಮಯ ಸಚಿತ್ರ ಕೈಪಿಡಿಯನ್ನು ಪ್ರತಿಯೊಬ್ಬ ಬಾಲಕ - ಬಾಲಕಿ ಅಥವಾ ಪ್ರವಾಸಿಗ/ ಯಾತ್ರಾರ್ಥಿ ಸಂಗ್ರಹಿಸಿಡುವ ಮೂಲಕ ಪ್ರವಾಸ/ ಯಾತ್ರೆ/ ದರ್ಶನದ ನೆನಪು ಸದಾ ಉಳಿದೀತು. ಪರಿಚಯ ಕೈಪಿಡಿ ಅನಿವಾರ್ಯವಲ್ಲವೇ?<br /> <br /> ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಬರುವ ಶೈಕ್ಷಣಿಕ ಪ್ರವಾಸದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಕಾಲೇಜು ವಿದ್ಯಾರ್ಥಿ ಸಮುದಾಯದವರು ಕೇವಲ ಐದು ನಿಮಿಷಗಳಲ್ಲಿ `ವೀಕ್ಷಣೆ~ ಮಾಡಿ ತೋರಿಸುತ್ತಾರೆ! ಈ ಉದಾಹರಣೆ ಇಲ್ಲಿಗೆ ಮಾತ್ರ ಸೀಮಿತವಾಗಿಲ್ಲ! ಬಹುತೇಕ ಎಲ್ಲ ಧಾರ್ಮಿಕ ಪುಣ್ಯಕ್ಷೇತ್ರ, ಇತಿಹಾಸ ಪ್ರಸಿದ್ಧ ಸ್ಮಾರಕ, ರಾಷ್ಟ್ರೀಯ ಉದ್ಯಾನವನ ಮುಂತಾದ ಪ್ರವಾಸಿ ತಾಣಗಳಲ್ಲಿ ಕಂಡುಬರುತ್ತಿರುವ ದೃಶ್ಯ. <br /> <br /> ಕೊನೆಯಪಕ್ಷ ಸರ್ಕಾರವು ಆಯಾ ಜಿಲ್ಲೆಗಳ ಪ್ರವಾಸೀ ತಾಣಗಳ ಕುರಿತು ಮಾಹಿತಿ ಕೈಪಿಡಿಯನ್ನು ಮುದ್ರಿಸಿ ಪ್ರಕಟಿಸುವ `ಸತ್ಕಾರ್ಯ~ ಮಾಡಿದರೆ, ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡವರಿಗೆ ಸಹಕಾರಿಯಾಗಬ್ಲ್ಲಲದು.<br /> <br /> ಈ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಭವನ, ಶೌಚಾಲಯದ ವ್ಯವಸ್ಥೆಯೂ ಕಡ್ಡಾಯವಾಗಿ ಆಗಬೇಕು. ಕಸ ಕಡ್ಡಿ, ತ್ಯಾಜ್ಯಗಳನ್ನು ಎಸೆಯಲು ತೊಟ್ಟಿಗಳನ್ನೂ ಇರಿಸಿರಬೇಕು. ಸ್ಥಳೀಯ ನಗರಸಭೆ/ ಮಹಾನಗರಪಾಲಿಕೆ/ ಗ್ರಾಮ ಪಂಚಾಯತಿ ಈ ಬಗ್ಗೆ ನಿಗಾವಹಿಸಬೇಕು.<br /> <br /> ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಾಂತ್ಯದವರೆಗೆ ಮೂರು ತಿಂಗಳಾವಧಿಯಲ್ಲಿ ಶೈಕ್ಷಣಿಕ ಪ್ರವಾಸದ ಭರಾಟೆ ಇರುತ್ತದೆ. ಆಗ ತುರ್ತು ವೈದ್ಯಕೀಯ ಸೌಲಭ್ಯ, ಪೊಲೀಸರು ಗಸ್ತು, ವಾಹನ ಸಂಚಾರ ಸುಗಮವಾಗಿರಲು ಸರ್ಕಾರವು ತುರ್ತುಕ್ರಮ ಕೈಗೊಳ್ಳಬೇಕೆನಿಸುತ್ತಿದೆ.<br /> <br /> `ಶೈಕ್ಷಣಿಕ ಪ್ರವಾಸ~ ನಿಜವಾದ ಅರ್ಥದಲ್ಲಿ ಜ್ಞಾನಾರ್ಜನೆಯ ಅಂಗವಾಗಬೇಕಿದೆ. ಎಳೆಯ ಮಕ್ಕಳಿಗೆ ಕೇವಲ ಮನೋರಂಜನೆ ಪ್ರವಾಸವಾಗದೆ, ಇತಿಹಾಸ - ಸಂಸ್ಕೃತಿಯ ದರ್ಶನವಾಗಲಿ. ಶೈಕ್ಷಣಿಕ ಪ್ರವಾಸ ಅರ್ಥಪೂರ್ಣವಾಗಿರಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>