<p>‘ಸಿಎಂ ಕುರ್ಚಿ ಮ್ಯಾಲೆ ನಾಟಿ ಕೋಳಿ ಕುಂತೇತಲೇ ಪರಾಕ್!’ ಎಂದ ಗುಡ್ಡೆ.</p>.<p>‘ಯಾವುದಲೆ ಇದು ಹೊಸ ಕಾರಣಿಕ?’ ದುಬ್ಬೀರ ನಕ್ಕ.</p>.<p>‘ಈ ಕಾರಣಿಕದ ಪ್ರಕಾರ ಕೋಳಿ ಬಲಿಯಿಂದಾಗಿ ಬಂಡೆ ಸಿಎಂ ಆಗೋ ಎಲ್ಲ ಲಕ್ಷಣಗಳೂ ಕಾಣ್ತದಾವೆ. ದೇವಾನುದೇವತೆಗಳೆಲ್ಲ ಸಂತೃಪ್ತರಾಗಿ ಸಿಎಂ ಕುರ್ಚಿ ಮೇಲೆ ಪುಷ್ಪವೃಷ್ಟಿ ಮಾಡಾಕೆ ಕಾಯ್ತದಾವಂತೆ...’</p>.<p>‘ಏನೋಪ್ಪ, ಈ ತೆಪರನ ಟೀವೀಲಿ ನವೆಂಬರ್ ಕ್ರಾಂತಿ ಅಂತಿದ್ರು, ನವೆಂಬರ್ ಮುಗಿದೇ ಹೋತು...’</p>.<p>‘ನವೆಂಬರ್ ಮುಗಿದ್ರೆ ಏನಾತು, ಡಿಸೆಂಬರ್ ಕ್ರಾಂತಿ ಇಲ್ವಾ?’ ತೆಪರೇಸಿ ನಕ್ಕ.</p>.<p>‘ಅದೂ ಆಗದಿದ್ರೆ?’ ಕೊಟ್ರೇಶಿ ಕೊಕ್ಕೆ.</p>.<p>‘ಜನವರಿನಲ್ಲಿ ‘ಸಂ’ಕ್ರಾಂತಿ!’</p>.<p>‘ಆದ್ರೂ ನೀವು ಟೀವಿಯೋರು ಅದೀರಲ್ಲ, ಮಹಾ ಸುಳ್ಳು ಕಣಲೆ ತೆಪರ, ಕೋಳಿ ಸಾರು ತಿಂದು ಡಿಕೆಶಿ ಕಿವಿಯಲ್ಲಿ ಸಿಎಂ ಏನು ಹೇಳಿದ್ರು ಗೊತ್ತಾ ಅಂತ ನಿಮ್ ಟೀವೀಲಿ ತೋರಿಸ್ತಿದ್ರಿ. ಏನು ಕುರ್ಚಿ ಬಿಡ್ತೀನಿ ಅಂತ ಹೇಳಿದ್ರಾ?’ ಮಂಜಮ್ಮ ಕೇಳಿದಳು.</p>.<p>‘ಇಲ್ಲ, ಕೋಳಿ ಸಾರು ಬೊಂಬಾಟಾಗಿದೆ ಅಂದ್ರಂತೆ... ನೀವು ಏನೇನೋ ಕಲ್ಪನೆ ಮಾಡ್ಕಂಡ್ರೆ ನಾವೇನ್ ಮಾಡಾಕಾಗುತ್ತೆ?’ ತೆಪರೇಸಿ ವಾದಿಸಿದ.</p>.<p>‘ಆದ್ರೂ ಒಂದು ಕೋಳಿ ಏನೆಲ್ಲ ಮಾತಾಡಿಸಿಬಿಡ್ತು... ನಾವು ಪುರಾತನ ಕಾಲದಿಂದ್ಲೂ ಬ್ರದರ್ಸ್, ನಮ್ಮದು ಒಂದೇ ಪಕ್ಷ, ಒಂದೇ ಸಿದ್ಧಾಂತ ಅಂದ್ರಂತೆ ಸಿಎಂ...’ ದುಬ್ಬೀರಂಗೆ ಆಶ್ಚರ್ಯ.</p>.<p>‘ಒಂದೇ ಪಕ್ಷ, ಒಂದೇ ಸಿದ್ಧಾಂತ ಸರಿ, ಒಂದೇ ಕುರ್ಚಿ, ಬಿಡಕಾಗಲ್ಲ ಅನ್ಲಿಲ್ವಾ?’ ಕೊಟ್ರ ಕಿಸಕ್ಕೆಂದ.</p>.<p>‘ಲೇಯ್, ಹೆಂಗೋ ಇಬ್ರೂ ಖುಷ್ ಖುಷಿಯಾಗಿ ಒಂದಾಗಿದಾರೆ, ನಿನ್ನಂಥೋರು ಕಡ್ಡಿ ಆಡಿಸಿ ಎಲ್ಲ ಕೆಡಿಸ್ತೀರ...’ ದುಬ್ಬೀರಂಗೆ ಸಿಟ್ಟು ಬಂತು.</p>.<p>‘ಅದೆಲ್ಲ ಇರ್ಲಿ, ಸಿಎಂ– ಡಿಸಿಎಂ ಕದನ ವಿರಾಮದ ವಿಷ್ಯ ಟ್ರಂಪ್ಗೆ ಗೊತ್ತಾಗ್ಲಿಲ್ವಾ?’</p>.<p>‘ಇಲ್ಲ, ಯಾಕೆ?’</p>.<p>‘ಗೊತ್ತಾಗಿದ್ರೆ ಅವರ ಕುರ್ಚಿ ಕದನ ನಿಲ್ಸಿದ್ದು ನಾನೇ ಅಂತಿದ್ರು!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಿಎಂ ಕುರ್ಚಿ ಮ್ಯಾಲೆ ನಾಟಿ ಕೋಳಿ ಕುಂತೇತಲೇ ಪರಾಕ್!’ ಎಂದ ಗುಡ್ಡೆ.</p>.<p>‘ಯಾವುದಲೆ ಇದು ಹೊಸ ಕಾರಣಿಕ?’ ದುಬ್ಬೀರ ನಕ್ಕ.</p>.<p>‘ಈ ಕಾರಣಿಕದ ಪ್ರಕಾರ ಕೋಳಿ ಬಲಿಯಿಂದಾಗಿ ಬಂಡೆ ಸಿಎಂ ಆಗೋ ಎಲ್ಲ ಲಕ್ಷಣಗಳೂ ಕಾಣ್ತದಾವೆ. ದೇವಾನುದೇವತೆಗಳೆಲ್ಲ ಸಂತೃಪ್ತರಾಗಿ ಸಿಎಂ ಕುರ್ಚಿ ಮೇಲೆ ಪುಷ್ಪವೃಷ್ಟಿ ಮಾಡಾಕೆ ಕಾಯ್ತದಾವಂತೆ...’</p>.<p>‘ಏನೋಪ್ಪ, ಈ ತೆಪರನ ಟೀವೀಲಿ ನವೆಂಬರ್ ಕ್ರಾಂತಿ ಅಂತಿದ್ರು, ನವೆಂಬರ್ ಮುಗಿದೇ ಹೋತು...’</p>.<p>‘ನವೆಂಬರ್ ಮುಗಿದ್ರೆ ಏನಾತು, ಡಿಸೆಂಬರ್ ಕ್ರಾಂತಿ ಇಲ್ವಾ?’ ತೆಪರೇಸಿ ನಕ್ಕ.</p>.<p>‘ಅದೂ ಆಗದಿದ್ರೆ?’ ಕೊಟ್ರೇಶಿ ಕೊಕ್ಕೆ.</p>.<p>‘ಜನವರಿನಲ್ಲಿ ‘ಸಂ’ಕ್ರಾಂತಿ!’</p>.<p>‘ಆದ್ರೂ ನೀವು ಟೀವಿಯೋರು ಅದೀರಲ್ಲ, ಮಹಾ ಸುಳ್ಳು ಕಣಲೆ ತೆಪರ, ಕೋಳಿ ಸಾರು ತಿಂದು ಡಿಕೆಶಿ ಕಿವಿಯಲ್ಲಿ ಸಿಎಂ ಏನು ಹೇಳಿದ್ರು ಗೊತ್ತಾ ಅಂತ ನಿಮ್ ಟೀವೀಲಿ ತೋರಿಸ್ತಿದ್ರಿ. ಏನು ಕುರ್ಚಿ ಬಿಡ್ತೀನಿ ಅಂತ ಹೇಳಿದ್ರಾ?’ ಮಂಜಮ್ಮ ಕೇಳಿದಳು.</p>.<p>‘ಇಲ್ಲ, ಕೋಳಿ ಸಾರು ಬೊಂಬಾಟಾಗಿದೆ ಅಂದ್ರಂತೆ... ನೀವು ಏನೇನೋ ಕಲ್ಪನೆ ಮಾಡ್ಕಂಡ್ರೆ ನಾವೇನ್ ಮಾಡಾಕಾಗುತ್ತೆ?’ ತೆಪರೇಸಿ ವಾದಿಸಿದ.</p>.<p>‘ಆದ್ರೂ ಒಂದು ಕೋಳಿ ಏನೆಲ್ಲ ಮಾತಾಡಿಸಿಬಿಡ್ತು... ನಾವು ಪುರಾತನ ಕಾಲದಿಂದ್ಲೂ ಬ್ರದರ್ಸ್, ನಮ್ಮದು ಒಂದೇ ಪಕ್ಷ, ಒಂದೇ ಸಿದ್ಧಾಂತ ಅಂದ್ರಂತೆ ಸಿಎಂ...’ ದುಬ್ಬೀರಂಗೆ ಆಶ್ಚರ್ಯ.</p>.<p>‘ಒಂದೇ ಪಕ್ಷ, ಒಂದೇ ಸಿದ್ಧಾಂತ ಸರಿ, ಒಂದೇ ಕುರ್ಚಿ, ಬಿಡಕಾಗಲ್ಲ ಅನ್ಲಿಲ್ವಾ?’ ಕೊಟ್ರ ಕಿಸಕ್ಕೆಂದ.</p>.<p>‘ಲೇಯ್, ಹೆಂಗೋ ಇಬ್ರೂ ಖುಷ್ ಖುಷಿಯಾಗಿ ಒಂದಾಗಿದಾರೆ, ನಿನ್ನಂಥೋರು ಕಡ್ಡಿ ಆಡಿಸಿ ಎಲ್ಲ ಕೆಡಿಸ್ತೀರ...’ ದುಬ್ಬೀರಂಗೆ ಸಿಟ್ಟು ಬಂತು.</p>.<p>‘ಅದೆಲ್ಲ ಇರ್ಲಿ, ಸಿಎಂ– ಡಿಸಿಎಂ ಕದನ ವಿರಾಮದ ವಿಷ್ಯ ಟ್ರಂಪ್ಗೆ ಗೊತ್ತಾಗ್ಲಿಲ್ವಾ?’</p>.<p>‘ಇಲ್ಲ, ಯಾಕೆ?’</p>.<p>‘ಗೊತ್ತಾಗಿದ್ರೆ ಅವರ ಕುರ್ಚಿ ಕದನ ನಿಲ್ಸಿದ್ದು ನಾನೇ ಅಂತಿದ್ರು!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>