ಅವೈಜ್ಞಾನಿಕ ರೈಲ್ವೆ ಪ್ರಯಾಣ ದರ ರದ್ದುಪಡಿಸಿ
ಮಂಡ್ಯದಿಂದ ಮೈಸೂರಿನವರೆಗೆ ಎಲ್ಲೆ ಹತ್ತಿ, ಎಲ್ಲೇ ಇಳಿದರೂ ಎಕ್ಸ್ಪ್ರೆಸ್ ರೈಲುಗಳಲ್ಲಿ ರೂ. 30 ಟಿಕೆಟ್ ಪಡೆಯಬೇಕಾಗಿದೆ. ಶ್ರೀರಂಗಪಟ್ಟಣದಿಂದ 10 ಕಿ.ಮೀ. ದೂರದ ಮೈಸೂರಿಗೂ ರೂ.30. ಐದು ಕಿ.ಮೀ. ದೂರದ ಪಾಂಡವಪುರ ರೈಲ್ವೆ ನಿಲ್ದಾಣಕ್ಕೂ ರೂ.30 ಪಾವತಿಸಬೇಕಿದೆ. ಈ ಅವೈಜ್ಞಾನಿಕ ಪ್ರಯಾಣ ದರವನ್ನು ರದ್ದುಪಡಿಸಿ, ಗ್ರಾಮೀಣ ಭಾಗದ ಬಡಜನರು ರೈಲಿನಲ್ಲಿ ಪ್ರಯಾಣ ಮಾಡುವಂತಹ ಅನುಕೂಲಕರ ದರ ನಿಗದಿಪಡಿಸಬೇಕೆಂದು ರೈಲ್ವೆ ಇಲಾಖಾಧಿಕಾರಿಗಳಲ್ಲಿ ಮನವಿ.Last Updated 1 ಏಪ್ರಿಲ್ 2013, 19:59 IST