<p>ಮಂಡ್ಯದಿಂದ ಮೈಸೂರಿನವರೆಗೆ ಎಲ್ಲೆ ಹತ್ತಿ, ಎಲ್ಲೇ ಇಳಿದರೂ ಎಕ್ಸ್ಪ್ರೆಸ್ ರೈಲುಗಳಲ್ಲಿ ರೂ. 30 ಟಿಕೆಟ್ ಪಡೆಯಬೇಕಾಗಿದೆ. ಶ್ರೀರಂಗಪಟ್ಟಣದಿಂದ 10 ಕಿ.ಮೀ. ದೂರದ ಮೈಸೂರಿಗೂ ರೂ.30. ಐದು ಕಿ.ಮೀ. ದೂರದ ಪಾಂಡವಪುರ ರೈಲ್ವೆ ನಿಲ್ದಾಣಕ್ಕೂ ರೂ.30 ಪಾವತಿಸಬೇಕಿದೆ. ಈ ಅವೈಜ್ಞಾನಿಕ ಪ್ರಯಾಣ ದರವನ್ನು ರದ್ದುಪಡಿಸಿ, ಗ್ರಾಮೀಣ ಭಾಗದ ಬಡಜನರು ರೈಲಿನಲ್ಲಿ ಪ್ರಯಾಣ ಮಾಡುವಂತಹ ಅನುಕೂಲಕರ ದರ ನಿಗದಿಪಡಿಸಬೇಕೆಂದು ರೈಲ್ವೆ ಇಲಾಖಾಧಿಕಾರಿಗಳಲ್ಲಿ ಮನವಿ.<br /> <br /> ಮಂಡ್ಯದಿಂದ ಮೈಸೂರಿಗೆ ಮಧ್ಯಾಹ್ನ 1.30 ರಿಂದ ಸಂಜೆ 6.45 ರವರೆಗೆ ಯಾವುದೇ ಸೆಟಲ್ ರೈಲಿನ ವ್ಯವಸ್ಥೆ ಇಲ್ಲ. ಇದರಿಂದ ಯಲಿಯೂರು, ಬ್ಯಾಡರಹಳ್ಳಿ ಚಂದಗಿರಿಕೊಪ್ಪಲು ವಿಶೇಷವಾಗಿ ಶ್ರೀರಂಗಪಟ್ಟಣದಂತಹ ಪ್ರವಾಸಿ ತಾಣಕ್ಕೂ ಪ್ರಯಾಣಿಸಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ದಯವಿಟ್ಟು ಎರಡು ಸೆಟಲ್ ರೈಲಿನ ವ್ಯವಸ್ಥೆಗೆ ರೈಲ್ವೆ ಇಲಾಖೆ ಕ್ರಮ ವಹಿಸಲಿ. <br /> <br /> ಕಾವೇರಿ, ಟಿಪ್ಪು ಎಕ್ಸ್ಪ್ರೆಸ್ ಸೇರಿದಂತೆ ಅನೇಕ ಎಕ್ಸ್ಪ್ರೆಸ್ ರೈಲಿನ ನಿಲುಗಡೆ ಶ್ರೀರಂಗಪಟ್ಟಣದಲ್ಲಿ ಇಲ್ಲ. ಇಂತಹ ಐತಿಹಾಸಿಕ ಪ್ರವಾಸಿ ತಾಣದ ನಿಲ್ದಾಣದಲ್ಲೆ ನಿಲುಗಡೆ ವ್ಯವಸ್ಥೆ ಇಲ್ಲವೆಂದರೆ ಹೇಗೆ? ದಯವಿಟ್ಟು ರೈಲ್ವೆ ಇಲಾಖೆ ಅಧಿಕಾರಿಗಳು ಅನುಕೂಲ ಕಲ್ಪಿಸುವ ಕ್ರಮ ಜರುಗಿಸಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯದಿಂದ ಮೈಸೂರಿನವರೆಗೆ ಎಲ್ಲೆ ಹತ್ತಿ, ಎಲ್ಲೇ ಇಳಿದರೂ ಎಕ್ಸ್ಪ್ರೆಸ್ ರೈಲುಗಳಲ್ಲಿ ರೂ. 30 ಟಿಕೆಟ್ ಪಡೆಯಬೇಕಾಗಿದೆ. ಶ್ರೀರಂಗಪಟ್ಟಣದಿಂದ 10 ಕಿ.ಮೀ. ದೂರದ ಮೈಸೂರಿಗೂ ರೂ.30. ಐದು ಕಿ.ಮೀ. ದೂರದ ಪಾಂಡವಪುರ ರೈಲ್ವೆ ನಿಲ್ದಾಣಕ್ಕೂ ರೂ.30 ಪಾವತಿಸಬೇಕಿದೆ. ಈ ಅವೈಜ್ಞಾನಿಕ ಪ್ರಯಾಣ ದರವನ್ನು ರದ್ದುಪಡಿಸಿ, ಗ್ರಾಮೀಣ ಭಾಗದ ಬಡಜನರು ರೈಲಿನಲ್ಲಿ ಪ್ರಯಾಣ ಮಾಡುವಂತಹ ಅನುಕೂಲಕರ ದರ ನಿಗದಿಪಡಿಸಬೇಕೆಂದು ರೈಲ್ವೆ ಇಲಾಖಾಧಿಕಾರಿಗಳಲ್ಲಿ ಮನವಿ.<br /> <br /> ಮಂಡ್ಯದಿಂದ ಮೈಸೂರಿಗೆ ಮಧ್ಯಾಹ್ನ 1.30 ರಿಂದ ಸಂಜೆ 6.45 ರವರೆಗೆ ಯಾವುದೇ ಸೆಟಲ್ ರೈಲಿನ ವ್ಯವಸ್ಥೆ ಇಲ್ಲ. ಇದರಿಂದ ಯಲಿಯೂರು, ಬ್ಯಾಡರಹಳ್ಳಿ ಚಂದಗಿರಿಕೊಪ್ಪಲು ವಿಶೇಷವಾಗಿ ಶ್ರೀರಂಗಪಟ್ಟಣದಂತಹ ಪ್ರವಾಸಿ ತಾಣಕ್ಕೂ ಪ್ರಯಾಣಿಸಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ದಯವಿಟ್ಟು ಎರಡು ಸೆಟಲ್ ರೈಲಿನ ವ್ಯವಸ್ಥೆಗೆ ರೈಲ್ವೆ ಇಲಾಖೆ ಕ್ರಮ ವಹಿಸಲಿ. <br /> <br /> ಕಾವೇರಿ, ಟಿಪ್ಪು ಎಕ್ಸ್ಪ್ರೆಸ್ ಸೇರಿದಂತೆ ಅನೇಕ ಎಕ್ಸ್ಪ್ರೆಸ್ ರೈಲಿನ ನಿಲುಗಡೆ ಶ್ರೀರಂಗಪಟ್ಟಣದಲ್ಲಿ ಇಲ್ಲ. ಇಂತಹ ಐತಿಹಾಸಿಕ ಪ್ರವಾಸಿ ತಾಣದ ನಿಲ್ದಾಣದಲ್ಲೆ ನಿಲುಗಡೆ ವ್ಯವಸ್ಥೆ ಇಲ್ಲವೆಂದರೆ ಹೇಗೆ? ದಯವಿಟ್ಟು ರೈಲ್ವೆ ಇಲಾಖೆ ಅಧಿಕಾರಿಗಳು ಅನುಕೂಲ ಕಲ್ಪಿಸುವ ಕ್ರಮ ಜರುಗಿಸಲಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>