ಇವರು ಕಾಡು ಮರಗಳ ಡೈರೆಕ್ಟರಿ!
ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ಸಮೀಪದ ಇಡುಗುಂದಿಯ ಅರಬೈಲ್ ಹೆದ್ದಾರಿ 63ರ ಬದಿಯಲ್ಲಿ ಹಸಿರ ಸಿರಿಯ ತಾಣವೊಂದು ಕೈಬೀಸಿ ಕರೆಯುತ್ತದೆ. ಹಾಗೇ ಒಳ ಹೊಕ್ಕರೆ ಚಿಗುರಿನ ಸಂಭ್ರಮದಲ್ಲಿರುವ ಸಸಿಗಳ ನಡುವೆ ಹಸಿರು ಟೊಪ್ಪಿ, ಖಾಕಿ ದಿರಿಸು ಧರಿಸಿರುವ ವ್ಯಕ್ತಿಯೊಬ್ಬರು ಲಗುಬಗೆಯಿಂದ ಓಡಾಡುತ್ತಾ, ಗಿಡಗಳನ್ನು ಆರೈಕೆ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅವರೇ ಅರಣ್ಯ ಇಲಾಖೆಯ ವನಪಾಲಕ ನಾರಾಯಣ ಬಿಲ್ಲಚತ್ರಿ.Last Updated 12 ಜೂನ್ 2018, 13:31 IST