ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಟರ್ ಮಚಾದೊ

ಸಂಪರ್ಕ:
ADVERTISEMENT

ಪ್ರಜಾವಾಣಿ ಚರ್ಚೆ: ಕ್ರೈಸ್ತರ ಹಿಂಸಿಸುವುದೇ ಮಸೂದೆಯ ಉದ್ದೇಶ

ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಮಾತನಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಕುರಿತು ಪ್ರಸ್ತಾಪಿಸಿದ್ದರು. ತಮ್ಮ ತಾಲೂಕಿನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಬಲವಂತದ ಅಥವಾ ಆಮಿಷದ ಮತಾಂತರಗಳು ನಡೆಯುತ್ತಿವೆ ಎಂದು ಹೇಳಿದ್ದರು. ಸ್ವತಃ ತಮ್ಮ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ದೂರಿದ್ದರು. ಈ ಘಟನೆಯ ನಂತರ ಕ್ರೈಸ್ತ ಧರ್ಮದ ಮೇಲೆ ಭುಗಿಲೆದ್ದ ಅಸಮಾಧಾನ ಒಂದು ತಿಂಗಳ ಅವಧಿಯಲ್ಲಿ ಅನೇಕ ಚರ್ಚುಗಳ, ಪ್ರಾರ್ಥನಾಲಯಗಳ ಮೇಲಿನ ದಾಳಿಗೆ ಕಾರಣವಾಯಿತು. ಸಾರ್ವಜನಿಕವಾಗಿ ಕ್ರೈಸ್ತರು ಪ್ರಾರ್ಥಿಸುವುದು ಸಹ ತಪ್ಪು ಎಂಬಂತೆ ಸರ್ಕಾರದ ಅನೇಕ ಪ್ರಾಧಿಕಾರಗಳು ಕ್ರೈಸ್ತ ಸಮುದಾಯದ ಜನರನ್ನು ಅಪರಾಧಿಗಳಂತೆ ಕಂಡವು. ಸ್ವಇಚ್ಛೆಯ ಮತಾಂತರ - ಬಲವಂತದ ಮತಾಂತರ ಹಾಗೂ ಆಮಿಷ ಒಡ್ಡಿ ಮಾಡುವ ಮತಾಂತರದ ಜಿಜ್ಞಾಸೆಯಲ್ಲಿ ಕ್ರೈಸ್ತ ಧರ್ಮ ಏಕೆ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸುತ್ತೇನೆ.
Last Updated 10 ಡಿಸೆಂಬರ್ 2021, 22:36 IST
ಪ್ರಜಾವಾಣಿ ಚರ್ಚೆ: ಕ್ರೈಸ್ತರ ಹಿಂಸಿಸುವುದೇ ಮಸೂದೆಯ ಉದ್ದೇಶ
ADVERTISEMENT
ADVERTISEMENT
ADVERTISEMENT
ADVERTISEMENT