<p><strong>ಹೈದರಾಬಾದ್</strong>: ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಇಂದು (ಶನಿವಾರ) ನಡೆಯುತ್ತಿದ್ದು, ಈ ನಡುವೆ 'ಮಿಸ್ ಇಂಡಿಯಾ' ನಂದಿನಿ ಗುಪ್ತಾ ಅವರು ಫಿನಾಲೆಗಾಗಿ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.</p><p>ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಂದಿನಿ ಗುಪ್ತಾ, ಫಿನಾಲೆಗಾಗಿ ಗೌನ್ ಅನ್ನು ವಿಯೆಟ್ನಾಮೀಸ್ ಫ್ಯಾಷನ್ ಡಿಸೈನರ್ ವಿನ್ಯಾಸಗೊಳಿಸಿರಬಹುದು. ಆದರೆ ಈ ವಿಶೇಷ ವಿನ್ಯಾಸದ ಉಡುಗೆಯು ಗಂಗಾ ನದಿಯ ಪ್ರತೀಕ ಮತ್ತು ದೈವಿಕತೆಯ ಸಂಕೇತವಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p>.ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ: BYV.ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಮಾಹಿತಿ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ವಜಾ. <p>ಈ ವಿಶೇಷ ವಿನ್ಯಾಸದ ಗೌನ್, 'ನೀರು ಮತ್ತು ಬೆಳಕಿನ ಅಲೌಕಿಕ ಸೌಂದರ್ಯದ ಪ್ರತಿಬಿಂಬವಾಗಿದೆ. ಗಂಗಾ ಕೇವಲ ನದಿಯಲ್ಲ. ಶುದ್ಧೀಕರಣ, ನವೀಕರಣದ ಕೊಂಡಿಯಾಗಿದೆ' ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>'ಬೆಳಗಿನ ಮಂಜಿನಂತೆ ಸೂಕ್ಷ್ಮವಾದ ಅರೆಪಾರದರ್ಶಕ ಬಟ್ಟೆಗಳಿಂದ ರಚಿಸಲಾದ ಈ ಗೌನ್, ಹರಿಯುವ ನೀರಿನ ಅಲೆಯಂತೆ ಭಾಸವಾಗುತ್ತದೆ. ಇದು ಸೌಂದರ್ಯಕ್ಕೆ ಮತ್ತಷ್ಟು ಸೊಬಗನ್ನು ಸಂಯೋಜಿಸುತ್ತದೆ' ಎಂದು ಗುಪ್ತಾ ಹೇಳಿದ್ದಾರೆ.</p><p>ಸುಮಾರು ಒಂದು ತಿಂಗಳಿನಿಂದ ನಡೆದ ವಿವಿಧ ಕಾರ್ಯಕ್ರಮಗಳ ಬಳಿಕ ತೆಲಂಗಾಣದ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಜಗತ್ತಿನ ವಿವಿಧ ದೇಶಗಳ 108 ಸುಂದರಿಯರು ಸ್ಪರ್ಧೆಯಲ್ಲಿದ್ದಾರೆ.</p>.ಆಪರೇಷನ್ ಸಿಂಧೂರದ ಬಗ್ಗೆ ಅವಹೇಳನಕಾರಿ ಪೋಸ್ಟ್; ಇನ್ಫ್ಲುಯೆನ್ಸರ್ ಬಂಧನ.IPL 2025: 10 ಜಯ, 9 ಮಂದಿ ಪಂದ್ಯಶ್ರೇಷ್ಠ: ಮ್ಯಾಚ್ವಿನ್ನರ್ಗಳಿಂದ ಕೂಡಿದೆ RCB. <p>ವಿಶ್ವ ಸುಂದರಿ ಸ್ಪರ್ಧೆಯು ಸೌಂದರ್ಯ, ಒಗ್ಗಟ್ಟು ಮತ್ತು ನಿರ್ದಿಷ್ಟ ಉದ್ದೇಶದ ಅದ್ಭುತ ಕಾರ್ಯಕ್ರಮವಾಗಿದೆ ಎನ್ನುತ್ತಾರೆ ಆಯೋಜಕರು.</p><p>ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ 71ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ ಅವರು ಹೊಸ ವಿಶ್ವ ಸುಂದರಿಗೆ ಕಿರೀಟ ತೊಡಿಸಲಿದ್ದಾರೆ.</p><p>ಭಾರತದಿಂದ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಟಾಪ್ 40 ಕ್ವಾರ್ಟರ್ ಫೈನಲಿಸ್ಟ್ ಹಾಗೂ ಏಷ್ಯಾ ಪ್ರದೇಶದ ಮೊದಲ ಹತ್ತರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. </p><p>1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ಪ್ರತಿಷ್ಠಿತ ಸ್ಪರ್ಧೆಯ ಆತಿಥ್ಯ ವಹಿಸಿದೆ.</p>.ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ: ಜೆ.ಪಿ. ನಡ್ಡಾ.ಮಳೆ ಸಾಕಾ..ಬೇಕಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ ಎನ್ನುವರಿಗೆ ‘ಕೈ‘ ತಿರುಗೇಟು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಇಂದು (ಶನಿವಾರ) ನಡೆಯುತ್ತಿದ್ದು, ಈ ನಡುವೆ 'ಮಿಸ್ ಇಂಡಿಯಾ' ನಂದಿನಿ ಗುಪ್ತಾ ಅವರು ಫಿನಾಲೆಗಾಗಿ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.</p><p>ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಂದಿನಿ ಗುಪ್ತಾ, ಫಿನಾಲೆಗಾಗಿ ಗೌನ್ ಅನ್ನು ವಿಯೆಟ್ನಾಮೀಸ್ ಫ್ಯಾಷನ್ ಡಿಸೈನರ್ ವಿನ್ಯಾಸಗೊಳಿಸಿರಬಹುದು. ಆದರೆ ಈ ವಿಶೇಷ ವಿನ್ಯಾಸದ ಉಡುಗೆಯು ಗಂಗಾ ನದಿಯ ಪ್ರತೀಕ ಮತ್ತು ದೈವಿಕತೆಯ ಸಂಕೇತವಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.</p>.ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ: BYV.ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಮಾಹಿತಿ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ವಜಾ. <p>ಈ ವಿಶೇಷ ವಿನ್ಯಾಸದ ಗೌನ್, 'ನೀರು ಮತ್ತು ಬೆಳಕಿನ ಅಲೌಕಿಕ ಸೌಂದರ್ಯದ ಪ್ರತಿಬಿಂಬವಾಗಿದೆ. ಗಂಗಾ ಕೇವಲ ನದಿಯಲ್ಲ. ಶುದ್ಧೀಕರಣ, ನವೀಕರಣದ ಕೊಂಡಿಯಾಗಿದೆ' ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.</p><p>'ಬೆಳಗಿನ ಮಂಜಿನಂತೆ ಸೂಕ್ಷ್ಮವಾದ ಅರೆಪಾರದರ್ಶಕ ಬಟ್ಟೆಗಳಿಂದ ರಚಿಸಲಾದ ಈ ಗೌನ್, ಹರಿಯುವ ನೀರಿನ ಅಲೆಯಂತೆ ಭಾಸವಾಗುತ್ತದೆ. ಇದು ಸೌಂದರ್ಯಕ್ಕೆ ಮತ್ತಷ್ಟು ಸೊಬಗನ್ನು ಸಂಯೋಜಿಸುತ್ತದೆ' ಎಂದು ಗುಪ್ತಾ ಹೇಳಿದ್ದಾರೆ.</p><p>ಸುಮಾರು ಒಂದು ತಿಂಗಳಿನಿಂದ ನಡೆದ ವಿವಿಧ ಕಾರ್ಯಕ್ರಮಗಳ ಬಳಿಕ ತೆಲಂಗಾಣದ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಜಗತ್ತಿನ ವಿವಿಧ ದೇಶಗಳ 108 ಸುಂದರಿಯರು ಸ್ಪರ್ಧೆಯಲ್ಲಿದ್ದಾರೆ.</p>.ಆಪರೇಷನ್ ಸಿಂಧೂರದ ಬಗ್ಗೆ ಅವಹೇಳನಕಾರಿ ಪೋಸ್ಟ್; ಇನ್ಫ್ಲುಯೆನ್ಸರ್ ಬಂಧನ.IPL 2025: 10 ಜಯ, 9 ಮಂದಿ ಪಂದ್ಯಶ್ರೇಷ್ಠ: ಮ್ಯಾಚ್ವಿನ್ನರ್ಗಳಿಂದ ಕೂಡಿದೆ RCB. <p>ವಿಶ್ವ ಸುಂದರಿ ಸ್ಪರ್ಧೆಯು ಸೌಂದರ್ಯ, ಒಗ್ಗಟ್ಟು ಮತ್ತು ನಿರ್ದಿಷ್ಟ ಉದ್ದೇಶದ ಅದ್ಭುತ ಕಾರ್ಯಕ್ರಮವಾಗಿದೆ ಎನ್ನುತ್ತಾರೆ ಆಯೋಜಕರು.</p><p>ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ 71ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ ಅವರು ಹೊಸ ವಿಶ್ವ ಸುಂದರಿಗೆ ಕಿರೀಟ ತೊಡಿಸಲಿದ್ದಾರೆ.</p><p>ಭಾರತದಿಂದ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಟಾಪ್ 40 ಕ್ವಾರ್ಟರ್ ಫೈನಲಿಸ್ಟ್ ಹಾಗೂ ಏಷ್ಯಾ ಪ್ರದೇಶದ ಮೊದಲ ಹತ್ತರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ. </p><p>1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ಪ್ರತಿಷ್ಠಿತ ಸ್ಪರ್ಧೆಯ ಆತಿಥ್ಯ ವಹಿಸಿದೆ.</p>.ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ: ಜೆ.ಪಿ. ನಡ್ಡಾ.ಮಳೆ ಸಾಕಾ..ಬೇಕಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ ಎನ್ನುವರಿಗೆ ‘ಕೈ‘ ತಿರುಗೇಟು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>