<figcaption>""</figcaption>.<p><strong>ನವದೆಹಲಿ: </strong>ಕೇಂದ್ರ ಸರ್ಕಾರದ 2020–21ನೇ ಸಾಲಿನ ಬಜೆಟ್ ಮಂಡನೆ ವೇಳೆ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲವುವಿನಾಯಿತಿ ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ತೆರಿಗೆದಾದರರು ತಮಗೆ ಅನುಕೂಲವೆನಿಸಿದರೆ ಈ ಹಿಂದಿನ ನಿಯಮದಂತೆಯೇ ತೆರಿಗೆ ಪಾವತಿಸುವ ಅವಕಾಶವನ್ನೂ ನೀಡಿದ್ದಾರೆ.</p>.<p><br />ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯಿಂದಾಗಿ ವಾರ್ಷಿಕ ₹ 40 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಿರುವ ಸಚಿವೆ, ಹೊಸ ನಿಯಮವು ತೆರಿಗೆದಾರರಿಗೆ ಕಡ್ಡಾಯವಲ್ಲ. ಅದು ಆಯ್ಕೆಯಾಗಿದ್ದು, ತೆರಿಗೆದಾರರು ಬಯಸಿದರೆ ಹಳೆಯ ನಿಯಮವನ್ನೇ ಆಯ್ಕೆ ಮಾಡಿಕೊಳ್ಳಬಹದುಎಂದಿದ್ದಾರೆ.</p>.<p>ಮುಂದುವರಿದು,100 ವಿವಿಧ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ.ಅದರಲ್ಲಿ 70 ರೀತಿಯ ವಿನಾಯಿತಿಯನ್ನು ಹೊಸ ವ್ಯವಸ್ಥೆಯಲ್ಲಿ ತೆಗೆದುಹಾಕಲಾಗುವುದು.ಉಳಿದವುಗಳನ್ನೂ ನಿಧಾನವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ. ಆದರೆ, ವಿನಾಯಿತಿ ನೀಡಲಾಗಿರುವ 70 ತೆರಿಗೆಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.</p>.<p><strong>ಮುದ್ರಣ ಕಾಗದದ ಮೇಲಿನ ಆಮದು ತೆರಿಗೆ ಇಳಿಕೆ</strong><br />ಕೇಂದ್ರ ಸರ್ಕಾರವುಕಳೆದ ಬಜೆಟ್ನಲ್ಲಿ, ಮುದ್ರಣ ಕಾಗದ (ನ್ಯೂಸ್ ಪ್ರಿಂಟ್) ಮತ್ತು ಸುಧಾರಿತ ಕಾಗದದ ಮೇಲಿನ (ಲೈಟ್ವೇಟ್) ಮೇಲಿನ ತೆರಿಗೆಯನ್ನು ಶೇ.10ಕ್ಕೆ ಹೆಚ್ಚಿಸಿತ್ತು. ‘ಈ ಏರಿಕೆಯಿಂದಾಗಿ ಮುದ್ರಣ ಕ್ಷೇತ್ರಕ್ಕೆಹೊಡೆತ ಬೀಳಲಿದೆ. ಅದನ್ನು ಕಡಿತಮಾಡಬೇಕುಎಂಬ ಸಲಹೆಗಳು ಬಂದಿದ್ದವು.ಹಾಗಾಗಿ ಆಮದು ಸುಂಕವನ್ನು ಶೇ. 10 ರಿಂದ ಶೇ. 5ಕ್ಕೆಕಡಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಬಜೆಟ್ ಮಂಡನೆ ವೇಳೆ ಸೀತಾರಾಮನ್ ತಿಳಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ನವದೆಹಲಿ: </strong>ಕೇಂದ್ರ ಸರ್ಕಾರದ 2020–21ನೇ ಸಾಲಿನ ಬಜೆಟ್ ಮಂಡನೆ ವೇಳೆ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಕೆಲವುವಿನಾಯಿತಿ ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ತೆರಿಗೆದಾದರರು ತಮಗೆ ಅನುಕೂಲವೆನಿಸಿದರೆ ಈ ಹಿಂದಿನ ನಿಯಮದಂತೆಯೇ ತೆರಿಗೆ ಪಾವತಿಸುವ ಅವಕಾಶವನ್ನೂ ನೀಡಿದ್ದಾರೆ.</p>.<p><br />ಸದ್ಯ ನೀಡಲಾಗಿರುವ ತೆರಿಗೆ ವಿನಾಯಿತಿಯಿಂದಾಗಿ ವಾರ್ಷಿಕ ₹ 40 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಿರುವ ಸಚಿವೆ, ಹೊಸ ನಿಯಮವು ತೆರಿಗೆದಾರರಿಗೆ ಕಡ್ಡಾಯವಲ್ಲ. ಅದು ಆಯ್ಕೆಯಾಗಿದ್ದು, ತೆರಿಗೆದಾರರು ಬಯಸಿದರೆ ಹಳೆಯ ನಿಯಮವನ್ನೇ ಆಯ್ಕೆ ಮಾಡಿಕೊಳ್ಳಬಹದುಎಂದಿದ್ದಾರೆ.</p>.<p>ಮುಂದುವರಿದು,100 ವಿವಿಧ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ.ಅದರಲ್ಲಿ 70 ರೀತಿಯ ವಿನಾಯಿತಿಯನ್ನು ಹೊಸ ವ್ಯವಸ್ಥೆಯಲ್ಲಿ ತೆಗೆದುಹಾಕಲಾಗುವುದು.ಉಳಿದವುಗಳನ್ನೂ ನಿಧಾನವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ. ಆದರೆ, ವಿನಾಯಿತಿ ನೀಡಲಾಗಿರುವ 70 ತೆರಿಗೆಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.</p>.<p><strong>ಮುದ್ರಣ ಕಾಗದದ ಮೇಲಿನ ಆಮದು ತೆರಿಗೆ ಇಳಿಕೆ</strong><br />ಕೇಂದ್ರ ಸರ್ಕಾರವುಕಳೆದ ಬಜೆಟ್ನಲ್ಲಿ, ಮುದ್ರಣ ಕಾಗದ (ನ್ಯೂಸ್ ಪ್ರಿಂಟ್) ಮತ್ತು ಸುಧಾರಿತ ಕಾಗದದ ಮೇಲಿನ (ಲೈಟ್ವೇಟ್) ಮೇಲಿನ ತೆರಿಗೆಯನ್ನು ಶೇ.10ಕ್ಕೆ ಹೆಚ್ಚಿಸಿತ್ತು. ‘ಈ ಏರಿಕೆಯಿಂದಾಗಿ ಮುದ್ರಣ ಕ್ಷೇತ್ರಕ್ಕೆಹೊಡೆತ ಬೀಳಲಿದೆ. ಅದನ್ನು ಕಡಿತಮಾಡಬೇಕುಎಂಬ ಸಲಹೆಗಳು ಬಂದಿದ್ದವು.ಹಾಗಾಗಿ ಆಮದು ಸುಂಕವನ್ನು ಶೇ. 10 ರಿಂದ ಶೇ. 5ಕ್ಕೆಕಡಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ಬಜೆಟ್ ಮಂಡನೆ ವೇಳೆ ಸೀತಾರಾಮನ್ ತಿಳಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>