ಮುಂದಿನ ಕೆಲ ತಿಂಗಳುಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ನಮ್ಮ ಅತ್ಯದ್ಭುತ ಕೆಲಸವನ್ನು ಕಂಡಿರುವ ಜನರು ಮತ್ತೆ ನಮಗೆ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾವಿದೆ ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಹೇಳಿದರು.
ಕೋವಿಡ್–19 ಸವಾಲುಗಳನ್ನು ಎದುರಿಸಿ ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬುನಾದಿ ಹಾಕಲಾಗಿದೆ ಎಂದು ಹೇಳಿದರು.
2014ರಲ್ಲಿ ಮೋದಿ ಸರ್ಕಾರ ಅಧಿಕಾರ ಬಂದಾಗ ಬಹಳಷ್ಟು ಸವಾಲುಗಳು ಸರ್ಕಾರದ ಮುಂದಿದ್ದವು. ಅವುಗಳನ್ನು ಮೀರಿ ರಚನಾತ್ಮಕ ಹಾದಿಯಲ್ಲಿ ಸರ್ಕಾರ ಮುನ್ನಡೆದಿದೆ ಎಂದು ಅವರು ಹೇಳಿದ್ದಾರೆ.
ಮೋದಿ ನೇತೃತ್ವದ ಸರ್ಕಾರವು ಸಮಾಜದಲ್ಲಿರುವ ಅಸಮಾನತೆಯನ್ನು ವ್ಯವಸ್ಥಿತವಾಗಿ ಹೋಗಲಾಡಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.