2027ಕ್ಕೆ ವಿಕಸಿತ ಭಾರತ
ಎಲ್ಲರ ಸಮಗ್ರ ಅಭಿವೃದ್ಧಿ
'ಪ್ರತಿಯೊಬ್ಬರ ಪ್ರಯತ್ನ' ಚಿಂತನೆಯಲ್ಲಿ 3ಡಿ (ಡೆಮಾಗ್ರಫಿ, ಡೆಮಾಕ್ರಸಿ, ಡೈವರ್ಸಿಟಿ) ಅಭಿವೃದ್ಧಿ.
ಆದ್ಯತೆಯ ವಲಯಗಳು: ಬಡವರ ಕಲ್ಯಾಣ–ದೇಶದ ಕಲ್ಯಾಣ, ಯುವ ಸಬಲೀಕರಣ, ರೈತರ ಕ್ಷೇಮಾಭ್ಯದಯ, ನಾರಿ ಶಕ್ತಿ
ಮಧ್ಯಂತರ ಬಜೆಟ್ ವ್ಯಾಪಕ ಮತ್ತು ವಿನೂತನವಾಗಿದೆ. ನಿರಂತರತೆಯ ವಿಶ್ವಾಸ ಇದರಲ್ಲಿದೆ. ವಿಕಸಿತ ಭಾರತದ ನಾಲ್ಕು ಆಧಾರ ಸ್ಥಂಭಗಳಾದ ಯುವ ಜನರು, ಬಡವರು, ಮಹಿಳೆಯರು ಮತ್ತು ರೈತರನ್ನು ಈ ಬಜೆಟ್ ಸಬಲೀಕರಣಗೊಳಿಸಲಿದೆ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಖಾತ್ರಿ ನೀಡಿದೆ.–ನರೇಂದ್ರ ಮೋದಿ, ಪ್ರಧಾನ ಮಂತ್ರಿ
9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಿಸಲು ಸರ್ಕಾರ ಉತ್ತೇಜನ ನೀಡಲಿದೆ.–ನಿರ್ಮಲಾ ಸೀತಾರಾಮನ್
ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ.–ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆ
ತೆರಿಗೆ ದರಗಳಲ್ಲಿ ಯಥಾಸ್ಥಿತಿ
₹ 7 ಲಕ್ಷದ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಹೊರೆ ಇಲ್ಲ
ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು
ಆದಾಯ ಸ್ವೀಕೃತಿಗಳು ಬಜೆಟ್ನ ಅಂದಾಜಿಗಿಂತ ಸುಮಾರು ₹ 30.03 ಲಕ್ಷ ಕೋಟಿಗೂ ಅಧಿಕ ಇರಬಹುದು ಎಂದು ನಿರೀಕ್ಷಿಸಲಾಗಿದೆ. ತೆರಿಗೆ ಸ್ವೀಕೃತಿ 20.02 ಲಕ್ಷ ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ.–ನಿರ್ಮಲಾ ಸೀತಾರಾಮನ್
ಮಧ್ಯಮ ವರ್ಗದವರಿಗೆ ಮನೆ
ಬಾಡಿಗೆ, ಸ್ಲಂ ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಅಥವಾ ಖರೀದಿಸಲು ನೆರವು.
ಪ್ರವಾಸೋದ್ಯಮ
ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯಗಳಿಗೆ ಉತ್ತೇಜನ
ದ್ವೀಪ ಪ್ರದೇಶಗಳಲ್ಲಿ ಬಂದರು ಸಂಪರ್ಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ