ನೇರ ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ‘ವಿವಾದ್ ಸೆ ವಿಶ್ವಾಸ್’ ಯೋಜನೆಯನ್ನು ಘೋಷಿಸಲಾಗಿದೆ.ಸದ್ಯ, 4.83 ಲಕ್ಷ ನೇರ ತೆರಿಗೆ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಹೊಸ ಯೋಜನೆಯಲ್ಲಿ ತೆರಿಗೆದಾರರು 2020ರ ಮಾರ್ಚ್ 31ರ ಒಳಗಾಗಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸಿದರೆ, ಬಡ್ಡಿದರ ಮತ್ತು ದಂಡದಿಂದ ವಿನಾಯ್ತಿ ಪಡೆಯಬಹುದಾಗಿದೆ.