<p class="bodytext"><strong>ನವದೆಹಲಿ</strong>: ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ ಈ ವರ್ಷದ ಅಕ್ಷಯ ತೃತೀಯಾ ದಿನ (ಶುಕ್ರವಾರ) ಶೇಕಡ 10ರಷ್ಟು ವ್ಯಾಪಾರ ಮಾತ್ರ ನಡೆದಿದೆ ಎಂದು ಚಿನ್ನಾಭರಣಗಳ ಉದ್ಯಮ ಅಂದಾಜಿಸಿದೆ.</p>.<p class="bodytext">ಕೋವಿಡ್ಗೂ ಮೊದಲು ಅಕ್ಷಯ ತೃತೀಯಾ ದಿನ ದೇಶದಲ್ಲಿ 25ರಿಂದ 30 ಟನ್ ಚಿನ್ನ, ಚಿನ್ನಾಭರಣ, ಮುತ್ತುಗಳ ವ್ಯಾಪಾರ ನಡೆಯುತ್ತಿತ್ತು. ಆದರೆ, ಈ ವರ್ಷ 3ರಿಂದ 4 ಟನ್ ಮಾತ್ರ ವ್ಯಾಪಾರ ಆಗಿದೆ ಎಂಬುದು ಉದ್ಯಮದ ಅಂದಾಜು. ಕಲ್ಯಾಣ್ ಜ್ಯುವೆಲರ್ಸ್ನಂತಹ ದೊಡ್ಡ ಕಂಪನಿಗಳು ಶುಕ್ರವಾರ ಆನ್ಲೈನ್ ಮೂಲಕ ಆಭರಣಗಳ ಬುಕಿಂಗ್ ತೆಗೆದುಕೊಂಡಿದ್ದು, ನಂತರದಲ್ಲಿ ಅವುಗಳನ್ನು ಗ್ರಾಹಕರಿಗೆ ತಲುಪಿಸಲಿವೆ.</p>.<p class="bodytext">‘ಆನ್ಲೈನ್ ಮೂಲಕ ಗ್ರಾಹಕರು ಚಿನ್ನದ ಬುಕಿಂಗ್ ಮಾಡಿದ್ದಾರೆ. ಆದರೆ, ಒಟ್ಟಾರೆಯಾಗಿ ಹೇಳುವುದಾದರೆ, ಕೋವಿಡ್ನ ಎರಡನೆಯ ಅಲೆ ಹಾಗೂ ನಗದು ಕೊರತೆಯ ಕಾರಣದಿಂದಾಗಿ ಗ್ರಾಹಕರ ಸ್ಪಂದನ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ’ ಎಂದು ಪಿಎನ್ಜಿ ಜ್ಯುವೆಲರ್ಸ್ ಕಂಪನಿ ಅಧ್ಯಕ್ಷ ಸೌರಭ್ ಗಾಡ್ಗೀಳ್ ತಿಳಿಸಿದರು.</p>.<p>‘ಪರಿಸ್ಥಿತಿ ತಿಳಿಯಾದ ನಂತರ ಗ್ರಾಹಕರಲ್ಲಿ ಖರೀದಿಯ ಹುಮ್ಮಸ್ಸು ಮತ್ತೆ ಬರುತ್ತದೆ. ಚಿನ್ನದ ಬೆಲೆಯು ಈಗಿನ ಹಂತದಿಂದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು.</p>.<p>‘ಅಕ್ಷಯ ತೃತೀಯಾ ದಿನ ದಕ್ಷಿಣ ಭಾರತದ ರಾಜ್ಯಗಳಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತಿತ್ತು. ಆದರೆ ಈ ರಾಜ್ಯಗಳಲ್ಲಿ ಲಾಕ್ಡೌನ್ ನಿರ್ಬಂಧಗಳು ಜಾರಿಯಲ್ಲಿವೆ. ಎರಡರಿಂದ ಮೂರು ರಾಜ್ಯಗಳಲ್ಲಿ ಮಾತ್ರ ಮಳಿಗೆಗಳನ್ನು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಈ ಅವಧಿಯು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯ ಅಲ್ಲ’ ಎಂದು ಕಲ್ಯಾಣ್ ಜ್ಯುವೆಲರ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ</strong>: ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ ಈ ವರ್ಷದ ಅಕ್ಷಯ ತೃತೀಯಾ ದಿನ (ಶುಕ್ರವಾರ) ಶೇಕಡ 10ರಷ್ಟು ವ್ಯಾಪಾರ ಮಾತ್ರ ನಡೆದಿದೆ ಎಂದು ಚಿನ್ನಾಭರಣಗಳ ಉದ್ಯಮ ಅಂದಾಜಿಸಿದೆ.</p>.<p class="bodytext">ಕೋವಿಡ್ಗೂ ಮೊದಲು ಅಕ್ಷಯ ತೃತೀಯಾ ದಿನ ದೇಶದಲ್ಲಿ 25ರಿಂದ 30 ಟನ್ ಚಿನ್ನ, ಚಿನ್ನಾಭರಣ, ಮುತ್ತುಗಳ ವ್ಯಾಪಾರ ನಡೆಯುತ್ತಿತ್ತು. ಆದರೆ, ಈ ವರ್ಷ 3ರಿಂದ 4 ಟನ್ ಮಾತ್ರ ವ್ಯಾಪಾರ ಆಗಿದೆ ಎಂಬುದು ಉದ್ಯಮದ ಅಂದಾಜು. ಕಲ್ಯಾಣ್ ಜ್ಯುವೆಲರ್ಸ್ನಂತಹ ದೊಡ್ಡ ಕಂಪನಿಗಳು ಶುಕ್ರವಾರ ಆನ್ಲೈನ್ ಮೂಲಕ ಆಭರಣಗಳ ಬುಕಿಂಗ್ ತೆಗೆದುಕೊಂಡಿದ್ದು, ನಂತರದಲ್ಲಿ ಅವುಗಳನ್ನು ಗ್ರಾಹಕರಿಗೆ ತಲುಪಿಸಲಿವೆ.</p>.<p class="bodytext">‘ಆನ್ಲೈನ್ ಮೂಲಕ ಗ್ರಾಹಕರು ಚಿನ್ನದ ಬುಕಿಂಗ್ ಮಾಡಿದ್ದಾರೆ. ಆದರೆ, ಒಟ್ಟಾರೆಯಾಗಿ ಹೇಳುವುದಾದರೆ, ಕೋವಿಡ್ನ ಎರಡನೆಯ ಅಲೆ ಹಾಗೂ ನಗದು ಕೊರತೆಯ ಕಾರಣದಿಂದಾಗಿ ಗ್ರಾಹಕರ ಸ್ಪಂದನ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ’ ಎಂದು ಪಿಎನ್ಜಿ ಜ್ಯುವೆಲರ್ಸ್ ಕಂಪನಿ ಅಧ್ಯಕ್ಷ ಸೌರಭ್ ಗಾಡ್ಗೀಳ್ ತಿಳಿಸಿದರು.</p>.<p>‘ಪರಿಸ್ಥಿತಿ ತಿಳಿಯಾದ ನಂತರ ಗ್ರಾಹಕರಲ್ಲಿ ಖರೀದಿಯ ಹುಮ್ಮಸ್ಸು ಮತ್ತೆ ಬರುತ್ತದೆ. ಚಿನ್ನದ ಬೆಲೆಯು ಈಗಿನ ಹಂತದಿಂದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು.</p>.<p>‘ಅಕ್ಷಯ ತೃತೀಯಾ ದಿನ ದಕ್ಷಿಣ ಭಾರತದ ರಾಜ್ಯಗಳಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತಿತ್ತು. ಆದರೆ ಈ ರಾಜ್ಯಗಳಲ್ಲಿ ಲಾಕ್ಡೌನ್ ನಿರ್ಬಂಧಗಳು ಜಾರಿಯಲ್ಲಿವೆ. ಎರಡರಿಂದ ಮೂರು ರಾಜ್ಯಗಳಲ್ಲಿ ಮಾತ್ರ ಮಳಿಗೆಗಳನ್ನು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಈ ಅವಧಿಯು ಚಿನ್ನ ಖರೀದಿಗೆ ಹೇಳಿ ಮಾಡಿಸಿದ ಸಮಯ ಅಲ್ಲ’ ಎಂದು ಕಲ್ಯಾಣ್ ಜ್ಯುವೆಲರ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>