ಕೋವಿಡ್ಗೂ ಮೊದಲು ಅಕ್ಷಯ ತೃತೀಯಾ ದಿನ ದೇಶದಲ್ಲಿ 25ರಿಂದ 30 ಟನ್ ಚಿನ್ನ, ಚಿನ್ನಾಭರಣ, ಮುತ್ತುಗಳ ವ್ಯಾಪಾರ ನಡೆಯುತ್ತಿತ್ತು. ಆದರೆ, ಈ ವರ್ಷ 3ರಿಂದ 4 ಟನ್ ಮಾತ್ರ ವ್ಯಾಪಾರ ಆಗಿದೆ ಎಂಬುದು ಉದ್ಯಮದ ಅಂದಾಜು. ಕಲ್ಯಾಣ್ ಜ್ಯುವೆಲರ್ಸ್ನಂತಹ ದೊಡ್ಡ ಕಂಪನಿಗಳು ಶುಕ್ರವಾರ ಆನ್ಲೈನ್ ಮೂಲಕ ಆಭರಣಗಳ ಬುಕಿಂಗ್ ತೆಗೆದುಕೊಂಡಿದ್ದು, ನಂತರದಲ್ಲಿ ಅವುಗಳನ್ನು ಗ್ರಾಹಕರಿಗೆ ತಲುಪಿಸಲಿವೆ.