<p><strong>ಕ್ಯಾನ್ಬೆರಾ:</strong> ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯ ನಾಳೆ (ಬುಧವಾರ) ಆರಂಭವಾಗಲಿದೆ. ಈ ಸರಣಿಯಲ್ಲಿ ಪವರ್ಪ್ಲೇ ನಿರ್ಣಾಯಕ ಪಾತ್ರ ವಹಿಸಲಿವೆ ಮತ್ತು ಜಸ್ಪ್ರೀತ್ ಬುಮ್ರಾ ಉಪಸ್ಥಿತಿ ನಮ್ಮ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.</p><p>ಸರಣಿ ಆರಂಭಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ‘ಆಸ್ಟ್ರೇಲಿಯಾದ ಆಕ್ರಮಣಕಾರಿ ಬ್ಯಾಟರ್ಗಳ ವಿರುದ್ಧ ಬುಮ್ರಾ ಇರುವುದು ನಮ್ಮ ತಂಡದ ಬಲ ಹೆಚ್ಚಿಸಿದೆ’. ಎಂದು ತಿಳಿಸಿದ್ದಾರೆ.</p><p>‘ಆಸ್ಟ್ರೇಲಿಯಾದ ನೆಲದಲ್ಲಿ ಆಡುವುದು ಯಾವಾಗಲೂ ಒಂದು ಸವಾಲಾಗಿರುತ್ತದೆ. ಅವರು ಏಕದಿನ ಮತ್ತು ಟಿ20ಐ ವಿಶ್ವಕಪ್ನಲ್ಲಿ ಹೇಗೆ ಆಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪವರ್ಪ್ಲೇ ಯಾವಾಗಲೂ ಮುಖ್ಯವಾಗಿರುತ್ತದೆ’ ಎಂದಿದ್ದಾರೆ.</p><p>‘ನೀವು ನೋಡಿರುತ್ತೀರ, ಏಷ್ಯಾ ಕಪ್ನ ಪವರ್ಪ್ಲೇನಲ್ಲಿ ಬುಮ್ರಾ ಕನಿಷ್ಠ ಎರಡು ಓವರ್ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ರೀತಿಯಾದ ಸವಾಲುಗಳನ್ನು ಎದುರಿಸಲು ಅವರು ಯಾವಾಗಲು ಸಿದ್ಧರಿರುವುದು ನಮ್ಮ ತಂಡದ ಶಕ್ತಿಯಾಗಿದೆ. ಹಾಗಾಗಿ ಅವರ ಉಪಸ್ಥಿತಿ ನಮಗೆ ಅನುಕೂಲವಾಗಲಿದೆ’ ಎಂದರು.</p><p>‘ಕಳೆದ ಹಲವಾರು ವರ್ಷಗಳಿಂದ ಬುಮ್ರಾ ಬೌಲಿಂಗ್ ಮಾಡುವ ರೀತಿ ಗಮನಿಸಿದರೆ ಅವರು ಉತ್ತಮ ವೇಗಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖ ಸರಣಿಗೆ ಹೇಗೆ ತಯಾರಿ ನಡೆಸಬೇಕೆಂದು ಅವರಿಗೆ ತಿಳಿದಿದೆ. ಆಸ್ಟ್ರೇಲಿಯಾದಂತ ಪಿಚ್ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ಅವರಿಗೆ ತಿಳಿದಿದೆ’ ಎಂದರು.</p>.‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ.ಸೂರ್ಯ ವೈಫಲ್ಯದಿಂದ ಚಿಂತಿತನಾಗಿಲ್ಲ: ಗೌತಮ್ ಗಂಭೀರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ಯಾನ್ಬೆರಾ:</strong> ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯ ನಾಳೆ (ಬುಧವಾರ) ಆರಂಭವಾಗಲಿದೆ. ಈ ಸರಣಿಯಲ್ಲಿ ಪವರ್ಪ್ಲೇ ನಿರ್ಣಾಯಕ ಪಾತ್ರ ವಹಿಸಲಿವೆ ಮತ್ತು ಜಸ್ಪ್ರೀತ್ ಬುಮ್ರಾ ಉಪಸ್ಥಿತಿ ನಮ್ಮ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.</p><p>ಸರಣಿ ಆರಂಭಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ‘ಆಸ್ಟ್ರೇಲಿಯಾದ ಆಕ್ರಮಣಕಾರಿ ಬ್ಯಾಟರ್ಗಳ ವಿರುದ್ಧ ಬುಮ್ರಾ ಇರುವುದು ನಮ್ಮ ತಂಡದ ಬಲ ಹೆಚ್ಚಿಸಿದೆ’. ಎಂದು ತಿಳಿಸಿದ್ದಾರೆ.</p><p>‘ಆಸ್ಟ್ರೇಲಿಯಾದ ನೆಲದಲ್ಲಿ ಆಡುವುದು ಯಾವಾಗಲೂ ಒಂದು ಸವಾಲಾಗಿರುತ್ತದೆ. ಅವರು ಏಕದಿನ ಮತ್ತು ಟಿ20ಐ ವಿಶ್ವಕಪ್ನಲ್ಲಿ ಹೇಗೆ ಆಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಪವರ್ಪ್ಲೇ ಯಾವಾಗಲೂ ಮುಖ್ಯವಾಗಿರುತ್ತದೆ’ ಎಂದಿದ್ದಾರೆ.</p><p>‘ನೀವು ನೋಡಿರುತ್ತೀರ, ಏಷ್ಯಾ ಕಪ್ನ ಪವರ್ಪ್ಲೇನಲ್ಲಿ ಬುಮ್ರಾ ಕನಿಷ್ಠ ಎರಡು ಓವರ್ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ರೀತಿಯಾದ ಸವಾಲುಗಳನ್ನು ಎದುರಿಸಲು ಅವರು ಯಾವಾಗಲು ಸಿದ್ಧರಿರುವುದು ನಮ್ಮ ತಂಡದ ಶಕ್ತಿಯಾಗಿದೆ. ಹಾಗಾಗಿ ಅವರ ಉಪಸ್ಥಿತಿ ನಮಗೆ ಅನುಕೂಲವಾಗಲಿದೆ’ ಎಂದರು.</p><p>‘ಕಳೆದ ಹಲವಾರು ವರ್ಷಗಳಿಂದ ಬುಮ್ರಾ ಬೌಲಿಂಗ್ ಮಾಡುವ ರೀತಿ ಗಮನಿಸಿದರೆ ಅವರು ಉತ್ತಮ ವೇಗಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಮುಖ ಸರಣಿಗೆ ಹೇಗೆ ತಯಾರಿ ನಡೆಸಬೇಕೆಂದು ಅವರಿಗೆ ತಿಳಿದಿದೆ. ಆಸ್ಟ್ರೇಲಿಯಾದಂತ ಪಿಚ್ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದು ಅವರಿಗೆ ತಿಳಿದಿದೆ’ ಎಂದರು.</p>.‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ.ಸೂರ್ಯ ವೈಫಲ್ಯದಿಂದ ಚಿಂತಿತನಾಗಿಲ್ಲ: ಗೌತಮ್ ಗಂಭೀರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>