ನವದೆಹಲಿ: ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಅಂದಾಜು ದರವನ್ನು ತಾನು ಇನ್ನಷ್ಟು ತಗ್ಗಿಸಬೇಕಾಗಬಹುದು ಎಂದು ವಿಶ್ವಬ್ಯಾಂಕ್ ಬುಧವಾರ ಹೇಳಿದೆ. ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಭಾರತ ಇನ್ನಷ್ಟು ದೃಢವಾಗಿ ಹೊರಬರಲು ಕೌಶಲ, ಹಣಕಾಸು ಕ್ಷೇತ್ರ, ಆರೋಗ್ಯ, ಕಾರ್ಮಿಕ ವಲಯಗಳಲ್ಲಿ ಸುಧಾರಣೆ ಬೇಕು ಎಂದು ಅದು ಹೇಳಿದೆ. ಭೂಸುಧಾರಣೆಗಳೂ ಅಗತ್ಯ ಎನ್ನುವ ಮಾತನ್ನು ಕೂಡ ಆಡಿದೆ.