ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಸೋಮವಾರ ಮಾತನಾಡಿರುವ ಅವರು, ‘ಕೊರೊನಾ ವೈರಸ್ ಮಹಾಮಾರಿಗೆ ಭಾರತ ಪ್ರತಿರೋಧಕ ಗುಣ ಹೊಂದಿಲ್ಲ. ಹೀಗಾಗಿ ದೇಶದಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿಗೆ ಸೋಂಕು ಉಂಟಾಗಿದೆ. ಇದರ ವಿರುದ್ಧ ಭಾರತ ಯುದ್ಧೋಪಾದಿಯಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದ ವಾಣಿಜ್ಯ ಚಟುವಟಿಕೆ ಚೀನಾದೊಂದಿಗೆ ಹೆಚ್ಚಾಗಿ ಬೆಸೆದುಕೊಂಡಿದೆ. ಹೀಗಾಗಿ ಕೋವಿಡ್ ಭಾರತದ ಮೇಲೆ ನೇರವಾಗಿ ಪರಿಣಾಮ ಬೀರಬಲ್ಲದು,’ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.