<p><strong>ಮುಂಬೈ:</strong> ಉದ್ಯಮಿ ನೀರವ್ ಮೋದಿ <a href="https://www.prajavani.net/tags/punjab-national-bank" target="_blank">ಪಂಜಾಬ್ ನ್ಯಾಷನಲ್ ಬ್ಯಾಂಕ್</a>ಗೆ ₹13 ಸಾವಿರ ಕೋಟಿ ವಂಚಿಸಿದ ಪ್ರಕರಣ ಇತ್ಯರ್ಥಗೊಳ್ಳುವ ಮೊದಲೇ ಭೂಷಣ್ ಸ್ಟೀಲ್ ಉಕ್ಕು ಕಂಪನಿಯು ₹3,805.15 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಈ ಬಗ್ಗೆ ಬಾಂಬೆ ಸ್ಟಾಕ್ಎಕ್ಸ್ಚೇಂಜ್ಗೆ ನೀಡಿದ ಲಿಖಿತ ಮಾಹಿತಿ ನೀಡಿರುವ ಬ್ಯಾಂಕ್,ಚಂಡೀಗಢ ಶಾಖೆಯಿಂದ₹3,191.51 ಕೋಟಿ, ದುಬೈ ಶಾಖೆಯಿಂದ ₹345.74 ಕೋಟಿ, ಹಾಂಕಾಂಗ್ ಶಾಖೆಯಿಂದ ₹267.9 ಕೋಟಿಯನ್ನು ಕಂಪನಿ ಪಡೆದುಕೊಂಡಿದೆ ಎಂದು ವಿವರಿಸಿದೆ.</p>.<p>‘ಭೂಷಣ್ ಕಂಪನಿ ಬ್ಯಾಂಕ್ನ ಹಣವನ್ನು ದುರುಪಯೋಗಪಡಿಸಿಕೊಂಡಿದೆ, ತನ್ನ ಲೆಕ್ಕಪತ್ರಗಳಲ್ಲಿ ವಂಚನೆ ಮಾಡಿಬ್ಯಾಂಕ್ ಒಕ್ಕೂಟದಿಂದಹಣ ಪಡೆದಿದೆ’ ಎಂದು ಪಿಎನ್ಬಿ ತಿಳಿಸಿದೆ.</p>.<p>ಬ್ಯಾಂಕ್ ಆಡಿಟ್, ಸಿಬಿಐ ದಾಖಲಿಸಿದ ಎಫ್ಐಆರ್ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಶಿಫಾರಸು ಮಾಡಿದೆ. ಸದ್ಯ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿದೆ (ಎನ್ಸಿಎಲ್ಟಿ) ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಉದ್ಯಮಿ ನೀರವ್ ಮೋದಿ <a href="https://www.prajavani.net/tags/punjab-national-bank" target="_blank">ಪಂಜಾಬ್ ನ್ಯಾಷನಲ್ ಬ್ಯಾಂಕ್</a>ಗೆ ₹13 ಸಾವಿರ ಕೋಟಿ ವಂಚಿಸಿದ ಪ್ರಕರಣ ಇತ್ಯರ್ಥಗೊಳ್ಳುವ ಮೊದಲೇ ಭೂಷಣ್ ಸ್ಟೀಲ್ ಉಕ್ಕು ಕಂಪನಿಯು ₹3,805.15 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಈ ಬಗ್ಗೆ ಬಾಂಬೆ ಸ್ಟಾಕ್ಎಕ್ಸ್ಚೇಂಜ್ಗೆ ನೀಡಿದ ಲಿಖಿತ ಮಾಹಿತಿ ನೀಡಿರುವ ಬ್ಯಾಂಕ್,ಚಂಡೀಗಢ ಶಾಖೆಯಿಂದ₹3,191.51 ಕೋಟಿ, ದುಬೈ ಶಾಖೆಯಿಂದ ₹345.74 ಕೋಟಿ, ಹಾಂಕಾಂಗ್ ಶಾಖೆಯಿಂದ ₹267.9 ಕೋಟಿಯನ್ನು ಕಂಪನಿ ಪಡೆದುಕೊಂಡಿದೆ ಎಂದು ವಿವರಿಸಿದೆ.</p>.<p>‘ಭೂಷಣ್ ಕಂಪನಿ ಬ್ಯಾಂಕ್ನ ಹಣವನ್ನು ದುರುಪಯೋಗಪಡಿಸಿಕೊಂಡಿದೆ, ತನ್ನ ಲೆಕ್ಕಪತ್ರಗಳಲ್ಲಿ ವಂಚನೆ ಮಾಡಿಬ್ಯಾಂಕ್ ಒಕ್ಕೂಟದಿಂದಹಣ ಪಡೆದಿದೆ’ ಎಂದು ಪಿಎನ್ಬಿ ತಿಳಿಸಿದೆ.</p>.<p>ಬ್ಯಾಂಕ್ ಆಡಿಟ್, ಸಿಬಿಐ ದಾಖಲಿಸಿದ ಎಫ್ಐಆರ್ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಶಿಫಾರಸು ಮಾಡಿದೆ. ಸದ್ಯ ಪ್ರಕರಣ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿದೆ (ಎನ್ಸಿಎಲ್ಟಿ) ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>