<p><strong>ನವದೆಹಲಿ</strong>: ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಭಾಗವಾಗಿ ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್, ರಫ್ತು ವಲಯಗಳಿಗೆ ಒಟ್ಟಾರೆ ₹70 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮೂರನೇ ಹಂತದ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.</p>.<p>‘ಸ್ಥಗಿತಗೊಂಡಿರುವ ಕೈಗೆಟುಕುವ ಮತ್ತು ಮಧ್ಯಮ ಆದಾಯದ ಗೃಹ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಗವಾಕ್ಷಿ ವ್ಯವಸ್ಥೆಯಲ್ಲಿ ₹ 10 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ. ಇಷ್ಟೇ ಮೊತ್ತವನ್ನು ಹೂಡಿಕೆದಾರರು ನೀಡುವ ನಿರೀಕ್ಷೆ ಇದೆ. ಇದರಿಂದ ಒಟ್ಟಾರೆ ₹ 20 ಸಾವಿರ ಕೋಟಿ ಲಭ್ಯವಾಗಲಿದೆ. ಇದರಿಂದ ಒಟ್ಟಾರೆ 3.5 ಲಕ್ಷ ಮನೆ ಖರೀದಿದಾರರಿಗೆ ಪ್ರಯೋಜನವಾಗುವ ಅಂದಾಜು ಮಾಡಿರುವುದಾಗಿ’ ನಿರ್ಮಲಾ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯಡಿ (ಎನ್ಸಿಎಲ್ಟಿ) ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವ ಯೋಜನೆಗಳಿಗೆ ಇದು ಅನ್ವಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>.<p>‘ಗೃಹ ಹಣಕಾಸು ಕಂಪನಿಗಳಿಗೆ ವಿದೇಶದಿಂದ ಬಂಡವಾಳ ಸಂಗ್ರಹಿಸಲು ಅನುಕೂಲ ಆಗುವಂತೆ ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ನಿಯಮದಲ್ಲಿ ಬದಲಾವಣೆ ತರಲಾಗಿದೆ.ಮನೆ ನಿರ್ಮಾಣಕ್ಕೆ ನೀಡುವ ಮುಂಗಡ ಹಣದ ಬಡ್ಡಿದರವನ್ನೂ ಕಡಿಮೆ ಮಾಡಲಾಗುವುದು’ ಎಂದಿದ್ದಾರೆ.</p>.<p><strong>ರಫ್ತು ಉತ್ತೇಜನಕ್ಕೆ ಕ್ರಮ: </strong></p>.<p>ರಫ್ತು ಉತ್ಪನ್ನಗಳ ಮೇಲಿನ ಸುಂಕ ಅಥವಾ ತೆರಿಗೆ ಕಡಿಮೆ ಮಾಡುವ (ಆರ್ಒಡಿಟಿಇಪಿ) ಯೋಜನೆಯು 2020ರ ಜನವರಿಯಿಂದ ಜಾರಿಗೆ ಬರಲಿದೆ.ಇದಕ್ಕೆ ₹ 50 ಸಾವಿರ ಕೋಟಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಮರ್ಚಂಡೈಸ್ ಎಕ್ಸ್ಪೋರ್ಟ್ ಇಂಡಿಯಾ ಸ್ಕೀಮ್ಗೆ (ಎಂಇಐಎಸ್) ಬದಲಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ.</p>.<p>ಆದ್ಯತಾ ವಲಯದ ಸಾಲ (ಪಿಎಸ್ಎಲ್) ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ರಫ್ತುದಾರರಿಗೆ ಹೆಚ್ಚುವರಿಯಾಗಿ ₹ 36 ಸಾವಿರದಿಂದ<br />₹ 68 ಸಾವಿರ ನಿಧಿ ಲಭ್ಯವಾಗಲಿದೆ.</p>.<p>ರಫ್ತುದಾರರಿಗೆ ಆದ್ಯತಾ ವಲಯದ ಸಾಲ (ಪಿಎಸ್ಎಲ್) ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಆರ್ಬಿಐ ಪರಿಶೀಲನೆಗೆ ಕಳುಹಿಸಲಾಗಿದೆ.ಇದರಿಂದ ಹೆಚ್ಚುವರಿಯಾಗಿ ₹36 ಸಾವಿರದಿಂದ ₹68 ಸಾವಿರ ನಿಧಿ ಲಭ್ಯವಾಗಲಿದೆ.</p>.<p>ವಾಣಿಜ್ಯ ಸಚಿವಾಲಯದ ಆಂತರಿಕ ತಂಡವು ರಫ್ತು ವಲಯದ ಹಣಕಾಸಿನ ಸ್ಥಿತಿಗತಿಗಳ ಮೇಲ್ವಿಚಾರಣೆ ನಡೆಸಲಿದೆ.</p>.<p><strong>ಖರೀದಿ ಮೇಳ:</strong> ಕರಕುಶಲ, ಯೋಗ, ಪ್ರವಾಸ, ಜವಳಿ ಮತ್ತು ಚರ್ಮೋದ್ಯಮ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ನಾಲ್ಕು ಸ್ಥಳಗಳಲ್ಲಿವಾರ್ಷಿಕ ಮೆಗಾ ಖರೀದಿ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಭಾಗವಾಗಿ ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್, ರಫ್ತು ವಲಯಗಳಿಗೆ ಒಟ್ಟಾರೆ ₹70 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದೆ.</p>.<p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮೂರನೇ ಹಂತದ ಆರ್ಥಿಕ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.</p>.<p>‘ಸ್ಥಗಿತಗೊಂಡಿರುವ ಕೈಗೆಟುಕುವ ಮತ್ತು ಮಧ್ಯಮ ಆದಾಯದ ಗೃಹ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಗವಾಕ್ಷಿ ವ್ಯವಸ್ಥೆಯಲ್ಲಿ ₹ 10 ಸಾವಿರ ಕೋಟಿ ನೀಡಲು ನಿರ್ಧರಿಸಲಾಗಿದೆ. ಇಷ್ಟೇ ಮೊತ್ತವನ್ನು ಹೂಡಿಕೆದಾರರು ನೀಡುವ ನಿರೀಕ್ಷೆ ಇದೆ. ಇದರಿಂದ ಒಟ್ಟಾರೆ ₹ 20 ಸಾವಿರ ಕೋಟಿ ಲಭ್ಯವಾಗಲಿದೆ. ಇದರಿಂದ ಒಟ್ಟಾರೆ 3.5 ಲಕ್ಷ ಮನೆ ಖರೀದಿದಾರರಿಗೆ ಪ್ರಯೋಜನವಾಗುವ ಅಂದಾಜು ಮಾಡಿರುವುದಾಗಿ’ ನಿರ್ಮಲಾ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯಡಿ (ಎನ್ಸಿಎಲ್ಟಿ) ದಿವಾಳಿ ಪ್ರಕ್ರಿಯೆಗೆ ಒಳಗಾಗಿರುವ ಯೋಜನೆಗಳಿಗೆ ಇದು ಅನ್ವಯವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>.<p>‘ಗೃಹ ಹಣಕಾಸು ಕಂಪನಿಗಳಿಗೆ ವಿದೇಶದಿಂದ ಬಂಡವಾಳ ಸಂಗ್ರಹಿಸಲು ಅನುಕೂಲ ಆಗುವಂತೆ ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ನಿಯಮದಲ್ಲಿ ಬದಲಾವಣೆ ತರಲಾಗಿದೆ.ಮನೆ ನಿರ್ಮಾಣಕ್ಕೆ ನೀಡುವ ಮುಂಗಡ ಹಣದ ಬಡ್ಡಿದರವನ್ನೂ ಕಡಿಮೆ ಮಾಡಲಾಗುವುದು’ ಎಂದಿದ್ದಾರೆ.</p>.<p><strong>ರಫ್ತು ಉತ್ತೇಜನಕ್ಕೆ ಕ್ರಮ: </strong></p>.<p>ರಫ್ತು ಉತ್ಪನ್ನಗಳ ಮೇಲಿನ ಸುಂಕ ಅಥವಾ ತೆರಿಗೆ ಕಡಿಮೆ ಮಾಡುವ (ಆರ್ಒಡಿಟಿಇಪಿ) ಯೋಜನೆಯು 2020ರ ಜನವರಿಯಿಂದ ಜಾರಿಗೆ ಬರಲಿದೆ.ಇದಕ್ಕೆ ₹ 50 ಸಾವಿರ ಕೋಟಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಮರ್ಚಂಡೈಸ್ ಎಕ್ಸ್ಪೋರ್ಟ್ ಇಂಡಿಯಾ ಸ್ಕೀಮ್ಗೆ (ಎಂಇಐಎಸ್) ಬದಲಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ.</p>.<p>ಆದ್ಯತಾ ವಲಯದ ಸಾಲ (ಪಿಎಸ್ಎಲ್) ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ರಫ್ತುದಾರರಿಗೆ ಹೆಚ್ಚುವರಿಯಾಗಿ ₹ 36 ಸಾವಿರದಿಂದ<br />₹ 68 ಸಾವಿರ ನಿಧಿ ಲಭ್ಯವಾಗಲಿದೆ.</p>.<p>ರಫ್ತುದಾರರಿಗೆ ಆದ್ಯತಾ ವಲಯದ ಸಾಲ (ಪಿಎಸ್ಎಲ್) ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಆರ್ಬಿಐ ಪರಿಶೀಲನೆಗೆ ಕಳುಹಿಸಲಾಗಿದೆ.ಇದರಿಂದ ಹೆಚ್ಚುವರಿಯಾಗಿ ₹36 ಸಾವಿರದಿಂದ ₹68 ಸಾವಿರ ನಿಧಿ ಲಭ್ಯವಾಗಲಿದೆ.</p>.<p>ವಾಣಿಜ್ಯ ಸಚಿವಾಲಯದ ಆಂತರಿಕ ತಂಡವು ರಫ್ತು ವಲಯದ ಹಣಕಾಸಿನ ಸ್ಥಿತಿಗತಿಗಳ ಮೇಲ್ವಿಚಾರಣೆ ನಡೆಸಲಿದೆ.</p>.<p><strong>ಖರೀದಿ ಮೇಳ:</strong> ಕರಕುಶಲ, ಯೋಗ, ಪ್ರವಾಸ, ಜವಳಿ ಮತ್ತು ಚರ್ಮೋದ್ಯಮ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ನಾಲ್ಕು ಸ್ಥಳಗಳಲ್ಲಿವಾರ್ಷಿಕ ಮೆಗಾ ಖರೀದಿ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>