ನವದೆಹಲಿ: ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರುವ ತೀರ್ಮಾನ ಕೈಗೊಂಡಿರುವ ಬಗ್ಗೆ ಆರ್ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪಿಂಚಣಿ ವಿಚಾರವಾಗಿ ಇರುವ ಬೇಡಿಕೆಗಳ ಈಡೇರಿಕೆಗೆ, ಕಡಿಮೆ ವೆಚ್ಚದ ಬದಲಿ ಮಾರ್ಗಗಳನ್ನು ಅರಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.