<p><strong>ನವದೆಹಲಿ:</strong> ಭಾರತದ ಆರ್ಥಿಕತೆಯು ಏಪ್ರಿಲ್ 1ರಿಂದ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಚೇತರಿಕೆಯ ಹಾದಿಗೆ ಬರಲಿದೆ ಎಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಎಸ್ಆ್ಯಂಡ್ಪಿ ಮಂಗಳವಾರ ಹೇಳಿದೆ.</p>.<p>ಕೃಷಿ ವಲಯದ ಉತ್ತಮ ಬೆಳವಣಿಗೆ, ಕೋವಿಡ್–19 ಪ್ರಕರಣಗಳು ಕಡಿಮೆಯಾಗುತ್ತಿರುವುದು ಹಾಗೂ ಸರ್ಕಾರದ ವೆಚ್ಚಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಆರ್ಥಿಕ ಚೇತರಿಕೆಗೆ ಬಲ ಸಿಗುತ್ತಿದೆ ಎಂದು ಅದು ವಿವರಿಸಿದೆ.</p>.<p>ಈ ಚೇತರಿಕೆಯು ಇದೇ ರೀತಿ ಮುಂದುವರಿಯಲು ಹಲವು ಅಂಶಗಳ ಬೆಂಬಲದ ಅಗತ್ಯವಿದೆ. ಅದರಲ್ಲಿಯೂ ಮುಖ್ಯವಾಗಿ 136 ಕೋಟಿ ಜನರಿಗೆ ಕೋವಿಡ್–19 ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ ಎಂದು ಹೇಳಿದೆ.</p>.<p>2021–22ನೇ ಹಣಕಾಸು ವರ್ಷದ ಬಜೆಟ್ನಲ್ಲಿ ನಿರೀಕ್ಷೆಗಿಂತಲೂ ಅಧಿಕ ವೆಚ್ಚ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದುಆರ್ಥಿಕ ಚೇತರಿಕೆಗೆ ಬಲ ನೀಡಲಿದೆ. ಭಾರತವು, ಸಾಂಕ್ರಾಮಿಕ ಪೂರ್ವದ ಸ್ಥಿತಿಗೆ ಹೋಲಿಸಿದರೆ, ಜಿಡಿಪಿಯ ಶೇ 10ಕ್ಕೆ ಸಮನಾದ ದೀರ್ಘಕಾಲೀನ ಉತ್ಪಾದನಾ ಕೊರತೆಯನ್ನು ಎದುರಿಸಲಿದೆ.</p>.<p>ಬ್ಯಾಂಕಿಂಗ್ ವಲಯದ ವಸೂಲಾಗದ ಸಾಲದ ಪ್ರಮಾಣವು ಒಟ್ಟಾರೆ ಸಾಲದ ಶೇ 12ರಷ್ಟಿದೆ. ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿರುವುದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಬ್ಯಾಂಕ್ ಗಳ ಹಣಕಾಸಿನ ಸ್ಥಿತಿಯ ಮೇಲಿನ ಒತ್ತಡ ಕಡಿಮೆ ಆಗಲಿದೆ.</p>.<p>2020ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 10ರಷ್ಟು ಚೇತರಿಕೆ ಕಾಣಲಿದ್ದು,ದೇಶದ ಬ್ಯಾಂಕಿಂಗ್ ವ್ಯವಸ್ಥೆಯು 2023ನೇ ಹಣಕಾಸು ವರ್ಷದಲ್ಲಿ ಸುಧಾರಣೆ ಕಂಡುಕೊಳ್ಳಲು ಆರಂಭಿಸುವ ಸಾಧ್ಯತೆ ಇದೆ. ಕೋವಿಡ್–19 ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್ಗಳು ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸುತ್ತಿರುವುದು ಸಕಾರಾತ್ಮಕ ಅಂಶವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಆರ್ಥಿಕತೆಯು ಏಪ್ರಿಲ್ 1ರಿಂದ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಚೇತರಿಕೆಯ ಹಾದಿಗೆ ಬರಲಿದೆ ಎಂದು ಜಾಗತಿಕ ರೇಟಿಂಗ್ಸ್ ಸಂಸ್ಥೆ ಎಸ್ಆ್ಯಂಡ್ಪಿ ಮಂಗಳವಾರ ಹೇಳಿದೆ.</p>.<p>ಕೃಷಿ ವಲಯದ ಉತ್ತಮ ಬೆಳವಣಿಗೆ, ಕೋವಿಡ್–19 ಪ್ರಕರಣಗಳು ಕಡಿಮೆಯಾಗುತ್ತಿರುವುದು ಹಾಗೂ ಸರ್ಕಾರದ ವೆಚ್ಚಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಆರ್ಥಿಕ ಚೇತರಿಕೆಗೆ ಬಲ ಸಿಗುತ್ತಿದೆ ಎಂದು ಅದು ವಿವರಿಸಿದೆ.</p>.<p>ಈ ಚೇತರಿಕೆಯು ಇದೇ ರೀತಿ ಮುಂದುವರಿಯಲು ಹಲವು ಅಂಶಗಳ ಬೆಂಬಲದ ಅಗತ್ಯವಿದೆ. ಅದರಲ್ಲಿಯೂ ಮುಖ್ಯವಾಗಿ 136 ಕೋಟಿ ಜನರಿಗೆ ಕೋವಿಡ್–19 ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ ಎಂದು ಹೇಳಿದೆ.</p>.<p>2021–22ನೇ ಹಣಕಾಸು ವರ್ಷದ ಬಜೆಟ್ನಲ್ಲಿ ನಿರೀಕ್ಷೆಗಿಂತಲೂ ಅಧಿಕ ವೆಚ್ಚ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದುಆರ್ಥಿಕ ಚೇತರಿಕೆಗೆ ಬಲ ನೀಡಲಿದೆ. ಭಾರತವು, ಸಾಂಕ್ರಾಮಿಕ ಪೂರ್ವದ ಸ್ಥಿತಿಗೆ ಹೋಲಿಸಿದರೆ, ಜಿಡಿಪಿಯ ಶೇ 10ಕ್ಕೆ ಸಮನಾದ ದೀರ್ಘಕಾಲೀನ ಉತ್ಪಾದನಾ ಕೊರತೆಯನ್ನು ಎದುರಿಸಲಿದೆ.</p>.<p>ಬ್ಯಾಂಕಿಂಗ್ ವಲಯದ ವಸೂಲಾಗದ ಸಾಲದ ಪ್ರಮಾಣವು ಒಟ್ಟಾರೆ ಸಾಲದ ಶೇ 12ರಷ್ಟಿದೆ. ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿರುವುದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಬ್ಯಾಂಕ್ ಗಳ ಹಣಕಾಸಿನ ಸ್ಥಿತಿಯ ಮೇಲಿನ ಒತ್ತಡ ಕಡಿಮೆ ಆಗಲಿದೆ.</p>.<p>2020ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 10ರಷ್ಟು ಚೇತರಿಕೆ ಕಾಣಲಿದ್ದು,ದೇಶದ ಬ್ಯಾಂಕಿಂಗ್ ವ್ಯವಸ್ಥೆಯು 2023ನೇ ಹಣಕಾಸು ವರ್ಷದಲ್ಲಿ ಸುಧಾರಣೆ ಕಂಡುಕೊಳ್ಳಲು ಆರಂಭಿಸುವ ಸಾಧ್ಯತೆ ಇದೆ. ಕೋವಿಡ್–19 ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್ಗಳು ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸುತ್ತಿರುವುದು ಸಕಾರಾತ್ಮಕ ಅಂಶವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>