<p><strong>ನವದೆಹಲಿ</strong>: ಇಸ್ರೇಲ್–ಇರಾನ್ ಸಂಘರ್ಷ ತೀವ್ರಗೊಂಡಿರುವುದರಿಂದಾಗಿ, ಇರಾನ್ಗೆ ರಫ್ತಾಗಬೇಕಿದ್ದ ಭಾರಿ ಪ್ರಮಾಣದ ಬಾಸ್ಮತಿ ಅಕ್ಕಿಯು ದೇಶದ ಬಂದರುಗಳಲ್ಲೇ ಸಿಲುಕಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ ಸೋಮವಾರ ಹೇಳಿದೆ.</p><p>ಇರಾನ್ಗೆ ಸಾಗಿಸಲಾಗುತ್ತಿದ್ದ ಸುಮಾರು 1 ಲಕ್ಷ ಟನ್ನಷ್ಟು ಬಾಸ್ಮತಿ ಅಕ್ಕಿ ಇರುವ ಹಡಗುಗಳು ಸದ್ಯ ಭಾರತದ ಬಂದರುಗಳಲ್ಲೇ ಉಳಿದಿವೆ. ಭಾರತ ರಫ್ತು ಮಾಡುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ ಶೇ 18–20ರಷ್ಟು ಪಾಲನ್ನು ಇರಾನ್ ಹೊಂದಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೋಯಲ್ ತಿಳಿಸಿದ್ದಾರೆ.</p><p>ಗುಜರಾತ್ನ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳಲ್ಲಿ ಸರಕು ಸಾಗಣೆ ಹಡಗುಗಳು ಸಿಲುಕಿವೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸದ್ಯ ಉದ್ವಿಗ್ನೆತೆ ಉಲ್ಪಣಿಸಿದೆ. ಇರಾನ್ಗೆ ಹೋಗುವ ಹಡಗುಗಳಿಗೆ ಯಾವುದೇ ರೀತಿಯ ವಿಮಾ ಸೌಲಭ್ಯವಿಲ್ಲ ಎಂದು ಗೋಯಲ್ ಹೇಳಿದ್ದಾರೆ.</p><p>ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಂಘರ್ಷಗಳು ಪ್ರಮಾಣಿತ ಸಾಗಣೆ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ರಫ್ತುದಾರರು ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದೂ ವಿವರಿಸಿದ್ದಾರೆ.</p><p>ಹಡಗುಗಳ ಸಂಚಾರದಲ್ಲಿನ ವಿಳಂಬ, ಪಾವತಿಯ ಅನಿಶ್ಚಿತತೆಯು ಆರ್ಥಿಕ ಸಂಕಷ್ಟ ಸೃಷ್ಟಿಸಲಿದೆ ಎಂದಿರುವ ಗೋಯಲ್, ಬಾಸ್ಮತಿ ಅಕ್ಕಿ ಬೆಲೆಯು ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ₹ 4 ರಿಂದ ₹ 5 ರಷ್ಟು ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.</p>.ಹಾರ್ಮುಜ್ ಜಲಸಂಧಿ- ಸಂಚಾರಕ್ಕೆ ದಿಗ್ಬಂಧನ ಹೇರಿದರೆ ಅಪಾಯ: ಕಚ್ಚಾ ತೈಲ ದರ ಏರಿಕೆ?.ಹೋರ್ಮುಜ್ ಜಲಸಂಧಿ ಮುಚ್ಚಲು ಮುಂದಾದ ಇರಾನ್; ತೈಲ ಇನ್ನಷ್ಟು ದುಬಾರಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇಸ್ರೇಲ್–ಇರಾನ್ ಸಂಘರ್ಷ ತೀವ್ರಗೊಂಡಿರುವುದರಿಂದಾಗಿ, ಇರಾನ್ಗೆ ರಫ್ತಾಗಬೇಕಿದ್ದ ಭಾರಿ ಪ್ರಮಾಣದ ಬಾಸ್ಮತಿ ಅಕ್ಕಿಯು ದೇಶದ ಬಂದರುಗಳಲ್ಲೇ ಸಿಲುಕಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ ಸೋಮವಾರ ಹೇಳಿದೆ.</p><p>ಇರಾನ್ಗೆ ಸಾಗಿಸಲಾಗುತ್ತಿದ್ದ ಸುಮಾರು 1 ಲಕ್ಷ ಟನ್ನಷ್ಟು ಬಾಸ್ಮತಿ ಅಕ್ಕಿ ಇರುವ ಹಡಗುಗಳು ಸದ್ಯ ಭಾರತದ ಬಂದರುಗಳಲ್ಲೇ ಉಳಿದಿವೆ. ಭಾರತ ರಫ್ತು ಮಾಡುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ ಶೇ 18–20ರಷ್ಟು ಪಾಲನ್ನು ಇರಾನ್ ಹೊಂದಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೋಯಲ್ ತಿಳಿಸಿದ್ದಾರೆ.</p><p>ಗುಜರಾತ್ನ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳಲ್ಲಿ ಸರಕು ಸಾಗಣೆ ಹಡಗುಗಳು ಸಿಲುಕಿವೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸದ್ಯ ಉದ್ವಿಗ್ನೆತೆ ಉಲ್ಪಣಿಸಿದೆ. ಇರಾನ್ಗೆ ಹೋಗುವ ಹಡಗುಗಳಿಗೆ ಯಾವುದೇ ರೀತಿಯ ವಿಮಾ ಸೌಲಭ್ಯವಿಲ್ಲ ಎಂದು ಗೋಯಲ್ ಹೇಳಿದ್ದಾರೆ.</p><p>ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಂಘರ್ಷಗಳು ಪ್ರಮಾಣಿತ ಸಾಗಣೆ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ರಫ್ತುದಾರರು ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದೂ ವಿವರಿಸಿದ್ದಾರೆ.</p><p>ಹಡಗುಗಳ ಸಂಚಾರದಲ್ಲಿನ ವಿಳಂಬ, ಪಾವತಿಯ ಅನಿಶ್ಚಿತತೆಯು ಆರ್ಥಿಕ ಸಂಕಷ್ಟ ಸೃಷ್ಟಿಸಲಿದೆ ಎಂದಿರುವ ಗೋಯಲ್, ಬಾಸ್ಮತಿ ಅಕ್ಕಿ ಬೆಲೆಯು ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ₹ 4 ರಿಂದ ₹ 5 ರಷ್ಟು ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.</p>.ಹಾರ್ಮುಜ್ ಜಲಸಂಧಿ- ಸಂಚಾರಕ್ಕೆ ದಿಗ್ಬಂಧನ ಹೇರಿದರೆ ಅಪಾಯ: ಕಚ್ಚಾ ತೈಲ ದರ ಏರಿಕೆ?.ಹೋರ್ಮುಜ್ ಜಲಸಂಧಿ ಮುಚ್ಚಲು ಮುಂದಾದ ಇರಾನ್; ತೈಲ ಇನ್ನಷ್ಟು ದುಬಾರಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>