<p><strong>ಮುಂಬೈ</strong>: ಭಾರತ್ ಫೋರ್ಜ್ ಕಂಪನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಮತ್ತು ಅವರ ತಂಗಿ ಸುಗಂಧಾ ಹಿರೇಮಠ್ ಅವರ ನಡುವಿನ ಕೌಟುಂಬಿಕ ಆಸ್ತಿ ಹಂಚಿಕೆ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. </p>.<p>ಕಲ್ಯಾಣಿ ಗ್ರೂಪ್ನಲ್ಲಿ ತಮಗೂ ಪಾಲು ಕೊಡಬೇಕಿದೆ ಎಂದು ಸುಗಂಧಾ ಅವರ ಮಕ್ಕಳಾದ ಸಮೀರ್ ಹಾಗೂ ಪಲ್ಲವಿ ಅವರು, ಪುಣೆಯ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮಾರ್ಚ್ 20ರಂದು ದಾವೆ ಹೂಡಿದ್ದಾರೆ. ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿ ತಮಗೂ ಹಕ್ಕಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.</p>.<p>‘ನಮ್ಮ ಮುತ್ತಜ್ಜ ಅಣ್ಣಪ್ಪ ಕಲ್ಯಾಣಿ ಅವರು ಅವಿಭಕ್ತ ಕುಟುಂಬದ ಆಸ್ತಿಯ ಮೂಲ ಒಡೆಯರಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ನಿಧನರಾದ ಬಳಿಕ ಅವರ ಪುತ್ರ ನೀಲಕಂಠ ಕಲ್ಯಾಣಿ (ಸುಗಂಧಾ ಮತ್ತು ಬಾಬಾ ಕಲ್ಯಾಣಿ ಅವರ ತಂದೆ) ಈ ಆಸ್ತಿಯ ಕರ್ತರಾಗಿದ್ದಾರೆ. ತಾತಾ ನೀಲಕಂಠಪ್ಪ ಅವರ ಆರೋಗ್ಯ ಹದಗೆಟ್ಟಿದ್ದರಿಂದ 2011ರಿಂದ ಬಾಬಾ ಕಲ್ಯಾಣಿ ಅವರು ಇಡೀ ಆಸ್ತಿಯ ಮೇಲೆ ಒಡೆತನ ಸಾಧಿಸಿ ಏಕಾಂಗಿಯಾಗಿ ಅನುಭವಿಸುತ್ತಿದ್ದಾರೆ’ ಎಂದು ಸಮೀರ್ ಮತ್ತು ಪಲ್ಲವಿ ಅರ್ಜಿಯಲ್ಲಿ ತಿಳಿಸಿದ್ದಾರೆ.</p>.<p>ಹಿಕಾಲ್ ಬಯೊಟೆಕ್ ಕಂಪನಿಯಲ್ಲಿ ಸಮರ್ಪಕವಾಗಿ ಷೇರುಗಳನ್ನು ಹಂಚಿಕೆ ಮಾಡಿಲ್ಲವೆಂದು ಆರೋಪಿ ಸುಗಂಧಾ ಅವರು, 2023ರ ಮಾರ್ಚ್ನಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.</p>.<p>ಕಲ್ಯಾಣಿ ಕುಟುಂಬದ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಎಂಬುದು ನಿಖರವಾಗಿಲ್ಲ ಗೊತ್ತಾಗಿಲ್ಲ. ಆದರೆ, ಭಾರತ್ ಫೋರ್ಜ್ ಸೇರಿ ಎಂಟು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ₹69 ಸಾವಿರ ಕೋಟಿ ಇದೆ ಎಂದು ಮೂಲಗಳು ತಿಳಿಸಿವೆ. </p>.<p>‘ಬಾಬಾ ಕಲ್ಯಾಣಿ ಅವರ ಹೆಸರಿಗೆ ಕಳಂಕ ತರುವುದೇ ಈ ದಾವೆಯ ಹಿಂದಿರುವ ಮೂಲ ಉದ್ದೇಶವಾಗಿದೆ’ ಎಂದು ಭಾರತ್ ಫೋರ್ಜ್ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಭಾರತ್ ಫೋರ್ಜ್ ಕಂಪನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಮತ್ತು ಅವರ ತಂಗಿ ಸುಗಂಧಾ ಹಿರೇಮಠ್ ಅವರ ನಡುವಿನ ಕೌಟುಂಬಿಕ ಆಸ್ತಿ ಹಂಚಿಕೆ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. </p>.<p>ಕಲ್ಯಾಣಿ ಗ್ರೂಪ್ನಲ್ಲಿ ತಮಗೂ ಪಾಲು ಕೊಡಬೇಕಿದೆ ಎಂದು ಸುಗಂಧಾ ಅವರ ಮಕ್ಕಳಾದ ಸಮೀರ್ ಹಾಗೂ ಪಲ್ಲವಿ ಅವರು, ಪುಣೆಯ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮಾರ್ಚ್ 20ರಂದು ದಾವೆ ಹೂಡಿದ್ದಾರೆ. ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿ ತಮಗೂ ಹಕ್ಕಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.</p>.<p>‘ನಮ್ಮ ಮುತ್ತಜ್ಜ ಅಣ್ಣಪ್ಪ ಕಲ್ಯಾಣಿ ಅವರು ಅವಿಭಕ್ತ ಕುಟುಂಬದ ಆಸ್ತಿಯ ಮೂಲ ಒಡೆಯರಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ನಿಧನರಾದ ಬಳಿಕ ಅವರ ಪುತ್ರ ನೀಲಕಂಠ ಕಲ್ಯಾಣಿ (ಸುಗಂಧಾ ಮತ್ತು ಬಾಬಾ ಕಲ್ಯಾಣಿ ಅವರ ತಂದೆ) ಈ ಆಸ್ತಿಯ ಕರ್ತರಾಗಿದ್ದಾರೆ. ತಾತಾ ನೀಲಕಂಠಪ್ಪ ಅವರ ಆರೋಗ್ಯ ಹದಗೆಟ್ಟಿದ್ದರಿಂದ 2011ರಿಂದ ಬಾಬಾ ಕಲ್ಯಾಣಿ ಅವರು ಇಡೀ ಆಸ್ತಿಯ ಮೇಲೆ ಒಡೆತನ ಸಾಧಿಸಿ ಏಕಾಂಗಿಯಾಗಿ ಅನುಭವಿಸುತ್ತಿದ್ದಾರೆ’ ಎಂದು ಸಮೀರ್ ಮತ್ತು ಪಲ್ಲವಿ ಅರ್ಜಿಯಲ್ಲಿ ತಿಳಿಸಿದ್ದಾರೆ.</p>.<p>ಹಿಕಾಲ್ ಬಯೊಟೆಕ್ ಕಂಪನಿಯಲ್ಲಿ ಸಮರ್ಪಕವಾಗಿ ಷೇರುಗಳನ್ನು ಹಂಚಿಕೆ ಮಾಡಿಲ್ಲವೆಂದು ಆರೋಪಿ ಸುಗಂಧಾ ಅವರು, 2023ರ ಮಾರ್ಚ್ನಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.</p>.<p>ಕಲ್ಯಾಣಿ ಕುಟುಂಬದ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಎಂಬುದು ನಿಖರವಾಗಿಲ್ಲ ಗೊತ್ತಾಗಿಲ್ಲ. ಆದರೆ, ಭಾರತ್ ಫೋರ್ಜ್ ಸೇರಿ ಎಂಟು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ₹69 ಸಾವಿರ ಕೋಟಿ ಇದೆ ಎಂದು ಮೂಲಗಳು ತಿಳಿಸಿವೆ. </p>.<p>‘ಬಾಬಾ ಕಲ್ಯಾಣಿ ಅವರ ಹೆಸರಿಗೆ ಕಳಂಕ ತರುವುದೇ ಈ ದಾವೆಯ ಹಿಂದಿರುವ ಮೂಲ ಉದ್ದೇಶವಾಗಿದೆ’ ಎಂದು ಭಾರತ್ ಫೋರ್ಜ್ ಕಂಪನಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>