‘ನಮ್ಮ ಮುತ್ತಜ್ಜ ಅಣ್ಣಪ್ಪ ಕಲ್ಯಾಣಿ ಅವರು ಅವಿಭಕ್ತ ಕುಟುಂಬದ ಆಸ್ತಿಯ ಮೂಲ ಒಡೆಯರಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ನಿಧನರಾದ ಬಳಿಕ ಅವರ ಪುತ್ರ ನೀಲಕಂಠ ಕಲ್ಯಾಣಿ (ಸುಗಂಧಾ ಮತ್ತು ಬಾಬಾ ಕಲ್ಯಾಣಿ ಅವರ ತಂದೆ) ಈ ಆಸ್ತಿಯ ಕರ್ತರಾಗಿದ್ದಾರೆ. ತಾತಾ ನೀಲಕಂಠಪ್ಪ ಅವರ ಆರೋಗ್ಯ ಹದಗೆಟ್ಟಿದ್ದರಿಂದ 2011ರಿಂದ ಬಾಬಾ ಕಲ್ಯಾಣಿ ಅವರು ಇಡೀ ಆಸ್ತಿಯ ಮೇಲೆ ಒಡೆತನ ಸಾಧಿಸಿ ಏಕಾಂಗಿಯಾಗಿ ಅನುಭವಿಸುತ್ತಿದ್ದಾರೆ’ ಎಂದು ಸಮೀರ್ ಮತ್ತು ಪಲ್ಲವಿ ಅರ್ಜಿಯಲ್ಲಿ ತಿಳಿಸಿದ್ದಾರೆ.